Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ: ಶಿಳ್ಳೆ, ಚಪ್ಪಾಳೆಗಳ ಮಹಾಪೂರ, ವಿಡಿಯೋ ನೋಡಿ
ಅರಸೀಕೆರೆಯಲ್ಲಿ ನಡೆದ ಶ್ರೀ ವಾಸವಿ ಜಯಂತಿ ಮೆರವಣಿಗೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಡೋಲು ಬಾರಿಸುತ್ತಾ ಭರ್ಜರಿ ನೃತ್ಯ ಮಾಡಿದ್ದಾರೆ. ಸಾರ್ವಜನಿಕರೊಂದಿಗೆ ಬೆರೆತು ಅವರು ಹಾಕಿದ ಸ್ಟೆಪ್ಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಡ್ಯಾನ್ಸ್ಗೆ ಜನ ಶಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮಿಸಿದ್ದಾರೆ.
- Manjunath KB
- Updated on: Apr 27, 2026
- 9:41 am
Fake Ai Cheque: ಸಾಮಾಜಿಕ ಜಾಲತಾಣಗಳನ್ನು ಬೆಚ್ಚಿಬೀಳಿಸಿದ ಬ್ಯಾಂಕ್ ಚೆಕ್: ಅಷ್ಟಕ್ಕೂ ಇದರಲ್ಲಿ ಏನಿದೆ ನೋಡಿ
AI Generated Fake Cheque: ಸಾಮಾಜಿಕ ಮಾಧ್ಯಮದಲ್ಲಿ ChatGPT ಇಮೇಜ್ 2.0 ಬಳಸಿ ಒಬ್ಬ ವ್ಯಕ್ತಿ ಬ್ಯಾಂಕ್ ಚೆಕ್ನ ಚಿತ್ರವನ್ನು ರಚಿಸಿದ್ದಾರೆ. ಇದು ನೋಡಲು ಸಾಮಾನ್ಯ ಅಥವಾ ನಕಲಿ ಚೆಕ್ನಂತೆ ಕಾಣುತ್ತಿರಲಿಲ್ಲ; ಥೇಟ್ ಒರಿಜಿನಲ್ ರೀತಿಯಲ್ಲೇ ಇದೆ. ಬ್ಯಾಂಕ್ ಹೆಸರು, ಖಾತೆ ಸಂಖ್ಯೆ ಮತ್ತು ಕೆಳಭಾಗದಲ್ಲಿರುವ MICR ರೇಖೆಯನ್ನು ಸಹ ಇದು ನಿಖರವಾಗಿ ಹೊಂದಿದೆ.
- Sainandha P
- Updated on: Apr 26, 2026
- 11:20 am
ಮಣಿಪಾಲ: ಪಬ್ಲಿಕ್ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಉಡುಪಿಯ ಮಣಿಪಾಲದಲ್ಲಿ ತಡರಾತ್ರಿ ಯುವಜೋಡಿಯೊಂದು ಸಾರ್ವಜನಿಕವಾಗಿ ರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ. ಸಾರ್ವಜನಿಕವಾಗಿ ಪೇಟೆ ಮಧ್ಯದಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದ ಜೋಡಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಮೊದಲಿಗೆ ಎದುರಾಡಿದ ಜೋಡಿ ನಂತರ ಅಲ್ಲಿಂದ ಕಾಲ್ಕಿತ್ತಿದೆ.
- Prajwal Amin
- Updated on: Apr 25, 2026
- 9:53 am
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ, ವಿಡಿಯೋ ವೈರಲ್
ದಕ್ಷಿಣ ಕನ್ನಡದ ಮೂಡಬಿದಿರೆಯ ಪುಚ್ಚೆಮೊಗರಿನಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ (ಕಿರು ಸೇತುವೆ) ಕುಸಿದು ಬಿದ್ದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿ ಹೊತ್ತು ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಪಲ್ಲಕ್ಕಿಯಲ್ಲಿದ್ದ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ. ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
- Ashok
- Updated on: Apr 25, 2026
- 8:49 am
ಹುಬ್ಬಳ್ಳಿ: ಮಹಿಳೆ ನೆಲಕ್ಕೆ ಬಿದ್ದರೂ ಬಿಡದೆ ಎಳೆದಾಡಿ ಸರ ಅಪಹರಿಸಿದ ಖದೀಮ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿಯ ಸದಾಶಿವ ನಗರದಲ್ಲಿ ಮಹಿಳೆಯೊಬ್ಬರನ್ನು ರಸ್ತೆಯಲ್ಲಿ ಎಳೆದಾಡಿ ಸರ ಕಿತ್ತುಕೊಂಡು ಹೋಗಿರುವ ಭೀಕರ ಘಟನೆ ನಡೆದಿದೆ. ಕಳ್ಳನ ಕೈಚಳಕದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಘಟನೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ. ಪೊಲೀಸರು ಸದ್ಯ ಸಂತ್ರಸ್ತ ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ. ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ.
- Sanjayya Chikkamath
- Updated on: Apr 25, 2026
- 8:03 am
ಬೆಂಗಳೂರು: ನಡುರಸ್ತೆಯಲ್ಲೇ ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಬೆಂಗಳೂರಿನ ಕೋರಮಂಗಲದಲ್ಲಿ ಪಬ್ ಒಳಗೆ ಕಿರಿಕಿರಿ ಮಾಡಿದ ಎಂಬ ಆರೋಪದ ಮೇಲೆ ಯುವಕನಿಗೆ ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಹಲ್ಲೆ ಮಾಡಿದ್ದಾರೆ. ಪೊಲೀಸರು ಬಿಡಿಸಲು ಪ್ರಯತ್ನಿಸಿದರೂ ಕೇಳದೆ ಯುವತಿಯರು ಯುವಕನಿಗೆ ಹೊಡೆದಿದ್ದು, ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Apr 24, 2026
- 2:54 pm
Video: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ
ಪುಟಾಣಿ ಮಕ್ಕಳು ಶಾಲಾ ಶಿಕ್ಷಕರನ್ನು ಯಾಮಾರಿಸುವುದಿದೆ. ಕೆಲವೊಮ್ಮೆ ಕ್ಲಾಸ್ ರೂಮ್ ನಲ್ಲಿ ಟೀಚರ್ ಗೆ ತಿಳಿಯದಂತೆ ತಿಂಡಿ ತಿಂದು ಸಿಕ್ಕಿ ಬೀಳುತ್ತಾರೆ. ಈ ವಿಡಿಯೋ ನೋಡಿದ್ರೆ ನಿಮಗೆ ನಿಮ್ಮ ಬಾಲ್ಯ ಖಂಡಿತ ನೆನಪಾಗುತ್ತದೆ. ಪುಟ್ಟ ಹುಡುಗನು ಕ್ಲಾಸ್ ರೂಮ್ ನಲ್ಲಿ ಟೀಚರ್ಗೆ ತಿಳಿಯದಂತೆ ಟಿಫಿನ್ ಬಾಕ್ಸ್ ಓಪನ್ ಮಾಡಿ ತಿಂಡಿ ತಿಂದಿದ್ದಾನೆ. ಪುಟಾಣಿಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
- Sainandha P
- Updated on: Apr 24, 2026
- 12:55 pm
Video: ಲಂಡನ್ನಲ್ಲಿ 100 ರೂ ದಿನಸಿ ಶಾಪಿಂಗ್ ಚಾಲೆಂಜ್ ಸ್ವೀಕರಿಸಿದ ಭಾರತೀಯ ಮಹಿಳೆ
ಈಗಿನ ಕಾಲದಲ್ಲಿ ಎಷ್ಟು ಸಂಬಳವಿದ್ರೂ ಸಾಲಲ್ಲ. ಬರೋ ಸಂಬಳದಲ್ಲಿ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದು ಕಷ್ಟ. ಹೀಗಿರುವಾಗ ಭಾರತೀಯ ಮಹಿಳೆಯೊಬ್ಬರು ಲಂಡನ್ನಲ್ಲಿ ದಿನಸಿ ಶಾಪಿಂಗ್ ಚಾಲೆಂಜ್ ಸ್ವೀಕರಿಸಿದ್ದು, ಕೇವಲ 100 ರೂ ಬಜೆಟ್ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸುವುದಾಗಿದೆ. ಆದರೆ ಕಡಿಮೆ ಬಜೆಟ್ನ ಶಾಪಿಂಗ್ ಚಾಲೆಂಜ್ ಭಾರತ ಹಾಗೂ ಲಂಡನ್ ನಡುವಿನ ಖರೀದಿ ಸಾಮರ್ಥ್ಯದಲ್ಲಿನ ವ್ಯತ್ಯಾಸದ ಕುರಿತು ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 23, 2026
- 6:06 pm
Video: ಮಾಲ್ನಲ್ಲಿದ್ದ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿದ ಪುಟಾಣಿ
ಹೆತ್ತವರು ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಹಾಗೆ ಬೆಳೆಯುತ್ತಾರೆ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹೇಳಿ ಕೊಡುವುದು ಬಹಳ ಮುಖ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಪುಟಾಣಿಯೊಂದು ಮಾಲ್ನಲ್ಲಿರು ನಿಲ್ಲಿಸಿಟ್ಟ ಗೊಂಬೆಗಳ ಪಾದ ಮುಟ್ಟಿ ನಮಸ್ಕಾರ ಮಾಡಿರುವ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 23, 2026
- 11:09 am
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ ಕೆಕೆಆರ್ಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ರಾಯಚೂರು ಜಿಲ್ಲೆಯ ಸುಣಕಲ್ ಬಳಿ ನಾಲತವಾಡದಿಂದ ಲಿಂಗಸಗೂರಿಗೆ ಬರುತ್ತಿದ್ದ ಕೆಕೆಆರ್ಟಿಸಿ ಬಸ್ ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾಗಿದೆ. ಬಸ್ನಲ್ಲಿದ್ದ 40 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ಚಾಲಕನ ಚಾಣಾಕ್ಷತನಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಸ್ ಪಲ್ಟಿಯಾದ ವಿಡಿಯೋ ಇಲ್ಲಿದೆ ನೋಡಿ.
- Bhemesh Poojar
- Updated on: Apr 23, 2026
- 10:34 am
ಮೈಸೂರು: ಸಫಾರಿ ವೇಳೆ ರಸ್ತೆಗೆ ಬಂದ ಹುಲಿ ವಾಹನಗಳ ಮಧ್ಯೆಯೇ ರಸ್ತೆ ದಾಟಿದ ಅಪರೂಪದ ವಿಡಿಯೋ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ
ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ. ಸಫಾರಿ ವಾಹನಗಳ ನಡುವೆಯೇ ರಾಜಗಾಂಭಿರ್ಯದಿಂದ ರಸ್ತೆ ದಾಟಿದ ಹುಲಿಯ ದೃಶ್ಯವನ್ನು ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.
- Ram
- Updated on: Apr 23, 2026
- 9:39 am
ಮನೆ ಹಾಲ್ ಹ್ಯಾಂಗಿಂಗ್ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ! ಮೈಸೂರಿನಲ್ಲಿ ಮನೆ ಒಳಗಿದ್ದ ನಾಗರಹಾವು ರಕ್ಷಣೆ
ಮೈಸೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಟೆಲಿಕಾಂ ಬಡಾವಣೆ ಸೇರಿದಂತೆ ಹಲವು ಕಡೆ ನಾಗರಹಾವುಗಳು ಮನೆ ಸೇರಿಕೊಳ್ಳುತ್ತಿವೆ. ಬಲೆಗೆ ಸಿಲುಕಿ ನರಳಾಡುತ್ತಿದ್ದ ಹಾವನ್ನು ಉರಗ ತಜ್ಞ ಸ್ನೇಕ್ ಶ್ಯಾಮ್ ರಕ್ಷಿಸಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಮನೆಯೊಂದರ ಹಾಲ್ನ ಹ್ಯಾಂಗಿಂಗ್ನಲ್ಲಿ ರಾಜನಂತೆ ಕುಳಿತ ನಾಗರ ಹಾವಿನ ವಿಡಿಯೋ ಇಲ್ಲಿದೆ ನೋಡಿ.
- Ram
- Updated on: Apr 23, 2026
- 7:37 am