Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
ಇನ್ನೂ ಹೆಚ್ಚು ಓದಿRaksha Bandhan: ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋಗೆ ಭಾರೀ ಮೆಚ್ಚುಗೆ
ರಕ್ಷಾ ಬಂಧನ ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಯುವತಿಯರು ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಿದರು. ಯೋಧರ ಕೈಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಕಾಶ್ಮೀರಿ ಯುವತಿಯರು ಹಾಗೂ ಶಾಲಾ ಬಾಲಕಿಯರು ರಕ್ಷಾಬಂಧನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದರು. ಜಾತಿ-ಧರ್ಮ ಮೀರಿ ಸಹೋದರತ್ವ ಸಾರಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
- Sushma Chakre
- Updated on: Aug 28, 2026
- 9:10 pm
Video: ಹೊಸ ಬೈಕ್ಗೆ ಹೂಮಾಲೆ ಹಾಕೋ ಬದ್ಲು ಹೆಂಡ್ತಿ ಕೊರಳಿಗೆ ಹಾಕಿದ ಮುಗ್ಧ ವ್ಯಕ್ತಿ
ಮುಗ್ಧ ವ್ಯಕ್ತಿಗಳು ಏನು ಹೇಳಿದ್ರೂ ಕಣ್ಣು ಮುಚ್ಚಿಕೊಂಡು ನಂಬಿ ಬಿಡ್ತಾರೆ. ಈ ವ್ಯಕ್ತಿಯದ್ದು ಅದೇ ಕಥೆ. ಹೊಸ ವಾಹನಕ್ಕೆ ಹೂವಿನ ಮಾಲೆ ಹಾಕೋದನ್ನು ಬಿಟ್ಟು ಹೆಂಡತಿಯ ಕೊರಳಿಗೆ ಹಾಕಲು ಹೋಗಿದ್ದಾನೆ. ಈ ಮುಗ್ಧ ವ್ಯಕ್ತಿ ಮಾಡಿದ ಕೆಲಸಕ್ಕೆ ಶೋ ರೂಮ್ ನಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- Sainandha P
- Updated on: Aug 28, 2026
- 3:06 pm
Video: ವಿದೇಶಿ ಸೊಸೆ-ಮಗನನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿದ ಭಾರತೀಯ ಕುಟುಂಬ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಗನು ವಿದೇಶಿ ಯುವತಿಯನ್ನು ಮದುವೆಯಾಗಿ ಮನೆಗೆ ಬರುತ್ತಿದ್ದಂತೆ ಆರತಿ ಬೆಳಗಿ ಬಹಳ ಸಡಗರದಿಂದ ಭಾರತೀಯ ಕುಟುಂಬ ಸ್ವಾಗತಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.
- Sainandha P
- Updated on: Aug 28, 2026
- 12:35 pm
ನೀರಿನಲ್ಲಿ ಕೊಚ್ಚಿ ಬಂದ ಸಿಲಿಂಡರ್ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನರು!
ನೇಪಾಳದ ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಭಾರಿ ಪ್ರಮಾಣದ ಮಣ್ಣು, ಕಟ್ಟಿಗೆ ಮತ್ತು ಕೆಸರು ಮಿಶ್ರಿತ ನೀರು ವೇಗವಾಗಿ ಹರಿಯುತ್ತಿದೆ. ನೀರಿನ ರಭಸಕ್ಕೆ ಮನೆಗಳಲ್ಲಿದ್ದ ವಸ್ತುಗಳು ಕೊಚ್ಚಿಹೋಗುತ್ತಿವೆ. ಆ ಪ್ರವಾಹದ ನೀರಿಗೆ ಹಾರುವ ಕೆಲವು ಯುವಕರು ಆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಎಲ್ಪಿಜಿ ಸಿಲಿಂಡರ್ಗಳನ್ನು ಎಳೆದುಕೊಂಡು ದಡಕ್ಕೆ ತರುತ್ತಿದ್ದಾರೆ. ಜೀವ ಉಳಿಸಿಕೊಳ್ಳಲಾಗದೆ ನೇಪಾಳದಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತಿರುವಾಗ ಜೀವದ ಹಂಗು ತೊರೆದು ಪ್ರವಾಹದ ನೀರಿಗೆ ಹಾರಿ ಸಿಲಿಂಡರ್ ತರುವ ಸಾಹಸ ಬೇಕಿತ್ತಾ? ಎಂಬುದು ನೆಟ್ಟಿಗರ ಪ್ರಶ್ನೆ.
- Sushma Chakre
- Updated on: Aug 27, 2026
- 11:17 pm
Video: ಮನೆಮಾಲೀಕನ ಬಳಿ ಬಾಳೆಹಣ್ಣು ಬೇಕೆಂದು ಹಠ ಹಿಡಿದು ಕುಳಿತ ಮುದ್ದಿನ ಶ್ವಾನ
ಮನೆಯ ಮುದ್ದಿನ ಶ್ವಾನಗಳು ಮಾಲೀಕನ ಜತೆಗೆ ಮಕ್ಕಳಂತೆ ಹಠ ಹಿಡಿಯುತ್ತವೆ. ಇದಕ್ಕೆ ಸಾಕ್ಷಿಯೆಂಬಂತಿದೆ ಈ ದೃಶ್ಯ. ಶ್ವಾನವೊಂದು ಮನೆ ಮಂದಿಯ ಊಟವಾದ ಬಳಿಕ ಬಾಳೆಹಣ್ಣು ಬೇಕೆಂದು ಹಠ ಹಿಡಿದು ಬೊಗಳುತ್ತಾ ಕುಳಿತಿದೆ. ಈ ಮುದ್ದಾದ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ
- Sainandha P
- Updated on: Aug 27, 2026
- 6:39 pm
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತದ ಚಿತ್ರಣ ಸೆರೆ
ಪ್ರವಾಹದ ರಭಸಕ್ಕೆ ಹಲವಾರು ನಗರಗಳು ಮತ್ತು ಹಳ್ಳಿಗಳು ಕೊಚ್ಚಿಹೋಗಿದ್ದು, ಪ್ರಮುಖ ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಧ್ವಂಸಗೊಂಡಿವೆ. ನುವಾಕೋಟ್ ಮತ್ತು ತ್ರಿಶೂಲಿ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ವಿನಾಶದ ದೃಶ್ಯಗಳು ಡ್ರೋನ್ ಹಾಗೂ ವೈಮಾನಿಕ ವಿಡಿಯೋಗಳಲ್ಲಿ ಸೆರೆಯಾಗಿದ್ದು, ಪ್ರವಾಹದ ಭೀಕರತೆಯನ್ನು ಬಿಚ್ಚಿಟ್ಟಿವೆ. ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ನೇಪಾಳ ಸೇನಾ ಪಡೆಗಳನ್ನು ಒಳಗೊಂಡಂತೆ ಭಾರಿ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
- Sushma Chakre
- Updated on: Aug 27, 2026
- 5:28 pm
Video: 2000ರಲ್ಲಿ ಇನ್ಫೋಸಿಸ್ ಉದ್ಯೋಗಿಗಳ ಜೀವನ ಹೇಗಿತ್ತು ನೋಡಿ
ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುವುದು ಭಾರತದ ಲಕ್ಷಾಂತರ ಯುವಕರ ಮತ್ತು ಸಾಫ್ಟ್ವೇರ್ ಎಂಜಿನಿಯರ್ಗಳ ದೊಡ್ಡ ಕನಸು. ಆದರೆ 2000ರಲ್ಲಿ ಇನ್ಫೋಸಿಸ್ ಉದ್ಯೋಗಿಗಳ ಕೆಲಸದ ಸ್ಥಳದ ವಿಡಿಯೋ ವೈರಲ್ ಆಗಿದೆ. ಅಂದಿನ ಉದ್ಯೋಗಿಗಳ ಸರಳತೆಯು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Aug 27, 2026
- 11:06 am
Nepal Flood: ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ; ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿಯ ಸೇತುವೆ
ನೇಪಾಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, 400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ತ್ರಿಶೂಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯೊಂದು ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಭೀಕರ ಘಟನೆಯ ವಿಡಿಯೋ ಇಲ್ಲಿದೆ. ತ್ರಿಶೂಲಿ ನದಿ ಸೇತುವೆ ನೀರುಪಾಲಾಗಿದೆ. ಇಂದು ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಭೀಕರ ಜಲಪ್ರಳಯ ಸಂಭವಿಸಿದ್ದು, ರಭಸವಾಗಿ ಹರಿದುಬಂದ ಪ್ರವಾಹದ ನೀರಿಗೆ ತ್ರಿಶೂಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬೃಹತ್ ಸೇತುವೆಯೊಂದು ಕೊಚ್ಚಿಹೋಗಿದೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
- Sushma Chakre
- Updated on: Aug 26, 2026
- 9:52 pm
Video: ರಸ್ತೆ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ಪೌರಕಾರ್ಮಿಕರು
ಸ್ವಚ್ಛತೆಯ ಬಗ್ಗೆ ಜಾಗೃತಿ ವಹಿಸಿ ಅಂದ್ರು ಯಾರು ಕೂಡ ಕ್ಯಾರೆ ಎನ್ನದವರೇ ಹೆಚ್ಚು. ಎಲ್ಲೆಂದರಲ್ಲಿ ಕಸ ಸುರಿದು ಹೋಗ್ತಾರೆ. ಇದೀಗ ಅಂತಹವರಿಗಾಗಿಯೇ ರಸ್ತೆ ಬದಿ ಬ್ಯಾನರ್ ಹಾಕಿ ಪೌರಕಾರ್ಮಿಕರು ಖಡಕ್ ವಾರ್ನಿಂಗ್ ನೀಡಿದ್ದಾರೆ . ವ್ಯಕ್ತಿಯೊಬ್ಬ ಈ ಬ್ಯಾನರ್ ಹಾಕಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Aug 27, 2026
- 9:28 pm
Video: ಶ್ವಾನಕ್ಕೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಮೂಕ ಪ್ರಾಣಿಗಳ ಹಸಿವು ನೀಗಿಸುವ, ದಾಹ ತೀರಿಸುವ ಕೆಲ ವ್ಯಕ್ತಿಗಳನ್ನು ನೋಡಿದಾಗ ಅವರ ಒಳ್ಳೆತನಕ್ಕೆ ಸಹಜವಾಗಿ ಫಿದಾ ಆಗುತ್ತೇವೆ. ಆದರೆ ಇಲ್ಲೊಬ್ಬ ಯುವಕನು ದಾಹದಿಂದ ಒದ್ದಾಡುತ್ತಿದ್ದ ಶ್ವಾನಕ್ಕೆ ನೀರು ಕೊಟ್ಟು ಬಾಯಾರಿಕೆ ನೀಗಿಸುವ ಕೆಲಸ ಮಾಡಿದ್ದಾನೆ. ಮೂಕ ಪ್ರಾಣಿಗೆ ಸಹಾಯ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Aug 26, 2026
- 1:24 pm
Video: ಮನೆಗೆ ಬಂತು ಸ್ಮಾರ್ಟ್ ಟಿವಿ; ಡೆಲಿವರಿ ಬಾಯ್ ಕೆಲಸ ಮಾಡಿ ಅಮ್ಮನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ
ಪ್ರತಿಯೊಬ್ಬ ಮಗನಿಗೂ ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆಯಿರುತ್ತದೆ. ಇದೀಗ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಯುವಕನು ತನ್ನ ದುಡಿಮೆಯ ಹಣದಲ್ಲಿ ಸ್ಮಾರ್ಟ್ ಟಿವಿ ತಂದುಕೊಟ್ಟು ಖುಷಿ ಪಡಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Aug 26, 2026
- 11:59 am
Video: ಇದು ನಿನ್ನ ಮುದ್ದಿನ ಮಗನ ಸರ್ಪ್ರೈಸ್ ಗಿಫ್ಟ್; ತಾಯಿಯ ಹುಟ್ಟುಹಬ್ಬಕ್ಕೆ ಚಿನ್ನದ ಕಿವಿಯೋಲೆ ನೀಡಿದ ಮಗ
ಆತ್ಮೀಯರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುವುದು ಸಹಜ. ಆದರೆ ಇದೀಗ ಮಗನೊಬ್ಬ ತನ್ನ ತಾಯಿಯ ಹುಟ್ಟುಹಬ್ಬದ ದಿನ ಆಕೆಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Aug 25, 2026
- 4:53 pm