ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Video: ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ; ಹೃದಯಸ್ಪರ್ಶಿ ವೀಡಿಯೊ ವೈರಲ್
ಯೂಟ್ಯೂಬ್ ಆದಾಯದಿಂದ ತಂದೆಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿದೆ. ಮಗಳು ಉಂಗುರ ತೊಡಿಸುತ್ತಿದ್ದಂತೆ ತಂದೆ ಭಾವುಕರಾಗಿ ಆಕೆಯ ಕಾಲಿಗೆ ನಮಸ್ಕರಿಸಿದ ಕ್ಷಣ ನೋಡುಗರ ಕಣ್ಣಲ್ಲಿ ನೀರು ತರಿಸಿದೆ. ಮಗಳು-ತಂದೆಯ ಪ್ರೀತಿ, ಕೃತಜ್ಞತೆ ಮತ್ತು ಬಾಂಧವ್ಯದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.
- Akshatha Vorkady
- Updated on: May 29, 2026
- 3:20 pm
BSNL Recruitment 2026: ಬಿಎಸ್ಎನ್ಎಲ್ನಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ಭರ್ಜರಿ ನೇಮಕಾತಿ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 100 ಜೂನಿಯರ್ ಟೆಲಿಕಾಂ ಅಧಿಕಾರಿ (JTO) ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಎಂಜಿನಿಯರಿಂಗ್ ಪದವೀಧರರು, ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಬಹುದು. ಜೂನ್ 4 ರಿಂದ ಜುಲೈ 3ರವರೆಗೆ ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ವೇತನದ ಸಂಪೂರ್ಣ ಮಾಹಿತಿ ಲಭ್ಯವಿದೆ. ಕೂಡಲೇ ಅರ್ಜಿ ಸಲ್ಲಿಸಿ.
- Akshatha Vorkady
- Updated on: May 29, 2026
- 2:25 pm
Tirumala: ತಿರುಮಲದಲ್ಲಿ ‘ಕಪ್ಪು ಬಂಗಾರ’ದ ಹೊಸ ದಾಖಲೆ: ಕೇವಲ ಒಂದೇ ತಿಂಗಳಲ್ಲಿ ಮುಡಿ ಕೊಟ್ಟ ಭಕ್ತರೆಷ್ಟು ಗೊತ್ತಾ?
ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸುವ ಭಕ್ತರ ಮುಡಿ ಕಾಣಿಕೆ ಹೊಸ ದಾಖಲೆ ಬರೆದಿದೆ. ಮೇ ತಿಂಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಸಮರ್ಪಿಸಿದ್ದು, ಮೇ 23ರಂದು ಒಂದೇ ದಿನ 57,580 ಮಂದಿ ಮುಡಿ ಕೊಟ್ಟಿದ್ದಾರೆ. ಟಿಟಿಡಿ (TTD) ವಿಸ್ತಾರವಾದ ಕಲ್ಯಾಣಕಟ್ಟೆಗಳನ್ನು ಒದಗಿಸಿದ್ದು, ತಿರುಪತಿ ತಿಮ್ಮಪ್ಪನಿಗೆ ಭಕ್ತರು ನೀಡುವ ಈ ವಿಶಿಷ್ಟ ಕಾಣಿಕೆಯೇ ದೇವಸ್ಥಾನದ ಬೊಕ್ಕಸ ತುಂಬಿಸುವ ಪ್ರಮುಖ 'ಕಪ್ಪು ಬಂಗಾರ'ವಾಗಿ ಮಾರ್ಪಟ್ಟಿದೆ.
- Akshatha Vorkady
- Updated on: May 29, 2026
- 1:04 pm
Job Opportunity: ಮಂಗಳೂರಿನಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶ; ನಾಳೆ ನೇರ ಸಂದರ್ಶನ!
ಮಂಗಳೂರಿನಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದೊಂದಿಗೆ ಮೇ 30ರಂದು VRN ಇನ್ನೋಟೆಕ್ ಕಂಪನಿಯಲ್ಲಿ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಮತ್ತು ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ತಮ್ಮ ಬಯೋಡೇಟಾದೊಂದಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಹಾಜರಾಗಬಹುದು. ಇದು ಸಂಪೂರ್ಣ ಉಚಿತ.
- Akshatha Vorkady
- Updated on: May 29, 2026
- 12:09 pm
RailTel Recruitment 2026: ಬೆಂಗಳೂರಿನಲ್ಲಿ ಬಂಪರ್ ಉದ್ಯೋಗವಕಾಶ; ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಕೇಂದ್ರ ಸರ್ಕಾರದ ರೈಲ್ಟೆಲ್ ಸಂಸ್ಥೆಯು KSWAN ಯೋಜನೆಗಾಗಿ ಬೆಂಗಳೂರಿನಲ್ಲಿ ತಾಂತ್ರಿಕ ತಜ್ಞರನ್ನು ನೇಮಕ ಮಾಡುತ್ತಿದೆ. ಪ್ರಾಜೆಕ್ಟ್ ಡೈರೆಕ್ಟರ್, ಮ್ಯಾನೇಜರ್, ನೆಟ್ವರ್ಕ್ ಇಂಜಿನಿಯರ್ ಸೇರಿದಂತೆ 22 ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ಲಭ್ಯವಿವೆ. ಆಕರ್ಷಕ ವೇತನದೊಂದಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ. ಆಸಕ್ತರು ಮೇ 30ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈಲ್ಟೆಲ್ ವೆಬ್ಸೈಟ್ಗೆ ಭೇಟಿ ನೀಡಿ.
- Akshatha Vorkady
- Updated on: May 29, 2026
- 10:41 am
Lakshmi Pooja: ಶುಕ್ರವಾರ ಮನೆಗೆ ಇವುಗಳನ್ನು ತಂದರೆ ಸಂಪತ್ತು ಮತ್ತು ಶಾಂತಿ ನಿಮ್ಮದಾಗುವುದು ಪಕ್ಕಾ!
ಹಿಂದೂ ಧರ್ಮದಲ್ಲಿ ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿತ ದಿನ. ಈ ದಿನ ಕೆಲವು ಶುಭ ವಸ್ತುಗಳನ್ನು ಮನೆಗೆ ತರುವುದರಿಂದ ಸಂಪತ್ತು, ಅದೃಷ್ಟ ಮತ್ತು ನೆಮ್ಮದಿ ವೃದ್ಧಿಸುತ್ತದೆ. ತಾವರೆ, ಬೆಳ್ಳಿ, ಬಿಳಿ ಉಡುಪುಗಳು, ಸ್ವಚ್ಛತೆ ಮತ್ತು ದಾನ ಧರ್ಮಗಳು ಲಕ್ಷ್ಮಿ ಕೃಪೆಗೆ ಪಾತ್ರವಾಗಲು ಸಹಕಾರಿ. ಆರ್ಥಿಕ ಅಡಚಣೆ ನಿವಾರಿಸಿ, ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಈ ಪರಿಹಾರಗಳನ್ನು ಪಾಲಿಸಿ.
- Akshatha Vorkady
- Updated on: May 29, 2026
- 8:58 am
Guru Sanchara 2026: ಗುರು ಸಂಚಾರ ಮೀನ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಮೀನ ರಾಶಿಯವರಿಗೆ 2026ರ ಗುರು ಸಂಚಾರವು ಶುಭ ಫಲಗಳನ್ನು ತರಲಿದೆ. ಜೂನ್ 2ರಿಂದ ಆರಂಭವಾಗುವ ಈ ಗುರುಬಲದಿಂದ ಆರ್ಥಿಕ ಅಭಿವೃದ್ಧಿ, ವ್ಯವಹಾರದಲ್ಲಿ ಯಶಸ್ಸು, ಸಾಲ ವಿಮೋಚನೆ ಹಾಗೂ ಮನಃಶಾಂತಿ ದೊರೆಯಲಿದೆ. ಸಾಡೇಸಾತಿ ಪ್ರಭಾವವೂ ಕಡಿಮೆಯಾಗಲಿದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಕಾಲ.
- Akshatha Vorkady
- Updated on: May 29, 2026
- 8:42 am
Lakshmi Puja: ಶುಕ್ರವಾರ ಹೀಗೆ ಮಾಡಿ; ಲಕ್ಷ್ಮಿ ದೇವಿಯ ಕೃಪೆಯಿಂದ ಐಶ್ವರ್ಯ ಮತ್ತು ಸಮೃದ್ಧಿ ನಿಮ್ಮದಾಗುವುದು ಖಚಿತ!
ಹಿಂದೂ ಧರ್ಮದಲ್ಲಿ ಶುಕ್ರವಾರವು ಲಕ್ಷ್ಮಿ ದೇವಿಗೆ ಪ್ರಿಯವಾದ ದಿನ. ಈ ದಿನ ಭಕ್ತಿಯಿಂದ ಆರಾಧಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ. ಮನೆಯ ಸ್ವಚ್ಛತೆ, ಪೂಜಾ ಕೋಣೆಯಲ್ಲಿ ಕವಡೆ, ಕಾಮಧೇನು ಇಡುವುದು, ಸಂಜೆ ದೀಪಾರಾಧನೆ, ಸ್ತೋತ್ರ ಪಠಣ ಪ್ರಮುಖ ವಿಧಾನಗಳು. ಈ ಸರಳ ನಿಯಮ ಪಾಲಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಪಡೆದು ಅಷ್ಟೈಶ್ವರ್ಯ ನಿಮ್ಮದಾಗುವುದು ಖಂಡಿತ.
- Akshatha Vorkady
- Updated on: May 29, 2026
- 8:24 am
Vasthu Tips: ಹಳೆಯ ಅಥವಾ ಹರಿದ ಬಟ್ಟೆ ಮನೆ ಒರೆಸಲು ಬಳಸಬಾರದು ಯಾಕೆ ಗೊತ್ತಾ?
ಡಾ. ಬಸವರಾಜ್ ಗುರೂಜಿ ಅವರ ಪ್ರಕಾರ, ಹಳೆಯ ಮತ್ತು ಹರಿದ ಬಟ್ಟೆಗಳನ್ನು ಮನೆ ಒರೆಸಲು ಬಳಸುವುದರಿಂದ ನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಇದು ಮನೆಯಲ್ಲಿ ಅಶಾಂತಿ, ಕೌಟುಂಬಿಕ ಕಲಹಗಳು, ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಚಂದ್ರ ಮತ್ತು ಶುಕ್ರ ಗ್ರಹಗಳ ಪ್ರಭಾವಕ್ಕೆ ಧಕ್ಕೆ ಉಂಟಾಗಿ, ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗುತ್ತದೆ. ಆದ್ದರಿಂದ, ಸ್ವಚ್ಛತೆಗೆ ಹೊಸ ಬಟ್ಟೆಗಳನ್ನು ಬಳಸುವುದು ಸೂಕ್ತ.
- Akshatha Vorkady
- Updated on: May 29, 2026
- 7:57 am
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಇಡಿ ಇಲಾಖೆಯಲ್ಲಿ ಹುದ್ದೆಗಳ ಭಾರಿ ಹೆಚ್ಚಳ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ED)ವನ್ನು ಬಲಪಡಿಸಲು ನಿರ್ಧರಿಸಿದೆ. ಆರ್ಥಿಕ ಅಪರಾಧಗಳು ಮತ್ತು ಹಣ ವರ್ಗಾವಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಡಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ತನಿಖೆ, ಕಾನೂನು ಮತ್ತು ಭದ್ರತಾ ವಿಭಾಗಗಳಲ್ಲಿ ಹೊಸ ನೇಮಕಾತಿಗಳಿಗೆ ಅನುಮೋದನೆ ನೀಡಲಾಗಿದೆ. ಸಹಾಯಕ ಜಾರಿ ಅಧಿಕಾರಿ (AEO) ಹುದ್ದೆಗಳನ್ನು SSC CGL ಮೂಲಕ ಭರ್ತಿ ಮಾಡಲಾಗುತ್ತದೆ. ಈ ಕ್ರಮವು ಪ್ರಕರಣಗಳ ತ್ವರಿತ ತನಿಖೆಗೆ ನೆರವಾಗಲಿದೆ.
- Akshatha Vorkady
- Updated on: May 28, 2026
- 4:37 pm
IAS Vandana Meena: ಕೋಚಿಂಗ್ ಸೆಂಟರ್ ಮುಖವೇ ನೋಡದೇ, ಕೇವಲ ಯೂಟ್ಯೂಬ್ ನೋಡಿ ಓದಿದ ಹಳ್ಳಿ ಹುಡುಗಿ ಇಂದು IAS ಆಫೀಸರ್!
ಐಎಎಸ್ ವಂದನಾ ಮೀನಾ ದುಬಾರಿ ಕೋಚಿಂಗ್ ಇಲ್ಲದೆ, ಕೇವಲ ಸ್ವಯಂ ಅಧ್ಯಯನ ಮತ್ತು ಯೂಟ್ಯೂಬ್ ನೆರವಿನಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ 330ನೇ ರ್ಯಾಂಕ್ ಪಡೆದ ಸಾಧಕಿ. ರಾಜಸ್ಥಾನದ ಹಳ್ಳಿಯಿಂದ ಬಂದು ಸೀಮಿತ ಸಂಪನ್ಮೂಲಗಳ ನಡುವೆಯೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಿದ ಇವರ ಕಥೆ, ಲಕ್ಷಾಂತರ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.
- Akshatha Vorkady
- Updated on: May 28, 2026
- 3:35 pm
Viral Post: ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿ; ವೈರಲ್ ಆಯ್ತು ಪೋಸ್ಟ್
ನೋಯ್ಡಾದಿಂದ ಇತ್ತೀಚೆಗಷ್ಟೇ ಬೆಂಗಳೂರಿಗೆ ಶಿಫ್ಟ್ ಆದ ವ್ಯಕ್ತಿಗೆ ಇಸ್ತ್ರಿ ದರ ಅಚ್ಚರಿ ಮೂಡಿಸಿದೆ. ನೋಯ್ಡಾದಲ್ಲಿ 5 ರೂ. ಇದ್ದ ಇಸ್ತ್ರಿ ಇಲ್ಲಿ 20 ರೂ.. ಈ ಬಗ್ಗೆ ಸಜಿತ್ ಪೈ ತಮ್ಮ ಅನುಭವವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಕಲ್ಲಿದ್ದಲಿನಿಂದ LPG ಆಧಾರಿತ ಇಸ್ತ್ರಿಗೆ ಬದಲಾವಣೆ, ಗ್ಯಾಸ್ ಬೆಲೆ ಏರಿಕೆ, ಕಾರ್ಮಿಕ ವೆಚ್ಚ ಮತ್ತು ನಗರದ ಜೀವನ ವೆಚ್ಚ ಹೆಚ್ಚಳವೇ ಇದಕ್ಕೆ ಮುಖ್ಯ ಕಾರಣ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
- Akshatha Vorkady
- Updated on: May 28, 2026
- 1:28 pm