ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
CJP Supporters Celebration: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ದೆಹಲಿಯ ಜಂತರ್ಮಂತರ್ನಲ್ಲಿ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ಸ್ಥಳದಲ್ಲಿ ಸಿಜೆಪಿ ಕಾರ್ಯಕರ್ತರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಸಂಭ್ರಮಾಚರಣೆ ನಡೆಸಿದರು. ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸೇರಿ ಹಲವರು ಈ ವೇಳೆ ಘೋಷಣೆಗಳನ್ನು ಕೂಗಿದರು.
- Akshatha Vorkady
- Updated on: Jul 25, 2026
- 4:25 pm
Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್ನೆಟ್ ಮೀಮ್ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ
ದೇಶಾದ್ಯಂತ ತೀವ್ರಗೊಂಡ ಯುವಜನರ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆ ಹಾಗೂ ಪರೀಕ್ಷಾ ಅಕ್ರಮಗಳ ಆಕ್ರೋಶದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆರಂಭದಲ್ಲಿ ಇಂಟರ್ನೆಟ್ನಲ್ಲಿ ವಿಡಂಬನಾತ್ಮಕವಾಗಿ ಹುಟ್ಟಿಕೊಂಡು, ಬಳಿಕ ಕೋಟ್ಯಂತರ ಯುವಕರ ಧ್ವನಿಯಾದ ಈ 'ಕಾಕ್ರೋಚ್ ಜನತಾ ಪಾರ್ಟಿ' ಉಗಮ ಮತ್ತು ಹಿನ್ನೆಲೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jul 25, 2026
- 4:09 pm
Apply Now: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; 56 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ 56 ಜವಾನ (Peon) ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು shivamogga.dcourts.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯು ಜುಲೈ 23 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 24 ರಾತ್ರಿ 11:59 ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಪರಿಶೀಲಿಸಿ.
- Akshatha Vorkady
- Updated on: Jul 25, 2026
- 5:22 pm
Video: ನೀಟ್ ಪರೀಕ್ಷಾ ಅಕ್ರಮ; ‘ಹಕ್ಕುಗಳಿಗಾಗಿ ಹೋರಾಡಿ, ಆದರೆ ವಿವೇಚನೆ ಕಳೆದುಕೊಳ್ಳಬೇಡಿ’ – ರವಿಶಂಕರ್ ಗುರೂಜಿ
ನೀಟ್-ಯುಜಿ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾತನಾಡಿದ್ದಾರೆ. ಪ್ರತಿಭಟನೆ ಹಕ್ಕು ಸಮಂಜಸವಾದರೂ, ಆವೇಶದಲ್ಲಿ ವಿವೇಚನೆ ಕಳೆದುಕೊಳ್ಳಬಾರದೆಂದಿದ್ದಾರೆ. ಅಸಾಮಾಜಿಕ ಶಕ್ತಿಗಳ ದುರುಪಯೋಗದ ಬಗ್ಗೆ ಎಚ್ಚರಿಸಿರುವ ಅವರು, ಯಾವುದೇ ಸಮಸ್ಯೆಗೂ ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ಯುವಜನತೆಗೆ ಸಂಯಮದಿಂದ ವರ್ತಿಸಲು ಮನವಿ ಮಾಡಿದ್ದಾರೆ.
- Akshatha Vorkady
- Updated on: Jul 25, 2026
- 12:19 pm
Video: ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ 400 ಮಂದಿ ಭಾಗಿಯಾಗಿರೋದು ಪತ್ತೆ!
ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಪ್ರತಿಭಟನೆಗಳಲ್ಲಿ 400 ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರುವುದು ಪತ್ತೆಯಾಗಿದೆ. ಪೊಲೀಸರು ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಿ ಇವರನ್ನು ಪತ್ತೆ ಹಚ್ಚುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಜುಲೈ 27ರಂದು ವಿಚಾರಣೆ ನಡೆಯಲಿದೆ. ಸುರಕ್ಷತಾ ಕಾರಣಗಳಿಗಾಗಿ 18 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
- Akshatha Vorkady
- Updated on: Jul 25, 2026
- 11:20 am
Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದ ಆರು ದಿನಗಳ ಕಾಲ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯು ಶನಿವಾರದಂದು ಅಧಿಕೃತವಾಗಿ ಪುನರಾರಂಭಗೊಂಡಿದೆ. ಹವಾಮಾನ ಸುಧಾರಿಸಿ, ರಸ್ತೆ ತೆರವುಗೊಂಡ ನಂತರ ಹೊಸ ಯಾತ್ರಿಕರ ತಂಡಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಸದ್ಯ ಬಾಲ್ಟಾಲ್ ಮಾರ್ಗ ಮಾತ್ರ ತೆರೆದಿದ್ದು, 4 ಲಕ್ಷಕ್ಕೂ ಹೆಚ್ಚು ಭಕ್ತರು ಈಗಾಗಲೇ ಹಿಮಲಿಂಗ ದರ್ಶನ ಪಡೆದಿದ್ದಾರೆ. ಭದ್ರತಾ ಪಡೆಗಳ ಬೆಂಗಾವಲಿನಲ್ಲಿ ಯಾತ್ರೆ ಸುಗಮವಾಗಿ ಸಾಗುತ್ತಿದೆ.
- Akshatha Vorkady
- Updated on: Jul 25, 2026
- 10:27 am
Sade Sati: ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದೇ? ಪದ್ಮ ಪುರಾಣದ ರಹಸ್ಯ ಮತ್ತು ಸಾಡೇ ಸಾತಿಯ ನಿಯಮ ಇಲ್ಲಿದೆ
ಹಿಂದೂ ಧರ್ಮದಲ್ಲಿ ಶನಿವಾರ ಶನಿ ದೇವರಿಗೆ ಪ್ರಿಯವಾದ ದಿನ. ಕರ್ಮಫಲ ನೀಡುವ 'ನ್ಯಾಯಾಧಿಪತಿ' ಶನಿ ದೇವನ ಪ್ರಭಾವವು ಸಾಡೇ ಸಾತಿ, ಧೈಯಾದಲ್ಲಿ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಅಶುಭಕರ. ಪದ್ಮ ಪುರಾಣದ ಪ್ರಕಾರ, ಇದು ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಶನಿ ದೋಷ ನಿವಾರಣೆಗೆ ಎಣ್ಣೆ ದಾನ ಉತ್ತಮ ಪರಿಹಾರ.
- Akshatha Vorkady
- Updated on: Jul 25, 2026
- 9:18 am
Chaturmasa: ಚಾತುರ್ಮಾಸದ ವೈಜ್ಞಾನಿಕ ರಹಸ್ಯ;ನಾಲ್ಕು ತಿಂಗಳ ಶಿಸ್ತು ನಮ್ಮ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ?
ಚಾತುರ್ಮಾಸ್ಯವು ಸನಾತನ ಧರ್ಮದಲ್ಲಿ ಆಷಾಢದಿಂದ ಕಾರ್ತಿಕದವರೆಗೆ ಬರುವ ನಾಲ್ಕು ತಿಂಗಳ ಆಧ್ಯಾತ್ಮಿಕ ಅವಧಿ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಿಗೆ ನಮ್ಮನ್ನು ನಾವು ಆಂತರಿಕವಾಗಿ ಪರಿವರ್ತಿಸಿಕೊಳ್ಳುವ ಮಹತ್ತರ ಅವಕಾಶ. ಬಾಹ್ಯ ಲೌಕಿಕ ಚಟುವಟಿಕೆಗಳಿಗೆ ವಿರಾಮ ನೀಡಿ, ಆತ್ಮಾವಲೋಕನ, ಶಿಸ್ತು ಮತ್ತು ಸಂಯಮ ಬೆಳೆಸುವುದರಿಂದ ಮೆದುಳಿನಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿ, ನಮ್ಮ ನಿರ್ಧಾರಗಳು ಸುಧಾರಿಸಿ ಹಣೆಬರಹವನ್ನೇ ಬದಲಾಯಿಸುವ ಶಕ್ತಿ ಇದಕ್ಕಿದೆ.
- Akshatha Vorkady
- Updated on: Jul 25, 2026
- 9:00 am
Vastu Tips: ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಡಬಹುದೇ? ಶಾಸ್ತ್ರಗಳು ಹೇಳುವುದೇನು?
ತುಳಸಿ ಗಿಡ ಹಿಂದೂ ಧರ್ಮದಲ್ಲಿ ಪವಿತ್ರವಾಗಿದ್ದು, ಈ ಗಿಡದಲ್ಲಿ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ. ವಾಸ್ತು ಪ್ರಕಾರ ಇದು ಮನೆಗೆ ಸಕಾರಾತ್ಮಕ ಶಕ್ತಿ, ಸಂಪತ್ತು ತರುತ್ತದೆ. ಒಂದಕ್ಕಿಂತ ಹೆಚ್ಚು ಗಿಡಗಳನ್ನು (ಬೆಸ ಸಂಖ್ಯೆಯಲ್ಲಿ) ಇಡಬಹುದು. ಪೂರ್ವ ಅಥವಾ ಈಶಾನ್ಯ ದಿಕ್ಕು ಶ್ರೇಷ್ಠ. ಶುದ್ಧ ಸ್ಥಳದಲ್ಲಿಟ್ಟು, ಭಾನುವಾರ ಹೊರತುಪಡಿಸಿ ಪ್ರತಿದಿನ ನೀರು ಹಾಕಿ ಆರೈಕೆ ಮಾಡುವುದು ಶುಭ ಫಲ ನೀಡುತ್ತದೆ.
- Akshatha Vorkady
- Updated on: Jul 25, 2026
- 7:04 am
SBI Asha Scholarship 2026: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್; ಎಸ್ಬಿಐ ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
ಎಸ್ಬಿಐ ಫೌಂಡೇಶನ್ 2026 ರ ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಮಹತ್ತರ ಆರ್ಥಿಕ ನೆರವು ನೀಡುತ್ತದೆ. ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ 25,707 ವಿದ್ಯಾರ್ಥಿಗಳಿಗೆ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ, ವಿದೇಶದಲ್ಲಿ ಸ್ನಾತಕೋತ್ತರ ಪದವಿಗೂ 15 ಲಕ್ಷ ರೂ. ವರೆಗೆ ನೆರವು ಲಭ್ಯ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 04.
- Akshatha Vorkady
- Updated on: Jul 24, 2026
- 4:26 pm
Join Indian Army: ಭಾರತೀಯ ಸೇನೆಯಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ; B.Tech ಪದವೀಧರರಿಗೆ ಸುವರ್ಣಾವಕಾಶ
ಭಾರತೀಯ ಸೇನೆಯು ಎಂಜಿನಿಯರಿಂಗ್ ಪದವೀಧರರಿಗೆ (B.E/B.Tech) ಶಾರ್ಟ್ ಸರ್ವಿಸ್ ಕಮಿಷನ್ (SSC-Tech) ಮೂಲಕ ತಾಂತ್ರಿಕ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಲಿಖಿತ ಪರೀಕ್ಷೆ ಇಲ್ಲದೆ, ಎಂಜಿನಿಯರಿಂಗ್ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. 20-27 ವಯಸ್ಸಿನ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ದೇಶಸೇವೆಗೆ ಸೇರಲು ಇದು ಉತ್ತಮ ಅವಕಾಶ.
- Akshatha Vorkady
- Updated on: Jul 24, 2026
- 3:13 pm
Friday Donations: ಲಕ್ಷ್ಮಿ ಅನುಗ್ರಹಕ್ಕಾಗಿ ಶುಕ್ರವಾರ ಈ ವಸ್ತು ದಾನ ಮಾಡಿ; ಶಾಸ್ತ್ರೋಕ್ತ ನಿಯಮ ಇಲ್ಲಿದೆ
ಹಿಂದೂ ಸನಾತನ ಧರ್ಮದಲ್ಲಿ ಶುಕ್ರವಾರವು ಮಹಾಲಕ್ಷ್ಮಿಗೆ ಪ್ರಿಯವಾದ ದಿನ. ಈ ದಿನ ಮಾಡುವ ದಾನಕ್ಕೆ ವಿಶೇಷ ಮಹತ್ವವಿದೆ. ನಿರ್ಗತಿಕರಿಗೆ ಅಕ್ಕಿ, ಸಕ್ಕರೆ, ಬಿಳಿ ವಸ್ತುಗಳು ಹಾಗೂ ಉಪ್ಪು ದಾನ ಮಾಡುವುದರಿಂದ ಆರ್ಥಿಕ ಕಷ್ಟಗಳು ನಿವಾರಣೆಯಾಗಿ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದು ಶುಕ್ರ ದೋಷಗಳನ್ನು ನಿವಾರಿಸಿ ಸಂಪತ್ತು, ಸಮೃದ್ಧಿ ಹಾಗೂ ಮಾನಸಿಕ ಶಾಂತಿ ತರುತ್ತದೆ. ಶುಕ್ರವಾರದ ದಾನವು ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಸಹಕಾರಿ.
- Akshatha Vorkady
- Updated on: Jul 24, 2026
- 2:39 pm