Ramayana Movie
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ದೃಶ್ಯಕಾವ್ಯವಾಗಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೊಂದಿಗೆ ಹಿರಿಯ ನಟರು ದಶರಥ ಸೇರಿದಂತೆ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾಂತ್ರಿಕವಾಗಿ ಅತ್ಯುನ್ನತ ಗುಣಮಟ್ಟ ಹೊಂದಿರುವ ಈ ಚಿತ್ರಕ್ಕೆ ಹಕೀಮ್ ಅಲಿ ಅವರ ಛಾಯಾಗ್ರಹಣ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಮತ್ತು ಹನ್ಸ್ ಜಿಮ್ಮರ್ ಅವರ ಹಿನ್ನೆಲೆ ಸಂಗೀತ ಇದೆ. ಹಾಲಿವುಡ್ ಮಟ್ಟದ ಅದ್ದೂರಿ ವಿಎಫ್ಎಕ್ಸ್ ತಂತ್ರಜ್ಞಾನವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಈ ಮಹಾಕಾವ್ಯವು ದೀಪಾವಳಿಗೆ ರಿಲೀಸ್ ಆಗಲಿದೆ. ಈ ಚಿತ್ರ ಎರಡು ಭಾಗದಲ್ಲಿ ಬರಲಿದ್ದು, 4000 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಿದೆ.
ಇನ್ನೂ ಹೆಚ್ಚು ಓದಿ‘ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ’; ಯಶ್
ದೇಶದ ಜನಪ್ರಿಯ 'ಆಪ್ ಕಿ ಅದಾಲತ್' ಶೋಗೆ ಭೇಟಿ ನೀಡಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಭಾಜನರಾಗಿದ್ದಾರೆ. ಈ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಬದಲು ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ಯಶ್ ಖಡಕ್ ಸ್ಪಷ್ಟನೆ ನೀಡಿದ್ದಾರೆ.
- Rajesh Duggumane
- Updated on: Aug 15, 2026
- 9:08 am
ಚೀನಾದಲ್ಲೂ ಅಬ್ಬರಿಸಲಿದೆ ‘ರಾಮಾಯಣ’ ಸಿನಿಮಾ; ಆದರೆ, ಬದಲಾಗಲಿದೆ ಶೀರ್ಷಿಕೆ
ಯಶ್, ಸಾಯಿ ಪಲ್ಲವಿ, ರಣಬೀರ್ ಕಪೂರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾಗೆ ಸಖತ್ ಬೇಡಿಕೆ ಇದೆ. ಭಾರತದಲ್ಲಿ ಮಾತ್ರವಲ್ಲದೇ ಚೀನಾದಲ್ಲೂ ಈ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಚಿತ್ರದ ಹೆಸರನ್ನು ಬದಲಾಯಿಸಿ ಚೀನಾದಲ್ಲಿ ರಿಲೀಸ್ ಮಾಡಲಾಗುತ್ತಿದೆ.
- Madan Kumar
- Updated on: Aug 14, 2026
- 8:01 pm
‘ರಾಮಾಯಣ’ವನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಆಗರ್ಭ ಶ್ರೀಮಂತ ನಮಿತ್ ಮಲ್ಹೋತ್ರಾ ಯಾರು?
Who is Namit Malhotra: ‘ರಾಮಾಯ ಸಿನಿಮಾ ವಿಶ್ವಕ್ಕಾಗಿ ನಿರ್ಮಿಸಲಾಗಿರುವ ಭಾರತೀಯ ಸಿನಿಮಾ’ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಅದರಂತೆಯೇ ಸಿನಿಮಾದ ಪ್ರಚಾರವನ್ನು ಪ್ರತಿಷ್ಠಿತ ಹಾಲಿವುಡ್ ವೇದಿಕೆಗಳಲ್ಲಿ, ಟಾಪ್ ಹಾಲಿವುಡ್ ಸಿನಿಮಾಗಳ ಜೊತೆಯಲ್ಲಿಯೇ ಮಾಡಲಾಗುತ್ತಿದೆ. ‘ರಾಮಾಯಣ’ದಂತಹಾ ಅಪ್ಪಟ ಭಾರತೀಯ ಕತೆಯನ್ನು ವಿಶ್ವಕ್ಕೆ ಪರಿಚಯಿಸಲು ಊಹಿಸಲಾಗದ ಬಜೆಟ್ ಅನ್ನು ಹೂಡಿಕೆ ಮಾಡಿದ್ದಾರೆ ನಿರ್ಮಾಪಕ ನಮಿತ್ ಮಲ್ಹೋತ್ರಾ. ಅಷ್ಟಕ್ಕೂ ಯಾರು ಈ ನಮಿತ್ ಮಲ್ಹೋತ್ರಾ?
- Manjunatha C
- Updated on: Aug 13, 2026
- 1:34 pm
‘ರಾಮಾಯಣ ಟ್ರೇಲರ್ ನನ್ನನ್ನು ಇಂಪ್ರೆಸ್ ಮಾಡಿಲ್ಲ: ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರತಿಕ್ರಿಯೆ
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಅದನ್ನು ನೋಡಿ ಜನರು ಹಲವು ಬಗೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಖ್ಯಾತ ನಟ ಗಜೇಂದ್ರ ಚೌಹಾಣ್ ಅವರಿಗೆ ಈ ಟ್ರೇಲರ್ನಲ್ಲಿ ಕೆಲವು ಅಂಶಗಳು ಇಷ್ಟ ಆಗಿಲ್ಲ. ಅದನ್ನು ಅವರು ನೇರವಾಗಿ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Aug 12, 2026
- 7:43 pm
‘ರಾಮಾಯಣ’ ಗ್ರಾಫಿಕ್ಸ್ ಟೀಕೆ ಮಾಡಿದವರಿಗೆ ರಣಬೀರ್ ಖಡಕ್ ಉತ್ತರ
‘ರಾಮಾಯಣ’ ಸಿನಿಮಾದ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಬಗ್ಗೆ ಬಂದಿರುವ ತೀವ್ರ ಟೀಕೆಗಳಿಗೆ ನಟ ರಣಬೀರ್ ಕಪೂರ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಖಡಕ್ ಉತ್ತರ ನೀಡಿದ್ದಾರೆ. ಮೊಬೈಲ್ ಪರದೆಯಲ್ಲಿ ನೋಡಿ ತೀರ್ಮಾನಿಸಬೇಡಿ. ಚಿತ್ರಮಂದಿರಗಳಲ್ಲಿ ಐಮ್ಯಾಕ್ಸ್ ರೂಪದಲ್ಲಿ ನೋಡಿ ಅನುಭವಿಸಿ ಎಂದು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ. ಪ್ರಸ್ತುತ ಸಿನಿಮಾದ ಕೊನೆಯ ಹಂತದ ಕೆಲಸಗಳು ಜಾರಿಯಲ್ಲಿವೆ.
- Shreelaxmi H
- Updated on: Aug 12, 2026
- 2:38 pm
ಭಾರತಕ್ಕೂ ಮುನ್ನ ವಿದೇಶದಲ್ಲಿ ‘ರಾಮಾಯಣ’ ರಿಲೀಸ್; ಲೀಕ್ ಭೀತಿಯಲ್ಲಿ ಫ್ಯಾನ್ಸ್ ಅಪ್ಸೆಟ್
ರಣ್ಬೀರ್ ಕಪೂರ್ ಹಾಗೂ ಯಶ್ ಅಭಿನಯದ 'ರಾಮಾಯಣ' ಸಿನಿಮಾ ಭಾರತಕ್ಕಿಂತ ಎರಡು ದಿನ ಮುಂಚಿತವಾಗಿ ವಿದೇಶದಲ್ಲಿ ರಿಲೀಸ್ ಆಗಲಿದೆ. ನವೆಂಬರ್ 6ರಂದು ವಿದೇಶ ಹಾಗೂ ನವೆಂಬರ್ 8ಕ್ಕೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಪೈರೆಸಿ ಮತ್ತು ಲೀಕ್ ಭೀತಿಯಿಂದ ಭಾರತೀಯ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- Rajesh Duggumane
- Updated on: Aug 8, 2026
- 9:27 am
ರಾಮನ ಪಾತ್ರಕ್ಕೆ ಹೃತಿಕ್, ದಶರಥನ ಪಾತ್ರಕ್ಕೆ ಅಮಿತಾಭ್; ಈ ಕಥೆ ಗೊತ್ತಾ?
ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದಾರೆ. ಆದರೆ 2008ರಲ್ಲೇ ನಿರ್ದೇಶಕ ಸಂಜಯ್ ಖಾನ್ 'ದಿ ಲೆಜೆಂಡ್ ಆಫ್ ರಾಮ' ಚಿತ್ರಕ್ಕೆ ಹೃತಿಕ್ ರೋಷನ್ ಅವರನ್ನು ರಾಮನನ್ನಾಗಿ ಹಾಗೂ ಅಮಿತಾಭ್ ಬಚ್ಚನ್ ಅವರನ್ನು ದಶರಥನಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದರು. ಈ ಬಿಗ್ ಬಜೆಟ್ ಸಿನಿಮಾ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು.
- Shreelaxmi H
- Updated on: Aug 8, 2026
- 7:43 am
‘ಆಸ್ಕರ್ ಸಿಗಲೇ ಬೇಕು’: ‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಮಹಾರಾಷ್ಟ್ರ ಸಿಎಂ
Ramayana movie: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಇತ್ತೀಚೆಗೆ ಕೆಲವರು ತಮಗೆ ಸಿನಿಮಾ ತೋರಿಸಬೇಕೆಂದು, ಇನ್ನು ಕೆಲವರು ಪಾತ್ರಗಳ ಆಯ್ಕೆ ತಪ್ಪಾಗಿದೆ ಎಂದು ಟೀಕಿಸಲು ಆರಂಭಿಸಿದ್ದರು. ಆದರೆ ಇದೀಗ ಬಿಜೆಪಿಯ ಹಿರಿಯ ನಾಯಕ, ಮಹರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಅವರು ‘ರಾಮಾಯಣ’ ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ.
- Manjunatha C
- Updated on: Aug 7, 2026
- 8:06 pm
‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ
‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ ಎಂಬುದು ತಿಳಿದಿದ್ದರೂ ಕೂಡ ನಿರ್ದಿಷ್ಟ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಕೊಂಚ ಗೊಂದಲ ಇತ್ತು. ಈಗ ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಚಿತ್ರತಂಡದ ರಿಲೀಸ್ ಪ್ಲ್ಯಾನ್ ಬಗ್ಗೆ ಒಂದಷ್ಟು ವಿಷಯ ತಿಳಿದುಬಂದಿದೆ.
- Madan Kumar
- Updated on: Aug 5, 2026
- 10:42 pm
‘ರಾಮಾಯಣ’ ಸಿನಿಮಾ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟ ರಣ್ಬೀರ್ ಕಪೂರ್
Ramayana movie: ‘ರಾಮಾಯಣ’ ಟ್ರೈಲರ್ ಚೆನ್ನಾಗಿದೆ ಎಂದರೆ ಇನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಏನೇ ಆಗಲಿ ಟ್ರೈಲರ್ ವೈರಲ್ ಅಂತೂ ಆಗಿದೆ. ಆದರೆ ಇದೀಗ ಸಿನಿಮಾದ ನಾಯಕ ರಣ್ಬೀರ್ ಕಪೂರ್ ನೀಡಿರುವ ಹೇಳಿಕೆ ಸಿನಿಮಾದ ಬಗ್ಗೆ ತುಸು ಗೊಂದಲ ಮೂಡಿಸುವಂತಿದೆ. ಅವರು ‘ರಾಮಾಯಣ’ ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಚೆನ್ನಾಗಿರಲಿದೆ ಎಂದಿದ್ದಾರೆ. ಆ ಮೂಲಕ ಮೊದಲ ಭಾಗ ಅಷ್ಟೇನೂ ಅದ್ಭುತವಾಗಿಲ್ಲ ಎಂಬ ಸಂದೇಶ ಪರೋಕ್ಷವಾಗಿ ನೀಡಿದಂತಿದ್ದಾರೆ.
- Manjunatha C
- Updated on: Aug 5, 2026
- 11:30 am
‘ರಾಮಾಯಣ’ ಪಾತ್ರದ ವಸ್ತ್ರಗಳ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದ ವಿನ್ಯಾಸಕರು
‘ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ರಾಮಾಯಣ ವಿಶೇಷ ಸ್ಥಾನ ಪಡೆದಿದೆ. ಹೀಗಾಗಿ ಕಾಸ್ಟಿಂಗ್, ಕಾಸ್ಟ್ಯೂಮ್ಸ್ ಅಥವಾ ವಿಎಫ್ಎಕ್ಸ್ ವಿಷಯದಲ್ಲಿ ಜನರಿಂದ ಭಿನ್ನ ಅಭಿಪ್ರಾಯಗಳು ಬರುವುದು ಸಹಜ. ಆದರೆ ಈ ಮಟ್ಟದ ನಕಾರಾತ್ಮಕತೆ ಎದುರಾಗುತ್ತದೆ ಎಂದು ನಾವು ಭಾವಿಸಿರಲಿಲ್ಲ’ ಎಂದು ರಾಮಾಯಣ ಚಿತ್ರದ ವಸ್ತ್ರವಿನ್ಯಾಸಕರು ಹೇಳಿದ್ದಾರೆ.
- Madan Kumar
- Updated on: Aug 4, 2026
- 6:22 pm
‘ನಮಗೆ ಮೊದಲು ರಾಮಾಯಣ ಸಿನಿಮಾ ತೋರಿಸಿ’: ರಾಮಲೀಲಾ ಮಹಾಸಂಘದ ಖಡಕ್ ಎಚ್ಚರಿಕೆ
ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಬಿಡುಗಡೆಗೆ ಶ್ರೀ ರಾಮಲೀಲಾ ಮಹಾಸಂಘ ವಿರೋಧ ವ್ಯಕ್ತಪಡಿಸಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಮುನ್ನ ತಮಗೆ ವಿಶೇಷ ಪ್ರದರ್ಶನ ನೀಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಚಿತ್ರಮಂದಿರಗಳ ಮುಂದೆ ಇತರ ಹಿಂದೂ ಸಂಘಟನೆಗಳೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಿತ್ರತಂಡಕ್ಕೆ ಸಂಘಟನೆಯು ನೇರ ಎಚ್ಚರಿಕೆ ನೀಡಿದೆ.
- Rajesh Duggumane
- Updated on: Aug 3, 2026
- 1:16 pm