AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೀನ್ ಕುಮಾರ್ ಟಿ

ನವೀನ್ ಕುಮಾರ್ ಟಿ

Author - TV9 Kannada

naveenkumar.thimmarayppa@tv9.com

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ

ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ

ಸ್ಥಳೀಯ ವಾಹನಗಳಿಗೂ ಟೋಲ್ ವಿಧಿಸುವ ವಿಚಾರವಾಗಿ ದೊಡ್ಡಬಳ್ಳಾಪುರ ರಸ್ತೆಯ ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಗಲಾಟೆ ನಡೆದಿದೆ. ಕಾರು ಚಾಲಕನೊಬ್ಬನ ಮೇಲೆ ಟೋಲ್ ಸಿಬ್ಬಂದಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಚಿಕ್ಕಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿವರ ಹಾಗೂ ವಿಡಿಯೋ ಇಲ್ಲಿದೆ.

ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ

ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ

ಬೆಂಗಳೂರು ಗ್ರಾಮಾಂತರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ತಂದೆಯೊಬ್ಬರು ತಮ್ಮ ಮಗನ ಮದುವೆಯನ್ನು ಆಡಂಬರವಿಲ್ಲದೆ ಮಾಡಿ, ಅದೇ ಖರ್ಚಿನಲ್ಲಿ 11 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿ ಮಾದರಿಯಾಗಿದ್ದಾರೆ. ಆ ಮೂಲಕ ಸರಳ ವಿವಾಹದ ಮಹತ್ವವನ್ನು ಎತ್ತಿ ಹೇಳಿದ್ದಾರೆ. ಫೋಟೋಸ್​ ಇಲ್ಲಿವೆ ನೋಡಿ.

ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ

ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ

ಲಕ್ಷಾಂತರ ಆದಾಯವಿರುವ ರಾಮು ಅವರು ತಮ್ಮ ಮಗನ ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿದರು. ಆದರೆ, ಅದೇ ಹಣವನ್ನು ಬಳಸಿ 11 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದರು. ಸೀರೆ, ಬಟ್ಟೆ, ಚಿನ್ನದ ತಾಳಿ ಮತ್ತು 10,000 ರೂಪಾಯಿ ನಗದನ್ನು ಪ್ರತಿ ಜೋಡಿಗೂ ನೀಡಿದರು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಡಂಬರದ ಮದುವೆಗಳಿಗೆ ಹೋಲಿಸಿದರೆ, ಇದು ನಿಜವಾದ ಪ್ರೇರಣೆಯಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಕಚೇರಿ ಸ್ಫೋಟಿಸುವುದಾಗಿ ಬಾಂಬ್​ ಬೆದರಿಕೆ ಸಂದೇಶ

ಡಿಸಿಎಂ ಡಿಕೆ ಶಿವಕುಮಾರ್ ಕಚೇರಿ ಸ್ಫೋಟಿಸುವುದಾಗಿ ಬಾಂಬ್​ ಬೆದರಿಕೆ ಸಂದೇಶ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿಗೆ ಬಾಂಬ್ ಸ್ಫೋಟಿಸುವ ಬೆದರಿಕೆ ಇಮೇಲ್ ಬಂದಿದೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾದಲ್ಲಿ ಪ್ಯಾಸೆಂಜರ್ ಬ್ಯಾಗ್‌ಗೆ ಗೋಲ್ಡ್ ಬಿಸ್ಕೆಟ್ ಹಾಕಿ ಸ್ಮಗ್ಲರ್ ಎಸ್ಕೇಪ್: 3.5 ಕೆಜಿ ಚಿನ್ನ ಪತ್ತೆ

ಬೆಂಗಳೂರು ವಿಮಾನ ನಿಲ್ದಾದಲ್ಲಿ ಪ್ಯಾಸೆಂಜರ್ ಬ್ಯಾಗ್‌ಗೆ ಗೋಲ್ಡ್ ಬಿಸ್ಕೆಟ್ ಹಾಕಿ ಸ್ಮಗ್ಲರ್ ಎಸ್ಕೇಪ್: 3.5 ಕೆಜಿ ಚಿನ್ನ ಪತ್ತೆ

ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದವರ ಭಯಗೊಂಡು ಮಾರ್ಗ ಮಧ್ಯೆದಲ್ಲೇ ಚಿನ್ನ ಬಿಸ್ಕೆಟ್ ಸಹ ಪ್ರಯಾಣಿಕನ ಬ್ಯಾಗ್​ ಗೆ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಗಲಾಕ್ಕೊಳ್ಳುವ ಭಯದಿಂದ ಬೇರೆಯವರ ಟ್ರಾಲಿ ಬ್ಯಾಗ್​​ ಗೆ ಚಿನ್ನ ಹಾಕಿ ಎಸ್ಪೇಪ್ ಆಗಿದ್ದಾನೆ. ಹಾಗಾದ್ರೆ, ಸ್ಮಗ್ಲರ್​ ಖರ್ತನಾಕ್​ ಐಡಿಯಾಕ್ಕೆ ಸಹ ಪ್ರಯಾಣಿಕ ಸಿಕ್ಕಿಬಿದ್ದಿದ್ಗೇಗೆ? ಬ್ಯಾಗ್​ ನಲ್ಲಿ ಸಿಕ್ಕ ಚಿನ್ನ ಎಷ್ಟು? ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ದೊಡ್ಡಬಳ್ಳಾಪುರ: ಹುಡುಗಿಯರ ಜತೆ ಲವ್ವಿಡವ್ವಿ, ಗರ್ಭಿಣಿ ಮಾಡಿ ಕೈಬಿಟ್ಟ ಜಿಮ್ ಟ್ರೈನರ್ ಮನೆಗೆ ಬಿತ್ತು ಬೆಂಕಿ

ದೊಡ್ಡಬಳ್ಳಾಪುರ: ಹುಡುಗಿಯರ ಜತೆ ಲವ್ವಿಡವ್ವಿ, ಗರ್ಭಿಣಿ ಮಾಡಿ ಕೈಬಿಟ್ಟ ಜಿಮ್ ಟ್ರೈನರ್ ಮನೆಗೆ ಬಿತ್ತು ಬೆಂಕಿ

ಆಕೆ ಜಿಮ್ ಟ್ರೈನರ್ ಜೊತೆ 8 ವರ್ಷಗಳಿಂದೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದು, ಪ್ರೀತಿಸಿದವನು ಆಕೆಯನ್ನು ಗರ್ಭಿಣಿ ಮಾಡಿ ಕೈ ಕೊಟ್ಟಿದ್ದ. ಆದರೆ, ಇದೇ ವಿಚಾರವಾಗಿ ಆಕೆ ಮಗು ಸಮೇತ ಕೋರ್ಟ್ ಮೆಟ್ಟಿಲೇರಿದ್ದು ವ್ಯಾಜ್ಯ ನಡೆಯುತ್ತಿರುವಾಗಲೇ, ಕಳೆದ 20 ದಿನಗಳಿಂದ ಪ್ರೀತಿಸಿದವನ ಮನೆ ಸೇರಿಕೊಂಡಿದ್ದಾಳೆ. ಈ ನಡುವೆ ಪ್ರೀತಿಸಿದ್ದವನ ಮನೆ ಬೆಂಕಿಯಿಂದ ಧಗಧಗಿಸಿದೆ. ಇದಕ್ಕೆ ಕಾರಣವೇನು? ತಿಳಿಯಲು ಮುಂದೆ ಓದಿ.

ದೇವನಹಳ್ಳಿ: ಕುಡಿದ ನಶೆಯಲ್ಲಿ ಸಿಗರೇಟ್ ಹಚ್ಚಿ ನಿದ್ರೆಗೆ ಜಾರಿದ: ಧಗಧಗಿಸಿದ ಮನೆ, ಯುವಕ ಸಜೀವ ದಹನ

ದೇವನಹಳ್ಳಿ: ಕುಡಿದ ನಶೆಯಲ್ಲಿ ಸಿಗರೇಟ್ ಹಚ್ಚಿ ನಿದ್ರೆಗೆ ಜಾರಿದ: ಧಗಧಗಿಸಿದ ಮನೆ, ಯುವಕ ಸಜೀವ ದಹನ

ತಾಯಿ ಮತ್ತು ಮಗ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ. ತಾಯಿ ಮತ್ತು ಮಗ ವಾಸವಿದ್ದ ಮನೆ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟು ಕರಕಲು, ಸಜೀವ ದಹನ. ಮಗ ಆಗಾಗ ಕುಡಿದು ಮನೆಗೆ ಬರುತ್ತಿದ್ದನು. ಶುಕ್ರವಾರ ಸಂಜೆ ಸಹ ಕುಡಿದು ಮನೆಗೆ ಬಂದ ಮಗ ಅಮಲಿನಲ್ಲಿ ಸಿಗರೇಟ್​ ಹಚ್ಚಿ, ನಿದ್ದೆಗೆ ಜಾರಿದ್ದಾನೆ. ಮುಂದೇನಾಯ್ತು? ಇಲ್ಲಿದೆ ವಿವರ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ ಕೊಕೇನ್​ ಜಪ್ತಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ ಕೊಕೇನ್​ ಜಪ್ತಿ

ದೋಹಾದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಬಳಿ 40 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಕೊಕೇನ್ ಪತ್ತೆಯಾಗಿದೆ. ಕಾಮಿಕ್ಸ್ ಪುಸ್ತಕಗಳಲ್ಲಿ ಅಡಗಿಸಿಟ್ಟಿದ್ದ ಈ ಕೊಕೇನ್ ಅನ್ನು ಡಿಆರ್​​ಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಯಾಣಿಕನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದೇವನಹಳ್ಳಿಯಲ್ಲಿ ಮತ್ತೊಂದು ಭೂಸ್ವಾಧೀನ ವಿವಾದ: ರೈತರ ಜಮೀನು ಬಿಎಂಟಿಸಿ ಡಿಪೋಗೆ ಮಂಜೂರು

ದೇವನಹಳ್ಳಿಯಲ್ಲಿ ಮತ್ತೊಂದು ಭೂಸ್ವಾಧೀನ ವಿವಾದ: ರೈತರ ಜಮೀನು ಬಿಎಂಟಿಸಿ ಡಿಪೋಗೆ ಮಂಜೂರು

ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ 1,777 ಎಕರೆ ಫಲವತ್ತಾದ ಕೃಷಿ ಭೂಮಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ. ಆದರೆ ಇದೀಗ ದಶಕಗಳಿಂದ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಬಿಎಂಟಿಸಿ ಡಿಪೋಗೆ ಸರ್ಕಾರ ಮಂಜೂರು ಮಾಡಿದೆ. ರೈತರಿಗೆ ಮಂಜೂರಾಗಿದ್ದ ಜಮೀನು ಬಿಎಂಟಿಸಿಗೆ ಕೊಟ್ಟಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ ಹೊರ ವಲಯದ ಭೂಗರ್ಭದಲ್ಲಿ ಅಡಗಿದೆ ಬೌದ್ಧ ಧರ್ಮದ 2500 ವರ್ಷಗಳ ಹಿಂದಿನ ರಹಸ್ಯ!

ದೊಡ್ಡಬಳ್ಳಾಪುರ ಹೊರ ವಲಯದ ಭೂಗರ್ಭದಲ್ಲಿ ಅಡಗಿದೆ ಬೌದ್ಧ ಧರ್ಮದ 2500 ವರ್ಷಗಳ ಹಿಂದಿನ ರಹಸ್ಯ!

ಅದು ದೊಡ್ಡಬಳ್ಳಾಪುರ ಹೊರವಲಯದ, ನೂರಾರು ವರ್ಷಗಳಿಂದ ರೈತರು ಕೃಷಿ ಮಾಡಿಕೊಂಡು ಬಂದಿರುವ ಸಾಮಾನ್ಯ ಕೃಷಿ ಭೂಮಿ. ಅಲ್ಲಿ ಹಿಂದೆಲ್ಲ ಅನೇಕ ಬಾರಿ ಬೂದಿ ಮಡಿಕೆ ಚೂರುಗಳು ಮತ್ತು ಇಟ್ಟಿಗೆ ಗೋಡೆಗಳು ಸಿಕ್ಕಿದ್ದವು. ಆಗ ಜನರು ಅಷ್ಟಾಗಿ ತಲೆ ಕೆಡಸಿಕೊಂಡಿರಲಿಲ್ಲ. ಆದರೆ, ಇದೀಗ ಅದೇ ಭೂಮಿಯಲ್ಲಿ ರಹಸ್ಯವೊಂದರ ಸುಳಿವು ಸಿಕ್ಕಿದ್ದು, ಅದನ್ನು ಬೇಧಿಸಲು ಸರ್ಕಾರ ಮತ್ತು ಸಂಶೋಧನಾಕಾರರು ಮುಂದಾಗಿದ್ದಾರೆ.

Devanahalli: ಭೂಗಳ್ಳರ ಪಾಲಾಗುತ್ತಿದ್ದ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿ ಮರು ವಶಕ್ಕೆ

Devanahalli: ಭೂಗಳ್ಳರ ಪಾಲಾಗುತ್ತಿದ್ದ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿ ಮರು ವಶಕ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಭೂಗಳ್ಳರ ಪಾಲಾಗುತ್ತಿದ್ದ 150 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿ ಬಿ.ಎ. ಬಸವರಾಜ್​​ ಆದೇಶದಂತೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ 34 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ಮರು ವಶಕ್ಕೆ ಪಡೆದಿದೆ.

ಎತ್ತಿನಹೊಳೆ‌ ಡ್ಯಾಂ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಜನರಿಂದಲೂ ವಿರೋಧ! ಕಾರಣ ಇಲ್ಲಿದೆ

ಎತ್ತಿನಹೊಳೆ‌ ಡ್ಯಾಂ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಜನರಿಂದಲೂ ವಿರೋಧ! ಕಾರಣ ಇಲ್ಲಿದೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಲಕ್ಕೆನಹಳ್ಳಿ ಬಳಿ ಎತ್ತಿನಹೊಳೆ ಯೋಜನೆಯ ಭಾಗವಾಗಿ ನಿರ್ಮಿಸಲು ಯೋಜಿಸಿರುವ ಜಲಾಶಯದಿಂದ ಏಳು ಹಳ್ಳಿಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. ಸ್ಥಳೀಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭೂಮಿ ಕಳೆದುಕೊಳ್ಳುವ ಭೀತಿಯಿಂದ ಪ್ರತಿಭಟನೆ ನಡೆಸಿದ್ದಾರೆ. ಅಷ್ಟಕ್ಕೂ ಎತ್ತಿನಹೊಳೆಗೂ ಲಕ್ಕೆನಹಳ್ಳಿಗೂ ಏನು ಸಂಬಂಧ? ಇಲ್ಲೇಕೆ ಎತ್ತಿನಹೊಳೆ ಡ್ಯಾಂ? ಇಲ್ಲಿದೆ ವಿವರ.