AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಅಡುಗೆ ಮನೆಯಲ್ಲಿ ಈ ತಪ್ಪು ಮಾಡಲೇಬೇಡಿ; ಅನಾರೋಗ್ಯಕ್ಕೆ ಇದೇ ಮುಖ್ಯ ಕಾರಣ!

ಅಡುಗೆಯು ಜೀವಧಾರವಾಗಿದ್ದು, ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಉತ್ತರ ದಿಕ್ಕಿಗೆ ಇರಿಸುವುದು ಶ್ರೇಷ್ಠ. ಇದು ಸಂತೃಪ್ತಿ, ಶಕ್ತಿ ಮತ್ತು ಸಮೃದ್ಧಿಯನ್ನು ತರುತ್ತದೆ. ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಿಗೆ ಇಡುವುದನ್ನು ತಪ್ಪಿಸಿ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Vastu Tips: ಅಡುಗೆ ಮನೆಯಲ್ಲಿ ಈ ತಪ್ಪು ಮಾಡಲೇಬೇಡಿ; ಅನಾರೋಗ್ಯಕ್ಕೆ ಇದೇ ಮುಖ್ಯ ಕಾರಣ!
ವಾಸ್ತು ಶಾಸ್ತ್ರ
ಅಕ್ಷತಾ ವರ್ಕಾಡಿ
|

Updated on: Feb 27, 2026 | 10:26 AM

Share

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯ ವಿನ್ಯಾಸ, ಅದರಲ್ಲಿನ ವಸ್ತುಗಳ ಜೋಡಣೆ ಮತ್ತು ಅಡುಗೆ ಮಾಡುವ ದಿಕ್ಕು ಇವೆಲ್ಲವೂ ಪ್ರಾಮುಖ್ಯತೆಯನ್ನು ಹೊಂದಿವೆ. ಸಾಮಾನ್ಯವಾಗಿ, ಅಡುಗೆಮನೆಗಳನ್ನು ಆಗ್ನೇಯ (ಸೌತ್-ಈಸ್ಟ್) ಅಥವಾ ವಾಯುವ್ಯ (ನಾರ್ತ್-ವೆಸ್ಟ್) ದಿಕ್ಕಿನಲ್ಲಿ ನಿರ್ಮಿಸಲಾಗುತ್ತದೆ. ಅಡುಗೆಮನೆಯ ಸ್ಥಳ ಯಾವುದೇ ಆಗಿದ್ದರೂ, ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದು ಶುಭಕರ. ಪೂರ್ವ ದಿಕ್ಕಿಗೆ ಇಂದ್ರ ಅಧಿಪತಿಯಾಗಿರುತ್ತಾನೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಯಾವ ದಿಕ್ಕಿಗೆ ಇರಿಸಬೇಕು ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ. ಶಾಸ್ತ್ರಗಳ ಪ್ರಕಾರ, ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿ ಮುಗಿದ ನಂತರ, ಆಹಾರವನ್ನು ಉತ್ತರದ ಕಡೆ, ಅಂದರೆ ನಮ್ಮ ಎಡಭಾಗಕ್ಕೆ ಇಳಿಸುವುದು ಸರ್ವಶ್ರೇಷ್ಠ. ಉತ್ತರ ದಿಕ್ಕು ಕುಬೇರನ ಅಧಿಪತ್ಯದಲ್ಲಿದೆ ಮತ್ತು ಈ ದಿಕ್ಕಿಗೆ ಆಹಾರವನ್ನು ಇರಿಸುವುದರಿಂದ ಸಂತೃಪ್ತಿ, ಆಹಾರಕ್ಕೆ ಹೆಚ್ಚು ಶಕ್ತಿ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಇದು ನೈವೇದ್ಯವಾಗಿ ಅರ್ಪಿತವಾಗಿ, ನಂತರ ನಾವು ಸೇವಿಸಬಹುದು.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಆದರೆ, ಆಹಾರವನ್ನು ದಕ್ಷಿಣ ದಿಕ್ಕಿಗೆ ಇರಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ದಕ್ಷಿಣ ದಿಕ್ಕು ಯಮನ ದಿಕ್ಕು ಮತ್ತು ಪಿತೃಗಳಿಗೆ ಸಂಬಂಧಿಸಿದ್ದು. ಈ ದಿಕ್ಕಿಗೆ ಆಹಾರವನ್ನು ಇರಿಸಿದರೆ ಅದು ಪಿತೃಗಳಿಗೆ ಅರ್ಪಿತವಾಗುತ್ತದೆ. ಇದರಿಂದ ಅನಾರೋಗ್ಯ, ಮಾನಸಿಕ ನೆಮ್ಮದಿ ಕೊರತೆ, ಮತ್ತು ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ. ಪಿತೃಗಳಿಗೆ ಪಿಂಡ ಹಾಕುವಾಗ ಅಥವಾ ಆಹಾರ ಅರ್ಪಿಸುವಾಗ ದಕ್ಷಿಣ ದಿಕ್ಕಿನ ಕಡೆಗೆ ನೀಡುವುದು ಇದೇ ಕಾರಣಕ್ಕಾಗಿಯೇ. ಇನ್ನು ಪಶ್ಚಿಮ ದಿಕ್ಕಿಗೂ (ಶನಿ ಮತ್ತು ವರುಣರ ದಿಕ್ಕು) ಆಹಾರವನ್ನು ಇಳಿಸುವುದು ಶುಭಕರವಲ್ಲ ಎಂದು ಹೇಳಲಾಗುತ್ತದೆ. ಅಡುಗೆ ಮನೆಯು ಮಧ್ಯಭಾಗದಲ್ಲಿ ಇದ್ದಾಗ ಪೂರ್ವಕ್ಕೆ ಇಳಿಸಲು ಸಾಧ್ಯವಿಲ್ಲದಿದ್ದರೆ, ಉತ್ತರ ದಿಕ್ಕೇ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮುಂದೆ ಕಾಂಗ್ರೆಸ್ ಸರ್ಕಾರ ಬರೋದು ಕಷ್ಟ! ಶಾಸಕ ಬಾಲಕೃಷ್ಣ ಶಾಕಿಂಗ್ ಮಾತು
ಮುಂದೆ ಕಾಂಗ್ರೆಸ್ ಸರ್ಕಾರ ಬರೋದು ಕಷ್ಟ! ಶಾಸಕ ಬಾಲಕೃಷ್ಣ ಶಾಕಿಂಗ್ ಮಾತು
235 ಕೋಟಿ ರೂ. ನಗದು ಇಟ್ಟು, ಸಿಬ್ಬಂದಿಗೆ ಎಷ್ಟು ಬೇಕೋ ತಗೊಳಿ ಎಂದ ಮಾಲೀಕ
235 ಕೋಟಿ ರೂ. ನಗದು ಇಟ್ಟು, ಸಿಬ್ಬಂದಿಗೆ ಎಷ್ಟು ಬೇಕೋ ತಗೊಳಿ ಎಂದ ಮಾಲೀಕ
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್