AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರದೀಪ್ ರಾವತ್ ಅನ್ನು ಮರೆತೇ ಬಿಟ್ಟಿತೆ ತೆಲುಗು ಚಿತ್ರರಂಗ?

Telugu Movie Industry: 1985ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟ ಪ್ರದೀಪ್ ರಾವತ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರ ಜನಪ್ರಿಯತೆ ದಕ್ಷಿಣ ಭಾರತದಲ್ಲಿ ಹೆಚ್ಚಾಯ್ತು. 2004 ರಲ್ಲಿ ರಾಜಮೌಳಿ ನಿರ್ದೇಶನದ ‘ಸೈ’ ಸಿನಿಮಾನಲ್ಲಿ ವಿಲನ್ ಆಗಿ ನಟಿಸಿದ ಪ್ರದೀಪ್ ರಾವತ್ ಆ ನಂತರ ತೆಲುಗು ಚಿತ್ರರಂಗದ ಅವಿಭಾಜ್ಯ ಅಂಗವೇ ಆಗಿಬಿಟ್ಟರು. ಚಿತ್ರರಂಗದ ಎಲ್ಲ ಸ್ಟಾರ್ ನಟರ ಎದುರು ವಿಲನ್ ಆಗಿ ನಟಿಸಿದರು ಪ್ರದೀಪ್. ಆದರೆ ಈಗ ಪ್ರದೀಪ್ ಅವರನ್ನು ತೆಲುಗು ಚಿತ್ರರಂಗ ಮರೆತೇ ಬಿಟ್ಟಂತಿದೆ.

ಪ್ರದೀಪ್ ರಾವತ್ ಅನ್ನು ಮರೆತೇ ಬಿಟ್ಟಿತೆ ತೆಲುಗು ಚಿತ್ರರಂಗ?
Pradeep Rawt
ಮಂಜುನಾಥ ಸಿ.
| Edited By: |

Updated on:Aug 05, 2026 | 1:20 PM

Share

ಮುಖ್ಯಾಂಶಗಳು

  • ಪ್ರದೀಪ್ ರಾವತ್ ಇತ್ತೀಚೆಗಷ್ಟೆ ನಿಧನ ಹೊಂದಿದ್ದಾರೆ.
  • ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಅವರು ನಟಿಸಿದ್ದರು.
  • ಆದರೆ ತೆಲುಗಿನ ಯಾವ ಸ್ಟಾರ್ ನಟರೂ ಅವರಿಗಾಗಿ ಸಂತಾಪ ಸೂಚಿಸಿಲ್ಲ.

ಪ್ರದೀಪ್ ರಾವತ್ (Pradeep Rawat), ಭಾರತೀಯ ಚಿತ್ರರಂಗದ ಸ್ಟಾರ್ ವಿಲನ್ ನಿನ್ನೆ (ಆಗಸ್ಟ್ 04) ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. 1985ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಾದರೂ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರ ಜನಪ್ರಿಯತೆ ದಕ್ಷಿಣ ಭಾರತದಲ್ಲಿ ಹೆಚ್ಚಾಯ್ತು. 2004 ರಲ್ಲಿ ರಾಜಮೌಳಿ ನಿರ್ದೇಶನದ ‘ಸೈ’ ಸಿನಿಮಾನಲ್ಲಿ ವಿಲನ್ ಆಗಿ ನಟಿಸಿದ ಪ್ರದೀಪ್ ರಾವತ್ ಆ ನಂತರ ತೆಲುಗು ಚಿತ್ರರಂಗದ ಅವಿಭಾಜ್ಯ ಅಂಗವೇ ಆಗಿಬಿಟ್ಟರು. ಚಿತ್ರರಂಗದ ಎಲ್ಲ ಸ್ಟಾರ್ ನಟರ ಎದುರು ವಿಲನ್ ಆಗಿ ನಟಿಸಿದರು ಪ್ರದೀಪ್. ಆದರೆ ಈಗ ಪ್ರದೀಪ್ ಅವರನ್ನು ತೆಲುಗು ಚಿತ್ರರಂಗ ಮರೆತೇ ಬಿಟ್ಟಂತಿದೆ.

ಪ್ರದೀಪ್ ರಾವತ್ ಅವರು ನಿನ್ನೆ (ಆಗಸ್ಟ್ 04) ನಿಧನ ಹೊಂದಿದ್ದಾರೆ. ತೆಲುಗು ಚಿತ್ರರಂಗದ ಯಾವೊಬ್ಬ ಸ್ಟಾರ್ ನಟರೂ ಸಹ ಪ್ರದೀಪ್ ಅವರಿಗಾಗಿ ಮೂರಕ್ಷದ ಟ್ವೀಟ್ ಮಾಡಿಲ್ಲ. ಪ್ರದೀಪ್ ಅವರು, ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚು ನಟಿಸಿದ್ದು ತೆಲುಗು ಸಿನಿಮಾಗಳಲ್ಲಿಯೇ. ತೆಲುಗು ಚಿತ್ರರಂಗದಲ್ಲಿ ವಿಲನ್​​ ಪಾತ್ರಕ್ಕೆ ಹೊಸ ಕಳೆಯನ್ನು, ಹೊಸ ಮಾದರಿಯನ್ನು ಹಾಕಿಕೊಟ್ಟ ನಟ ಪ್ರದೀಪ್, ತೆಲುಗು ಚಿತ್ರರಂಗ ಸಹ ಪ್ರದೀಪ್ ಅವರನ್ನು ತಮ್ಮ ಸಿನಿಮಾಗಳಿಗಾಗಿ ಚೆನ್ನಾಗಿ ದುಡಿಸಿಕೊಂಡಿತು, ಆದರೆ ಈಗ ಪ್ರದೀಪ್ ನಿಧನಕ್ಕೆ ಚುಕ್ಕೆ ಕಂಬನಿ ಸಹ ಇಲ್ಲ.

ರಾಜಮೌಳಿ ನಿರ್ದೇಶನದ ‘ಸೈ’ ಸಿನಿಮಾದ ಮೂಲಕ ಪ್ರದೀಪ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಸಿನಿಮಾದ ಮುಖ್ಯ ಧಾತುವೇ ವಿಲನ್ ‘ಬಿಕ್ಸು ಯಾದವ್’. ಗೂಳಿಯಂಥಹಾ ಮೈಕಟ್ಟು, ಭರ್ಜರಿ ಮೀಸೆ ಹೊಂದಿದ್ದ ಪ್ರದೀಪ್ ಆ ಸಿನಿಮಾನಲ್ಲಿ ನಾಯಕನನ್ನೂ ಮೀರಿಸಿ ಜನಪ್ರಿಯತೆ ಗಳಿಸಿದರು. ಅದಾದ ಬಳಿಕ ಪ್ರಭಾಸ್ ನಟನೆಯ ‘ಛತ್ರಪತಿ’ ಸಿನಿಮಾನಲ್ಲಿ ರಾಸ್ ಬಿಹಾರಿ ಪಾತ್ರದಲ್ಲಿ ಗಮನ ಸೆಳೆದರು. ರಾಜಮೌಳಿ ನಿರ್ದೇಶನದ ಎರಡು ಸಿನಿಮಾಗಳಲ್ಲಿ ವಿಲನ್ ಆದ ಏಕೈಕ ನಟ ಪ್ರದೀಪ್.

ಇದನ್ನೂ ಓದಿ:ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ

ತೆಲುಗು ಚಿತ್ರರಂಗ ಅದ್ಯಾವ ಪರಿ ಪ್ರದೀಪ್ ಅವರನ್ನು ಬಳಸಿಕೊಂಡಿತೆಂದರೆ ವರ್ಷಕ್ಕೆ ಏಳು-ಎಂಟು ತೆಲುಗು ಸಿನಿಮಾಗಳಲ್ಲಿ ಪ್ರದೀಪ್ ವಿಲನ್ ಆಗಿ ನಟಿಸುತ್ತಿದ್ದರು. ಅವರ ಲುಕ್ ಸಹ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿಬಿಟ್ಟಿತ್ತು. ಹಾಗಾಗಿ ಆ ಲುಕ್ ಸಹ ಬದಲಾವಣೆ ಮಾಡುತ್ತಿರಲಿಲ್ಲ. ವಿಲನ್ ಪಾತ್ರಗಳು ಮಾತ್ರವೇ ಅಲ್ಲದೆ ಕಾಮಿಡಿ, ಕಾಮಿಡಿ ವಿಲನ್, ಪೋಷಕ ನಟ ಪಾತ್ರಗಳಲ್ಲಿಯೂ ಪ್ರದೀಪ್ ಅವರು ನಟಿಸಿದ್ದಾರೆ. ಪ್ರದೀಪ್ ಅವರು ತೆಲುಗಿನ ನಟರೇ ಆಗಿಬಿಟ್ಟಿದ್ದರು.

ಚಿರಂಜೀವಿ, ಪವನ್ ಕಲ್ಯಾಣ್, ಜೂ ಎನ್​​ಟಿಆರ್, ಅಲ್ಲು ಅರ್ಜುನ್, ಪ್ರಭಾಸ್, ರವಿತೇಜ, ಬಾಲಕೃಷ್ಣ ಇನ್ನೂ ಹಲವಾರು ತೆಲುಗಿನ ಸ್ಟಾರ್ ನಟರುಗಳೊಟ್ಟಿಗೆ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ವಿಲನ್ ಆಗಿ ಪ್ರದೀಪ್ ನಟಿಸಿದ್ದಾರೆ. ಆದರೆ ಈಗ ಪ್ರದೀಪ್ ನಿಧನಕ್ಕೆ ತೆಲುಗಿನ ಒಬ್ಬ ನಟರೂ ಸಹ ಸಂತಾಪ ವ್ಯಕ್ತಪಡಿಸಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 5 August 26

Follow Us
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ