ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
Mana Jampal: 9ನೇ ವಯಸ್ಸಿನಲ್ಲೇ Python ಕಲಿತು, 12ನೇ ವಯಸ್ಸಿನಲ್ಲಿ AI ಕಂಪನಿ ಸ್ಥಾಪಿಸಿದ ಬಾಲಕಿ
ಸಾಮಾನ್ಯವಾಗಿ 12ನೇ ವಯಸ್ಸಿನಲ್ಲಿ ಮಕ್ಕಳು ಶಾಲೆ ಮತ್ತು ಆಟದಲ್ಲಿ ತೊಡಗಿರುತ್ತಾರೆ. ಆದರೆ ದೆಹಲಿನ ಮನ ಜಂಪಲ್(Mana Jampal) ಎಂಬ ಬಾಲಕಿ ಈ ವಯಸ್ಸಿನಲ್ಲೇ Voxa ಎಂಬ AI ಸ್ಟಾರ್ಟ್ಅಪ್ ಸ್ಥಾಪಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾಳೆ. ಚಿಕ್ಕ ವಯಸ್ಸಿನಲ್ಲೇ ಹೊಸ ಆಲೋಚನೆಯೊಂದಿಗೆ ಮುನ್ನಡೆದು AI ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಈಕೆಯ ಕಥೆ, ತಂತ್ರಜ್ಞಾನ ಕಲಿಯಲು ಬಯಸುವ ಯುವಜನರಿಗೆ ಸ್ಫೂರ್ತಿಯಾಗಿದೆ.
- Akshatha Vorkady
- Updated on: Aug 8, 2026
- 3:48 pm
KEA Recruitment 2026: 750 ಭೂಮಾಪಕ ಹುದ್ದೆಗಳಿಗೆ ಅರ್ಜಿ; ಆಗಸ್ಟ್ 20ರವರೆಗೆ ಅವಕಾಶ, 76,100 ರೂ. ವರೆಗೆ ವೇತನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭೂ ದಾಖಲೆಗಳ ಇಲಾಖೆಯಲ್ಲಿ 750 ಭೂಮಾಪಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಗಡುವನ್ನು ಆಗಸ್ಟ್ 20 ರವರೆಗೆ ವಿಸ್ತರಿಸಲಾಗಿದ್ದು, ಆಯ್ಕೆಯಾದವರಿಗೆ 76,100 ರೂ.ವರೆಗೆ ವೇತನ ದೊರೆಯಲಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- Akshatha Vorkady
- Updated on: Aug 8, 2026
- 2:56 pm
KEA Recruitment 2026: 233 ಫಾರ್ಮಸಿ, ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 99,400ರೂ. ವರೆಗೆ ವೇತನ
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ಅಂತಿಮ ಮತ್ತು ಅಧಿಕೃತ ಮಾಹಿತಿಗಾಗಿ KEA ವೆಬ್ಸೈಟ್ನಲ್ಲಿರುವ ಅಧಿಸೂಚನೆಯನ್ನೇ ಪರಿಗಣಿಸುವುದು ಸೂಕ್ತ.
- Akshatha Vorkady
- Updated on: Aug 8, 2026
- 1:50 pm
Traditional Practice: ತಾಳಿ ದಾರ ಯಾವ ದಿನ ಬದಲಾಯಿಸಬೇಕು? ಪಾಲಿಸಬೇಕಾದ ಸಂಪ್ರದಾಯಗಳಿವು!
ವಿವಾಹಿತ ಮಹಿಳೆಯ ಜೀವನದಲ್ಲಿ ತಾಳಿ ಅಥವಾ ಮಾಂಗಲ್ಯಕ್ಕೆ ವಿಶೇಷ ಸ್ಥಾನವಿದೆ. ಇದು ಕೇವಲ ಆಭರಣವಲ್ಲ, ವೈವಾಹಿಕ ಬಂಧ, ದಾಂಪತ್ಯದ ಸಂಕೇತ ಮತ್ತು ಕುಟುಂಬದ ಯೋಗಕ್ಷೇಮದ ಪ್ರತೀಕ. ತಾಳಿ ದಾರ ಸವೆದಾಗ ಅದನ್ನು ಯಾವ ದಿನ ಬದಲಾಯಿಸಬೇಕು, ಹೊಸ ದಾರ ಧರಿಸುವ ಮೊದಲು ಯಾವ ಪೂಜೆ ಮಾಡಬೇಕು ಮತ್ತು ಕುಟುಂಬಗಳಲ್ಲಿ ಪಾಲಿಸುವ ಸಂಪ್ರದಾಯಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 8, 2026
- 12:45 pm
Varalakshmi Vrat 2026: ವರಲಕ್ಷ್ಮಿ ವ್ರತ ಆಗಸ್ಟ್ 21 ಅಥವಾ 28? ನಿಖರ ದಿನಾಂಕವನ್ನು ಇಲ್ಲಿ ತಿಳಿದುಕೊಳ್ಳಿ
2026ರಲ್ಲಿ ಶ್ರಾವಣ ಮಾಸದಲ್ಲಿ ಐದು ಶುಕ್ರವಾರಗಳು ಬರುತ್ತಿರುವುದರಿಂದ ವರಲಕ್ಷ್ಮಿ ವ್ರತ ಯಾವಾಗ ಆಚರಿಸುವುದು ಸರಿಯಾದ ದಿನಾಂಕ ಯಾವುದು ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಆಗಸ್ಟ್ 21 ಅಥವಾ 28ರಲ್ಲಿ ಯಾವ ದಿನ ವ್ರತ ಆಚರಿಸಬೇಕು? ಬೆಳಗಿನ ಪೂಜೆ ಮತ್ತು ಶೃಂಗೇರಿ ಸಂಪ್ರದಾಯದ ಪ್ರಕಾರ ಇರುವ ವ್ಯತ್ಯಾಸವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 8, 2026
- 12:10 pm
Nandi Worship: ತ್ರಯೋದಶಿಯಂದು ನಂದೀಶ್ವರನ ಪೂಜೆ ಏಕೆ ಮಾಡಬೇಕು? ಶಿವನ ಆಶೀರ್ವಾದ ಪಡೆಯಲು ಹೀಗೆ ಪೂಜಿಸಿ
ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನಂದೀಶ್ವರನಿಗೆ ವಿಶೇಷ ಸ್ಥಾನವಿದೆ. ಆಗಸ್ಟ್ 10ರಂದು ತ್ರಯೋದಶಿ ತಿಥಿಯಂದು ಶಿವನೊಂದಿಗೆ ನಂದೀಶ್ವರನನ್ನು ಪೂಜಿಸುವುದು ವಿಶೇಷವೆಂದು ಭಕ್ತರು ನಂಬುತ್ತಾರೆ. ಈ ದಿನ ನಂದಿಯನ್ನು ಹೇಗೆ ಪೂಜೆ ಮಾಡಬೇಕು ಮತ್ತು ಅದರಿಂದ ದೊರೆಯುವ ಫಲಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 8, 2026
- 10:58 am
Garuda Purana: ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಏಕೆ ಮಾಡಬಾರದು? ಗರುಡ ಪುರಾಣ ಹೇಳುವುದೇನು?
ಹಿಂದೂ ಧರ್ಮದಲ್ಲಿ ಅಂತ್ಯಕ್ರಿಯೆಗಳಿಗೆ ವಿಶೇಷ ಮಹತ್ವವಿದೆ. ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ನಡೆಸುವುದನ್ನು ಕೆಲವು ಸಂಪ್ರದಾಯಗಳಲ್ಲಿ ತಪ್ಪಿಸಲಾಗುತ್ತದೆ. ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಏಕೆ ಮಾಡಬಾರದು? ಗರುಡ ಪುರಾಣ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಇದರ ಹಿಂದಿರುವ ಕಾರಣಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 8, 2026
- 9:58 am
Spiritual Significance: ಮಂತ್ರದ ಕೊನೆಯಲ್ಲಿ ‘ಸ್ವಾಹಾ’, ‘ನಮಃ’ ಎಂದೇಕೆ ಹೇಳುತ್ತಾರೆ? ಇದರ ಹಿಂದಿದೆ ಆಳವಾದ ಅರ್ಥ ಇಲ್ಲಿದೆ
ಹೋಮ, ಪೂಜೆ ಅಥವಾ ಮಂತ್ರ ಜಪದ ವೇಳೆ ‘ಸ್ವಾಹಾ’, ‘ನಮಃ’, ‘ಹುಂ’, ‘ಫಟ್’ ಎಂಬ ಪದಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಇವು ಕೇವಲ ಮಂತ್ರದ ಅಂತ್ಯದಲ್ಲಿ ಬಳಸುವ ಪದಗಳಲ್ಲ. ಭಾರತೀಯ ಧಾರ್ಮಿಕ ಮತ್ತು ಮಂತ್ರ ಪರಂಪರೆಯಲ್ಲಿ ಪ್ರತಿಯೊಂದು ಪದಕ್ಕೂ ತನ್ನದೇ ಆದ ವಿಧಿವಿಧಾನ ಹಾಗೂ ಸಾಂಕೇತಿಕ ಮಹತ್ವವಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 8, 2026
- 9:03 am
ಶಬರಿಮಲೆ ‘ವಾಕ್ದೋಷ’ ಪರಿಹಾರಕ್ಕೆ ವಿಶೇಷ ಪೂಜೆ: ಕೊಲ್ಲೂರು ಮೂಕಾಂಬಿಕಾ ಸೇರಿ 25 ಕ್ಷೇತ್ರಗಳಲ್ಲಿ ಧಾರ್ಮಿಕ ವಿಧಿವಿಧಾನ
ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಪತ್ತೆಯಾಗಿದ್ದ ‘ವಾಕ್ದೋಷ’ ನಿವಾರಣೆಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ (TDB) ವಿಶೇಷ ಪರಿಹಾರ ಪೂಜೆಗಳನ್ನು ಆರಂಭಿಸಿದೆ. ಕೇರಳ ಮತ್ತು ಕರ್ನಾಟಕದ 25 ಪ್ರಮುಖ ದೇವಾಲಯಗಳಲ್ಲಿ ವಿವಿಧ ಪೂಜೆ, ಪ್ರಾಯಶ್ಚಿತ್ತ ವಿಧಿವಿಧಾನ ಹಾಗೂ ಕಾಣಿಕೆ ಸಮರ್ಪಣೆಗಳನ್ನು ನೆರವೇರಿಸಲಾಗುತ್ತಿದೆ ಎಂದು TDB ಅಧ್ಯಕ್ಷ ಕೆ. ಜಯಕುಮಾರ್ ಮಾಹಿತಿ ನೀಡಿದ್ದಾರೆ.
- Akshatha Vorkady
- Updated on: Aug 8, 2026
- 8:40 am
Jupiter in Pushya Nakshatra: ಗುರು ಪುಷ್ಯ ಯೋಗ; ಈ 4 ರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ಧನಲಾಭ!
ಜ್ಯೋತಿಷ್ಯದ ಪ್ರಕಾರ, ಗುರು ಪುಷ್ಯ ನಕ್ಷತ್ರಕ್ಕೆ ಪ್ರವೇಶಿಸಿದ್ದು, ಇದು ಕೆಲವು ರಾಶಿಗಳ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಗೆ ಸುವರ್ಣಾವಕಾಶ ತಂದಿದೆ. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಐಟಿ ವಲಯದ ಷೇರುಗಳು ಲಾಭ ಗಳಿಸುವ ಸಾಧ್ಯತೆಯಿದೆ. ಕರ್ಕಾಟಕ, ವೃಶ್ಚಿಕ, ಧನುಸ್ಸು, ಮೀನ ರಾಶಿಗಳಿಗೆ ಭಾರಿ ಆರ್ಥಿಕ ಲಾಭವಾಗಲಿದೆ. ಹೂಡಿಕೆದಾರರು ಈ ಶುಭ ಅವಧಿಯನ್ನು ಬಳಸಿಕೊಳ್ಳಬಹುದು.
- Akshatha Vorkady
- Updated on: Aug 7, 2026
- 4:33 pm
Bengaluru South Recruitment 2026: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ) ನಗರಸಭೆಗಳಲ್ಲಿ ಖಾಲಿ ಇರುವ 102 ನೇರ ಪಾವತಿ ಪೌರಕಾರ್ಮಿಕ (ನಾಗರಿಕ ಸೇವಕ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 18 ರಿಂದ 50 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- Akshatha Vorkady
- Updated on: Aug 7, 2026
- 4:16 pm
Randstad 2026: ಭಾರತದ ಟಾಪ್ 10 ಉದ್ಯೋಗದಾತ ಕಂಪನಿಗಳ ಪಟ್ಟಿ ಪ್ರಕಟ; ಗೂಗಲ್, ಟಾಟಾ ಗ್ರೂಪ್ಗೆ ಅಗ್ರಸ್ಥಾನ!
ರ್ಯಾಂಡ್ಸ್ಟಾಡ್ ಎಂಪ್ಲಾಯರ್ ಬ್ರಾಂಡ್ ರಿಸರ್ಚ್ 2026 ವರದಿಯ ಪ್ರಕಾರ, ಗೂಗಲ್ ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ. ಟಾಟಾ ಗ್ರೂಪ್ ಮತ್ತು ಅಮೆಜಾನ್ ನಂತರದ ಸ್ಥಾನದಲ್ಲಿವೆ. ಕೆಲಸ-ಜೀವನ ಸಮತೋಲನ, ವೃತ್ತಿ ಬೆಳವಣಿಗೆಯ ಕೊರತೆ, ಮತ್ತು ಕಡಿಮೆ ಸಂಬಳ ಉದ್ಯೋಗಿಗಳು ಕಂಪನಿ ಬದಲಾಯಿಸಲು ಮುಖ್ಯ ಕಾರಣಗಳಾಗಿವೆ. ಉದ್ಯೋಗಿಗಳು ಈಗ ಕೇವಲ ಸಂಬಳಕ್ಕಿಂತ ಉತ್ತಮ ಕೆಲಸದ ವಾತಾವರಣ, ವೃತ್ತಿ ಅಭಿವೃದ್ಧಿ ಮತ್ತು ಉದ್ಯೋಗ ಭದ್ರತೆ ಬಯಸುತ್ತಾರೆ.
- Akshatha Vorkady
- Updated on: Aug 7, 2026
- 3:04 pm