ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Shani Puja: ಶನಿ ಪೂಜೆಯಲ್ಲಿ ತಾಮ್ರದ ಪಾತ್ರೆ ಬಳಸಬಾರದು ಯಾಕೆ?
ಹಿಂದೂ ಪೂಜೆಗಳಲ್ಲಿ ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಎಲ್ಲಾ ದೇವರುಗಳಿಗೆ ತಾಮ್ರ ಶುಭವಾದರೂ, ಶನಿ ಪೂಜೆಯಲ್ಲಿ ತಾಮ್ರದ ಪಾತ್ರೆ ನಿಷಿದ್ಧ. ಸೂರ್ಯ ಮತ್ತು ಶನಿಯ ನಡುವಿನ ವೈರತ್ವವೇ ಇದಕ್ಕೆ ಕಾರಣ. ಸೂರ್ಯನಿಗೆ ಪ್ರಿಯವಾದ ತಾಮ್ರವನ್ನು ಶನಿದೇವರಿಗೆ ಬಳಸಬಾರದು. ಶನಿದೇವರಿಗೆ ಕಬ್ಬಿಣ ಅತ್ಯಂತ ಪ್ರಿಯವಾದ ಲೋಹವಾಗಿದ್ದು, ಕಬ್ಬಿಣದ ಪಾತ್ರೆಗಳ ಬಳಕೆ ಶುಭ ಫಲ ನೀಡುತ್ತದೆ ಎಂದು ನಂಬಲಾಗಿದೆ.
- Akshatha Vorkady
- Updated on: May 9, 2026
- 12:37 pm
Kedarnath Shivling: ಕೇದಾರನಾಥದಲ್ಲಿ ಶಿವಲಿಂಗ ತ್ರಿಕೋನ ಆಕಾರದಲ್ಲಿ ಯಾಕಿದೆ ಗೊತ್ತಾ? ಇಲ್ಲಿದೆ ಪೌರಾಣಿಕ ರಹಸ್ಯ!
ಉತ್ತರಾಖಂಡದ ಹಿಮಾಲಯ ಶ್ರೇಣಿಗಳ ಮಡಿಲಲ್ಲಿರುವ ಪವಿತ್ರ ಕೇದಾರನಾಥ ಕ್ಷೇತ್ರವು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ವಿಶಿಷ್ಟವಾದುದಾಗಿದ್ದು, ಇಲ್ಲಿರುವ ಶಿವಲಿಂಗವು ಸದಾಕಾಲ ಭಕ್ತರನ್ನು ಬೆರಗುಗೊಳಿಸುವ ಅಪರೂಪದ ತ್ರಿಕೋನ ಆಕಾರವನ್ನು ಹೊಂದಿದೆ. ಶಿವನು ತ್ರಿಕೋನ ರೂಪದಲ್ಲಿ ನೆಲೆಸಿರುವುದರ ಹಿಂದೆ ಮಹಾಭಾರತದ ಪೌರಾಣಿಕ ಹಿನ್ನೆಲೆಯಿದೆ. ಭಕ್ತಿ, ಕ್ಷಮೆ ಮತ್ತು ದೈವಿಕ ಶಕ್ತಿಯ ಸಂಕೇತವಾಗಿರುವ ಈ ಅಪರೂಪದ ಜ್ಯೋತಿರ್ಲಿಂಗವು ಪ್ರತಿಯೊಬ್ಬ ಯಾತ್ರಿಕನಿಗೂ ಅತ್ಯುನ್ನತ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ.
- Akshatha Vorkady
- Updated on: May 9, 2026
- 11:47 am
Coconut Trees: ಶಾಸ್ತ್ರೋಕ್ತ ವಿಧಿವಿಧಾನ ಅನುಸರಿಸದೇ ತೆಂಗಿನ ಮರವನ್ನು ಕಡಿಯಬಾರದು ಯಾಕೆ? ವಾಸ್ತು ಎಚ್ಚರಿಕೆ ಇಲ್ಲಿದೆ
ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನ ಮರವು ದೈವಾಂಶ ಮತ್ತು ಧನಾತ್ಮಕ ಶಕ್ತಿಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಅನಾವಶ್ಯಕವಾಗಿ ಕಡಿಯುವುದು ಪಾಪದ ಕೆಲಸ ಎಂದು ಪರಿಗಣಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ತೆಂಗಿನ ಮರವನ್ನು ಕಡಿಯಬೇಕಾಗಿ ಬಂದರೆ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.
- Akshatha Vorkady
- Updated on: May 9, 2026
- 10:18 am
Kailasagiri Hill: ರಾತ್ರಿಯ ವೇಳೆ ಬೆಳಗಲಿದೆ ಶಿವನ ದಿವ್ಯ ಆಯುಧ; ಕೈಲಾಸಗಿರಿಯ ಮೇಲೆ 2.5 ಕೋಟಿ ವೆಚ್ಚದ ಬೃಹತ್ ತ್ರಿಶೂಲ ನಾಳೆ ಉದ್ಘಾಟನೆ
ಆಂಧ್ರಪ್ರದೇಶದ ವೈಜಾಗ್ನ ಕೈಲಾಸಗಿರಿ ಬೆಟ್ಟದಲ್ಲಿ 65 ಅಡಿ ಎತ್ತರದ ಬೃಹತ್ 'ತ್ರಿಶೂಲ' ಸ್ಥಾಪಿಸಲಾಗಿದೆ. ಇದು ವಿಶಾಖಪಟ್ಟಣಂ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆಯಾಗಿದೆ. 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ತ್ರಿಶೂಲ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಫೈಬರ್ ಬಲವರ್ಧಿತ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ. ಇದರ ವಿಶೇಷತೆಯೆಂದರೆ, ವಿಶಾಖಪಟ್ಟಣಂ ನಗರದ ಯಾವುದೇ ಮೂಲೆಯಿಂದ ಕೈಲಾಸಗಿರಿಯತ್ತ ಕಣ್ಣು ಹಾಯಿಸಿದರೂ ಈ ತ್ರಿಶೂಲ ಭವ್ಯವಾಗಿ ಗೋಚರಿಸುತ್ತದೆ.
- Akshatha Vorkady
- Updated on: May 8, 2026
- 6:32 pm
Vastu Shastra: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಚಿನ್ನದ ಆಭರಣ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಕಷ್ಟಕಾಲದ ಭದ್ರತೆಯಾಗಿ ಅಥವಾ ಒಂದು ಅಮೂಲ್ಯ ಆಸ್ತಿಯಾಗಿ ಭಾರತೀಯರು ಕಾಣುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಚಿನ್ನವನ್ನು ಸಂಪತ್ತು, ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ಮನೆಗಳಲ್ಲಿ ಚಿನ್ನ ಸ್ಥಿರವಾಗಿ ನಿಲ್ಲುವುದಿಲ್ಲ. ಇದಕ್ಕೆ ವಾಸ್ತು ದೋಷ ಮತ್ತು ಜ್ಯೋತಿಷ್ಯದ ಕಾರಣಗಳಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
- Akshatha Vorkady
- Updated on: May 8, 2026
- 5:59 pm
Astrology: ಈ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದ್ದಾನೆ ಎಂದರ್ಥ
ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯನು ಬಲಿಷ್ಠನಾಗಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಆದರೆ, ಅದೇ ಸೂರ್ಯನು ದುರ್ಬಲ ಸ್ಥಾನದಲ್ಲಿದ್ದರೆ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ನಿಮ್ಮ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದಾನೆ ಎಂದು ತಿಳಿಯುವುದು ಹೇಗೆ? ಅದರ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: May 8, 2026
- 5:25 pm
RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಭರ್ಜರಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. SSLC ಜೊತೆ ITI/ಡಿಪ್ಲೊಮಾ/ಪದವಿ ಪಡೆದ 18-30 ವರ್ಷದೊಳಗಿನವರು ಮೇ 15ರಿಂದ ಜೂನ್ 14ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನ ಮತ್ತು ಭತ್ಯೆಗಳೊಂದಿಗೆ, ಇದು ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ತಾಂತ್ರಿಕ ಹಿನ್ನೆಲೆಯುಳ್ಳವರಿಗೆ ಸುವರ್ಣಾವಕಾಶವಾಗಿದೆ.
- Akshatha Vorkady
- Updated on: May 8, 2026
- 4:18 pm
NCRTC Recruitment 2026: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ; ತಿಂಗಳಿಗೆ 2ಲಕ್ಷ ರೂ. ಸಂಬಳ, ಇಂದೇ ಅರ್ಜಿ ಸಲ್ಲಿಸಿ!
NCRTC ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲಿಂಗ್ ವಿಭಾಗಗಳಲ್ಲಿ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ, ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ BE/B.Tech ಪದವೀಧರರು ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳಿರುವ ಈ ಉದ್ಯೋಗಗಳಿಗೆ ಇಂದೇ ಅರ್ಜಿ ಸಲ್ಲಿಸಿ.
- Akshatha Vorkady
- Updated on: May 8, 2026
- 2:59 pm
NCS Portal: ಕೇಂದ್ರ ಸರ್ಕಾರದಿಂದ ಬಂಪರ್ ಆಫರ್, ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ; ಇಲ್ಲಿದೆ ಉದ್ಯೋಗಗಳ ಮಹಾಪೂರ
ರಾಷ್ಟ್ರೀಯ ವೃತ್ತಿ ಸೇವೆ (NCS) ಪೋರ್ಟಲ್ ಮನೆಯಿಂದಲೇ ಕೆಲಸ (WFH) ಮಾಡಲು ಅಪಾರ ಅವಕಾಶಗಳನ್ನು ಒದಗಿಸಿದೆ. ಇದು ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ವೃತ್ತಿಪರರಿಗೆ ಸೂಕ್ತ ವೇದಿಕೆಯಾಗಿದೆ. 7 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿದ್ದು, ಅಮೆಜಾನ್, ಸ್ವಿಗ್ಗಿ ಸೇರಿದಂತೆ ದೊಡ್ಡ ಕಂಪನಿಗಳೊಂದಿಗೆ ಸಹಯೋಗ ಹೊಂದಿದೆ. NCS ಪೋರ್ಟಲ್ನಲ್ಲಿ ನೋಂದಾಯಿಸಿ ನಿಮ್ಮ ಕೌಶಲ್ಯಕ್ಕನುಗುಣವಾಗಿ ಕೆಲಸ ಹುಡುಕಬಹುದು.
- Akshatha Vorkady
- Updated on: May 8, 2026
- 12:40 pm
Mother’s Day 2026: ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು; ಹಿಂದೂ ಧರ್ಮದ ದೃಷ್ಟಿಯಲ್ಲಿ ಮಾತೃತ್ವದ ಮಹತ್ವ
ಹಿಂದೂ ಧರ್ಮದಲ್ಲಿ ತಾಯಿಗೆ ದೈವಿಕ ಸ್ಥಾನವಿದೆ, 'ಮಾತೃ ದೇವೋ ಭವ' ಎಂಬುದು ತಾಯಿಯ ಮಹತ್ವ ಸಾರುತ್ತದೆ. ಮಗುವಿನ ಪ್ರಥಮ ಗುರು ತಾಯಿಯೇ. ಗರ್ಭದಲ್ಲಿರುವಾಗಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು. ಏಳು ಶ್ರೇಷ್ಠ ತಾಯಂದಿರ ಪರಿಕಲ್ಪನೆ ಭಾರತೀಯ ಸಂಸ್ಕೃತಿಯ ಹೆಮ್ಮೆ. ಆಧುನಿಕ ಯುಗದಲ್ಲೂ ತಾಯಂದಿರ ನಿಸ್ವಾರ್ಥ ಸೇವೆಗೆ ಗೌರವ ನೀಡುವುದು ನಮ್ಮ ಕರ್ತವ್ಯ.
- Akshatha Vorkady
- Updated on: May 8, 2026
- 11:30 am
Age Gap in Marriage: ತಮಗಿಂತ ವಯಸ್ಸಿನಲ್ಲಿ ಹಿರಿಯ ಮಹಿಳೆಯನ್ನು ಪುರುಷರು ವಿವಾಹವಾಗಬಾರದೇ?
ಪ್ರಾಚೀನ ಕಾಲದಿಂದಲೂ ವಿವಾಹದಲ್ಲಿ ವಯಸ್ಸಿನ ಅಂತರದ ಬಗ್ಗೆ ಚರ್ಚೆಗಳಿವೆ. ಗಂಡು ತಮ್ಮಿಗಿಂತ ಹಿರಿಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ, ಅಶುಭವೇ ಎಂಬ ಪ್ರಶ್ನೆಗೆ, ಯಾವುದೇ ಶಾಸ್ತ್ರಗಳಲ್ಲಿ ಇದಕ್ಕೆ ನಿರ್ಬಂಧವಿಲ್ಲ. ವಸಿಷ್ಠ-ಅರುಂಧತಿ, ಅರ್ಜುನ-ಉಲೂಪಿ, ಶ್ರೀಕೃಷ್ಣ-ಸತ್ಯಭಾಮಾ ಸೇರಿದಂತೆ ಪುರಾಣ ಮತ್ತು ಆಧುನಿಕ ಕಾಲದ ಅನೇಕ ಉದಾಹರಣೆಗಳು ಇದಕ್ಕೆ ಪೂರಕವಾಗಿವೆ ಎಂದು ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.
- Akshatha Vorkady
- Updated on: May 8, 2026
- 10:25 am
Swapna Shastra: ಕನಸಿನಲ್ಲಿ ಕೂದಲು ಉದುರಿದಂತೆ ಕಂಡರೆ ಏನರ್ಥ? ಇದು ಅಶುಭವೇ?
ಸ್ವಪ್ನ ಶಾಸ್ತ್ರದ ಪ್ರಕಾರ, ಕೂದಲು ಉದುರುವ ಕನಸುಗಳು ಕೇವಲ ಕಾಕತಾಳೀಯವಲ್ಲ. ಅವು ವ್ಯಕ್ತಿಯ ಸೌಂದರ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯ ನಷ್ಟ, ಅಸುರಕ್ಷತೆ, ಮಾನಸಿಕ ಒತ್ತಡ ಅಥವಾ ಆರ್ಥಿಕ ನಷ್ಟದ ಸಂಕೇತವಾಗಿರಬಹುದು. ಹಠಾತ್ ಉದುರುವಿಕೆ ಅಶುಭ, ಕ್ರಮೇಣ ಉದುರುವಿಕೆ ದೀರ್ಘಕಾಲದ ಆತಂಕವನ್ನು ಸೂಚಿಸಬಹುದು. ಆದರೆ, ಕೆಲವೊಮ್ಮೆ ಇದು ಹೊಸ ಆರಂಭ ಅಥವಾ ಹಳೆಯ ಸಮಸ್ಯೆಗಳಿಂದ ಹೊರಬರುವ ಧನಾತ್ಮಕ ಸೂಚನೆಯೂ ಆಗಿರುತ್ತದೆ. ಆರೋಗ್ಯದ ಕಡೆ ಗಮನ ಹರಿಸಲು ಇದು ಒಂದು ಮುನ್ಸೂಚನೆ.
- Akshatha Vorkady
- Updated on: May 7, 2026
- 6:31 pm