ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
ಬೈಕ್ ರೀಲ್ಸ್ ವಿವಾದ: ಕ್ಷಮೆ ಕೇಳಿದ ಬಿಗ್ಬಾಸ್ ರಜತ್
Bigg Boss Rajath: ಈ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿ ವಿವಾದಕ್ಕೊಳಗಾಗಿ ಜೈಲಿಗೆ ಸಹ ಹೋಗಿ ಬಂದಿದ್ದ ಬಿಗ್ಬಾಸ್ ರಜತ್, ಇದೀಗ ಮತ್ತೊಮ್ಮೆ ರೀಲ್ಸ್ ಕಾರಣಕ್ಕೆ ವಿವಾದಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಬೈಕ್ ಒಂದರ ಪ್ರಚಾರಕ್ಕಾಗಿ ಸಣ್ಣ ರೀಲ್ಸ್ ಮಾಡಿದ್ದರು. ಅದರಲ್ಲಿ ಬೆಂಕಿ, ಬ್ಲಾಸ್ಟ್ಗಳನ್ನು ಸಹ ಬಳಸಲಾಗಿತ್ತು, ಅದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿರುವ ರಜತ್, ಕ್ಷಮೆ ಕೇಳಿದ್ದಾರೆ, ಅಲ್ಲದೆ ರೀಲ್ಸ್ ಅನ್ನು ಡಿಲೀಟ್ ಮಾಡಿರುವುದಾಗಿಯೂ ಹೇಳಿದ್ದಾರೆ.
- Manjunatha C
- Updated on: Apr 28, 2026
- 5:41 pm
ಚೇತನ್ ಅಹಿಂಸ ಭಾರತೀಯನೇ ಅಲ್ಲ: ನಟಿ ಜಯಮಾಲಾ
Chethan Ahimsa controversy: ಅಣ್ಣಾವ್ರ ಸಮಾಧಿ ಕುರಿತು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನೀಡಿರುವ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ. ಒಮ್ಮೆ ಕ್ಷಮಾಪಣೆ ಕೇಳಿ ಮತ್ತೆ ಹಳೆ ವರಸೆ ಮುಂದುವರೆಸಿರುವ ಚೇತನ್ ಅಹಿಂಸ ವಿರುದ್ಧ ಹಲವು ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು, ಅಭಿಮಾನಿ ಸಂಘಗಳ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆ ಮಾಡಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರಿಗೆ ದೂರು ಸಹ ನೀಡಿದ್ದಾರೆ.
- Manjunatha C
- Updated on: Apr 28, 2026
- 4:56 pm
‘ಡಾನ್ 3’ ಸಿನಿಮಾ ವಿವಾದ: ಬಗ್ಗೆ ಕೊನೆಗೂ ಬಾಯ್ಬಿಟ್ಟ ಫರ್ಹಾನ್ ಅಖ್ತರ್
Farhan Akhtar: 2011 ‘ಡಾನ್ 2’ ಬಳಿಕ ‘ಡಾನ್ 3’ಗಾಗಿ ಅಭಿಮಾನಿಗಳು ಕೇಳುತ್ತಿದ್ದರು. ಫರ್ಹಾನ್ ಕತೆ ರೆಡಿ ಇರಿಸಿಕೊಂಡು ಸಿನಿಮಾ ಪ್ರಾರಂಭಿಸಲು ಶುರು ಮಾಡಿದ್ದರು. ರಣ್ವೀರ್ ಸಿಂಗ್ ನಾಯಕ ಎನ್ನಲಾಯ್ತು. ಆದರೆ ರಣ್ವೀರ್ ಮತ್ತು ಫರ್ಹಾನ್ ನಡುವೆ ಭಿನ್ನಾಭಿಪ್ರಾಯ ತಲೆದೂರಿ ಸಿನಿಮಾ ನಿಂತು ಹೋಗಿದೆ. ಇದೀಗ ಫರ್ಹಾನ್ ಅಖ್ತರ್ ‘ಡಾನ್ 3’ ಬಗ್ಗೆ ಮಾತನಾಡಿದ್ದಾರೆ.
- Manjunatha C
- Updated on: Apr 28, 2026
- 4:16 pm
ಮೂರೇ ದಿನಕ್ಕೆ 2100 ಕೋಟಿ ಗಳಿಸಿದ ‘ಮೈಖಲ್’: ಭಾರತದಲ್ಲಿ ಎಷ್ಟು?
Michael movie: ಇತ್ತೀಚೆಗೆ ಬ್ಲಾಕ್ ಬಸ್ಟರ್ ಆದ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಒಂದೂವರೆ ತಿಂಗಳಿಗೆ ಸುಮಾರು 1800 ಕೋಟಿ ಗಳಿಕೆ ಮಾಡಿದೆ. ಆದರೆ ಇಲ್ಲೊಂದು ಹಾಲಿವುಡ್ ಸಿನಿಮಾ, ಅದೂ ಬಿಡುಗಡೆ ಆದ ಬಳಿಕ ಬಹುತೇಕ ಋಣಾತ್ಮಕ ವಿಮರ್ಶೆಗಳನ್ನೇ ಪಡೆಯುತ್ತಿರುವ ಸಿನಿಮಾ ಬಿಡುಗಡೆ ಆದ ಮೂರೇ ದಿನಗಳಲ್ಲಿ 2100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.
- Manjunatha C
- Updated on: Apr 28, 2026
- 3:20 pm
ಅಣ್ಣಾವ್ರ ಅಭಿಮಾನಿಗಳ ಬಳಿಕ ಜೆಡಿಎಸ್ ಕಾರ್ಯಕರ್ತರ ಎದುರು ಹಾಕಿಕೊಂಡ ಚೇತನ್
Chetan Ahimsa controversy: ಚೇತನ್ ಅಹಿಂಸ, ಇತ್ತೀಚೆಗೆ ಡಾ ರಾಜ್ಕುಮಾರ್ ಅವರ ಸ್ಮಾರಕದ ಕುರಿತಾಗಿ ನೀಡಿರುವ ಹೇಳಿಕೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.ಇದರ ನಡುವೆ ಚೇತನ್ ಅಹಿಂಸ ಎಚ್ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಟೀಕೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನೂ ಸಹ ಎದುರು ಹಾಕಿಕೊಂಡಿದ್ದಾರೆ.
- Manjunatha C
- Updated on: Apr 28, 2026
- 1:41 pm
ಸುಶಾಂತ್ ಸಿಂಗ್ ಪ್ರಕರಣ: ವರ್ಷಗಳ ಬಳಿಕ ರಿಯಾಗೆ ಸಿಕ್ತು ಹಣದ ಮೇಲೆ ಹಕ್ಕು
Sushant Singh-Rhea Chakraborty: ಸುಶಾಂತ್ ಸಿಂಗ್ ಸಾವು ಹಲವು ರೀತಿಯಲ್ಲಿ ಬಾಲಿವುಡ್ ಅನ್ನು ಕಾಡಿತ್ತು. ಅದರಲ್ಲೂ ಸುಶಾಂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಅಂತೂ ನಾನಾ ರೀತಿಯ ಸಂಕಟಗಳನ್ನು ಎದುರಿಸಬೇಕಾಯ್ತು. ಪ್ರಕರಣದಲ್ಲಿ ಅವರನ್ನು ವಿಲನ್ ಮಾಡಲಾಗಿತ್ತು. ಜೈಲಿಗೆ ಸಹ ಹೋಗಿ ಬಂದರು. ಆದರೆ ವಿಚಾರಣೆ ನಡೆದು ಸತ್ಯಗಳು ಒಂದೊಂದಾಗಿ ಹೊರಗೆ ಬರತೊಡಗಿದಾಗ ಅವರ ಮೇಲಿದ್ದ ಅನುಮಾನಗಳು ಕರಗತೊಡಗಿದವು. ಇದೀಗ ಸುಮಾರು ಆರು ವರ್ಷಗಳ ಬಳಿಕ ರಿಯಾಗೆ ತಮ್ಮ ಹಣದ ಮೇಲಿನ ಹಕ್ಕು ಮರಳಿ ದೊರೆತಿದೆ.
- Manjunatha C
- Updated on: Apr 28, 2026
- 1:06 pm
ಆ ದೇವಾಲಯಕ್ಕೆ ಭೇಟಿ ನೀಡಿದ ಮೇಲೆ ಜೀವನ ಬದಲಾಯ್ತು: ಶ್ರುತಿ ಹಾಸನ್
Shruti Haasan movie: ಪಾಶ್ಚಾತ್ಯ ಶೈಲಿಯ ಜೀವನ ನಿರ್ವಹಣೆ ಮಾಡುವ ನಟಿಯರಲ್ಲಿ ಒಬ್ಬರು. ಲಿವಿನ್ ರಿಲೇಶನ್ ಶಿಪ್, ಪದೇ ಪದೇ ಬದಲಾಗುವ ಬಾಯ್ಫ್ರೆಂಡ್, ನೈಟ್ ಲೈಫ್, ಪಾರ್ಟಿಗಳು, ಕಾನ್ಸರ್ಟ್ಗಳು ಇನ್ನೂ ಹಲವು. ಆದರೆ ಅವರು ಅಪ್ಪಟ ದೈವ ಭಕ್ತೆ. ದೇವಾಲಯ ಒಂದಕ್ಕೆ ಹೋಗಿದ್ದಕ್ಕೆ ತಮ್ಮ ಜೀವನ ಬದಲಾಯ್ತು ಎಂದು ಅವರು ಖುದ್ದು ಹೇಳಿಕೊಂಡಿದ್ದಾರೆ. ಯಾವುದು ಆ ದೇವಸ್ಥಾನ?
- Manjunatha C
- Updated on: Apr 28, 2026
- 11:28 am
28 ವರ್ಷಗಳ ಬಳಿಕ ಒಂದಾಗುತ್ತಿರುವ ನಾಗಾರ್ಜುನ ಮತ್ತು ಟಬು
Akkineni Nagarjun: ನಾಗಾರ್ಜುನ ಮತ್ತು ಟಬು ದಶಕಗಳ ಹಿಂದೆ ಬಲು ಹಾಟ್ ಫೇವರೇಟ್ ಜೋಡಿ. ಕೆಲವು ಬ್ಲಾಕ್ ಬಸ್ಟರ್ ರೊಮ್ಯಾಂಟಿಕ್ ಹಿಟ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ನಾಗಾರ್ಜುನ ಮತ್ತು ಟಬು ನಡುವೆ ತೆರೆಯಾಚೆಯೂ ರೊಮಾನ್ಸ್ ನಡೆದಿತ್ತು ಆ ಬಗ್ಗೆ ಸಾಕಷ್ಟು ಗುಲ್ಲೆದ್ದಿತ್ತು. ಆದರೆ ಇದೀಗ ಬರೋಬ್ಬರಿ 28 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದೆ.
- Manjunatha C
- Updated on: Apr 28, 2026
- 10:49 am
ಮೊದಲ ಬಾಲಿವುಡ್ ಸಿನಿಮಾದ ಪ್ರಚಾರ ಆರಂಭಿಸಿದ ಸಾಯಿ ಪಲ್ಲವಿ
Sai Pallavi: ತೆಲುಗು, ತಮಿಳು, ಮಲಯಾಳಂನಲ್ಲಿ ನಟಿಸಿರುವ ಸಾಯಿ ಪಲ್ಲವಿ ಇದೀಗ ಬಾಲಿವುಡ್ಗೆ ಕಾಲಿರಿಸಿದ್ದಾರೆ. ಹಿಂದಿಯ ಅವರ ಮೊದಲ ಸಿನಿಮಾ ‘ಏಕ್ ದಿನ್’ ಕೊನೆಗೂ ಬಿಡುಗಡೆ ಆಗಲಿದ್ದು, ಪ್ರಚಾರ ಆರಂಭಿಸಿದ್ದಾರೆ ನಟಿ.
- Manjunatha C
- Updated on: Apr 26, 2026
- 11:07 pm
ಕನ್ನಡ ವೆಬ್ ಸರಣಿ ‘ಜೆರಾಕ್ಸ್’ ವಿಶೇಷತೆಗಳೇನು? ತಂಡ ಹೇಳಿದ್ದು ಹೀಗೆ
web series xerox: ಕನ್ನಡದಲ್ಲಿ ವೆಬ್ ಸರಣಿಗಳು ಬಹಳ ಕಡಿಮೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅಷ್ಟೆ ನಿರ್ಮಾಣಗೊಂಡು ಬಿಡುಗಡೆ ಆಗುತ್ತವೆ. ಇದೀಗ ‘ಜೆರಾಕ್ಸ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ನಾಗಭೂಷಣ್, ಪಾಯಲ್ ಚೆಂಗಪ್ಪ ನಟನೆಯ ಈ ವೆಬ್ ಸರಣಿ ಗಮನ ಸೆಳೆದಿದ್ದು, ಈ ವೆಬ್ ಸರಣಿಯ ವಿಶೇಷತೆಗಳು ಏನೇನು ಎಂದು ಚಿತ್ರತಂಡ ವಿವರಿಸಿದೆ.
- Manjunatha C
- Updated on: Apr 26, 2026
- 10:42 pm
200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ
Allu Arjun movie: ಸ್ಟಾರ್ ನಟರ ಸಿನಿಮಾಗಳ ಹೊರತಾಗಿ ಬೇರೆ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿಲ್ಲ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ಸ್ಟಾರ್ ನಟರುಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಗೋಗರೆಯುತ್ತಿದ್ದಾರೆ. ಆದರೆ ಸ್ಟಾರ್ ನಟರುಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಇದೀಗ ನಿರ್ಧಾರವೊಂದನ್ನು ತಳೆದಿದ್ದು, ಚಿತ್ರರಂಗದ ಉಳಿವಿಗೆ, ವಿಶೇಷವಾಗಿ ಚಿತ್ರಮಂದಿರಗಳ ಉಳಿವಿಗೆ ಈ ನಿರ್ಧಾರ ನೆರವಾಗಲಿದೆ.
- Manjunatha C
- Updated on: Apr 26, 2026
- 10:04 pm
ಸಿನಿಮಾ ನಿರ್ಮಾಣ ಆರಂಭಿಸಿದ್ದೇಕೆ? ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟರು ಉತ್ತರ
Lakshmi Hebbalkar producer: ಸಚಿವೆ, ರಾಜಕಾರಣಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿನಿಮಾ ನಿರ್ಮಾಪಕಿಯೂ ಆಗುತ್ತಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಿನಿಮಾ ನಿರ್ಮಾಣ ಪ್ರಾರಂಭಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಾಣ ಸಂಸ್ಥೆಗೆ ಐರಾ ಫಿಲಮ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೊ’ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಅನಾವರಣ ಆಗಿದೆ.
- Manjunatha C
- Updated on: Apr 26, 2026
- 10:13 pm