Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
ಇನ್ನೂ ಹೆಚ್ಚು ಓದಿಬ್ಯಾಂಕಾಕ್ನಲ್ಲಿ ವಿಶಿಷ್ಟ ಗಣೇಶ ಪೂಜೆ: ಮೋದಕದ ಬದಲಿಗೆ ಗಣಪನಿಗೆ ‘ಬಬಲ್ ಟೀ’ ನೈವೇದ್ಯ!
ಈ ವರ್ಷದ ಗಣೇಶ ಉತ್ಸವದಲ್ಲಿ, ಬ್ಯಾಂಕಾಕ್ನ ಗಣೇಶ ದೇವಸ್ಥಾನದಲ್ಲಿ ಬಬಲ್ ಟೀ (ಬೋಬಾ ಮಿಲ್ಕ್ ಟೀ) ಅನ್ನು ನೈವೇದ್ಯವಾಗಿ ಅರ್ಪಿಸುವ ವಿಶಿಷ್ಟ ಸಂಪ್ರದಾಯ ವೈರಲ್ ಆಗಿದೆ. ಭಕ್ತರು ತಮ್ಮ ಆಸೆ ಈಡೇರಲು ಟೀ ಅರ್ಪಿಸುತ್ತಾರೆ ಮತ್ತು ಆಸೆ ಫಲಿಸಿದ ನಂತರ ಹೆಚ್ಚು ಕಪ್ಗಳನ್ನು ಧನ್ಯವಾದವಾಗಿ ನೀಡುತ್ತಾರೆ. ಈ ಥೈಲ್ಯಾಂಡ್ನ ವಿಶಿಷ್ಟ ಪೂಜಾ ವಿಧಾನ ಭಾರತೀಯ ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ ಸೃಷ್ಟಿಸಿದೆ.
- Akshatha Vorkady
- Updated on: Sep 19, 2026
- 12:44 pm
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ; ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಹೊಸ ಮೈಲಿಗಲ್ಲು
ಭಾರತಕ್ಕೆ ಚಿರತೆಗಳನ್ನು ಮರುಪರಿಚಯಿಸುವ ಯೋಜನೆಯಡಿ, ವಿದೇಶದಿಂದ ತರಲಾದ ಚಿರತೆಗಳು ಭಾರತದಲ್ಲಿ ಮರಿಗಳಿಗೆ ಜನ್ಮ ನೀಡಿದ್ದವು. ಆದರೆ ಈಗ ಭಾರತದಲ್ಲೇ ಹುಟ್ಟಿದ ಚಿರತೆಯು 4 ಆರೋಗ್ಯಕರ ಮರಿಗಳಿಗೆ ಜನ್ಮ ನೀಡುವ ಮೂಲಕ ಭಾರತೀಯ ವಾತಾವರಣಕ್ಕೆ ಚಿರತೆಗಳು ಸಂಪೂರ್ಣವಾಗಿ ಒಗ್ಗಿಕೊಂಡಿವೆ ಎಂಬುದನ್ನು ಸಾಬೀತುಪಡಿಸಿದೆ. ಈ 4 ಹೊಸ ಮರಿಗಳ ಜನನದೊಂದಿಗೆ ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಒಟ್ಟು ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಭಾರತದಲ್ಲಿ ಚಿರತೆಗಳ ಸಂತತಿ ಬೆಳೆಸುವ ಕೇಂದ್ರ ಸರ್ಕಾರದ ಕನಸಿಗೆ ಭಾರಿ ಬಲ ಬಂದಿದೆ.
- Sushma Chakre
- Updated on: Sep 18, 2026
- 10:09 pm
Viral: ಸ್ವಿಗ್ಗಿಯಲ್ಲಿ ಆಹಾರ ಸಮಸ್ಯೆ ಬಗ್ಗೆ ದೂರು ಸಲ್ಲಿಸಿ ಇಂಟರ್ವ್ಯೂ ಅವಕಾಶ ಕೇಳಿದ ಯುವಕ
ಕೆಲವರ ಬುದ್ಧಿವಂತಿಕೆ ಮೆಚ್ಚಬೇಕೋ, ಬೇಡವೋ ಎನ್ನುವ ಅನುಮಾನ ಮೂಡುತ್ತದೆ. ಇದೀಗ ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ನೀವು ಮೆಚ್ಚಲೇಬೇಕು. ಹೌದು, ಸ್ವಿಗ್ಗಿ ಕಸ್ಟಮರ್ ಸಪೋರ್ಟ್ ಗೆ ಕರೆ ಮಾಡಿ ಆಹಾರ ಸಮಸ್ಯೆ ಬಗ್ಗೆ ವಿವರಿಸಿ, ಆ ಬಳಿಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಯುವಕನು ಉದ್ಯೋಗ ಹುಡುಕುವ ಈ ಪ್ಲ್ಯಾನ್ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 18, 2026
- 7:14 pm
Video: ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ಸಾಥ್ ನೀಡಿದ ತಾಯಾನೆ
ಮನುಷ್ಯರೇ ಇರಲಿ, ಪ್ರಾಣಿಗಳೇ ಇರಲಿ, ತಾಯಿ ಪ್ರೀತಿ ಮಾತ್ರ ಬದಲಾಗಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮರಿಯಾನೆಯೊಂದು ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದ ತಾಯಾನೆಯೊಂದು ಬೀಳದಂತೆ ತಡೆದಿದೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 18, 2026
- 5:48 pm
Video: ಸಲೀಸಾಗಿ ಕಾರು ಓಡಿಸುವ ಅಜ್ಜಿಯನ್ನು ಕಂಡು ಪೊಲೀಸರು ಶಾಕ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹುಬ್ಬೇರಿಸುವಂತೆ ಮಾಡುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ವೃದ್ಧೆಯೊಬ್ಬಳು ಸಲೀಸಾಗಿ ಕಾರ್ ಡ್ರೈವ್ ಮಾಡುತ್ತಿದ್ದು ಪೊಲೀಸರೇ ಶಾಕ್ ಆಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 18, 2026
- 4:51 pm
ಕಾಲ್ಸಿ ದಡದಲ್ಲಿ 2,100 ದೀಪಗಳ ಬೆಳಕು; ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹರಿಪುರ್ ಕಾಲ್ಸಿಯಲ್ಲಿ ಪವಿತ್ರ ಯಮುನಾ ನದಿ ದಂಡೆಯ ಮೇಲೆ ಪೂಜ್ಯ ಸಾಧು-ಸಂತರು, ಸಾವಿರಾರು ಭಕ್ತರು ಮತ್ತು ಸ್ಥಳೀಯ ನಾಗರಿಕರೊಂದಿಗೆಗೂಡಿ ಯಮುನಾ ಆರತಿ ನೆರವೇರಿಸಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ 'ಆಶೀರ್ವಾದ ಕಾ ದಿಯಾ' ಕಾರ್ಯಕ್ರಮದ ಭಾಗವಾಗಿ, ಯಮುನಾ ನದಿಯ ನೂತನವಾಗಿ ನಿರ್ಮಿಸಲಾದ ಘಾಟ್ಗಳನ್ನು ಒಟ್ಟು 2,100 ಮಣ್ಣಿನ ದೀಪಗಳಿಂದ ಬೆಳಗಿಸಲಾಯಿತು.
- Sushma Chakre
- Updated on: Sep 17, 2026
- 11:10 pm
Video: ಇದು 90ರ ದಶಕದ ಸವಿ ನೆನಪು; ಅಡುಗೆ ಮನೆಯಾಟ ಆಡಿ ಖುಷಿ ಪಟ್ಟ ಪುಟಾಣಿಗಳು
ನಾವು ಸಣ್ಣವರು ಇದ್ದಾಗ ಆಡುತ್ತಿದ್ದ ಅದೆಷ್ಟೋ ಆಟಗಳ ಬಗ್ಗೆ ಈಗಿನ ಮಕ್ಕಳಿಗೆ ತಿಳಿದೇ ಇಲ್ಲ. ಅಂದು ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು ನಾನಾ ರೀತಿಯ ಆಟಗಳನ್ನು ಆಡುತ್ತಿದ್ದೆವು. ಇದೀಗ ಬಾಲ್ಯ ನೆನೆಪಿಸುವ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಪುಟಾಣಿಗಳು ಅಡುಗೆ ಮನೆಯಾಟ ಆಡಿ ಸಂಭ್ರಮಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 17, 2026
- 6:09 pm
Video: ವಿದೇಶಿಗನಿಗೆ ಪಾನಿಪುರಿ ತಿನ್ನುವುದು ಹೇಗೆಂದು ಕಲಿಸಿಕೊಟ್ಟ ಭಾರತೀಯ ಸ್ನೇಹಿತರು
ಪಾನಿಪುರಿ ಅಂದ್ರೆ ಎಲ್ಲರಿಗೂ ಇಷ್ಟನೇ. ಬೀದಿ ಬದಿಯಲ್ಲಿ ನಿಂತು ಪಾನಿ ಪುರಿ ತಿನ್ನುವುದರಲ್ಲಿರುವ ಖುಷಿಯೇ ಬೇರೆ. ಹೌದು, ಇದೀಗ ವಿದೇಶಿಗನಿಗೆ ಭಾರತೀಯ ಸ್ನೇಹಿತರು ಪಾನಿಪುರಿ ತಿನ್ನುವುದು ಹೇಗೆಂದು ಕಲಿಸಿಕೊಟ್ಟಿದ್ದಾರೆ. ಈ ಕ್ಯೂಟ್ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 17, 2026
- 1:44 pm
ಬೆಂಗಳೂರಿನಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್!
ಭಾರತ ರತ್ನ ಎಂ. ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯಂತ ಭಾವುಕರಾದ ಘಟನೆ ನಡೆಯಿತು. ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಮರಿಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರು ನಡೆಸಿಕೊಟ್ಟ ಸಂಗೀತ ಕಚೇರಿಯನ್ನು ಆಲಿಸುತ್ತಿದ್ದ ವೇಳೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಬಳಿಕ, ತಾವೇ ಎದ್ದು ಹೋಗಿ ಆ ಇಬ್ಬರು ಗಾಯಕಿಯರನ್ನು ಅಭಿನಂದಿಸಿದರು.
- Sushma Chakre
- Updated on: Sep 16, 2026
- 11:04 pm
Video: ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಅಜ್ಜಿಯೊಬ್ಬರು ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಅಜ್ಜಿಯ ಕ್ಯೂಟ್ನೆಸ್ಗೆ ಫುಲ್ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 16, 2026
- 6:22 pm
Video: ಭಾರತಕ್ಕೆ ಸುತ್ತಾಡಲೆಂದು ಬರುವವರಿಗೆ ಕಿವಿಮಾತು ಹೇಳಿದ ವಿದೇಶಿ ಮಹಿಳೆ
ಭಾರತಕ್ಕೆ ಬರುವ ವಿದೇಶಿಗರಿಗೆ ವಿವಿಧ ರೀತಿ ಅನುಭವ ಆಗೋಗಿದೆ. ಆದರೆ ಇದೀಗ ವಿದೇಶಿ ಮಹಿಳೆಯೊಬ್ಬಳು ಭಾರತಕ್ಕೆ ಬರುವ ಮುನ್ನ ಈ ಕೆಲವು ವಿಷ್ಯಗಳು ನಿಮ್ಗೆ ತಿಳಿದಿರಲಿ ಎಂದು ಸಲಹೆ ನೀಡಿದ್ದಾರೆ. ಹೌದು, ಈ ಭಾರತವು ಕೇವಲ ಒಂದು ಪ್ರವಾಸಿ ತಾಣವಲ್ಲ, ಇದು ನಿಮ್ಮನ್ನೇ ಸಂಪೂರ್ಣವಾಗಿ ಬದಲಾಯಿಸಬಲ್ಲ ಒಂದು ಸುಂದರ ಅನುಭವ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Sep 16, 2026
- 3:13 pm
Video: ಹಳೆಯ ಚಪ್ಪಲಿ ಹಾಕೊಂಡು ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್ಗೆ ಶೂ ಕೊಟ್ಟ ವ್ಯಕ್ತಿ
ಎಲ್ಲರ ಬದುಕು ಒಂದೇ ರೀತಿ ಇರಲ್ಲ. ಹೀಗಿರುವಾಗ ಇನ್ನೊಬ್ಬರ ಕಷ್ಟಕ್ಕೆ ಸಹಾಯ ಮಾಡುವ ದೊಡ್ಡ ಮನಸ್ಸು ಬೇಕು. ಇಲ್ಲೊಬ್ಬ ವ್ಯಕ್ತಿ ಸಹಾಯ ಮಾಡುವ ಗುಣದಿಂದಲೇ ನೆಟ್ಟಿಗರ ಗಮನ ಸೆಳೆದಿದ್ದಾರೆ. ಹಳೆಯ ಸ್ಲಿಪ್ಪರ್ ಹಾಕಿದ್ದ ಡೆಲಿವರಿ ಬಾಯ್ಗೆ ಅಡಿಡಾಸ್ ಶೂ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
- Sainandha P
- Updated on: Sep 16, 2026
- 2:28 pm