ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
ಚಿಕ್ಕಣ್ಣನ ಮದುವೆ, ಇಲ್ಲಿದೆ ನೋಡಿ ಆರತಕ್ಷತೆಯ ಸುಂದರ ಚಿತ್ರಗಳು
Chikkanna-Pawana marriage reception: ನಟ ಚಿಕ್ಕಣ್ಣ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ, ಈಗ ನಾಯಕ ನಟನಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಚಿಕ್ಕಣ್ಣ ಅವರು ಶ್ರೀರಂಗಪಟ್ಟಣದ ಮಹದೇವಪುರದ ಪಾವನಾ ಗೌಡ ಅವರನ್ನು ವಿವಾಹವಾಗುತ್ತಿದ್ದು, ಇಂದು (ಆಗಸ್ಟ್ 29) ಮೈಸೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಚಾಲ್ತಿಯಲ್ಲಿದೆ.
- Manjunatha C
- Updated on: Aug 29, 2026
- 10:54 pm
ತೆರೆ ಮೇಲಷ್ಟೆ ವೈಯಲೆಂಟ್, ಯಶ್ ಮೃದು ಮನಸ್ಸಿನ ವ್ಯಕ್ತಿ: ತಾರಾ ಸುತಾರಿಯಾ
Tara Sutaria: ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ನಟಿ ತಾರಾ ಸುತಾರಿಯಾ, ಯಶ್ ಅವರ ಬಗ್ಗೆ ಅಪರೂಪದ ಸಂಗತಿ ಹೇಳಿದ್ದಾರೆ.
- Manjunatha C
- Updated on: Aug 29, 2026
- 10:20 pm
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
Actor Chikkanna: ಕನ್ನಡ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು, ತಂತ್ರಜ್ಞರುಗಳು, ಚಿಕ್ಕಣ್ಣ ಅವರ ಕುಟುಂಬದವರು, ಆತ್ಮೀಯರು, ಸ್ನೇಹಿತರುಗಳು ಚಿಕ್ಕಣ್ಣನ ಮದುವೆಗೆ ಹಾಜರಾಗಿದ್ದಾರೆ. ಚಿಕ್ಕಣ್ಣ ಅದ್ಧೂರಿ ಸೂಟ್ ಧರಿಸಿ ‘ಹೀರೋ’ ರೀತಿಯಲ್ಲಿ ರೆಡಿ ಆಗಿದ್ದು, ಆರತಕ್ಷತೆಯ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಚಿಕ್ಕಣ್ಣ ಅವರ ಮದುವೆ ಆರತಕ್ಷತೆ ಮೈಸೂರಿನ ಸ್ಪೆಕ್ಟ್ರಾ ಕನ್ವೆಷನ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿದೆ ನೋಡಿ, ಚಿಕ್ಕಣ್ಣನ ಮದುವೆ ಆರತಕ್ಷತೆ ವಿಡಿಯೋ...
- Manjunatha C
- Updated on: Aug 29, 2026
- 9:31 pm
ಸಂಭ್ರಮಿಸುವ ಸಮಯದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ
Emraan Hashmi Health: ಇಮ್ರಾನ್ ಹಶ್ಮಿ ಅವರಿಗೆ ಸ್ವಾನ್ ಫ್ಲೂ (H1N1) ಅಥವಾ ಹಂದಿ ಜ್ವರದ ಸೋಂಕಿರುವುದು ದೃಢಪಟ್ಟಿದೆ. ಮುಂಬೈನಲ್ಲಿ ಅವರಿಗೆ ಈ ಸೋಂಕು ತಗುಲಿರುವುದು ತಿಳಿದುಬಂದಿದೆ. ವೈದ್ಯಕೀಯ ವರದಿಯ ಸಾಕ್ಷಿಯೊಂದಿಗೆ ಅವರ ಪ್ರತಿನಿಧಿಯೂ ಇದನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗೆ ದೆಹಲಿ, ಮುಂಬೈ ನಗರಗಳಲ್ಲಿ H1N1 (ಸ್ವಾನ್ ಫ್ಲೂ) ಸೋಂಕುಗಳು ತೀವ್ರವಾಗಿ ಹೆಚ್ಚಾಗಿವೆ. ರಾಜಧಾನಿಯಲ್ಲಿ ಈವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದಷ್ಟೆ ಅವರು ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದರಂತೆ.
- Manjunatha C
- Updated on: Aug 29, 2026
- 9:18 pm
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣನ ಉತ್ತರ ಏನಿತ್ತು?
Toxic movie: ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾ ‘ಒರಿಜಿನಲ್ ಮಾನ್ಸ್ಟರ್’ ಅನ್ನು ಮುಂಬೈನಲ್ಲಿ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ಹಿಂದಿ ಮಾಧ್ಯಮದವರು ಶಿವರಾಜ್ ಕುಮಾರ್ ಅವರನ್ನು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಶಿವಣ್ಣನಿಗೆ ಮಾಧ್ಯಮಗಳು ಕೇಳಿದ ಪ್ರಶ್ನೆ ಏನು? ಶಿವರಾಜ್ ಕುಮಾರ್ ಕೊಟ್ಟ ಉತ್ತರವೇನಿತ್ತು? ವಿಡಿಯೋ ನೋಡಿ...
- Manjunatha C
- Updated on: Aug 29, 2026
- 8:33 pm
‘ಪುಷ್ಪ 2’, ‘ಬಾಹುಬಲಿ 2’ ದಾಖಲೆ ಮುರಿದ ‘ಇರುಮುಡಿ’
Irumudi movie record: ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಯ್ತು ತೆಲುಗು ಸಿನಿಮಾ ‘ಇರುಮುಡಿ’. ‘ಟಾಕ್ಸಿಕ್’ನಿಂದ ಪ್ರಬಲ ಸ್ಪರ್ಧೆ ಇದ್ದರೂ ಸಹ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಇದೀಗ ಈ ಸಿನಿಮಾ ಸಾರ್ವಕಾಲಿಕ ಬ್ಲಾಕ್ ಬಸ್ಟರ್ಗಳು ಎನಿಸಿಕೊಂಡಿರುವ ‘ಪುಷ್ಪ 2’ ಮತ್ತು ‘ಬಾಹುಬಲಿ 2’ ಸಿನಿಮಾಗಳ ದಾಖಲೆಗಳನ್ನು ಸಹ ಮುರಿದಿದೆ.
- Manjunatha C
- Updated on: Aug 29, 2026
- 7:33 pm
ಯಶ್ ಶ್ರಮ ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ
Toxic movie: ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯಗಳು ಸಖತ್ ಸದ್ದು ಮಾಡುತ್ತಿವೆ. ಬಲು ಅದ್ಧೂರಿಯಾದ ಮತ್ತು ಬಹಳ ವಿಭಿನ್ನವಾದ ಆಕ್ಷನ್ ದೃಶ್ಯಗಳನ್ನು ‘ಟಾಕ್ಸಿಕ್’ ಸಿನಿಮಾ ಒಳಗೊಂಡಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಹಾಲಿವುಡ್ನ ಸ್ಟಾರ್ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ನಿರ್ದೇಶನ ಮಾಡಿದ್ದಾರೆ. ಇದೀಗ ಕೆವಿಎನ್ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಜೆಜೆ ಪೆರ್ರಿ ಯಶ್ ಬಗ್ಗೆ ಮಾತನಾಡಿದ್ದಾರೆ.
- Manjunatha C
- Updated on: Aug 29, 2026
- 7:47 pm
ಬಾಲ್ಯದ ಗೆಳೆಯನಿಗೆ ಡಿಕೆಶಿ ‘ಉಡುಗೊರೆ’: ರಾಜಕೀಯಕ್ಕೆ ರವಿಚಂದ್ರನ್?
V Ravichandran: ‘ಕನಸುಗಾರ’ ಎಂದೇ ಕರೆಸಿಕೊಳ್ಳುವ ರವಿಚಂದ್ರನ್, ‘ನನಗೆ ಸಿನಿಮಾ ಬಿಟ್ಟು ಇನ್ನೇನೂ ಬರುವುದಿಲ್ಲ’ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಇದೀಗ ರವಿಚಂದ್ರನ್ ಸಿನಿಮಾದ ಜೊತೆಗೆ ರಾಜಕೀಯ ಅಂಗಳಕ್ಕೆ ಇಳಿಯುತ್ತಿದ್ದಾರೆಂಬ ಸುದ್ದಿ ಬಲವಾಗಿ ಹರಿದಾಡುತ್ತಿದೆ. ರವಿಚಂದ್ರನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದ್ದು, ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರೇ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
- Manjunatha C
- Updated on: Aug 29, 2026
- 4:20 pm
ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ
OTT Release this week: ಈ ವಾರ ಚಿತ್ರಮಂದಿರದಲ್ಲಿ ‘ಟಾಕ್ಸಿಕ್’ ಅಬ್ಬರಿಸುತ್ತಿದೆ. ಜೊತೆಗೆ ತೆಲುಗಿನ ‘ಇರುಮುಡಿ’ ಸಹ ಇದೆ. ಚಿತ್ರಮಂದಿರಗಳ ರೀತಿಯಲ್ಲೇ ಒಟಿಟಿಗೂ ಸಹ ಕೆಲವು ಸೂಪರ್ ಹಿಟ್ ಸಿನಿಮಾಗಳು ಈ ವಾರ ಲಗ್ಗೆ ಇಟ್ಟಿವೆ. ಅದರಲ್ಲೂ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದ ಸಿನಿಮಾ ಒಂದು ಈ ವಾರ ಒಟಿಟಿಗೆ ಬಂದಿದೆ. ಈ ವಾರ ಒಟಿಟಿಗೆ ಬಂದಿರುವ ಹೊಸ ಸಿನಿಮಾ ಯಾವುವು? ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ನೋಡಿ ಮಾಹಿತಿ...
- Manjunatha C
- Updated on: Aug 29, 2026
- 3:04 pm
ಬಿಗ್ಬಾಸ್ ಅಗ್ನಿಪರೀಕ್ಷೆ: ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ
Bigg Boss Kannada season 13: ಬಿಗ್ಬಾಸ್ ಕನ್ನಡ ಸೀಸನ್ 13ರ ಬಿಗ್ಬಾಸ್ ಅಗ್ನಿಪರೀಕ್ಷೆ ಚಾಲ್ತಿಯಲ್ಲಿದ್ದು, ಆಕಾಂಕ್ಷಿಗಳಿಗೆ ನಾನಾ ರೀತಿಯ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಬಿಗ್ಬಾಸ್ನ ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳು ನಾನಾ ರೀತಿಯ ಹರಸಾಹಸಗಳನ್ನು ಮಾಡುತ್ತಿದ್ದಾರೆ. ಶ್ರುತಿ, ವಿನಯ್, ಸಂಗೀತಾ, ಚಂದನ್ ಶೆಟ್ಟಿ ಅವರುಗಳು ಜಡ್ಜ್ಗಳಾಗಿದ್ದಾರೆ. ವಿಡಿಯೋ ನೋಡಿ...
- Manjunatha C
- Updated on: Aug 29, 2026
- 8:27 am
‘ರಾಮಾಯಣ’ದ ವಿಶೇಷ ಪ್ರದರ್ಶನ, ವೀಕ್ಷಿಸಿದವರು ಯಾರು?
Ramayana movie show: ಯಶ್ ಹಾಗೂ ರಣ್ಬೀರ್ ಕಪೂರ್ ನಟಿಸಿರುವ ‘ರಾಮಾಯಣ’ ಸಿನಿಮಾದ ವಿಶೇಷ ಶೋ ಪ್ರದರ್ಶಿಸಲಾಗಿದ್ದು, ಆಯ್ದ ಕೆಲವೇ ದೃಶ್ಯಗಳನ್ನು ಮಾತ್ರವೇ ತೋರಿಸಲಾಗಿದೆ. ದೇಶದ ಹಲವು ಪ್ರಮುಖ ವಿತರಕರನ್ನು ಈ ಶೋಗೆ ಆಹ್ವಾನಿಸಲಾಗಿತ್ತಂತೆ. ದೃಶ್ಯಗಳ ಗುಣಮಟ್ಟ ನೋಡಿದ ವಿತರಕರು, ಸಿನಿಮಾವನ್ನು ಹಾಲಿವುಡ್ನ ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾಕ್ಕೆ ಹೋಲಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
- Manjunatha C
- Updated on: Aug 28, 2026
- 6:18 pm
ವಿದೇಶಿ ಬಾಯ್ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ ನಟಿ ಅನನ್ಯಾ ಪಾಂಡೆ
Ananya Pandey: ವಿದೇಶಿ ಬಾಯ್ಫ್ರೆಂಡ್ ವಾಲರ್ಕ ಬ್ಲಾಂಕೊ ಜೊತೆ ರಿಲೇಷನ್ನಲ್ಲಿದ್ದ ನಟಿ ಅನನ್ಯಾ ಪಾಂಡೆ ಇದೀಗ ಬ್ರೇಕಪ್ ಮಾಡಿಕೊಂಡಿದ್ದಾರೆ.
- Manjunatha C
- Updated on: Aug 28, 2026
- 5:41 pm