ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಒಂದೂವರೆ ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು,ಆರೋಗ್ಯ, ಜೀವನಶೈಲಿ, ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Sundarakanda: ಶನಿ ದೋಷ ನಿವಾರಣೆ ಮತ್ತು ಹನುಮಂತನ ಕೃಪೆಗೆ ಶನಿವಾರ ಸುಂದರಕಾಂಡ ಪಠಿಸಿ
ಶನಿವಾರದಂದು ಸುಂದರಕಾಂಡ ಪಠಣವು ಶನಿ ದೋಷ, ಸಾಡೇ ಸಾತಿ ಮತ್ತು ಗ್ರಹಗಳ ತೊಂದರೆಗಳಿಂದ ಮುಕ್ತಿ ನೀಡುತ್ತದೆ. ಹನುಮಾನ್ ಮತ್ತು ಶನಿ ದೇವರ ಆಶೀರ್ವಾದ ಪಡೆಯಲು ಇದು ಉತ್ತಮ ಮಾರ್ಗ. ಆತ್ಮವಿಶ್ವಾಸ ಹೆಚ್ಚಿಸಿ, ಆಸೆಗಳನ್ನು ಈಡೇರಿಸುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ. ಸರಿಯಾದ ವಿಧಾನದಲ್ಲಿ ಪಠಿಸುವುದರಿಂದ ಸಕಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
- Akshatha Vorkady
- Updated on: Dec 5, 2025
- 12:05 pm
Swapna Shastra: ಹಾವು ಕಚ್ಚಿದಂತೆ ಕನಸು ಬಿದ್ದರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಹಾವು ಕಚ್ಚಿದಂತೆ ಕನಸು ಬಿದ್ದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಇದು ಕೆಲವು ಸೂಚನೆಗಳನ್ನು ನೀಡುತ್ತದೆ. ಇದು ಅನಾರೋಗ್ಯ, ಆರ್ಥಿಕ ನಷ್ಟ ಅಥವಾ ಗುಪ್ತ ಶತ್ರುಗಳ ಸಂಕೇತವಾಗಿರಬಹುದು. ಇಂತಹ ಸಂದರ್ಭದಲ್ಲಿ ಧನಾತ್ಮಕ ಚಿಂತನೆ, ಸುಬ್ರಹ್ಮಣ್ಯ ಆರಾಧನೆ ಮತ್ತು ನವನಾಗ ಸ್ತೋತ್ರ ಪಠಣದ ಮೂಲಕ ದೋಷ ನಿವಾರಣೆಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನಷ್ಟು ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
- Akshatha Vorkady
- Updated on: Dec 5, 2025
- 11:08 am
Hindu Temple Bells: ಪೂಜೆಯಲ್ಲಿ ಎಷ್ಟು ರೀತಿಯ ಗಂಟೆಗಳನ್ನು ಬಳಸಲಾಗುತ್ತದೆ? ಅವುಗಳ ಮಹತ್ವ ತಿಳಿಯಿರಿ
ಹಿಂದೂ ಧರ್ಮದಲ್ಲಿ ಗಂಟೆಗಳಿಗೆ ವಿಶೇಷ ಮಹತ್ವವಿದೆ. ಶುಭ ಸಂದರ್ಭಗಳಲ್ಲಿ, ಪೂಜೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ವಿವಿಧ ಗಂಟೆಗಳನ್ನು ಬಳಸಲಾಗುತ್ತದೆ. ಗರುಡ, ಬಾಗಿಲು, ಕೈ ಮತ್ತು ದೊಡ್ಡ ಗಂಟೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಗಂಟೆ ಬಾರಿಸುವುದು ನಕಾರಾತ್ಮಕ ಶಕ್ತಿ ದೂರ ಮಾಡಿ, ಏಕಾಗ್ರತೆ ಹೆಚ್ಚಿಸುತ್ತದೆ. ಇದು ವಾತಾವರಣವನ್ನು ಶುದ್ಧೀಕರಿಸಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ, ಮನಸ್ಸು, ಮೆದುಳು ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ.
- Akshatha Vorkady
- Updated on: Dec 4, 2025
- 5:09 pm
UCIL Recruitment 2025: UCIL ಉದ್ಯೋಗಾವಕಾಶ; ಮೈನಿಂಗ್ ಮೇಟ್ ಸೇರಿದಂತೆ 107 ಹುದ್ದೆಗಳಿಗೆ ನೇಮಕಾತಿ
ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (UCIL) ಒಟ್ಟು 107 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೈನಿಂಗ್ ಮೇಟ್-ಸಿ, ವೈಂಡಿಂಗ್ ಎಂಜಿನ್ ಡ್ರೈವರ್-ಬಿ ಸೇರಿದಂತೆ ವಿವಿಧ ಹುದ್ದೆಗಳಿದ್ದು, ಆಸಕ್ತರು ಡಿಸೆಂಬರ್ 31ರೊಳಗೆ ucil.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡ, ವಯೋಮಿತಿ ಮತ್ತು ಅರ್ಜಿ ಶುಲ್ಕದ ಸಂಪೂರ್ಣ ವಿವರಗಳನ್ನು ವೆಬ್ಸೈಟ್ನಲ್ಲಿ ಪಡೆಯಬಹುದು. ಇದು ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ.
- Akshatha Vorkady
- Updated on: Dec 4, 2025
- 5:04 pm
SBI Recruitment 2025: SBIನಲ್ಲಿ ಒಟ್ಟು 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ ನೇಮಕಾತಿ; ಅರ್ಹತಾ ವಿವರ ಇಲ್ಲಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಟ್ಟು 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ವಿಪಿ ವೆಲ್ತ್, ಎವಿಪಿ ವೆಲ್ತ್, ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಿಗೆ ಪದವಿ ಮತ್ತು ಅನುಭವ ಹೊಂದಿರುವವರು ಅರ್ಹರು. ಡಿಸೆಂಬರ್ 23 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ. ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ಸಂದರ್ಶನದ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
- Akshatha Vorkady
- Updated on: Dec 4, 2025
- 4:27 pm
ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಸಂಪತ್ತು ಬಂದು ಸೇರಲಿದೆ
ಡಿಸೆಂಬರ್ 04ರಂದು ಮೀನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Dec 4, 2025
- 12:32 pm
Daily Devotional: ಯಾರಿಗೂ ತೊಂದರೆ ನೀಡದಿದ್ದರೂ, ಸದಾ ಕಷ್ಟ ಯಾಕೆ ಬರುತ್ತವೆ? ಜ್ಯೋತಿಷ್ಯ ಸಲಹೆ ಇಲ್ಲಿದೆ
ನಿತ್ಯ ಪೂಜೆ, ಜಪ, ತಪ ಮತ್ತು ದಾನಗಳ ಫಲಗಳು ತಕ್ಷಣಕ್ಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹಿಂದಿನ ಜನ್ಮದ ಕರ್ಮಗಳ ತೀವ್ರತೆಯನ್ನು ಕಡಿಮೆ ಮಾಡಲು ಪ್ರಸ್ತುತ ಸತ್ಕರ್ಮಗಳು ಸಹಕಾರಿ. ಈ ಆಚರಣೆಗಳು ವ್ಯರ್ಥವಾಗುವುದಿಲ್ಲ; ಅವು ಭವಿಷ್ಯದಲ್ಲಿ ಅಥವಾ ಈ ಜನ್ಮದ ಮುಂದಿನ ಹಂತದಲ್ಲಿ ಶುಭ ಫಲಗಳನ್ನು ತಂದುಕೊಡುತ್ತವೆ, ಮನಸ್ಸಿಗೆ ಶಾಂತಿ ನೀಡುತ್ತವೆ. ತಾಳ್ಮೆ ಮತ್ತು ಸಹನೆಯಿಂದ ಮುಂದುವರೆಯುವುದು ಮುಖ್ಯ ಎಂದು ಡಾ. ಬಸವರಾಜ್ ಗುರೂಜಿಯವರು ಸಲಹೆ ನೀಡಿದ್ದಾರೆ.
- Akshatha Vorkady
- Updated on: Dec 4, 2025
- 11:36 am
Video: ಬಿಹಾರದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ ವಿಶ್ವದ ಅತಿ ದೊಡ್ಡ ಏಕಶಿಲಾ ಶಿವಲಿಂಗ
ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ 33 ಅಡಿ ಎತ್ತರದ, 210 ಟನ್ ತೂಕದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ತಮಿಳುನಾಡಿನ ಮಹಾಬಲಿಪುರಂನಿಂದ 2,100 ಕಿ.ಮೀ. ಪ್ರಯಾಣಿಸಿರುವ ಈ ಶಿವಲಿಂಗವು ದೇವಾಲಯಕ್ಕೆ ವಿಶೇಷ ಆಕರ್ಷಣೆಯಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇಶಾದ್ಯಂತದ ಭಕ್ತರು ಆಗಮಿಸಲಿದ್ದಾರೆ.
- Akshatha Vorkady
- Updated on: Dec 4, 2025
- 10:36 am
Datta Jayanti 2025: ಇಂದು ದತ್ತ ಜಯಂತಿ; ದತ್ತಾತ್ರೇಯ ಸ್ವಾಮಿ ಪೂಜಾ ವಿಧಿವಿಧಾನ, ಮಹತ್ವ ಮತ್ತು ಪಠಿಸಬೇಕಾದ ಮಂತ್ರಗಳ ಮಾಹಿತಿ ಇಲ್ಲಿದೆ
ದತ್ತ ಜಯಂತಿಯು ಭಗವಾನ್ ದತ್ತಾತ್ರೇಯರ ಜನ್ಮದಿನ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಶುಭ ದಿನ ಈ ವರ್ಷ, ಇಂದು (ಡಿಸೆಂಬರ್ 4) ಬಂದಿದೆ. ದತ್ತಾತ್ರೇಯರ ಪೂಜೆ ಮತ್ತು ಉಪವಾಸ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಪೂಜಾ ವಿಧಿಗಳು, ಮಂತ್ರಗಳು ಮತ್ತು ಈ ದಿನದ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.
- Akshatha Vorkady
- Updated on: Dec 4, 2025
- 10:12 am
OICL Recruitment 2025: ವಿಮಾ ಕಂಪನಿಯಲ್ಲಿ ಅಧಿಕಾರಿಯಾಗಲು ಸುವರ್ಣವಕಾಶ; OICLನಲ್ಲಿ 300 ಹುದ್ದೆಗಳಿಗೆ ನೇಮಕಾತಿ
ಓರಿಯಂಟಲ್ ಇನ್ಶುರೆನ್ಸ್ ಕಂಪನಿ (OICL) 300 ಆಡಳಿತ ಅಧಿಕಾರಿ (AO) ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಡಿಸೆಂಬರ್ 3 ರಿಂದ 12 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರು. ಆಯ್ಕೆ ಪ್ರಕ್ರಿಯೆಯು ಪ್ರಿಲಿಮ್ಸ್ (ಜನವರಿ 10, 2026) ಮತ್ತು ಮುಖ್ಯ ಪರೀಕ್ಷೆ (ಫೆಬ್ರವರಿ 28) ಒಳಗೊಂಡಿದೆ. ಆಸಕ್ತರು OICL ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
- Akshatha Vorkady
- Updated on: Dec 3, 2025
- 5:37 pm
DRDO Internships 2025: DRDOದಲ್ಲಿ ಇಂಟರ್ನ್ಶಿಪ್ ಅವಕಾಶ; ಪದವಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವದ ಜೊತೆಗೆ ಆರ್ಥಿಕ ನೆರವು
DRDO ಸಂಸ್ಥೆಯು ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವೇತನ ಸಹಿತ ಇಂಟರ್ನ್ಶಿಪ್ ಅವಕಾಶ ಕಲ್ಪಿಸಿದೆ. ಇದು ವಿದ್ಯಾರ್ಥಿಗಳಿಗೆ ವಿಷಯ ಸಂಬಂಧಿತ ಪ್ರಾಯೋಗಿಕ ಅನುಭವ ಹಾಗೂ ಆರ್ಥಿಕ ನೆರವು ಒದಗಿಸುತ್ತದೆ. ಕಂಪ್ಯೂಟರ್ ಸೈನ್ಸ್, ಸಿವಿಲ್, ರಿಮೋಟ್ ಸೆನ್ಸಿಂಗ್ ವಿಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕ. ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಗಳ ವಿವರಗಳನ್ನು ಲೇಖನದಲ್ಲಿ ಓದಿ, ಇಂಟರ್ನ್ಶಿಪ್ಗೆ ಅರ್ಜಿ ಸಲ್ಲಿಸಿ.
- Akshatha Vorkady
- Updated on: Dec 3, 2025
- 5:13 pm
SBI SO Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 996 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಪದವೀಧರರು ಡಿಸೆಂಬರ್ 23 ರೊಳಗೆ sbi.bank.in/careers ಮೂಲಕ ಅರ್ಜಿ ಸಲ್ಲಿಸಬಹುದು. VP ವೆಲ್ತ್, AVP ವೆಲ್ತ್ ಮತ್ತು ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಿಗೆ ವಯೋಮಿತಿ ಮತ್ತು ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ. ಅರ್ಜಿ ಶುಲ್ಕ 750 ರೂ. (ಕೆಲವು ವರ್ಗಗಳಿಗೆ ವಿನಾಯಿತಿ). ಶಾರ್ಟ್ಲಿಸ್ಟ್ ಮಾಡಿದವರನ್ನು ಸಂದರ್ಶನಕ್ಕೆ ಕರೆಯಲಾಗುವುದು.
- Akshatha Vorkady
- Updated on: Dec 3, 2025
- 4:43 pm