ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
Broken Rudraksha: ಧರಿಸಿರುವ ರುದ್ರಾಕ್ಷಿ ಮುರಿದರೆ ಏನು ಮಾಡಬೇಕು? ಕಾರಣಗಳು ಹಾಗೂ ಪೂಜಾ ನಿಯಮಗಳ ಪೂರ್ಣ ಮಾಹಿತಿ
ರುದ್ರಾಕ್ಷಿ ಒಡೆದರೆ ಭಯಪಡಬೇಕಾಗಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆ ಅಥವಾ ನಕಾರಾತ್ಮಕ ಶಕ್ತಿ ಹೀರಿಕೊಂಡ ಸಂಕೇತವಿರಬಹುದು. ಮುರಿದ ರುದ್ರಾಕ್ಷಿಯನ್ನು ಮತ್ತೆ ಧರಿಸಬಾರದು. ಗೌರವಯುತವಾಗಿ ನೀರು, ಭೂಮಿ ಅಥವಾ ದೇವಸ್ಥಾನದಲ್ಲಿ ವಿಸರ್ಜಿಸಿ. ಹೊಸ ರುದ್ರಾಕ್ಷಿಯನ್ನು ಸೋಮವಾರ ಶುದ್ಧೀಕರಿಸಿ, ಮಂತ್ರ ಪಠಿಸಿ ಭಕ್ತಿಯಿಂದ ಧರಿಸಿ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
- Akshatha Vorkady
- Updated on: Aug 29, 2026
- 8:53 am
Copper: ದೈನಂದಿನ ಜೀವನದಲ್ಲಿ ತಾಮ್ರದ ಬಳಕೆ ಏಕೆ ಮುಖ್ಯ? ಧಾರ್ಮಿಕ ಮತ್ತು ಜ್ಯೋತಿಷ್ಯ ಕಾರಣ ಇಲ್ಲಿವೆ
ಜ್ಯೋತಿಷ್ಯದಲ್ಲಿ ತಾಮ್ರವು ಅತ್ಯಂತ ಪವಿತ್ರ ಮತ್ತು ಶಕ್ತಿಶಾಲಿ ಲೋಹ. ಸೂರ್ಯ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಇದು ಆತ್ಮವಿಶ್ವಾಸ, ಧೈರ್ಯ ಹಾಗೂ ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ತಾಮ್ರದ ಪಾತ್ರೆಗಳ ಬಳಕೆ, ಸೂರ್ಯನಿಗೆ ಅರ್ಘ್ಯ ನೀಡುವುದು ಮತ್ತು ಪೂಜಾ ಕಾರ್ಯಗಳಲ್ಲಿ ಇದನ್ನು ಬಳಸುವುದರಿಂದ ಗ್ರಹಗಳ ಶುಭ ಪ್ರಭಾವವನ್ನು ಬಲಪಡಿಸಬಹುದು. ತಾಮ್ರವು ಜ್ಯೋತಿಷ್ಯ ಪರಿಹಾರಗಳಿಗೆ ಪ್ರಮುಖ ಸಾಧನವಾಗಿದೆ.
- Akshatha Vorkady
- Updated on: Aug 29, 2026
- 7:28 am
ISRO Recruitment 2026: ಇಸ್ರೋದಲ್ಲಿ ಭರ್ಜರಿ ನೇಮಕಾತಿ; 175 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಇಸ್ರೋ 'SC' ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ಗಳಿಗೆ 175 ಹುದ್ದೆಗಳಿದ್ದು, ಪದವೀಧರರು ಆನ್ಲೈನ್ ಮೂಲಕ ಸೆಪ್ಟೆಂಬರ್ 16 ರೊಳಗೆ ಅರ್ಜಿ ಸಲ್ಲಿಸಬಹುದು. 28 ವರ್ಷ ವಯೋಮಿತಿಯೊಳಗೆ ಇರುವ ಬಿ.ಇ ಅಥವಾ ಬಿ.ಟೆಕ್ ಪದವೀಧರರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು.
- Akshatha Vorkady
- Updated on: Aug 28, 2026
- 4:12 pm
KPSC Recruitment 2026: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿ; 83 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗ (KPSC) 83 ಸಹಾಯಕ ನಿಯಂತ್ರಕ ಮತ್ತು ಲೆಕ್ಕಪರಿಶೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. M.Com ಅಥವಾ MBA ಪದವೀಧರರು ಸೆಪ್ಟೆಂಬರ್ 26ರೊಳಗೆ ಅರ್ಜಿ ಸಲ್ಲಿಸಬಹುದು. 21-40 ವರ್ಷ ವಯೋಮಿತಿ, ವಯೋಸಡಿಲಿಕೆ ಲಭ್ಯ. ವಿವಿಧ ವರ್ಗಗಳಿಗೆ ಅರ್ಜಿ ಶುಲ್ಕ ವಿಭಿನ್ನ. ಪ್ರಿಲಿಮಿನರಿ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ. ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ.
- Akshatha Vorkady
- Updated on: Aug 28, 2026
- 3:03 pm
India Post Recruitment 2026: ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ; 10ನೇ ತರಗತಿ ಪಾಸಾದವರಿಗೆ ಬಂಪರ್ ಅವಕಾಶ!
ಭಾರತೀಯ ಅಂಚೆ ಇಲಾಖೆಯ GDS ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. 10ನೇ ತರಗತಿ ಪಾಸಾದ 18-40 ವರ್ಷದ ಅಭ್ಯರ್ಥಿಗಳು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್ 31 ರಿಂದ ಸೆಪ್ಟೆಂಬರ್ 19 ರವರೆಗೆ ನೋಂದಣಿ, ಸೆಪ್ಟೆಂಬರ್ 2 ರಿಂದ 21 ರವರೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ನಡೆಯಲಿದೆ. ಲಿಖಿತ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ indiapost.gov.in ಗೆ ಭೇಟಿ ನೀಡಿ.
- Akshatha Vorkady
- Updated on: Aug 28, 2026
- 1:35 pm
Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇನ್ವರ್ಟರ್ ಇಡಲು ಸರಿಯಾದ ದಿಕ್ಕು ಯಾವುದು? ಮೆಟ್ಟಿಲುಗಳ ಕೆಳಗೆ ಇಡಬಹುದೇ?
ವಾಸ್ತು ಶಾಸ್ತ್ರದ ಪ್ರಕಾರ, ಇನ್ವರ್ಟರ್ ಅನ್ನು ಮೆಟ್ಟಿಲುಗಳ ಕೆಳಗೆ ಇಡುವುದು ಅಶುಭ, ಇದು ಮನೆಯ ಶಕ್ತಿ ಸಮತೋಲನವನ್ನು ಕೆಡಿಸಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಗ್ನಿ ತತ್ವದೊಂದಿಗೆ ಸಂಬಂಧಿಸಿರುವ ಇನ್ವರ್ಟರ್ಗೆ ಆಗ್ನೇಯ ದಿಕ್ಕು (ಅಗ್ನಿ ಮೂಲೆಯಲ್ಲಿ) ಉತ್ತಮವಾಗಿದೆ. ಅಲ್ಲಿ ಜಾಗವಿಲ್ಲದಿದ್ದರೆ ವಾಯುವ್ಯ ದಿಕ್ಕು ಕೂಡ ಸೂಕ್ತ. ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿ, ಆರ್ಥಿಕ ಪ್ರಗತಿಗೂ ಸಹಕಾರಿಯಾಗುತ್ತದೆ.
- Akshatha Vorkady
- Updated on: Aug 28, 2026
- 12:47 pm
Video: ಸೂರತ್ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಗುಜರಾತ್ನ ಸೂರತ್ನಲ್ಲಿ ರಕ್ಷಾಬಂಧನಕ್ಕಾಗಿ ಹಸುವಿನ ಸಗಣಿಯಿಂದ ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ಪ್ಲಾಸ್ಟಿಕ್ ಮತ್ತು ರಾಸಾಯನಿಕಯುಕ್ತ ರಾಖಿಗಳಿಗೆ ಪರ್ಯಾಯವಾಗಿ, ಮಾಧವ್ ಗೋಶಾಲೆ ಸೇರಿದಂತೆ ಹಲವು ಸಂಸ್ಥೆಗಳು ಈ ವೈಶಿಷ್ಟ್ಯಪೂರ್ಣ ವೈದಿಕ ರಾಖಿಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ದೇಶಿ ಹಸುವಿನ ಸಗಣಿ ಪುಡಿ, ಗೋಮೂತ್ರ, ರೇಷ್ಮೆ ದಾರ ಮತ್ತು ಮರವನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತದೆ, ಪರಿಸರ ಸ್ನೇಹಿ ಹಬ್ಬಕ್ಕೆ ಉತ್ತೇಜನ ನೀಡುತ್ತದೆ.
- Akshatha Vorkady
- Updated on: Aug 28, 2026
- 11:27 am
Raksha Bandhan: ಅಣ್ಣನಿಗೋ, ತಮ್ಮನಿಗೋ… ಮೊದಲು ಯಾರಿಗೆ ರಾಖಿ ಕಟ್ಟಬೇಕು? ಪೂಜಾ ವಿಧಿ-ವಿಧಾನ ಹಾಗೂ ಸಂಪೂರ್ಣ ಮಾಹಿತಿ
ರಕ್ಷಾ ಬಂಧನದಲ್ಲಿ ಮೊದಲು ಯಾರಿಗೆ ರಾಖಿ ಕಟ್ಟಬೇಕು ಎಂಬ ಗೊಂದಲಕ್ಕೆ ಇಲ್ಲಿ ಉತ್ತರ. ಸಾಮಾನ್ಯವಾಗಿ ಅಣ್ಣನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ, ಆದರೆ ಇದು ಕಡ್ಡಾಯ ನಿಯಮವಲ್ಲ. ಮುಖ್ಯವಾಗಿ ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯ ಮುಖ್ಯ. ರಾಖಿ ಕಟ್ಟುವ ಮೊದಲು ಗಣೇಶ ಪೂಜೆ, ಮನೆದೇವರ ಸ್ಮರಣೆ ಸಾಂಪ್ರದಾಯಿಕ ಕ್ರಮಗಳು. ವಾಹನ ಹಾಗೂ ಸಾಕುಪ್ರಾಣಿಗಳಿಗೂ ರಾಖಿ ಕಟ್ಟುವ ಪದ್ಧತಿ ಕೆಲವು ಕಡೆ ಇದೆ. ಇದು ಬಾಂಧವ್ಯ ಬಲಪಡಿಸುವ ಹಬ್ಬ.
- Akshatha Vorkady
- Updated on: Aug 28, 2026
- 9:47 am
Video: ಹುಣ್ಣಿಮೆ ಹಿನ್ನೆಲೆ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ದಂಡು
ಹುಣ್ಣಿಮೆಯ ವಿಶೇಷದ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂದಿದೆ. ರಾಜ್ಯದ ಹಾಗೂ ಹೊರ ರಾಜ್ಯಗಳ ಭಕ್ತರು ಅಮ್ಮನ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ದೇವಾಲಯದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದ್ದು, ಶ್ರದ್ಧಾ ಭಕ್ತಿಯಿಂದ ದೇವಿಯ ಆಶೀರ್ವಾದ ಪಡೆಯುತ್ತಿದ್ದಾರೆ.
- Akshatha Vorkady
- Updated on: Aug 28, 2026
- 9:08 am
Video: ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ! ಗದಗ-ಬೆಟಗೇರಿ ಗ್ರಾಮದೇವತೆಗಳ ಜಾತ್ರೆಯ ವಿಶೇಷತೆ ತಿಳಿಯಿರಿ
ಗದಗ-ಬೆಟಗೇರಿ ಅವಳಿ ನಗರದಲ್ಲಿ ದ್ಯಾಮವ್ವ-ದುರ್ಗವ್ವ ಜಾತ್ರಾ ಮಹೋತ್ಸವ 18 ವರ್ಷಗಳ ನಂತರ ಅದ್ದೂರಿಯಾಗಿ ನೆರವೇರಿತು. ಒಂಬತ್ತು ದಿನಗಳ ಈ ಹಬ್ಬದಲ್ಲಿ ದೇವಿಯರನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸುವ ವಿಶೇಷ ಆಚರಣೆ ನಡೆಯಿತು. ಭವ್ಯ ಮೆರವಣಿಗೆ, 140 ಕ್ವಿಂಟಾಲ್ ಭಂಡಾರ ಎರಚಾಟ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿದವು.
- Akshatha Vorkady
- Updated on: Aug 28, 2026
- 8:53 am
Raksha Bandhan 2026: ರಕ್ಷಾ ಬಂಧನ ಹಬ್ಬದಂದೇ ಚಂದ್ರಗ್ರಹಣ; ರಾಖಿ ಕಟ್ಟಲು ಸೂಕ್ತ ಸಮಯ ಯಾವುದು? ಇಲ್ಲಿದೆ ಸ್ಪಷ್ಟ ಉತ್ತರ!
2026ರ ಆಗಸ್ಟ್ 28ರಂದು ರಕ್ಷಾ ಬಂಧನ ಮತ್ತು ಚಂದ್ರಗ್ರಹಣ ಒಟ್ಟಿಗೆ ಬಂದಿವೆ. ಆದರೆ, ಭಾರತದಲ್ಲಿ ಗ್ರಹಣ ಗೋಚರಿಸದ ಕಾರಣ ಸೂತಕ ಅವಧಿ ಅನ್ವಯಿಸುವುದಿಲ್ಲ. ಸಹೋದರಿಯರು ಯಾವುದೇ ಭಯವಿಲ್ಲದೆ ಬೆಳಗಿನ ಶುಭ ಮುಹೂರ್ತದಲ್ಲಿ ಸಹೋದರರಿಗೆ ರಾಖಿ ಕಟ್ಟಬಹುದು. ಧಾರ್ಮಿಕ ಪೂಜಾ ವಿಧಿಗಳಿಗೆ ಯಾವುದೇ ಅಡಚಣೆ ಇಲ್ಲ, ನಿರಾತಂಕವಾಗಿ ಹಬ್ಬವನ್ನು ಆಚರಿಸಿ ಬಾಂಧವ್ಯ ಗಟ್ಟಿಪಡಿಸಿ.
- Akshatha Vorkady
- Updated on: Aug 28, 2026
- 7:56 am
Apply Now: ಚಿಕ್ಕಬಳ್ಳಾಪುರ ಆರೋಗ್ಯ ಇಲಾಖೆಯಲ್ಲಿ ಉದ್ಯೋಗವಕಾಶ; 45 ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಇಲಾಖೆಯು 45 ಫಾರ್ಮಸಿ, ನರ್ಸಿಂಗ್ ಹಾಗೂ ಜೂನಿಯರ್ ಲ್ಯಾಬ್ ಟೆಕ್ನಿಷಿಯನ್ ಅಧಿಕಾರಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶ. ಯಾವುದೇ ಅರ್ಜಿ ಶುಲ್ಕವಿಲ್ಲ. ಆಸಕ್ತರು ಸೆಪ್ಟೆಂಬರ್ 3ರೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹತೆ ಮತ್ತು ದಾಖಲಾತಿ ಪರಿಶೀಲನೆ ದಿನಾಂಕಗಳನ್ನು ಗಮನಿಸಿ.
- Akshatha Vorkady
- Updated on: Aug 27, 2026
- 4:52 pm