ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.
ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ
Rain Havoc in Karnataka: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಮತ್ತು ಎಎಂಆರ್ ಜಲಾಶಯದಿಂದ ನೀರು ಬಿಡುಗಡೆಯಿಂದ ಬಂಟ್ವಾಳ ಸೇರಿ ಹಲವು ಪ್ರದೇಶಗಳು ಜಲಾವೃತವಾಗಿವೆ. ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಶಿವಮೊಗ್ಗದಲ್ಲಿ ಮಳೆಗಾಳಿಗೆ ಮರ ಬಿದ್ದು ಚಾಲಕ ಪಾರಾಗಿದ್ದಾರೆ. ಕಬಿನಿ ಡ್ಯಾಂನಿಂದ 25,000 ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಇದೆ.
- Pruthviraj
- Updated on: Aug 2, 2026
- 7:08 am
ಉಜಿರೆ-ಬೆಳ್ತಂಗಡಿ ಮಾರ್ಗ ಜಲಾವೃತ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟದಿಂದಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ನದಿಯ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು, ಭಕ್ತಾದಿಗಳು ಮೆಟ್ಟಿಲುಗಳ ಬಳಿಯೇ ತೀರ್ಥಸ್ನಾನ ಮಾಡುತ್ತಿದ್ದಾರೆ. ನೇತ್ರಾವತಿ ಪ್ರವಾಹದಿಂದ ಧರ್ಮಸ್ಥಳದ ಮಣ್ಣಸಂಕ ಹಾಗೂ ಉಜಿರೆ-ಬೆಳ್ತಂಗಡಿ ರಸ್ತೆಗಳು ಜಲಾವೃತಗೊಂಡಿವೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ
- Pruthviraj
- Updated on: Aug 1, 2026
- 3:09 pm
ಧರ್ಮಸ್ಥಳ ಬಳಿ ಶವ ಹೂತ ಪ್ರಕರಣ: DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!
ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣದ ಬಗ್ಗೆ ಇದೀಗ ಮಹತ್ವದ ಅಪ್ಡೇಟ್ ಬಂದಿದೆ. ಅಲ್ಲಿ ಸಿಕ್ಕಿರುವ ಮೂರು ಅಸ್ಥಿಪಂಜರಗಳ ಗುರುತು ಡಿಎನ್ಎ ಪರೀಕ್ಷೆಯಲ್ಲಿ ಪತ್ತೆ ಆಗಿರುವುದಾಗಿ ವಿಶೇಷ ತನಿಖಾ ತಂಡ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲಿ ಸಿಕ್ಕ ಅಸ್ಥಿಪಂಜರಗಳು ಯಾರದ್ದು ಎಂಬ ಎಸ್ಐಟಿ ಕೊಟ್ಟ ಮಾಹಿತಿ ಇಲ್ಲಿದೆ.
- Pruthviraj
- Updated on: Jul 30, 2026
- 10:49 am
ಪತಿ ಕಿರುಕುಳಕ್ಕೆ ಬೇಸತ್ತು ರಾಜಸ್ಥಾನದಿಂದ ಮಂಗಳೂರಿಗೆ ಬಂದಿದ್ದ ಮಹಿಳೆ ರಕ್ಷಣೆ: ಎನ್ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಪತಿಯ ಕಿರುಕುಳದಿಂದ ರಾಜಸ್ಥಾನದಿಂದ ಮಂಗಳೂರಿಗೆ ಬಂದ ಮಹಿಳೆಯನ್ನು ಪಾಂಡೇಶ್ವರ ಪೊಲೀಸರು ರಕ್ಷಿಸಿ, ಎನ್ಜಿಒ ಸಂಸ್ಥೆಯ ಆಶ್ರಯದಲ್ಲಿ ಕೌನ್ಸೆಲಿಂಗ್ಗೆ ವ್ಯವಸ್ಥೆ ಮಾಡಿದರು. ಮಾನಸಿಕವಾಗಿ ಕುಗ್ಗಿದ್ದ ಮಹಿಳೆಗೆ ಎನ್ಜಿಒ ಬೆಂಬಲ ನೀಡಿ, ಆಕೆಯ ತಂದೆಯನ್ನು ಸಂಪರ್ಕಿಸಿ ಮಂಗಳೂರಿಗೆ ಕರೆಸಿತು. ಕಷ್ಟದಲ್ಲಿದ್ದ ಮಗಳನ್ನು ಕಂಡ ತಂದೆ, ಮತ್ತು ತಂದೆಯನ್ನು ಸೇರಿದ ಮಗಳ ಭಾವುಕ ಮರುಮಿಲನಕ್ಕೆ ಎನ್ಜಿಒ ಸಂಸ್ಥೆ ಸಾಕ್ಷಿಯಾಯಿತು.
- Pruthviraj
- Updated on: Jul 30, 2026
- 7:29 am
ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಏನು ಮಾಡಬಹುದು? ಸೈಬರ್ ತಜ್ಞ ಡಾ.ಅನಂತ್ ಪ್ರಭು ನೀಡಿರುವ ಸಲಹೆಗಳು ಇಲ್ಲಿವೆ
NEET, JE, UPSC ಸೇರಿದಂತೆ ಹಲವು ಪರೀಕ್ಷೆಗಳ ವೇಳೆ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಸೈಬರ್ ತಜ್ಞ ಡಾ. ಅನಂತ್ ಪ್ರಭು ಅವರು ಎಐ ತಂತ್ರಜ್ಞಾನ, ಹೈಬ್ರೀಡ್ ಮಾಡೆಲ್ ಸೇರಿದಂತೆ 13 ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಎಕ್ಸಾಂ ಪೇಪರ್ ಬದಲಿಗೆ ಲ್ಯಾಪ್ಟಾಪ್ ಅನ್ನು ಅಭ್ಯರ್ಥಿಗಳಿಗೆ ನೀಡಬೇಕು ಎಂದವರು ತಿಳಿಸಿದ್ದಾರೆ.
- Pruthviraj
- Updated on: Jul 27, 2026
- 5:10 pm
ಆ್ಯಂಬುಲೆನ್ಸ್ನ್ನೇ ಡ್ರಗ್ಸ್ ಪೂರೈಕೆ ಅಡ್ಡೆ ಮಾಡಿಕೊಂಡಿದ್ದ ಆರೋಪಿ: ಜಲೀಲ್ ಬಾಬಾ ಕರಾಳ ಮುಖವಾಡ ಬಯಲಾಗಿದ್ದೇಗೆ?
Ambulance drug smuggling: ಬೆಳ್ತಂಗಡಿಯ ವ್ಯಕ್ತಿಯೋವರ್ವ ಇಡೀ ಊರಿನಲ್ಲಿ ಸಮಾಜ ಸೇವೆ ಮಾಡುವುದಾಗಿ ಬಿಂಬಿಸಿಕೊಂಡಿದ್ದ. ಎಲ್ಲೇ ಅಪಘಾತವಾದರೂ ಆಪದ್ಬಾಂಧವನ ರೀತಿಯಲ್ಲಿ ತನ್ನ ಆ್ಯಂಬುಲೆನ್ಸ್ನಲ್ಲಿ ಎಂಟ್ರಿ ಕೊಡುತ್ತಿದ್ದ. ಆದರೆ ಬಾಗಲಕೋಟೆಯಲ್ಲಿ ಡ್ರಗ್ಸ್ ಜಾಲವೊಂದನ್ನ ಪತ್ತೆ ಮಾಡಿದ ಮಂಗಳೂರು ಪೊಲೀಸರು ಈ ವ್ಯಕ್ತಿ ಮತ್ತೊಂದು ಕರಾಳ ಮುಖವನ್ನ ಬಯಲು ಮಾಡಿದ್ದಾರೆ.
- Pruthviraj
- Updated on: Jul 26, 2026
- 5:36 pm
ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ: ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್
ಸಮಾಜ ಸೇವೆ ಮಾಡುವುದಾಗಿ ಬಿಂಬಿಸಿಕೊಂಡು ಆ್ಯಂಬುಲೆನ್ಸ್ ಬಳಸಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಜಲೀಲ್ ಬಾಬಾ ಪ್ರಸ್ತುತ ನಾಪತ್ತೆಯಾಗಿದ್ದಾನೆ. ಪೊಲೀಸರ ತನಿಖೆ ಬೆನ್ನಲ್ಲೇ ಜಲೀಲ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೂನ್ 25ರಂದು ಅಣ್ಣಪ್ಪಸ್ವಾಮಿ ಅಲಿಯಾಸ್ ಮನುವನ್ನು ಎಂಡಿಎಂಎ ಸಮೇತ ಬಂಧಿಸಲಾಗಿತ್ತು. ಈತನ ವಿಚಾರಣೆ ನಡೆಸಿದಾಗ ಬಾಗಲಕೋಟೆ ಲಿಂಕ್ ಬಹಿರಂಗಗೊಂಡಿತು. ಇದರ ಜಾಡು ಹಿಡಿದು ಹೋದಾಗ, ಜಲೀಲ್ ಬಾಬಾ ತನ್ನ ಆ್ಯಂಬುಲೆನ್ಸ್ ಅನ್ನು ಡ್ರಗ್ಸ್ ಸಾಗಾಟಕ್ಕೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ
- Pruthviraj
- Updated on: Jul 26, 2026
- 11:29 am
ಕರಾವಳಿಯಲ್ಲಿ ವರುಣನ ಆರ್ಭಟ: ಜು 25ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ!
Schools Holiday Tomorrow in dakshina kannada, Udupi: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 25ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳಲಾಗಿದೆ. ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
- Pruthviraj
- Updated on: Jul 24, 2026
- 10:30 pm
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್ಗಳು: ಮಾಕ್ಡ್ರಿಲ್ ಎಂದು ತಿಳಿಯದೆ ಕಂಗಾಲಾದ ಜನ
ಮಂಗಳೂರಿನಲ್ಲಿ ಎನ್ಎಸ್ಜಿ ಕಮಾಂಡೋಗಳು ಎರಡು ದಿನಗಳ ಬೃಹತ್ ಅಣಕು ಕಾರ್ಯಾಚರಣೆ ನಡೆಸಿದ್ದಾರೆ. ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಹೇಗೆ ನಿರ್ವಹಿಸಬೇಕೆಂದು ಪ್ರದರ್ಶಿಸಲಾಗಿದ್ದು, ಸೇನಾ ಹೆಲಿಕಾಪ್ಟರ್ಗಳು ಕಟ್ಟಡಗಳ ಮೇಲೆ ಲ್ಯಾಂಡ್ ಆಗಿದ್ದರಿಂದ ಜನರಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಇದು ರಾಷ್ಟ್ರೀಯ ಭದ್ರತಾ ತರಬೇತಿಯ ಭಾಗ ಎಂದು ತಿಳಿದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
- Pruthviraj
- Updated on: Jul 23, 2026
- 1:04 pm
ಬಂಟ್ವಾಳದಲ್ಲಿ ಹೃದಯವಿದ್ರಾವಕ ಘಟನೆ: ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಬರಿಮಾರು ಬಳಿ ಶಾಲಾ ಬಸ್ ಮೇಲೆ ಮರ ಬಿದ್ದು ಐದು ವರ್ಷದ ಬಾಲಕಿ ಚಿರನ್ವಿ ಸಾವನ್ನಪ್ಪಿದ್ದಾಳೆ. ಕಲ್ಲಡ್ಕದ ಶ್ರೀರಾಮ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಚಿರನ್ವಿ, ಶಾಲೆ ಮುಗಿಸಿ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಇನ್ನೂ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Pruthviraj
- Updated on: Jul 22, 2026
- 9:09 pm
ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಅಸ್ತು; ಸ್ಥಳಕ್ಕೂ ಹೋಗದ ಸಿಬಿಐಗೆ ತರಾಟೆ
ದಕ್ಷಿಣ ಕನ್ನಡದ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿದೆ. ಸಿಬಿಐ ತನಿಖಾ ವೈಫಲ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಮುಂದಿನ ತನಿಖಾ ಸಂಸ್ಥೆ ಬಗ್ಗೆ ನಿರ್ಧಾರ ಕಾಯ್ದಿರಿಸಿದೆ. ರಾಜ್ಯ ಸರ್ಕಾರ ಎಸ್ಐಟಿ ರಚನೆಗೆ ಸಿದ್ಧವಿದ್ದು, ಸೌಜನ್ಯ ತಾಯಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಒತ್ತಾಯಿಸಿದ್ದಾರೆ. ಇದು 14 ವರ್ಷಗಳ ಹೋರಾಟದ ನಂತರ ನ್ಯಾಯದ ಹೊಸ ಭರವಸೆ ಮೂಡಿಸಿದೆ.
- Pruthviraj
- Updated on: Jul 22, 2026
- 7:24 pm
ಲಾಕ್ ಡೌನ್ ಲವ್, 5 ವರ್ಷ ಪ್ರಿಯಕರನನ್ನು ಸಾಕಿದ್ದ ಪ್ರಿಯತಮೆ: ಮದುವೆಯಾದ ವರ್ಷದಲ್ಲೇ ಗಂಡ ಪರಸ್ತ್ರೀಯೊಂದಿಗೆ ಪರಾರಿ!
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರೀತಿಯಾಗಿ, ನಂತರ ಪ್ರಿಯಕರನನ್ನು 5 ವರ್ಷ ಸಾಕಿ, ಮದುವೆಯಾದ ಮಹಿಳೆ ಲೋಲಾಕ್ಷಿಗೆ ಆಕೆಯ ಪತಿ ಪ್ರಜ್ವಲ್ ಕೈಕೊಟ್ಟಿದ್ದಾರೆ. 10 ತಿಂಗಳ ಮಗುವಿದ್ದರೂ, ಪ್ರಜ್ವಲ್ ಮತ್ತೊಬ್ಬ ಮಹಿಳೆ ಶರ್ಮಿಳಾ ಎಂಬಾಕೆಯ ಜೊತೆ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಟುಂಬದ ಕಷ್ಟಗಳನ್ನು ಲೆಕ್ಕಿಸದೆ ಪತಿ ಬಿಟ್ಟುಹೋದ ನೋವಿನಲ್ಲಿ ಲೋಲಾಕ್ಷಿ ನ್ಯಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
- Pruthviraj
- Updated on: Jul 21, 2026
- 12:43 pm