AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ಸಿ ದಡದಲ್ಲಿ 2,100 ದೀಪಗಳ ಬೆಳಕು; ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ

ಕಾಲ್ಸಿ ದಡದಲ್ಲಿ 2,100 ದೀಪಗಳ ಬೆಳಕು; ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ

ಸುಷ್ಮಾ ಚಕ್ರೆ
|

Updated on: Sep 17, 2026 | 11:10 PM

Share

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹರಿಪುರ್ ಕಾಲ್ಸಿಯಲ್ಲಿ ಪವಿತ್ರ ಯಮುನಾ ನದಿ ದಂಡೆಯ ಮೇಲೆ ಪೂಜ್ಯ ಸಾಧು-ಸಂತರು, ಸಾವಿರಾರು ಭಕ್ತರು ಮತ್ತು ಸ್ಥಳೀಯ ನಾಗರಿಕರೊಂದಿಗೆಗೂಡಿ ಯಮುನಾ ಆರತಿ ನೆರವೇರಿಸಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ 'ಆಶೀರ್ವಾದ ಕಾ ದಿಯಾ' ಕಾರ್ಯಕ್ರಮದ ಭಾಗವಾಗಿ, ಯಮುನಾ ನದಿಯ ನೂತನವಾಗಿ ನಿರ್ಮಿಸಲಾದ ಘಾಟ್‌ಗಳನ್ನು ಒಟ್ಟು 2,100 ಮಣ್ಣಿನ ದೀಪಗಳಿಂದ ಬೆಳಗಿಸಲಾಯಿತು.

ಡೆಹ್ರಾಡೂನ್, ಸೆಪ್ಟೆಂಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಸಂದರ್ಭದಲ್ಲಿ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹರಿಪುರ್ ಕಾಲ್ಸಿಯಲ್ಲಿ ಪವಿತ್ರ ಯಮುನಾ ನದಿ ದಂಡೆಯ ಮೇಲೆ ಪೂಜ್ಯ ಸಾಧು-ಸಂತರು, ಸಾವಿರಾರು ಭಕ್ತರು ಮತ್ತು ಸ್ಥಳೀಯ ನಾಗರಿಕರೊಂದಿಗೆಗೂಡಿ ಯಮುನಾ ಆರತಿ ನೆರವೇರಿಸಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಆಶೀರ್ವಾದ ಕಾ ದಿಯಾ’ ಕಾರ್ಯಕ್ರಮದ ಭಾಗವಾಗಿ, ಯಮುನಾ ನದಿಯ ನೂತನವಾಗಿ ನಿರ್ಮಿಸಲಾದ ಘಾಟ್‌ಗಳನ್ನು ಒಟ್ಟು 2,100 ಮಣ್ಣಿನ ದೀಪಗಳಿಂದ ಬೆಳಗಿಸಲಾಯಿತು.

ಸಾಧು-ಸಂತರು ಮತ್ತು ಸ್ಥಳೀಯ ನಾಗರಿಕರು ಏಕಕಾಲಕ್ಕೆ 2,100 ದೀಪಗಳನ್ನು ಹಚ್ಚುವ ಮೂಲಕ ಪವಿತ್ರ ಯಮುನಾ ತೀರವನ್ನು ಪ್ರಜ್ವಲಿಸಿದರು. ಪ್ರಧಾನಿ ಮೋದಿಯವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ದೇಶಸೇವೆಯ ಸಂಕಲ್ಪಕ್ಕಾಗಿ ಈ ದೀಪಗಳನ್ನು ಸಮರ್ಪಿಸಲಾಯಿತು.

ಇದನ್ನೂ ಓದಿ:

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us