ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
ವಿಜಯ್ ಮತ್ತು ರಜನೀಕಾಂತ್ ನಡುವೆ ಭಿನ್ನಾಭಿಪ್ರಾಯ? ವಿಡಿಯೋ ನೋಡಿ
Thalapathy Vijay: ನಟ ವಿಜಯ್ ತಮಿಳುನಾಡಿನ ಸಿಎಂ ಆಗಿದ್ದಾರೆ. ಆದರೆ ವಿಜಯ್ ಸಿಎಂ ಆದ ಬಳಿಕ ನಟ ರಜನೀಕಾಂತ್ ಅವರು ಡಿಎಂಕೆ ಮುಖಂಡ ಮಾಜಿ ಸಿಎಂ ಸ್ಟಾಲಿನ್ ಅವರ ಭೇಟಿಯಾಗಿ ಸಾಂತ್ವನ ಹೇಳಿದ್ದರು. ವಿಜಯ್ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗಲೂ ಪ್ರಶ್ನೆಗಳಿಗೆ ಉತ್ತರಿಸದೆ ಜಾರಿ ಕೊಂಡಿದ್ದರು. ವಿಜಯ್ ಬಗ್ಗೆ ಅವರ ವರ್ತನೆ ತುಸು ಅಸೂಯೆಯಿಂದ ಕೂಡಿರುವಂತೆ ತೋರಿತ್ತು. ವಿಡಿಯೋ ಇಲ್ಲಿದೆ...
- Manjunatha C
- Updated on: May 17, 2026
- 11:05 pm
ಕೊರಗಜ್ಜನಿಗೆ ತಲೆಬಾಗಿ ನಮಿಸಿದ ನಟಿ ರಚಿತಾ ರಾಮ್: ವಿಡಿಯೋ ನೋಡಿ
Rachita Ram video: ನಟಿ ರಚಿತಾ ರಾಮ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ಶನಿವಾರ ರಾತ್ರಿ ಹರಕೆಯ ಕೋಲ ಸೇವೆ ಸಲ್ಲಿಸಿದ್ದಾರೆ. ರಚಿತಾ ರಾಮ್ ಅಪ್ಪಟ ದೈವ ಭಕ್ತೆ ಆಗಿದ್ದು, ಇದೀಗ ಕೊರಗಜ್ಜನಿಗೆ ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ. ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಸುಂದರ ವಿಡಿಯೋ ಒಂದನ್ನು ಸಹ ನಟಿ ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ....
- Manjunatha C
- Updated on: May 17, 2026
- 11:02 pm
ನದಿಯಲ್ಲಿ ಮುಳುಗಿ ನಿರ್ಮಾಪಕ ಸಾವು, ಆತ್ಮಹತ್ಯೆ ಶಂಕೆ
Producer K Rajan: ತಮ್ಮ ನೇರ ಮಾತುಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರು ಇಂದು (ಮೇ 17) ನಿಧನ ಹೊಂದಿದ್ದಾರೆ. ಅವರು ಅಡ್ಯಾರ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
- Manjunatha C
- Updated on: May 17, 2026
- 10:46 pm
ಕ್ರಿಕೆಟಿಗನ ಜೊತೆಗೆ ಶ್ರೀಲೀಲಾ ಡೇಟಿಂಗ್: ಸತ್ಯಾಂಶವೇನು?
Sreeleela: ಶ್ರೀಲೀಲಾ ಹೆಸರು ಇದೀಗ ಯುವ ಕ್ರಿಕೆಟಿಗನೊಬ್ಬನ ಜೊತೆಗೆ ಕೇಳಿ ಬರುತ್ತಿದೆ. ಆದರೆ ಅದು ನಿಜವೇ?
- Manjunatha C
- Updated on: May 17, 2026
- 10:29 pm
ದಿಲೀಪ್ ರಾಜ್ ಸಾವಿಗೆ ಕಾರಣವೇನು: ಹೃದ್ರೋಗ ತಜ್ಞ ಮಂಜುನಾಥ್ ವಿಶ್ಲೇಷಣೆ
Dileep Raj death: ದಿಲೀಪ್ ರಾಜ್ ಇತ್ತೀಚೆಗಷ್ಟೆ ನಿಧನ ಹೊಂದಿದ್ದಾರೆ ಅವರ ಗೆಳೆಯರು ಹೇಳಿರುವಂತೆ ದಿಲೀಪ್ ರಾಜ್ ಗೆ ಯಾವುದೇ ದುರಭ್ಯಾಸಗಳು ಇರಲಿಲ್ಲ, ವ್ಯಾಯಾಮ, ಜಿಮ್ ಮಾಡುತ್ತಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಹಾಗಿದ್ದರೂ ಅವರಿಗೆ ಹೃದಯಾಘಾತ ಆಗಿದ್ದು ಹೇಗೆ? ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞರೂ, ಸಂಸದರೂ ಆಗಿರುವ ಡಾ ಮಂಜುನಾಥ್ ಅವರು ದಿಲೀಪ್ ಅವರ ಹಠಾತ್ ಸಾವಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Manjunatha C
- Updated on: May 17, 2026
- 9:23 pm
ದರ್ಶನ್ ಜೈಲು ಡೈರಿ: ಬಹಿರಂಗವಾಯ್ತು ಹಲವು ಮಾಹಿತಿ
Darshan Thoogudeepa: ಸುಪ್ರೀಂಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಸಿದ್ದ ದರ್ಶನ್, ಅರ್ಜಿಯಲ್ಲಿ ಜೈಲಿನ ಅವ್ಯವಸ್ಥೆಗಳ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಸಹ ಅವುಗಳಲ್ಲಿ ಒಂದಾಗಿತ್ತು. ಆರೋಪಕ್ಕೆ ಪ್ರತಿಯಾಗಿ ಜೈಲಧಿಕಾರಿಗಳು ದರ್ಶನ್ ಅವರ ಜೈಲು ಡೈರಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರ ಮಾಹಿತಿ ಇದೀಗ ಹೊರಬಿದ್ದಿದೆ.
- Manjunatha C
- Updated on: May 17, 2026
- 7:05 pm
ಮಗನ ‘ಪೆದ್ದಿ’ ಸಿನಿಮಾ ಸೆಟ್ನಲ್ಲಿ ಅರ್ಧ ಗಂಟೆಯೂ ಇರಲಾಗಲಿಲ್ಲ ಚಿರಂಜೀವಿಗೆ: ಕಾರಣ?
Peddi movie: ‘ಪೆದ್ದಿ’ ಸಿನಿಮಾದ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಟಿಸಿದ್ದು, ಸಿನಿಮಾ ಅನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಬುಚ್ಚಿ ಬಾಬು ಸನಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ಪೆದ್ದಿ’ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದರು. ಆ ವೇಳೆ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್ಗೆ ಬಂದಿದ್ದರಾದರೂ ಅವರಿಗೆ ಅರ್ಧ ಗಂಟೆ ಸಹ ಸೆಟ್ನಲ್ಲಿ ಇರಲಾಗಲಿಲ್ಲ ಎಂದರು. ಅವರೇ ಕಾರಣವನ್ನೂ ತಿಳಿಸಿದ್ದಾರೆ.
- Manjunatha C
- Updated on: May 17, 2026
- 6:07 pm
ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು
Tara Sutaria: ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್ ಲೆವೆಲ್ನಲ್ಲಿ ನಿರ್ಮಾಣ ಮಾಡಿರುವುದು ಸಿನಿಮಾದ ಟೀಸರ್, ಪೋಸ್ಟರ್ಗಳಿಂದ ಈಗಾಗಲೇ ತಿಳಿದಿದೆ. ಆದರೆ ಯಶ್ ಅವರು ಸಿನಿಮಾದ ಸೆಟ್ನಲ್ಲೂ ನಟ-ನಟಿ ಸೇರಿದಂತೆ ಎಲ್ಲ ಸಿಬ್ಬಂದಿಗೂ ವಿಶ್ವ ದರ್ಜೆಯ ಟ್ರೀಟ್ಮೆಂಟ್ ಸಿಗುವಂತೆ ಮಾಡಿದ್ದರು. ‘ಟಾಕ್ಸಿಕ್’ ಸಿನಿಮಾ ಸೆಟ್ನಲ್ಲಿದ್ದ ವೃತ್ತಿಪರತೆ ಬಗ್ಗೆ ಕೆಲಸದ ಗುಣಮಟ್ಟ ಇನ್ನಿತರೆ ವಿಷಯಗಳ ಬಗ್ಗೆ ಸಿನಿಮಾದ ಐವರು ನಾಯಕಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಮಾತನಾಡಿದ್ದಾರೆ.
- Manjunatha C
- Updated on: May 17, 2026
- 5:01 pm
ಕ್ರಿಕೆಟರ್ ಜೊತೆಗೆ ಶ್ರೀಲೀಲಾ ಹೆಸರು ಥಳುಕು: ಯಾರದು ಯುವಕ?
Sreeleela rumors: ಇತ್ತೀಚೆಗೆ ಬಾಲಿವುಡ್ಗೆ ಕಾಲಿಟ್ಟಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಭರ್ಜರಿ ಬೇಡಿಕೆ ಶುರುವಾಗಿದೆ. ಅದ್ಭುತ ಸೌಂದರ್ಯ, ನೃತ್ಯ ಮತ್ತು ನಟನಾ ಪ್ರತಿಭೆ ಇರುವ ಶ್ರೀಲೀಲಾ ಜೊತೆಗೆ ಕೆಲಸ ಮಾಡಲು ನಿರ್ದೇಶಕರು, ನಟರು ಕಾಯುತ್ತಿದ್ದಾರೆ. ಅಂದಹಾಗೆ ಇದೀಗ ಶ್ರೀಲೀಲಾ ಹೆಸರು ಗಾಸಿಪ್ ಕಾಲಂನಲ್ಲಿ ಕೇಳಿ ಬಂದಿದೆ. ಕ್ರಿಕೆಟರ್ ಒಬ್ಬರ ಜೊತೆಗೆ ಶ್ರೀಲೀಲಾ ಹೆಸರು ಥಳುಕು ಹಾಕಿಕೊಂಡಿದೆ.
- Manjunatha C
- Updated on: May 17, 2026
- 3:31 pm
ಅಭಿಮಾನಿಗಳು ಇಟ್ಟ ಹೆಸರೇ ಅಂತಿಮವಾಯ್ತೆ ಎನ್ಟಿಆರ್-ನೀಲ್ ಸಿನಿಮಾಕ್ಕೆ?
Jr NTR and Prashanth Neel: ಜೂ ಎನ್ಟಿಆರ್-ಪ್ರಶಾಂತ್ ನೀಲ್ ಸಿನಿಮಾದ ಹೆಸರನ್ನು ಚಿತ್ರತಂಡ ಘೋಷಣೆ ಮಾಡಿಲ್ಲ, ಆದರೆ ಅಭಿಮಾನಿಗಳು ಈ ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಅಭಿಮಾನಿಗಳು ಇಟ್ಟ ಈ ಹೆಸರನ್ನೇ ಸಿನಿಮಾಕ್ಕೆ ಅಂತಿಮಗೊಳಿಸಲು ಚಿತ್ರತಂಡ ಯೋಜಿಸಿದಂತಿದೆ. ಇದರ ಸುಳಿವು ಸಹ ಅಭಿಮಾನಿಗಳಿಗೆ ಸಿಕ್ಕಿದೆ.
- Manjunatha C
- Updated on: May 17, 2026
- 2:41 pm
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
Jayam Ravi video: ತಮಿಳು ಚಿತ್ರರಂಗದ ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾಗಿರುವ ಜಯಂ ರವಿ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿ ಕಣ್ಣೀರು ಸಹ ಹಾಕಿದ್ದಾರೆ. ತಮಗೆ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನ ಸಿಗುವವರೆಗೆ ಯಾವ ಸಿನಿಮಾನಲ್ಲೂ ನಟಿಸುವುದಿಲ್ಲ ಎಂದಿದ್ದಾರೆ. ಏಕೆ? ವಿಡಿಯೋ ನೋಡಿ
- Manjunatha C
- Updated on: May 16, 2026
- 6:14 pm
‘ಪೆದ್ದಿ’ ಸಿನಿಮಾ ನಾಯಕಿಯಾಗಿ ಆಯ್ಕೆ ಆಗಿದ್ದು ಈ ನಟಿ, ಕೈತಪ್ಪಿದ್ದೇಕೆ?
Peddi Movie: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾಕ್ಕೆ ಮೊದಲ ಆಯ್ಕೆ ಜಾನ್ಹವಿ ಕಪೂರ್ ಆಗಿರಲಿಲ್ಲ ಮತ್ಯಾರು?
- Manjunatha C
- Updated on: May 16, 2026
- 5:56 pm