AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ

Sub-Editor - TV9 Kannada

akshathakiran.vorkady@tv9.com

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow On:
CET 2026: NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?

CET 2026: NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಸಿಇಟಿ ಆಪ್ಷನ್ ಎಂಟ್ರಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ನೀಟ್ ಫಲಿತಾಂಶ ವಿಳಂಬದಿಂದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳ ಆಪ್ಷನ್ ಎಂಟ್ರಿ ಮುಂದೂಡಲಾಗಿದೆ. ವೈದ್ಯಕೀಯದ ಜೊತೆಗೆ ಇಂಜಿನಿಯರಿಂಗ್ ಪ್ರವೇಶವನ್ನೂ ಬಯಸುವ ವಿದ್ಯಾರ್ಥಿಗಳು ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.

ATMA Scheme Recruitment: ಹಾವೇರಿ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ

ATMA Scheme Recruitment: ಹಾವೇರಿ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ

ಹಾವೇರಿ ಕೃಷಿ ಇಲಾಖೆಯು ATMA ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಕೃಷಿ ಸಂಬಂಧಿತ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಅನುಭವ ಇರುವವರು ಜುಲೈ 25ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಇಲ್ಲ, ವಿದ್ಯಾರ್ಹತೆ ಮತ್ತು ಅನುಭವ ಆಧರಿಸಿ ಆಯ್ಕೆ ನಡೆಯುತ್ತದೆ.

Lizard in Home: ಪೂಜಾ ಕೋಣೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನರ್ಥ? ಶಕುನ ಶಾಸ್ತ್ರ ಹೇಳುವುದೇನು?

Lizard in Home: ಪೂಜಾ ಕೋಣೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನರ್ಥ? ಶಕುನ ಶಾಸ್ತ್ರ ಹೇಳುವುದೇನು?

ಮನೆಯಲ್ಲಿ ಹಲ್ಲಿ ಕಂಡರೆ ಹಲವರು ಭಯಪಡುತ್ತಾರೆ. ಆದರೆ ವಾಸ್ತು ಮತ್ತು ಶಕುನ ಶಾಸ್ತ್ರದ ಪ್ರಕಾರ ಇದರ ಅರ್ಥಗಳು ಬೇರೆಯಾಗಿವೆ. ಪೂಜಾ ಕೋಣೆಯಲ್ಲಿ, ಮುಖ್ಯ ದ್ವಾರದಲ್ಲಿ ಹಲ್ಲಿ ಕಾಣಿಸುವುದು ಲಕ್ಷ್ಮಿ ಆಗಮನ, ಆರ್ಥಿಕ ಸುಧಾರಣೆಯ ಶುಭ ಸಂಕೇತ. ಆದರೆ, ಹಲ್ಲಿಗಳ ಜಗಳ, ಓಡಿಹೋಗುವುದು, ಕನಸಿನಲ್ಲಿ ಕಾಣುವುದು ಅಥವಾ ಸತ್ತ ಹಲ್ಲಿ ಕಾಣುವುದು ಅಶುಭ ಸಂಕೇತಗಳಾಗಿವೆ.

Pawan Hans Recruitment 2026: ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

Pawan Hans Recruitment 2026: ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಪವನ್ ಹನ್ಸ್ ಲಿಮಿಟೆಡ್ 2026ರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, 22 ಟ್ರೈನಿ ಟೆಕ್ನಿಷಿಯನ್, ಜೂನಿಯರ್ ಇಂಜಿನಿಯರ್, ಗುಣಮಟ್ಟ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 10 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶ.

ಲಂಚ್ ಬ್ರೇಕ್‌ 1 ನಿಮಿಷ ತಡವಾದ್ರೂ 1 ಗಂಟೆ ಎಕ್ಸ್​​ಟ್ರಾ ಕೆಲಸ ಮಾಡ್ಬೇಕು; ವೈರಲ್ ಆಗುತ್ತಿದೆ ಕಂಪನಿ ರೂಲ್ಸ್

ಲಂಚ್ ಬ್ರೇಕ್‌ 1 ನಿಮಿಷ ತಡವಾದ್ರೂ 1 ಗಂಟೆ ಎಕ್ಸ್​​ಟ್ರಾ ಕೆಲಸ ಮಾಡ್ಬೇಕು; ವೈರಲ್ ಆಗುತ್ತಿದೆ ಕಂಪನಿ ರೂಲ್ಸ್

ಲಂಚ್ ಬ್ರೇಕ್‌ನಲ್ಲಿ ಕೇವಲ 1 ನಿಮಿಷ ತಡವಾದರೂ ಸಂಜೆ 6 ಗಂಟೆಯ ನಂತರ 1 ಗಂಟೆ ಕಾಲ ಹೆಚ್ಚುವರಿಯಾಗಿ, ಯಾವುದೇ ಸಂಬಳವಿಲ್ಲದೆ ಕೆಲಸ ಮಾಡಬೇಕು (Unpaid Focus Time) ಎಂಬ ಕಂಪನಿಯೊಂದರ ವಿಲಕ್ಷಣ ನಿಯಮದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಚೇರಿ ಮ್ಯಾನೇಜ್‌ಮೆಂಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Vasthu Tips: ಮನೆಯ ಈ ದಿಕ್ಕಿನಲ್ಲಿ ಗುಲಾಬಿ ದಳಗಳನ್ನಿಟ್ಟರೆ ಆರ್ಥಿಕ ಸಮೃದ್ಧಿ ಖಂಡಿತ!

Vasthu Tips: ಮನೆಯ ಈ ದಿಕ್ಕಿನಲ್ಲಿ ಗುಲಾಬಿ ದಳಗಳನ್ನಿಟ್ಟರೆ ಆರ್ಥಿಕ ಸಮೃದ್ಧಿ ಖಂಡಿತ!

ವಾಸ್ತು ಶಾಸ್ತ್ರದ ಪ್ರಕಾರ, ಗುಲಾಬಿ ಹೂಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಅತ್ಯಂತ ಪರಿಣಾಮಕಾರಿ. ತಾಜಾ ಗುಲಾಬಿ ದಳಗಳನ್ನು ಗಾಜಿನ ಬಟ್ಟಲಿನಲ್ಲಿ ನೀರಿನೊಂದಿಗೆ ಇಡುವುದರಿಂದ ಮನೆಗೆ ಹೊಸ ಚೈತನ್ಯ ಮತ್ತು ಉಲ್ಲಾಸ ಬರುತ್ತದೆ. ಇದರಿಂದ ಮನಸ್ಸು ಶಾಂತವಾಗುತ್ತದೆ. ವಿಶೇಷವಾಗಿ, ಪೂರ್ವ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ. ಗುಲಾಬಿಗಳು ಮನೆಗೆ ನೈಸರ್ಗಿಕ ಪರಿಮಳ, ತಾಜಾತನ ಮತ್ತು ಸಂಪತ್ತನ್ನು ತರುತ್ತವೆ.

Vastu Lemon Remedies: ಮನೆಯ ನಕಾರಾತ್ಮಕ ಶಕ್ತಿಯ ನಿವಾರಣೆಗೆ ನಿಂಬೆಹಣ್ಣಿನ ಪರಿಹಾರ; ವಾಸ್ತು ಸಲಹೆ ಇಲ್ಲಿದೆ

Vastu Lemon Remedies: ಮನೆಯ ನಕಾರಾತ್ಮಕ ಶಕ್ತಿಯ ನಿವಾರಣೆಗೆ ನಿಂಬೆಹಣ್ಣಿನ ಪರಿಹಾರ; ವಾಸ್ತು ಸಲಹೆ ಇಲ್ಲಿದೆ

ವಾಸ್ತು ಶಾಸ್ತ್ರದ ಪ್ರಕಾರ ನಿಂಬೆಹಣ್ಣು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ತರುತ್ತದೆ. ಜಗಳಗಳು, ಆರ್ಥಿಕ ನಷ್ಟ, ಅಥವಾ ಅಶಾಂತಿ ಇದ್ದರೆ, ನಿಂಬೆಹಣ್ಣಿನ ಸರಳ ಪರಿಹಾರಗಳು ರಾಮಬಾಣವಾಗಿವೆ. ಪ್ರವೇಶ ದ್ವಾರದಲ್ಲಿ ನಿಂಬೆ-ಮೆಣಸು ನೇತುಹಾಕುವುದು, ನೀರಿನಲ್ಲಿ ನಿಂಬೆ ಇಡುವುದು, ಉಪ್ಪಿನೊಂದಿಗೆ ನಿಂಬೆ ಬಳಸುವುದು ಮತ್ತು ಆರ್ಥಿಕ ಪ್ರಗತಿಗೆ ವ್ಯಾಪಾರ ಸ್ಥಳದಲ್ಲಿ ಬಳಸುವಂತಹ ಹಲವು ಪರಿಣಾಮಕಾರಿ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.

Deepa Lighting Rules: ದೇವರಿಗೆ ದೀಪ ಬೆಳಗುವಾಗ ಈ ಒಂದು ತಪ್ಪು ಮಾಡಲೇಬೇಡಿ; ದೀಪಾರಾಧನೆಯ ನಿಯಮ ಇಲ್ಲಿದೆ

Deepa Lighting Rules: ದೇವರಿಗೆ ದೀಪ ಬೆಳಗುವಾಗ ಈ ಒಂದು ತಪ್ಪು ಮಾಡಲೇಬೇಡಿ; ದೀಪಾರಾಧನೆಯ ನಿಯಮ ಇಲ್ಲಿದೆ

ದೇವಾಲಯ ಅಥವಾ ಪೂಜಾ ಕೊಠಡಿಯಲ್ಲಿ ದೀಪ ಬೆಳಗುವುದು ಮನಸ್ಸಿಗೆ ಶಾಂತಿ, ಸಕಾರಾತ್ಮಕ ಶಕ್ತಿ ನೀಡುತ್ತದೆ. ಹಿಂದೂ ಸನಾತನ ಧರ್ಮದಲ್ಲಿ ದೀಪಗಳಿಗೆ ಅತ್ಯುನ್ನತ ಸ್ಥಾನವಿದೆ. ಆದರೆ, ಸರಿಯಾದ ತಿಳುವಳಿಕೆಯಿಲ್ಲದೆ ದೀಪ ಹಚ್ಚುವುದರಿಂದ ನಕಾರಾತ್ಮಕತೆ ಹೆಚ್ಚಬಹುದು. ದೀಪ ಹಚ್ಚಲು ಶುಭ ಸಮಯ, ಬತ್ತಿ-ಎಣ್ಣೆ ನಿಯಮಗಳು, ದೀಪ ಇಡುವ ದಿಕ್ಕುಗಳು, ಹಾಗೂ ಮಾಡಬಾರದ ತಪ್ಪುಗಳನ್ನು ಶಾಸ್ತ್ರಗಳು ವಿವರಿಸುತ್ತವೆ. ಸರಿಯಾದ ದೀಪಾರಾಧನೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತರುತ್ತದೆ.

Hindu Ritual: ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’ ಯಾಕೆ ಹಾಕ್ತಾರೆ? ಅಸಲಿ ಕಾರಣ ಇಲ್ಲಿದೆ!

Hindu Ritual: ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’ ಯಾಕೆ ಹಾಕ್ತಾರೆ? ಅಸಲಿ ಕಾರಣ ಇಲ್ಲಿದೆ!

ಹಿಂದೂ ವಿವಾಹದಲ್ಲಿ ಮಾಂಗಲ್ಯ ಧಾರಣೆ ಅತ್ಯಂತ ಪವಿತ್ರ. ತಾಳಿ ಕಟ್ಟುವಾಗ ಹಾಕುವ ಮೂರು ಗಂಟುಗಳು ಕೇವಲ ಸಂಪ್ರದಾಯವಲ್ಲ; ಅವು ಗುರು ಗ್ರಹದ ಕೃಪೆ, ತ್ರಿಮೂರ್ತಿಗಳ ಪ್ರತಿನಿಧಿ ಹಾಗೂ ದಂಪತಿಗಳ ಮೂರು ಶರೀರಗಳ (ಸ್ಥೂಲ, ಸೂಕ್ಷ್ಮ, ಕಾರಣ) ಬೆಸೆಯುವಿಕೆಯನ್ನು ಸಂಕೇತಿಸುತ್ತವೆ. ಈ ಗಂಟುಗಳು ಪತಿಯು ಪತ್ನಿಯೆಡೆಗಿನ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳ ಜವಾಬ್ದಾರಿಯನ್ನು ಪಂಚಭೂತಗಳ ಸಾಕ್ಷಿಯಾಗಿ ವಹಿಸಿಕೊಳ್ಳುವ ಪವಿತ್ರ ಪ್ರತಿಜ್ಞೆಯಾಗಿವೆ.

Dimple: ಗುಳಿ ಕೆನ್ನೆ ಇರುವವರು ನಿಜಕ್ಕೂ ಅದೃಷ್ಟವಂತರಾ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

Dimple: ಗುಳಿ ಕೆನ್ನೆ ಇರುವವರು ನಿಜಕ್ಕೂ ಅದೃಷ್ಟವಂತರಾ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಗುಳಿ ಕೆನ್ನೆ ಕೇವಲ ಸೌಂದರ್ಯವಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ವ್ಯಕ್ತಿಯ ಅದೃಷ್ಟ, ಬುದ್ಧಿವಂತಿಕೆ ಮತ್ತು ಯಶಸ್ಸಿನ ಸಂಕೇತವಾಗಿದೆ. ಚಿಕ್ಕ ವಯಸ್ಸಿನಲ್ಲೇ ಕೀರ್ತಿ, ನೆನಪಿನ ಶಕ್ತಿ, ಚುರುಕುತನ, ಮತ್ತು ಆರ್ಥಿಕ ಜಾಣ್ಮೆ ಇವರ ಗುಣಲಕ್ಷಣಗಳು. ಆದರೂ, ವೈವಾಹಿಕ ಜೀವನದಲ್ಲಿ ಸಣ್ಣ ಸವಾಲುಗಳಿರಬಹುದು. ದೇವಿ ಆರಾಧನೆ ಮತ್ತು ಸಿಹಿ ದಾನದಂತಹ ಪರಿಹಾರಗಳಿಂದ ಅದೃಷ್ಟ ವೃದ್ಧಿಸಿಕೊಳ್ಳಬಹುದು.

Medical Career Without NEET: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

Medical Career Without NEET: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ಈ ವರ್ಷ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಆದರೆ, ದೇಶದಲ್ಲಿ ಲಭ್ಯವಿರುವ ಎಂಬಿಬಿಎಸ್ (MBBS) ಸೀಟುಗಳ ಸಂಖ್ಯೆ ಕೇವಲ 1.5 ಲಕ್ಷಕ್ಕಿಂತ ಕಡಿಮೆ ಇದೆ. ಆದರೆ ನೀಟ್ ಇಲ್ಲದೆ, 12ನೇ ತರಗತಿ ಅಂಕಗಳ ಆಧಾರದ ಮೇಲೆ ಕೆಲವು ಹೆಲ್ತ್ ಕೇರ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಫಿಸಿಯೋಥೆರಪಿ, ಆಪ್ಟೋಮೆಟ್ರಿ, ನ್ಯೂಟ್ರಿಷನ್‌ನಂತಹ ಕೋರ್ಸ್‌ಗಳು ಲಭ್ಯ. ಮುಂದಿನ ವರ್ಷದಿಂದ ನೀಟ್ ಸ್ಕೋರ್ ಕಡ್ಡಾಯವಾಗುವ ಕಾರಣ, ಇದು ಕೊನೆಯ ಅವಕಾಶವಾಗಿದೆ.

Video: ರಕ್ಷಣಾ ವಲಯದಲ್ಲಿ ಭಾರತದ ಹೊಸ ಇತಿಹಾಸ; ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

Video: ರಕ್ಷಣಾ ವಲಯದಲ್ಲಿ ಭಾರತದ ಹೊಸ ಇತಿಹಾಸ; ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

ಭಾರತವು ಶಸ್ತ್ರಾಸ್ತ್ರ ಆಮದುದಾರನಿಂದ ರಫ್ತುದಾರನಾಗಿ ಹೊರಹೊಮ್ಮುತ್ತಿದೆ. ಯುಎಇ ಬ್ರಹ್ಮೋಸ್ ಕ್ಷಿಪಣಿ ಮತ್ತು ಆಕಾಶ್-ತೀರ್ ವ್ಯವಸ್ಥೆಗಳ ಖರೀದಿಗೆ ಆಸಕ್ತಿ ತೋರಿದೆ. ಇದು ಮಧ್ಯಪ್ರಾಚ್ಯಕ್ಕೆ ಭಾರತದ ರಕ್ಷಣಾ ಮಾರುಕಟ್ಟೆ ವಿಸ್ತರಣೆಯ ಸಂಕೇತವಾಗಿದ್ದು, ಆತ್ಮನಿರ್ಭರ ಭಾರತದ ಸಾಧನೆಗೆ ಸಾಕ್ಷಿಯಾಗಿದೆ. ಇದು ಭಾರತೀಯ ತಂತ್ರಜ್ಞಾನದ ಮೇಲಿನ ಜಾಗತಿಕ ವಿಶ್ವಾಸವನ್ನು ಹೆಚ್ಚಿಸಿದೆ.