ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
Rishab Shetty: ನಟ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಯಕ್ಷಗಾನ ಮತ್ತು ರಾಮನ ಭಜನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಿಷಬ್ ಶೆಟ್ಟಿ ಮೊದಲ ಬಾರಿಗೆ ತಮ್ಮ ಪುತ್ರ ರನ್ವಿತ್ಗೆ ಬಣ್ಣ ಹಚ್ಚಿಸಿದ್ದಾರೆ. ಯಕ್ಷಗಾನ ಪ್ರಸಂಗದಲ್ಲಿ ರಿನ್ವಿತ್ ಪಾತ್ರವೊಂದನ್ನು ಮಾಡಿದ್ದಾರೆ. ವಿಡಿಯೋ ಅನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...
- Manjunatha C
- Updated on: Jun 28, 2026
- 11:11 pm
‘ನಿರ್ಮಾಪಕನ ಜೊತೆ ಮಲಗಬೇಕು’ ಎಂದಿದ್ದ: ಕಹಿ ಅನುಭವ ಬಿಚ್ಚಿಟ್ಟ ಸುಶಾಂತ್ ಮಾಜಿ ಗೆಳತಿ
Ankita Lokhande: ಸುಶಾಂತ್ ಸಿಂಗ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಈಗ ಟಿವಿ ಧಾರಾವಾಹಿ, ರಿಯಾಲಿಟಿ ಶೋ ಮತ್ತು ಆಗಾಗ್ಗೆ ಸಿನಿಮಾಗಳಲ್ಲಿ ನಟಿಸುತ್ತಾ ಇರುತ್ತಾರೆ. ಉದ್ಯಮಿ ವಿವೇಕ್ ಜೈನ್ ಅವರನ್ನು 2021 ರಲ್ಲಿ ವಿವಾಹವಾಗಿರುವ ಅಂಕಿತಾ, ಆಗಾಗ್ಗೆ ಪಾಡ್ಕಾಸ್ಟ್ಗಳು, ಸಂದರ್ಶನಗಳಲ್ಲಿ ಭಾಗಿ ಆಗುತ್ತಿರುತ್ತಾರೆ. ಇದೀಗ ಅಂಕಿತಾ ಲೋಖಂಡೆ ಜನಪ್ರಿಯ ಪಾಡ್ಕಾಸ್ಟ್ ಒಂದರಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅದೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮಗೆ ಕಹಿ ಅನುಭವ ಆಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
- Manjunatha C
- Updated on: Jun 28, 2026
- 11:11 pm
ಬಿಡುಗಡೆ ಆಯ್ತು, ‘ಗ್ರಾಮಾಯಣ’ ಟ್ರೈಲರ್, ಪಕ್ಕಾ ಹಳ್ಳಿ ಕತೆ
Gramayana movie: ‘ಗ್ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಜೂನ್ 28) ರಿಲೀಸ್ ಆಗಿದೆ. ಟ್ರೈಲರ್ ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತಿದ್ದು, ತಮಿಳಿನ ವೆಟ್ರಿಮಾರನ್ ಸಿನಿಮಾಗಳ ಫೀಲ್ ಕೊಡುತ್ತಿದೆ. ‘ಗ್ರಾಮಾಯಣ’ ಟ್ರೈಲರ್ ಹೆಸರಿಗೆ ತಕ್ಕಂತೆ ಪಕ್ಕಾ ಹಳ್ಳಿಯ ಕತೆಯನ್ನು ಒಳಗೊಂಡಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜಿನಂತೆ ಭಾಸವಾಗುತ್ತಿದೆ.
- Manjunatha C
- Updated on: Jun 28, 2026
- 10:31 pm
Sreeleela: ಶ್ರೀಲೀಲಾ ಬಾಲಿವುಡ್ ಸಿನಿಮಾ ಚಿತ್ರೀಕರಣ ಆರಂಭಿಸಿ ವರ್ಷವಾಯ್ತು, ಆದರೆ ಸಿನಿಮಾದ ಬಗ್ಗೆ ಸುದ್ದಿಯಿಲ್ಲ, ಸಿನಿಮಾ ನಿಂತು ಹೋಯ್ತೆ?
- Manjunatha C
- Updated on: Jun 28, 2026
- 10:08 pm
ಯಶ್ ಶ್ರಮ, ಪ್ರತಿಭೆಯನ್ನು ಕೊಂಡಾಡಿದ ಬಾಲಿವುಡ್ ನಟಿ
Yash and Toxic: ಹುಮಾ ಖುರೇಷಿ, ಯಶ್ ಬಗ್ಗೆ ಮಾತನಾಡಿದ್ದು, ತಾವು ಯಶ್ ಅವರ ಫ್ಯಾನ್ ಆಗಿರುವುದಾಗಿ ಹೇಳಿದ್ದಾರೆ.
- Manjunatha C
- Updated on: Jun 28, 2026
- 9:56 pm
ಪ್ರಭಾಸ್ ಹೊಸ ಸಿನಿಮಾದ ಬಿಡುಗಡೆಗೆ ಮುಹೂರ್ತ ನಿಗದಿ
Prabhas movie: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇದೇ ವರ್ಷ ಜನವರಿ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಯ್ತು. ‘ದಿ ರಾಜಾ ಸಾಬ್’ ಸಿನಿಮಾದ ಬಳಿಕ ಪ್ರಭಾಸ್ ಅವರಿಗೆ ಹಲವು ಸಿನಿಮಾಗಳು ಕೈಯಲ್ಲಿದ್ದವು, ಆದರೆ ಅವರು ಆಯ್ಕೆ ಮಾಡಿದ್ದು ರಘು ಹನುಪುಡಿಯ ಸಿನಿಮಾ. ‘ಫೌಜಿ’ ಹೆಸರಿನ ಸಿನಿಮಾ ಆರಂಭಿಸಿದ ಪ್ರಭಾಸ್, ಆಶ್ಚರ್ಯಕರ ರೀತಿಯಲ್ಲಿ ಚಿತ್ರೀಕರಣವನ್ನೂ ಮುಗಿಸಿದ್ದು, ಸಿನಿಮಾ ಇದೇ ವರ್ಷ ಬಿಡುಗಡೆ ಸಹ ಆಗಲಿದೆ.
- Manjunatha C
- Updated on: Jun 28, 2026
- 9:07 pm
ಅಂಥಹಾ ದೃಶ್ಯಗಳನ್ನು ಈ ವರೆಗೆ ನೋಡಿಲ್ಲ: ‘ಟಾಕ್ಸಿಕ್’ ಬಗ್ಗೆ ನಟಿ ಮಾತು
Toxic movie release date: ನಟಿಯರು ಬೇರೆ ಬೇರೆ ಸಂದರ್ಶನಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು, ಮೇಕಿಂಗ್ ಅನ್ನು, ಸಿನಿಮಾದ ಕತೆಯನ್ನು, ಸಿನಿಮಾ ಹೊಂದಿರುವ ಸಂದೇಶವನ್ನು ಕೊಂಡಾಡುತ್ತಿದ್ದಾರೆ. ಇದೀಗ ಇದೇ ಸಿನಿಮಾದ ಭಾಗವಾಗಿರುವ ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮತ್ತು ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ನಟಿ, ‘ಟಾಕ್ಸಿಕ್’ ಸಿನಿಮಾದ 8-9 ನಿಮಿಷದ ಕಟ್ ಸಹ ನೋಡಿದ್ದು, ಆ ಬಗ್ಗೆಯೂ ಮಾತನಾಡಿದ್ದಾರೆ.
- Manjunatha C
- Updated on: Jun 28, 2026
- 7:53 pm
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
Dhruva Sarja movie: ಚಿತ್ರರಂಗದ ಹಲವು ಗಣ್ಯರು ಇಂದು ಭಾಮಾ ಹರೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಉಲ್ಲಾಸ್ ಅವರ ಅಂತಿಮ ದರ್ಶನ ಪಡೆದುಕೊಳ್ಳುವ ಜೊತೆಗೆ ಭಾಮಾ ಹರೀಶ್ ಅವರನ್ನು ಸಂತೈಸಿದ್ದಾರೆ. ನಟ ಧ್ರುವ ಸರ್ಜಾ ಇಂದು ಉಲ್ಲಾಸ್ ಅವರ ಅಂತಿಮ ದರ್ಶನ ಪಡೆದು, ಭಾಮಾ ಹರೀಶ್ ಅವರನ್ನು ತಬ್ಬಿಕೊಂಡು ಸಾಂತ್ವಾನ ಹೇಳಿದ್ದಾರೆ. ವಿಡಿಯೋ ನೋಡಿ....
- Manjunatha C
- Updated on: Jun 28, 2026
- 6:07 pm
ಹಣ ಕೇಳಿದ್ದಕ್ಕೆ ಹಲ್ಲೆ, ಬೆದರಿಕೆ: ‘ಲಾಪತಾ ಲೇಡೀಸ್’ ನಟ ಕಣ್ಣೀರು
laapataa ladies actor: ‘ಲಾಪತಾ ಲೇಡೀಸ್’ ಚಿತ್ರದಲ್ಲಿ ನಟಿಸಿದ ಪ್ರತಿಭಾವಂತ ನಟ ಸತೇಂದ್ರ ಸೋನಿ ಇದೀಗ ಇಂಥಹುದೇ ಒಂದು ಸಂಕಷ್ಟಕ್ಕೆ ಗುರಿ ಆಗಿದ್ದಾರೆ. ಸಿನಿಮಾನಲ್ಲಿ ನಟಿಸಿ, ನಟಿಸಿದ್ದಕ್ಕೆ ಹಣ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುವ ಜೊತೆಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಸಹ ಹಾಕಲಾಗಿದೆಯಂತೆ.
- Manjunatha C
- Updated on: Jun 28, 2026
- 7:01 pm
ಪ್ರಭಾಸ್ ಸಿನಿಮಾಕ್ಕೆ ನೋ ಎಂದಿದ್ದ ಕೀರ್ತಿ ಸುರೇಶ್, ‘ಖುಷಿ ಇದೆ’ ಎಂದ ನಟಿ
Keerthy Suresh: ನಾಗ್ ಅಶ್ವಿನ್ ನಿರ್ದೇಶನದ ‘ಮಹಾನಟಿ’ ಸಿನಿಮಾದ ನಟನೆಗೆ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರಕಿತ್ತು. ಅಂದಹಾಗೆ ಅದೇ ನಾಗ್ ಅಶ್ವಿನಿ ನಿರ್ದೇಶಿಸಿದ ಭಾರಿ ಬಜೆಟ್ನ, ಬಹು ತಾರಾಗಣದ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಮುಖ ಪಾತ್ರವೊಂದನ್ನು ಕೀರ್ತಿ ಸುರೇಶ್ಗೆ ಆಫರ್ ಮಾಡಲಾಗಿತ್ತು. ಆದರೆ ಆ ಪಾತ್ರವನ್ನು ಕಿರ್ತಿ ಸುರೇಶ್ ನಿರಾಕರಿಸಿದರು.
- Manjunatha C
- Updated on: Jun 28, 2026
- 4:34 pm
‘ಬಾಲಿವುಡ್ ಮಾಫಿಯಾ’ ಇದೆ, ಚಿತ್ರರಂಗದ ನೀಚತನದ ಬಗ್ಗೆ ನಟ ಕುನಾಲ್ ಮಾತು
Kunal Khemu: ಬಾಲಿವುಡ್ ಒಳಗಿನ ಕತೆ ಬಲು ಕರಾಳವಾಗಿದೆ. ಬಾಲಿವುಡ್ನ ನೀಚ ರಾಜಕೀಯ, ನೆಪೊಟಿಸಮ್, ಫೇವರಿಸಮ್, ಉದ್ಯಮದ ಮೇಲೆ ಕೆಲವೇ ವ್ಯಕ್ತಿಗಳ ಹಿಡಿತ, ದ್ವೇಷ, ಅಸೂಯೆಗಳ ಕತೆಗಳು ಬರೆದಷ್ಟೂ ಬಾಲಿವುಡ್ನಲ್ಲಿವೆ. ಇದೀಗ ಎರಡು ದಶಕದಿಂದಲೂ ಬಾಲಿವುಡ್ನ ಭಾಗವಾಗಿರುವ ಖ್ಯಾತ ನಟ ಕುನಾಲ್ ಖೇಮು ಬಾಲಿವುಡ್ನ ಈ ನೀಚತನದ ಬಗ್ಗೆ ಮಾತನಾಡಿದ್ದಾರೆ.
- Manjunatha C
- Updated on: Jun 28, 2026
- 3:53 pm
‘ಬಾಹುಬಲಿ’ ಬಳಿಕ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾಗಿ ಹೇಳಿದ ಪ್ರಭಾಸ್
Prabhas and Bahubali: ನಟ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ಬಳಿಕ ಸಂಪೂರ್ಣ ಬದಲಾದರು. ಅವರ ಸಿನಿಮಾಗಳ ಆಯ್ಕೆಯ ವಿಧಾನ, ಅವರ ಸ್ಟಾರ್ಡಮ್, ಬೇಡಿಕೆ, ಅವರು ವರ್ತಿಸುವ ರೀತಿ ಎಲ್ಲವೂ ಬದಲಾಯ್ತು. ಇದೀಗ ‘ಬಾಹುಬಲಿ: ದಿ ಟಾರ್ಚ್ ಬೇರರ್’ ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ಬಳಿಕ ತಾವು ಒತ್ತಡಕ್ಕೆ ಸಿಲುಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
- Manjunatha C
- Updated on: Jun 28, 2026
- 3:11 pm