ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
Prasada in Hinduism: ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ? ಇಲ್ಲಿದೆ ಭಗವದ್ಗೀತೆ ಸಾರುವ ಅಸಲಿ ಮಹತ್ವ!
ಹಿಂದೂ ಧರ್ಮದಲ್ಲಿ ಪೂಜೆಯ ನಂತರ ದೇವರಿಗೆ ಅರ್ಪಿಸಿದ ನೈವೇದ್ಯವೇ 'ಪ್ರಸಾದ'. ಇದು ದೇವರ ಆಶೀರ್ವಾದವಾಗಿ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ. ಪ್ರಸಾದ ಸ್ವೀಕರಿಸುವುದರಿಂದ ಪಾಪ ನಿವಾರಣೆಯಾಗಿ, ಉದಾತ್ತ ಗುಣ ಬೆಳೆಯುತ್ತದೆ. ಭಗವದ್ಗೀತೆಯು ಪ್ರಸಾದದ ಮಹತ್ವವನ್ನು ವಿವರಿಸಿದೆ. ಇದನ್ನು ಸೇವಿಸುವುದು ಕೇವಲ ಆಹಾರ ಸೇವನೆಯಲ್ಲ, ಆಧ್ಯಾತ್ಮಿಕ ಅನುಭವ.
- Akshatha Vorkady
- Updated on: Jul 15, 2026
- 11:32 am
Raksha Bandhan 2026: ರಕ್ಷಾ ಬಂಧನದಂದು ‘ಭದ್ರ ಕಾಲ’ದಲ್ಲಿ ಏಕೆ ರಾಖಿ ಕಟ್ಟಬಾರದು? ಇಲ್ಲಿದೆ ಪುರಾಣ ಕಥೆ
ರಕ್ಷಾ ಬಂಧನದಲ್ಲಿ 'ಭದ್ರ ಕಾಲ'ಕ್ಕೆ ವಿಶೇಷ ಗಮನ ನೀಡಬೇಕು. ಸನಾತನ ಧರ್ಮದಲ್ಲಿ ಅಶುಭವೆಂದು ಪರಿಗಣಿಸಲಾಗುವ ಭದ್ರ ಕಾಲದಲ್ಲಿ ರಾಖಿ ಕಟ್ಟುವುದನ್ನು ತಪ್ಪಿಸಬೇಕು. ಶೂರ್ಪನಖಿ ರಾವಣನಿಗೆ ಭದ್ರ ಕಾಲದಲ್ಲಿ ರಾಖಿ ಕಟ್ಟಿದ ಕಥೆ, ಭದ್ರನ ಪುರಾಣ ಹಿನ್ನೆಲೆ ಮತ್ತು ಶುಭ ಮುಹೂರ್ತದ ವಿವರ ಇಲ್ಲಿದೆ. ಈ ವರ್ಷ, ರಕ್ಷಾ ಬಂಧನದ ಯಾವಾಗ ಎಂಬುದನ್ನೂ ಕೂಡ ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jul 15, 2026
- 10:25 am
Traditional Beliefs: ಕೈಯಿಂದ ಕೈಗೆ ಮೆಣಸಿನಕಾಯಿ ನೀಡಬಾರದು ಏಕೆ? ಅಸಲಿ ಸತ್ಯ ಇಲ್ಲಿದೆ!
ಮೆಣಸಿನಕಾಯಿಯನ್ನು ನೇರವಾಗಿ ಕೈಗೆ ಕೊಡಬಾರದು ಎಂಬುದು ಭಾರತೀಯರ ನಂಬಿಕೆ. ಇದು ಜಗಳ ತಪ್ಪಿಸಲು ಎಂದು ನಂಬಲಾಗಿದ್ದರೂ, ಜ್ಯೋತಿಷಿ ಚಂದ್ರೇಶ್ ಶರ್ಮಾ ಪ್ರಕಾರ, ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಮೆಣಸಿನಕಾಯಿಯ ಖಾರ ಅಂಶವು (Capsaicin) ಚರ್ಮ ಮತ್ತು ಕಣ್ಣುಗಳಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಆಕಸ್ಮಿಕ ಅಸ್ವಸ್ಥತೆ ತಪ್ಪಿಸಲು ಹಿರಿಯರು ಈ ನಿಯಮ ರೂಪಿಸಿದ್ದಾರೆ. ಸಂಬಂಧಗಳ ರಕ್ಷಣೆಗೂ ಇದು ಪೂರಕ.
- Akshatha Vorkady
- Updated on: Jul 15, 2026
- 9:40 am
Fire Dreams Meaning: ಕನಸಿನಲ್ಲಿ ಪದೇ ಪದೇ ಉರಿಯುವ ಬೆಂಕಿ ಕಾಣುತ್ತಿದೆಯೇ? ಇದರ ಅರ್ಥವೇನು ಗೊತ್ತಾ?
ಕನಸಿನಲ್ಲಿ ಬೆಂಕಿ ಪದೇ ಪದೇ ಕಂಡರೆ ಹೆದರಬೇಕಾಗಿಲ್ಲ. ಜ್ಯೋತಿಷ್ಯದ ಪ್ರಕಾರ, ಇದು ನಿಮ್ಮ ಭವಿಷ್ಯದಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆಗಳನ್ನು ಸೂಚಿಸುತ್ತದೆ. ಮಂಗಳ ಮತ್ತು ಸೂರ್ಯ ಗ್ರಹಗಳ ಪ್ರಭಾವದಿಂದ ಆಂತರಿಕ ಶಕ್ತಿ, ಆತ್ಮವಿಶ್ವಾಸ, ಹೊಸ ಆರಂಭ ಮತ್ತು ನಾಯಕತ್ವ ಗುಣಗಳು ವೃದ್ಧಿಸುತ್ತವೆ. ನಿಮ್ಮ ಜೀವನದಲ್ಲಿ ಮಹತ್ತರ ಪ್ರಗತಿಗೆ ಇದು ಶುಭ ಸಂಕೇತ.
- Akshatha Vorkady
- Updated on: Jul 15, 2026
- 8:50 am
Yogini Dasha: ಯೋಗಿನಿ ದಶಾ ಎಂದರೇನು? ಯೋಗಿನಿ ಹಂತವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಯೋಗಿನಿ ದಶಾ ವ್ಯವಸ್ಥೆಯು ಚಂದ್ರನ ಚಲನೆಯ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಊಹಿಸುವ ವೈದಿಕ ಜ್ಯೋತಿಷ್ಯದ ಪ್ರಬಲ ಸಾಧನವಾಗಿದೆ. ಇದು ಜನನ ನಕ್ಷತ್ರವನ್ನು ಆಧರಿಸಿ ಜೀವನದ ತಿರುವುಗಳು, ಯಶಸ್ಸು, ಸವಾಲುಗಳನ್ನು ನಿರ್ಧರಿಸುತ್ತದೆ. ದುರ್ಬಲ ಗ್ರಹಗಳಿದ್ದಾಗ ಸಮಸ್ಯೆಗಳು ಎದುರಾಗಬಹುದು. ಮದುವೆ, ಉದ್ಯೋಗ, ವ್ಯಾಪಾರ ಲಾಭಗಳ ಸಮಯವನ್ನು ತಿಳಿಯಲು ಇದು ಅತ್ಯಂತ ಸಹಕಾರಿ.
- Akshatha Vorkady
- Updated on: Jul 15, 2026
- 7:22 am
Teacher Recruitment 2026: ಕರ್ನಾಟಕ ವಸತಿ ಶಾಲೆಗಳಲ್ಲಿ 767 ಶಿಕ್ಷಕರ ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಪ್ರಕಟ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) KREIS ವಸತಿ ಶಾಲೆಗಳಲ್ಲಿ 767 ಗ್ರೂಪ್-ಸಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರಿಗೆ ಅವಕಾಶವಿದೆ. ಮಾಸಿಕ ಆಕರ್ಷಕ ವೇತನ ಶ್ರೇಣಿ ಲಭ್ಯವಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, KEA ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆಗೆ ಒಳಗಾಗುತ್ತಾರೆ.
- Akshatha Vorkady
- Updated on: Jul 14, 2026
- 4:12 pm
BMCRI Recruitment 2026: ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣವಕಾಶ
ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿ (Nursing Officer) ಹುದ್ದೆಗಳ ನೇಮಕಾತಿಗಾಗಿ BMCRI ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಗುತ್ತಿಗೆ ಆಧಾರದ ಈ ಹುದ್ದೆಗಳಿಗೆ ಆಸಕ್ತರು ಜುಲೈ 22ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಜುಲೈ 29 ರಂದು ದಾಖಲೆಗಳ ಪರಿಶೀಲನೆ ಮತ್ತು ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ವಿವರಗಳಿಗಾಗಿ bmcribengaluru.karnataka.gov.in ಭೇಟಿ ನೀಡಿ.
- Akshatha Vorkady
- Updated on: Jul 14, 2026
- 3:21 pm
Indian Army Recruitment 2026: ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ನೇಮಕಾತಿ!
ಭಾರತೀಯ ಸೇನೆಯು ಇಂಜಿನಿಯರಿಂಗ್ ಪದವೀಧರರಿಗೆ 68ನೇ SSC (Tech) ಕೋರ್ಸ್ಗೆ (350 ಹುದ್ದೆಗಳು) ಅರ್ಜಿ ಆಹ್ವಾನಿಸಿದೆ. BE/B.Tech ಪೂರ್ಣಗೊಳಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಪದವಿ ಅಂಕ ಮತ್ತು SSB ಸಂದರ್ಶನದ ಮೂಲಕ ಆಯ್ಕೆ. ಮಾಸಿಕ 56,100 ರಿಂದ 1,77,500 ರೂ. ವೇತನ ಇರಲಿದೆ. ಆಸಕ್ತರು ಆಗಸ್ಟ್ 7ರೊಳಗೆ ಅರ್ಜಿ ಸಲ್ಲಿಸಿ.
- Akshatha Vorkady
- Updated on: Jul 14, 2026
- 2:21 pm
Samudrika Shastra: ನಿಮ್ಮ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರಾಕೃತಿ ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ?
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಉಗುರುಗಳಲ್ಲಿರುವ ಅರ್ಧಚಂದ್ರಾಕಾರದ ಗುರುತು ವ್ಯಕ್ತಿಯ ಭವಿಷ್ಯ, ಯಶಸ್ಸು ಮತ್ತು ಅದೃಷ್ಟದ ಬಗ್ಗೆ ಮಹತ್ವದ ಸುಳಿವು ನೀಡುತ್ತದೆ. ಸಾಮಾನ್ಯವಾಗಿ ನಿರ್ಲಕ್ಷಿಸುವ ಈ ಚಿಹ್ನೆ, ಪ್ರತಿಯೊಂದು ಬೆರಳಿನಲ್ಲಿ ವಿಭಿನ್ನ ಅರ್ಥವನ್ನು ಹೊಂದಿದ್ದು, ಅಪಾರ ಶಕ್ತಿ ಹಾಗೂ ಸಕಾರಾತ್ಮಕ ಫಲಿತಾಂಶಗಳನ್ನು ಸೂಚಿಸುತ್ತದೆ. ನಿಮ್ಮ ಉಗುರಿನ ಅರ್ಧಚಂದ್ರ ಸ್ಪಷ್ಟವಾಗಿದ್ದರೆ ನೀವು ಅದೃಷ್ಟವಂತರು ಎಂದರ್ಥ.
- Akshatha Vorkady
- Updated on: Jul 14, 2026
- 1:38 pm
Sundarakanda: ಮಂಗಳವಾರ ಸುಂದರಕಾಂಡ ಪಠಿಸಬೇಕು ಯಾಕೆ ಗೊತ್ತಾ? ಮಹತ್ವ ಮತ್ತು ಪಠಣದ ವಿಶೇಷತೆ ಇಲ್ಲಿ ತಿಳಿಯಿರಿ
ಮಂಗಳವಾರ ಹನುಮಂತನಿಗೆ ಸಮರ್ಪಿತವಾಗಿದ್ದು, ಸುಂದರಕಾಂಡ ಪಠಣಕ್ಕೆ ವಿಶೇಷ ಮಹತ್ವವಿದೆ. ಬಜರಂಗಬಲಿಯ ಕೃಪೆಯಿಂದ ಕಷ್ಟಗಳು ನಿವಾರಣೆಯಾಗಿ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ನಿಯಮಿತ ಪಠಣದಿಂದ ಮಾನಸಿಕ ಶಾಂತಿ, ಸಮೃದ್ಧಿ ಹಾಗೂ ಯಶಸ್ಸು ಪ್ರಾಪ್ತವಾಗುತ್ತದೆ. ಪಠಣದ ಸರಿಯಾದ ವಿಧಾನ ಅನುಸರಿಸಿ ಹನುಮಂತನ ಆಶೀರ್ವಾದ ಪಡೆಯಿರಿ. ಇದು ಗ್ರಹದೋಷಗಳನ್ನು ಶಮನಗೊಳಿಸಿ ಸಕಾರಾತ್ಮಕ ಫಲಗಳನ್ನು ನೀಡುತ್ತದೆ.
- Akshatha Vorkady
- Updated on: Jul 14, 2026
- 12:05 pm
Shani Retrograde 2026: ಶನಿ ವಕ್ರ ಚಲನೆ ಆರಂಭ; ಜುಲೈ 27 ರಿಂದ ಈ 2 ರಾಶಿಗೆ ಶುರುವಾಗಲಿದೆ ಕಷ್ಟದ ಕಾಲ!
ಜ್ಯೋತಿಷ್ಯದಲ್ಲಿ ಶನಿ ಕರ್ಮಫಲ ದಾತ. 2026ರ ಜುಲೈನಿಂದ 138 ದಿನ ಶನಿಯು ವಕ್ರ ಚಲನೆಯಲ್ಲಿರುತ್ತಾನೆ. ಈ ಅವಧಿಯು ಕುಂಭ ಮತ್ತು ಮೀನ ರಾಶಿಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಅನೇಕ ಸವಾಲುಗಳನ್ನು ತರಲಿದೆ. ಸೋಮಾರಿತನ ಬಿಟ್ಟು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸದಿದ್ದರೆ, ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ.
- Akshatha Vorkady
- Updated on: Jul 14, 2026
- 11:20 am
Navagrahas in Temples: ವೈಷ್ಣವ ದೇವಾಲಯಗಳಲ್ಲಿ ನವಗ್ರಹ ಮಂಟಪ ಏಕೆ ಇರುವುದಿಲ್ಲ? ಇದರ ಹಿಂದಿನ ಆಧ್ಯಾತ್ಮಿಕ ಕಾರಣ ಇಲ್ಲಿದೆ
ಹಿಂದೂ ಧರ್ಮದಲ್ಲಿ ನವಗ್ರಹಗಳಿಗೆ ವಿಶೇಷ ಮಹತ್ವವಿದೆ, ಅವು ಮಾನವ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಪ್ರಾಚೀನ ವೈಷ್ಣವ ದೇವಾಲಯಗಳಲ್ಲಿ ನವಗ್ರಹ ಮಂಟಪಗಳಿಲ್ಲದಿರಲು ವಿಷ್ಣುವೇ ಸರ್ವಗ್ರಹಗಳ ಮೂಲ ಎಂಬ ನಂಬಿಕೆ ಕಾರಣ. ಆದರೆ ಶಿವ ದೇವಾಲಯಗಳಲ್ಲಿ ಗ್ರಹದೋಷ ನಿವಾರಣೆಗಾಗಿ ನವಗ್ರಹಗಳು ಇರುತ್ತವೆ. ಇತ್ತೀಚಿನ ದೇವಾಲಯಗಳಲ್ಲಿ ಭಕ್ತರ ಅನುಕೂಲಕ್ಕೆ ತಕ್ಕಂತೆ ಈ ಸಂಪ್ರದಾಯ ಬದಲಾಗಿದೆ.
- Akshatha Vorkady
- Updated on: Jul 14, 2026
- 9:44 am