Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
ಗ್ರಾಮಸ್ಥರ ಬೆಚ್ಚಿಬೀಳಿಸಿದ ಗಜಪಡೆ: ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಆನೇಕಲ್ ಪ್ರದೇಶದ ತಮಿಳುನಾಡು ಗಡಿ ಭಾಗದ ಗ್ರಾಮಗಳಲ್ಲಿ ಕಾಡಾನೆಗಳ ನಿರಂತರ ಓಡಾಟ, ಉಪಟಳ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಾಡಾನೆಗಳನ್ನು ಕಾಡಿನೊಳಗೆ ಅಟ್ಟುವುದರ ಜೊತೆಗೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಈ ಮಧ್ಯೆ, 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
- Ramu Ram
- Updated on: Dec 25, 2025
- 12:30 pm
Video: ಮುದ್ದು ಕಂದನ ಬಾಯಲ್ಲಿ ಶ್ರೀ ಕೃಷ್ಣನ ಭಜನೆ ಹಾಡು, ವೈರಲ್ ಆಯ್ತು ದೃಶ್ಯ
ಪುಟಾಣಿಗಳು ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿರುತ್ತಾರೆ. ದೇವರ ಮೇಲಿನ ಭಕ್ತಿ ವಯಸ್ಸಿಗೆ ಮೀರಿದ್ದು ಎನ್ನುವ ಮಾತಿದೆ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ವಿಡಿಯೋ. ಪುಟಾಣಿಯೊಂದು ಕೈಯಲ್ಲಿ ಪೂಜಾ ತಟ್ಟೆ ಹಿಡಿದುಕೊಂಡು ಶ್ರೀಕೃಷ್ಣನನ್ನು ಪೂಜಿಸುತ್ತಾ ಭಜನೆಯನ್ನು ಹಾಡುತ್ತಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Dec 24, 2025
- 3:31 pm
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ, ಹೆಬ್ಬುಲಿ ಕಂಡು ಭೀತಿಯಲ್ಲಿ ಗ್ರಾಮಸ್ಥರು
ಚಾಮರಾಜನಗರ ಹುಲಿ ಮೀಸಲು ಅರಣ್ಯಗಳಲ್ಲಿ ಹುಲಿ ಸಂತತಿ ಗಣನೀಯ ಹೆಚ್ಚಳವಾಗರುವುದು ಗಮನಕ್ಕೆ ಬಂದಿದೆ. ಎಲ್ಲೆಂದರಲ್ಲಿ ಹುಲಿಗಳು ಕಾಣಿಸಿಕೊಂಡು, ಕಾಡಂಚಿನ ಗ್ರಾಮಸ್ಥರಲ್ಲಿ ಭಯಹುಟ್ಟಿಸುತ್ತಿವೆ. ಬೃಹತ್ ಗಂಡು ಹುಲಿಯೊಂದು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ನ ಕೆ.ಗುಡಿ ಸಮೀಪ ಕಾಣಿಸಿದ್ದು, ಗಡಿಭಾಗದ ಜನರಲ್ಲಿ ಭೀತಿ ಮೂಡಿಸಿದೆ. ಸಾರ್ವಜನಿಕರು ಅರಣ್ಯ ಪ್ರದೇಶಕ್ಕೆ ತೆರಳುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
- Suraj Prasad SN
- Updated on: Dec 24, 2025
- 12:58 pm
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ ಆಂಜನೇಯ ಸ್ವಾಮಿ ದೇಗುಲದ ಗರ್ಭಗುಡಿಯೊಳಗೆ ಅರ್ಚಕ ವಿದ್ಯಾದಾಸ ಬಾಬಾ ಮತ್ತು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ನಡುವೆ ಜಗಳ ನಡೆದಿದೆ. ಪೂಜಾ ವಿಚಾರದಲ್ಲಿ ಅಡ್ಡಿಪಡಿಸಿದ ಆರೋಪದ ಮೇಲೆ ವಾಗ್ವಾದ ತಾರಕಕ್ಕೇರಿ, ಹೊಡೆದಾಟದ ವರೆಗೆ ತಲುಪಿದೆ. ಅಂಜನಾದ್ರಿಯಂತಹ ಪವಿತ್ರ ಕ್ಷೇತ್ರದಲ್ಲಿ ನಡೆದ ಈ ಘಟನೆ ಭಕ್ತರಲ್ಲಿ ತೀವ್ರ ಆಕ್ರೋಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
- Shivakumar Pattar
- Updated on: Dec 24, 2025
- 12:01 pm
Video: ಅಂತರ ಕಾಯ್ದುಕೊಳ್ಳಿ, ಇಎಂಐ ಬಾಕಿ ಇದೆ; ಕಾರಿನ ಹಿಂಬದಿಯ ಬರಹ ವೈರಲ್
ಕೆಲವರು ತಮ್ಮ ವಾಹನಗಳಲ್ಲಿ ತಮಾಷೆಭರಿತ ಸಾಲುಗಳನ್ನು ಬರೆದಿರುತ್ತಾರೆ. ನೀವು ಆಟೋ, ಕಾರು ಅಥವಾ ವಾಹನಗಳ ಹಿಂದೆ ಬರೆದ ಅಂತಹ ಆಕರ್ಷಕ ಸಾಲುಗಳನ್ನು ನೋಡಿರುತ್ತೀರಿ. ಇದೀಗ ಮಾರುತಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆದ ಬರಹವೊಂದು ಗಮನ ಸೆಳೆಯುತ್ತಿದೆ. ಈ ಸಾಲುಗಳನ್ನು ನೋಡಿ ನೆಟ್ಟಿಗರ ಮೊಗದಲ್ಲಿ ನಗು ಮೂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Dec 24, 2025
- 11:50 am
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಮಧ್ಯಪ್ರದೇಶ ಸಚಿವೆಯೊಬ್ಬರು ಹೊಸದಾಗಿ ನಿರ್ಮಾಣವಾಗಿದ್ದ ರಸ್ತೆಯ ಪರಿಶೀಲನೆ ಮಾಡಲು ಹೋದಾಗ ಆ ರಸ್ತೆ ತಮ್ಮ ಚಪ್ಪಲಿಯ ಕೆಳಗೆ ಕಿತ್ತುಬಂದಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
- Sushma Chakre
- Updated on: Dec 23, 2025
- 8:00 pm
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಸರ್ಪ್ರೈಸ್
ಮದುವೆಯ ಸಮಯದಲ್ಲಿ ವಧುವಿನ ಮೇಲೆ ಕೋತಿಯೊಂದು ಹಾರಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಮಂಟಪದಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಅಷ್ಟರಲ್ಲಿ, ಅನಿರೀಕ್ಷಿತ ಅತಿಥಿಯೊಬ್ಬರು ನವವಿವಾಹಿತ ವಧುವಿನ ಮೇಲೆ ಹಾರಿ ಒಳಗೆ ಬಂದರು. ಹತ್ತಿರದಲ್ಲಿದ್ದ ವರ ಮತ್ತು ಪೂಜಾರಿ ಕೂಡ ಇದರಿಂದ ಆಘಾತಕ್ಕೊಳಗಾದರು. ಆ ಅನಿರೀಕ್ಷಿತ ಅತಿಥಿ ಬೇರೆ ಯಾರೂ ಅಲ್ಲ, ಕೋತಿ. ಹೌದು, ಮದುವೆ ಮಂಟಪದಲ್ಲಿ ವಧುವಿನ ಮೇಲೆ ಕೋತಿಯೊಂದು ಹಾರಿತು.
- Sushma Chakre
- Updated on: Dec 23, 2025
- 6:40 pm
Video: ಕಾಲ ಸರಿದಂತೆ ಮರೆಯಾಗುತ್ತಿದೆ ಸಾಂಪ್ರದಾಯಿಕ ಉಗ್ರಾಣ ಈ ಭತ್ತದ ಕಣಜ
ಕೃಷಿಕರ ಬದುಕಿನ ಚಿತ್ರಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೃಷಿಕರು ತಾವು ಬೆಳೆದ ಬೆಳೆಯನ್ನು ಸಾಂಪ್ರದಾಯಿಕ ವಿಧಾನ ಬಳಸಿ ಹೇಗೆ ಶೇಖರಿಸಿ ಇಡುತ್ತಿದ್ದರು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ಭತ್ತದ ಕಣಜದ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Dec 23, 2025
- 1:23 pm
ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಿರತೆ ಸೆರೆಗೆಂದು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ ಘಟನೆ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅದೃಷ್ಟವಶಾತ್ ಅವರು ಯಾವುದೇ ಪ್ರಾಣಾಪಾಯ ಸಂಭವಿಸದೆ ಪಾರಾಗಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಚಿರತೆ ಬೋನಿಗೆ ಬಿದ್ದಿದ್ಹೇಗೆ? ಅಲ್ಲೇನಾಯ್ತು? ಕೊನೆಗೆ ಬಚಾವಾಗಿದ್ಹೇಗೆ? ಎಲ್ಲ ಮಾಹಿತಿ ಇಲ್ಲಿದೆ.
- Suraj Prasad SN
- Updated on: Dec 23, 2025
- 1:19 pm
Video: 8,000 ಮೈಲಿ ಪ್ರಯಾಣ ಮಾಡಿ ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಯುವಕ
ಪರಿಶುದ್ಧ ಸ್ನೇಹವೇ ಹಾಗೆ, ಈ ನಿಸ್ವಾರ್ಥ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಂದರ ಸ್ನೇಹ ಸಂಬಂಧ ಸಾರುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸ್ನೇಹಿತರ ಪುನರ್ಮಿಲನದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸ್ನೇಹಿತರಿಬ್ಬರ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Dec 23, 2025
- 11:48 am
ಬೆಂಗಳೂರು ಚಂದ್ರಾಲೇಔಟ್ನಲ್ಲಿ ಪುಂಡರ ಹಾವಳಿ: ರಸ್ತೆ ಅಡ್ಡಗಟ್ಟಿ ಬರ್ತ್ಡೇ ಆಚರಣೆ, ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸಕ್ಕೆ ಮಿತಿಯಿಲ್ಲದಾಗಿದೆ. ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಕೆಲ ಪುಂಡರು ನಡು ರಸ್ತೆಯಲ್ಲೇ ಬೈಕ್ಗಳನ್ನು ನಿಲ್ಲಿಸಿ ಬರ್ತ್ಡೆ ಆಚರಿಸಿದ್ದಲ್ಲದೆ, ವಾಹನ ಸವಾರರನ್ನು ತಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಪುಂಡರನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Dec 23, 2025
- 8:08 am
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
20 ವರ್ಷದ ಸಿದ್ಧರಾಜ್ ಸಿಂಗ್ ಮಹೀದ ಅವರು ನಾಂದೇಸರಿ ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ ಅವರು ಬದುಕುಳಿದಿದ್ದಾರೆ. ಅವರು ಸೇತುವೆಯಿಂದ ಕೆಳಗೆ ಬೀಳುವಾಗ ಅವರ ಶರ್ಟ್ ಲೈಟ್ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಅವರು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ. ಬೈಕ್ ಸೇತುವೆಯಿಂದ ನೀರಿಗೆ ಬಿದ್ದರೂ ಆ ಯುವಕನ ಆಯುಷ್ಯ ಗಟ್ಟಿ ಇದ್ದುದರಿಂದ ಯಾವುದೇ ಗಾಯಗಳೂ ಆಗದೆ ಅವರು ಬದುಕುಳಿದಿದ್ದಾರೆ.
- Sushma Chakre
- Updated on: Dec 22, 2025
- 9:01 pm