Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
9 ಗಂಟೆ ಕಾರ್ಯಾಚರಣೆ ಬಳಿಕ ಕೊನೆಗೂ ಬೋರ್ವೆಲ್ನಿಂದ 4 ವರ್ಷದ ಬಾಲಕನ ರಕ್ಷಣೆ!
ಪಂಜಾಬ್ನಲ್ಲಿ 9 ಗಂಟೆಗಳ ಕಾರ್ಯಾಚರಣೆಯ ನಂತರ 4 ವರ್ಷದ ಬಾಲಕನನ್ನು ಬೋರ್ವೆಲ್ನಿಂದ ಯಶಸ್ವಿಯಾಗಿ ರಕ್ಷಿಸಲಾಗಿದೆ. ಹೊಶಿಯಾರ್ಪುರ-ದಾಸುಯಾ ರಸ್ತೆಯ ಭಿಖೋವಾಲ್ ಬಳಿಯ ಚಕ್ ಸಮಾನಾ ಗ್ರಾಮದ 4 ವರ್ಷದ ಮಗು ಬೋರ್ವೆಲ್ ಬಾವಿಯೊಳಗೆ ಬಿದ್ದಿದ್ದ. 9 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದ ಎನ್ಡಿಆರ್ಎಫ್ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.
- Sushma Chakre
- Updated on: May 16, 2026
- 7:18 pm
ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ಹಾಸನ ಡಿಸಿ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ವಿವಾಹವಾದ ಯುವ ಜೋಡಿ!
ಪೋಷಕರ ವಿರೋಧದ ನಡುವೆಯೂ ಸಕಲೇಶಪುರದ ಪ್ರೇಮಿಗಳಾದ ಮನೋಜ್ ಮತ್ತು ಪ್ರೀತಿ ಹಾಸನ ಡಿಸಿ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾಗಿದ್ದಾರೆ. ರಕ್ಷಣೆ ಕೋರಿ ನವದಂಪತಿ ಮನವಿ ಮಾಡಿದ್ದಾರೆ. ಅಂಬೇಡ್ಕರ್ ಪ್ರತಿಮೆ ಎದುರಿನ ವಿವಾಹದ ವಿಡಿಯೋ ಈಗ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
- Manjunath KB
- Updated on: May 16, 2026
- 8:16 am
Video: ಟೀಚರ್ ಬಳಿ ಅಮ್ಮನ ಬಗ್ಗೆ ಕಂಪ್ಲೇಂಟ್ ಮಾಡಿದ ಪುಟಾಣಿ, ಕಾರಣ ಇದೇ ನೋಡಿ
ಪುಟಾಣಿಗಳೇ ಹಾಗೆ, ಶಾಲೆಯಲ್ಲಿ ನಡೆದ ಎಲ್ಲದ್ದನ್ನು ತನ್ನ ಅಮ್ಮನ ಮುಂದೆ ವರದಿ ಒಪ್ಪಿಸುತ್ತಾರೆ. ಅಷ್ಟೇ ಅಲ್ಲದೇ, ಮನೆಯ ವಿಚಾರವನ್ನು ಟೀಚರ್ ಮುಂದೆ ಹೇಳುವುದಿದೆ. ಆದರೆ ಈ ಪುಟಾಣಿ ಅಮ್ಮನ ವಿರುದ್ಧವೇ ತನ್ನ ಟೀಚರ್ ಬಳಿ ದೂರು ನೀಡಿದೆ. ಈ ಕ್ಯೂಟ್ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಪುಟಾಣಿಯ ಮುಗ್ಧತೆಗೆ ಕಳೆದು ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: May 15, 2026
- 3:48 pm
Video: ಅಮ್ಮ ಪ್ಲೀಸ್ ಮಲಗೋಕೆ ಬಿಡಮ್ಮ; ಹಾಯಾಗಿ ಮಲಗಿರುವ ಕಂದಮ್ಮನನ್ನು ಎಬ್ಬಿಸುತ್ತಿರುವ ತಾಯಾನೆ
ಮರಿಯಾನೆಗಳು ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತದೆ. ನೀವು ಈ ದೃಶ್ಯ ನೋಡಿದ್ರೆ ಮತ್ತೆ ಮತ್ತೆ ನೋಡ್ತೀರಾ. ಹೌದು, ಗಡದ್ದಾಗಿ ನಿದ್ದೆ ಮಾಡುತ್ತಿರುವ ಮರಿಯಾನೆಯನ್ನು ತಾಯಾನೆಯೂ ಎಬ್ಬಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾಯಿ ಪ್ರೀತಿಗೆ ಸರಿಸಾಟಿ ಯಾವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: May 15, 2026
- 11:59 am
ಇಂಧನ ಉಳಿಸಲು ಎಂಎಲ್ಸಿಗಳ ಪ್ರಮಾಣವಚನಕ್ಕೆ ಬೈಕ್ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್
ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯ ಮನವಿಯ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ನಲ್ಲೇ ವಿಧಾನ ಭವನಕ್ಕೆ ತಲುಪಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಇಂಧನ ವೆಚ್ಚಗಳ ನಡುವೆ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಾಗರಿಕರಿಗೆ ಮನವಿ ಮಾಡಿದ್ದರು. ಈ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಾ, ಪ್ರಧಾನಿ ತಮ್ಮ ಕಾರ್ಕೇಡ್ನ ಗಾತ್ರವನ್ನು 15 ಕಾರುಗಳಿಂದ ಎರಡು ಕಾರುಗಳಿಗೆ ಇಳಿಸಿದರು.
- Sushma Chakre
- Updated on: May 14, 2026
- 11:08 pm
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮುಂಬೈನ ಕುಟುಂಬವೊಂದು ತಮ್ಮ ಮಗನ ಶೇ. 55ರಷ್ಟು ಫಲಿತಾಂಶವನ್ನು ಅಂಕಪಟ್ಟಿಯ ಕೇಕ್ನೊಂದಿಗೆ ಸಂಭ್ರಮಿಸುತ್ತಿದೆ. ಮಗನ ಅಂಕಪಟ್ಟಿಯನ್ನು ಪ್ರಿಂಟ್ ಮಾಡಿಸಿದ ಕೇಕ್ ಕತ್ತರಿಸಿ ಈ ಖುಷಿಯನ್ನು ಆಚರಿಸಿದ್ದಾರೆ. ಮಕ್ಕಳು ಶೇ. 95ರಷ್ಟು ಅಂಕ ಪಡೆದರೂ ಇನ್ನೂ ಜಾಸ್ತಿ ಅಂಕ ಬರಬೇಕಾಗಿತ್ತು ಎಂದು ಒತ್ತಡ ಹೇರುವ ಪೋಷಕರ ನಡುವೆ ಮಗನ ಸಣ್ಣ ಸಾಧನೆಯನ್ನೂ ಸಂಭ್ರಮಿಸಿದ ಪೋಷಕರ ಈ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- Sushma Chakre
- Updated on: May 14, 2026
- 9:33 pm
Video: ಎಳನೀರು ವ್ಯಾಪಾರಿಯೊಂದಿಗೆ ಚೌಕಾಸಿ ಮಾಡಿದ ವಿದೇಶಿ ಮಹಿಳೆ
ಕೆಲವರು ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಿರುತ್ತಾರೆ. ಅಂತಹವರ ಬಳಿ ಹೆಣ್ಣು ಮಕ್ಕಳು ಚೌಕಾಸಿ ಮಾಡಿ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದರೆ ಇದೀಗ ವಿದೇಶಿ ಮಹಿಳೆ ಚೌಕಾಸಿ ಮಾಡಿ ಎಳನೀರು ಖರೀದಿ ಮಾಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಕೆಲವರು ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಿರುತ್ತಾರೆ. ಅಂತಹವರ ಬಳಿ ಹೆಣ್ಣು ಮಕ್ಕಳು ಚೌಕಾಸಿ ಮಾಡಿ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದರೆ ಇದೀಗ ವಿದೇಶಿ ಮಹಿಳೆ ಚೌಕಾಸಿ ಮಾಡಿ ಎಳನೀರು ಖರೀದಿ ಮಾಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: May 14, 2026
- 7:53 pm
ಕೋಲಾರ: ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು, ಸಿಸಿಟಿವಿಲಿ ಸೆರೆಯಾಯ್ತು ಖದೀಮರ ಕೈಚಳಕ
ಕೋಲಾರದ ಬೇತಮಂಗಲದಲ್ಲಿ ಬ್ಯಾಂಕ್ನಿಂದ ಹಣ ತರುತ್ತಿದ್ದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಬೈಕ್ ಬಾಕ್ಸ್ನಲ್ಲಿದ್ದ ಒಂದು ಲಕ್ಷ ರೂ. ದೋಚಿದ ಕಳ್ಳರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದಾರೆ. ಪೊಲೀಸ್ ಠಾಣೆ ಎದುರೇ ನಡೆದ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ವಿಳಂಬ ಧೋರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Rajendra Simha BL
- Updated on: May 14, 2026
- 9:49 am
ಇಂಗ್ಲಿಷ್, ಹಿಂದಿಯಲ್ಲಿ ಮನವಿ ಮಾಡಿದ ರೈತ: ಬಹುಭಾಷೆಯಲ್ಲಿ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ವಯಸ್ಕ ರೈತರೊಬ್ಬರು ಶಾಸಕ ಸುರೇಶ್ ಬಾಬು ಬಳಿ ಇಂಗ್ಲಿಷ್, ಹಿಂದಿಯಲ್ಲಿ ಸಮಸ್ಯೆ ಹೇಳಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅವರ ಮಾತುಗಳಲ್ಲಿ ನೋವೂ ಇದೆ, ಹೋರಾಟದ ಶಕ್ತಿಯೂ ಇದೆ! ಎಂದು ನೆಟ್ಟಿಗರು ಪ್ರಶಂಸಿದ್ದಾರೆ. ಅಹವಾಲು ನೀಡಲು ಬಂದ ರೈತ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಶಾಸಕರೂ ಆಶ್ಚರ್ಯಪಟ್ಟಿದ್ದಾರೆ.
- Prasanna Hegde
- Updated on: May 13, 2026
- 4:32 pm
Video: ವಂದೇ ಭಾರತ್ ರೈಲು ಟಿಕೆಟ್ ಹಾಫ್ ರೇಟ್ಗೆ ಮಾರಾಟ, ಟಿಟಿಇ ಅಮಾನತು
ಭಾರತದ ಹೆಮ್ಮೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಧಿಕೃತ ದರಕ್ಕಿಂತ ಕಡಿಮೆ ಹಣಕ್ಕೆ ಟಿಕೆಟ್ ನೀಡಿ ಹಣ ಮಾಡುತ್ತಿದ್ದ ಟಿಕೆಟ್ ಪರೀಕ್ಷಕನನ್ನು ಭಾರತೀಯ ರೈಲ್ವೆ ಅಮಾನತುಗೊಳಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆನ್ಲೈನ್ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: May 13, 2026
- 12:13 pm
Video: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ
ಪುಟಾಣಿ ಮಕ್ಕಳು ಏನು ಮಾಡಿದ್ರು ನೋಡೋಕೆ ಚಂದ. ಮುದ್ದು ಮುದ್ದಾದ ಮಾತುಗಳನ್ನು ಕೇಳೋಕೆ ಇನ್ನು ಚಂದ. ಇದೀಗ ಪುಟಾಣಿಯೊಂದು ಕರುವಿನ ಜತೆಗೆ ಮಾತಿಗಿಳಿಗಿದೆ. ಈ ಎರಡು ಮುಗ್ಧ ಮನಸ್ಸುಗಳ ಸಂಭಾಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: May 13, 2026
- 10:47 am
Video: ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಂದಮ್ಮ ನಡೆಯುತ್ತಿದ್ದಂತೆ ಭಾವುಕಳಾದ ತಾಯಿ
ಪುಟಾಣಿ ಮಕ್ಕಳ ಆಟ ತುಂಟಾಟ ತೊದಲು ನುಡಿಗಳನ್ನು ಕೇಳುವುದೇ ಚಂದ. ಮೊದಲ ಬಾರಿಗೆ ಅಮ್ಮ ಎಂದು ಕರೆದರೆ, ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯಲು ಕಲಿತರೆ ಹೆತ್ತವರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಇದೀಗ ಕಂದಮ್ಮನು ಮೊದಲ ಬಾರಿಗೆ ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದಂತೆ ತಾಯಿಯೊಬ್ಬಳು ಭಾವುಕಳಾಗಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: May 12, 2026
- 11:32 am