AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ‘ಸ್ಪೈಡರ್​​ಮ್ಯಾನ್’ ಟ್ರೈಲರ್ ಬಿಡುಗಡೆ: ಕಾಣುತ್ತಿದೆ ಸಾಕಷ್ಟು ಬದಲಾವಣೆ

Spiderman: Brand New Day: ‘ಸ್ಪೈಡರ್​​ಮ್ಯಾನ್​’ ಸಿನಿಮಾ ಹಲವು ಭಾಗಗಳು ಹಾಲಿವುಡ್​​ನಲ್ಲಿ ಈಗಾಗಲೇ ಬಂದಿವೆ. ‘ಸ್ಪೈಡರ್​​ಮ್ಯಾನ್’ ಸರಣಿಯ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಸಹ ಆಗಿವೆ. ಇದೀಗ ಇದೇ ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

ಹೊಸ ‘ಸ್ಪೈಡರ್​​ಮ್ಯಾನ್’ ಟ್ರೈಲರ್ ಬಿಡುಗಡೆ: ಕಾಣುತ್ತಿದೆ ಸಾಕಷ್ಟು ಬದಲಾವಣೆ
Spider Man
ಮಂಜುನಾಥ ಸಿ.
|

Updated on:Mar 18, 2026 | 9:23 PM

Share

‘ಸ್ಪೈಡರ್​​ಮ್ಯಾನ್’ (Spiderman) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಸೂಪರ್ ಹೀರೋ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದ ಸಿನಿಮಾ. ‘ಸ್ಪೈಡರ್​​ಮ್ಯಾನ್​’ನ ಹಲವು ಆವೃತ್ತಿಗಳು ಹಾಲಿವುಡ್​​ನಲ್ಲಿ ಈಗಾಗಲೇ ಬಂದಿವೆ. ‘ಸ್ಪೈಡರ್​​ಮ್ಯಾನ್’ ಸರಣಿಯ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಸಹ ಆಗಿವೆ. ಇದೀಗ ಇದೇ ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೆಸರಿನ ಸಿನಿಮಾ ಇದಾಗಿದ್ದು, ಟ್ಯಾಗ್​ಲೈನ್​​ನಲ್ಲಿಯೇ ಇರುವಂತೆ, ಸ್ಪೈಡರ್​ಮ್ಯಾನ್ ಪಾಲಿಗೆ ಇದು ಸಂಪೂರ್ಣ ಹೊಸ ದಿನವೇ ಆಗಿದೆ. ಈ ಹಿಂದಿನ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಕ್ಲೈಮ್ಯಾಕ್ಸ್​​ನಲ್ಲಿ ಪೀಟರ್ ಪಾರ್ಕರ್ (ಸ್ಪೈಡರ್​ಮ್ಯಾನ್) ಜಗತ್ತು ಉಳಿಸಲು ತ್ಯಾಗ ಮಾಡಿದ್ದು, ಇದೇ ಕಾರಣಕ್ಕೆ ಅವನ ಗರ್ಲ್​​ಫ್ರೆಂಡ್, ಆತ್ಮೀಯ ಗೆಳೆಯ ಎಲ್ಲರು ಪೀಟರ್ ಪಾರ್ಕರ್ ಅನ್ನು ಮರೆತುಬಿಟ್ಟಿದ್ದಾರೆ, ಆದರೆ ಪೀಟರ್​​ಗೆ ಮಾತ್ರ ಎಲ್ಲರ ನೆನಪು ಇದೆ. ಈಗ ಬಿಡುಗಡೆ ಆಗಿರುವ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾನಲ್ಲಿ ಅದೇ ಕತೆ ಮುಂದುವರೆದಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಪೀಟರ್​​ನ ಪ್ರೇಯಸಿ ಮತ್ತು ಆಪ್ತ ಮಿತ್ರರು ಪೀಟರ್ ಅನ್ನು ಮರೆತಿದ್ದಾರೆ. ಪೀಟರ್​​ನ ಪ್ರೇಯಸಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಪೀಟರ್ ಆಕೆಯ ಜೀವನಕ್ಕೆ ಮತ್ತೆ ಎಂಟ್ರಿ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ. ಇದರ ನಡುವೆ ಪೀಟರ್​​ನ ತನ್ನ ಸೂಪರ್ ಹೀರೋ ಶಕ್ತಿಗಳನ್ನು ಸಹ ಕಳೆದುಕೊಳ್ಳುತ್ತಿದ್ದಾನೆ. ಹಳೆಯ ಹಲವು ವಿಲನ್​​ಗಳು ಈಗ ಒಮ್ಮೆಲೆ ಪೀಟರ್ ಅಥವಾ ಸ್ಪೈಡರ್​​ಮ್ಯಾನ್ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗೆ ಹಲವು ಅಂಶಗಳು ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಇವೆ.

ಇದನ್ನೂ ಓದಿ:Oscars 2026: ಈ ಬಾರಿ ಆಸ್ಕರ್ ಅವಾರ್ಡ್​ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಈಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿನ ವಿಷಯವೆಂದರೆ ಪೀಟರ್‌ನ ಶರೀರದಲ್ಲಿ ಬದಲಾವಣೆ ಆಗುತ್ತಿದೆ ಪೀಟರ್, ರೇಷ್ಮೆಗೂಡಿನ ಒಳಗೆ ಎಚ್ಚರಗೊಳ್ಳುವ ದೃಶ್ಯವಿದೆ. ಅಲ್ಲದೆ, ಅವನು ವೆಬ್-ಶೂಟರ್ ಬಳಸಲಾಗದೆ ಬಿದ್ದು ಹೋಗುವ ದೃಶ್ಯವಿದೆ. ಮತ್ತೊಂದು ದೃಶ್ಯದಲ್ಲಿ ತನ್ನ ಮಣಿಕಟ್ಟಿನಿಂದಲೇ ನೇರವಾಗಿ ಜೇಡರ ಬಲೆಯನ್ನು ಬಿಡುತ್ತಿರುವ ದೃಶ್ಯವೂ ಇದೆ. ಹಳೆಯ ಟೋಬಿ ಮ್ಯಾಗೈರ್ ಸ್ಪೈಡರ್​ಮ್ಯಾನ್​​ನಲ್ಲಿ ನಾಯಕ ಬರಿಗೈನಿಂದಲೇ ವೆಬ್ ಶೂಟರ್​​ಗಳನ್ನು ಬಿಡುತ್ತಿದ್ದ.

ಈ ಹೊಸ ಸಿನಿಮಾದಲ್ಲಿ ಮಾರ್ವೆಲ್‌ನ ಇತರ ಪ್ರಮುಖ ಪಾತ್ರಗಳಾದ ಹಲ್ಕ್ ಅಥವಾ ಬ್ರೂಸ್ ಬ್ಯಾನರ್ ಮತ್ತು ಪನಿಶರ್ ಕಾಣಿಸಿಕೊಂಡಿದ್ದಾರೆ. ಪೀಟರ್ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬ್ರೂಸ್ ಬ್ಯಾನರ್ ಬಳಿ ಸಹಾಯ ಕೇಳಲು ಹೋಗುವ ದೃಶ್ಯವನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಸ್ಪೈಡರ್​​ಮ್ಯಾನ್ ಈ ಸಿನಿಮಾನಲ್ಲಿ ಆಧುನಿಕ ಸೂಟ್ ಬದಲಿಗೆ ತಾನೇ ಹೊಲೆದಿದ್ದ ಹಳೆಯ ಸೂಟ್ ಬಳಸುತ್ತಿದ್ದಾನೆ. ಸಿನಿಮಾನಲ್ಲಿ ಸಾಕಷ್ಟು ವಿಲನ್​​ಗಳು ಸಹ ಇದ್ದಾರೆ. ಹಳೆಯ ಶತ್ರು ಸ್ಕಾರ್ಪಿಯಾನ್ ಅಂತಿಮವಾಗಿ ತನ್ನ ಪೂರ್ಣ ರೂಪದಲ್ಲಿ ಮರಳಿದ್ದಾನೆ. ಜೊತೆಗೆ ‘ಟಾಂಬ್‌ಸ್ಟೋನ್’ ಎಂಬ ಭೂಗತ ಪಾತಕಿ ಸಹ ಇದ್ದಾನೆ. ಇವುಗಳ ಜೊತೆಗೆ ಕೆಲವು ಜಪಾನಿ ಸಮುರಾಯ್​ಗಳು ಇದ್ದಾರೆ. ಸ್ವತಃ ಸ್ಪೈಡರ್​​ಮ್ಯಾನ್ ಸಹ ರಾಕ್ಷಸನ ರೂಪ ತಾಳುವ ದೃಶ್ಯವೂ ಸಹ ಇದೆ.

ಒಟ್ಟಾರೆ ‘ಸ್ಪೈಡರ್​​ಮ್ಯಾನ್ : ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಟ್ರೈಲರ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸಿನಿಮಾನಲ್ಲಿ ಮಾಮೂಲಿನಂತೆ ನಾಯಕನಾಗಿ ಟಾಮ್ ಹಾಲೆಂಡ್ ನಟಿಸಿದ್ದಾರೆ. ನಾಯಕಿ ಜೆಂಡೆಯಾ. ಸಿನಿಮಾ ಜುಲೈ 31ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Wed, 18 March 26

Follow Us
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್