ತೆರಿಗೆ ಪಾವತಿಸದ ಸ್ಥಳೀಯ ಸಂಸ್ಥೆಗಳು, ಸಂಕಷ್ಟದಲ್ಲಿ ರಾಜ್ಯ ಗ್ರಂಥಾಲಯ ಇಲಾಖೆ

ರಾಯಚೂರು: ಜ್ಞಾನ ದೇಗುಲಗಳಾಗಿರುವ ರಾಜ್ಯ ಗ್ರಂಥಾಲಯಗಳೀಗ ಸರಿಯಾದ ನಿರ್ವಹಣೆ ಇಲ್ಲದೆ ಸೊರಿಗಿ ಹೋಗುತ್ತಿವೆ. ತೆರಿಗೆ ವಂಚನೆಯಿಂದ ಗ್ರಂಥಾಲಯ ಇಲಾಖೆ ನಷ್ಟ ಎದುರಿಸುತ್ತಿದೆ. ರಾಜ್ಯ ಗ್ರಂಥಾಲಯ ಇಲಾಖೆಗೆ ಕೋಟಿ ಕೋಟಿ ರೂಪಾಯಿಗಳ ವಂಚನೆ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ತೆರಿಗೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡ್ತಿವೆ. ಆದ್ರೆ ವಸೂಲಿ ಮಾಡಿದ ತೆರಿಗೆಯನ್ನು ಪಾವತಿಸದೆ ಭಾರಿ ವಂಚನೆ ಮಾಡ್ತಿವೆ. ರಾಜ್ಯದ್ಯಂತ 560 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ಹಾಗೂ ಬಿಬಿಎಂಪಿಯಿಂದಲೇ 420 ಕೋಟಿ ತೆರಿಗೆ ಹಣ ಪಾವತಿಸದೇ ಗ್ರಂಥಾಲಯ‌ […]

ತೆರಿಗೆ ಪಾವತಿಸದ ಸ್ಥಳೀಯ ಸಂಸ್ಥೆಗಳು, ಸಂಕಷ್ಟದಲ್ಲಿ ರಾಜ್ಯ ಗ್ರಂಥಾಲಯ ಇಲಾಖೆ
ಸಾಧು ಶ್ರೀನಾಥ್​

Updated on: Feb 17, 2020 | 11:28 AM

ರಾಯಚೂರು: ಜ್ಞಾನ ದೇಗುಲಗಳಾಗಿರುವ ರಾಜ್ಯ ಗ್ರಂಥಾಲಯಗಳೀಗ ಸರಿಯಾದ ನಿರ್ವಹಣೆ ಇಲ್ಲದೆ ಸೊರಿಗಿ ಹೋಗುತ್ತಿವೆ. ತೆರಿಗೆ ವಂಚನೆಯಿಂದ ಗ್ರಂಥಾಲಯ ಇಲಾಖೆ ನಷ್ಟ ಎದುರಿಸುತ್ತಿದೆ. ರಾಜ್ಯ ಗ್ರಂಥಾಲಯ ಇಲಾಖೆಗೆ ಕೋಟಿ ಕೋಟಿ ರೂಪಾಯಿಗಳ ವಂಚನೆ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ತೆರಿಗೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡ್ತಿವೆ. ಆದ್ರೆ ವಸೂಲಿ ಮಾಡಿದ ತೆರಿಗೆಯನ್ನು ಪಾವತಿಸದೆ ಭಾರಿ ವಂಚನೆ ಮಾಡ್ತಿವೆ.

ರಾಜ್ಯದ್ಯಂತ 560 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ಹಾಗೂ ಬಿಬಿಎಂಪಿಯಿಂದಲೇ 420 ಕೋಟಿ ತೆರಿಗೆ ಹಣ ಪಾವತಿಸದೇ ಗ್ರಂಥಾಲಯ‌ ಇಲಾಖೆಗೆ ವಂಚಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳಿಂದಲೂ ಇಲಾಖೆಗೆ ಹಣ ಪಾವತಿಯಾಗಿಲ್ಲ. ಇದರಿಂದ ಗ್ರಂಥಾಲಯಗಳ ನಿರ್ವಹಣೆಗೆ ಹಣಕಾಸಿನ ಕೊರತೆ ಅಡ್ಡಿಯಾಗ್ತಿದೆ. ತೆರಿಗೆ ಹಣ ಪಾವತಿಸುವಂತೆ ಪತ್ರ ಬರೆದ್ರೂ ಡೋಂಟ್‌ಕೇರ್‌, ದಾಖಲೆಗಳಿಂದ ಸ್ಥಳೀಯ ಸಂಸ್ಥೆಗಳ ಅಕ್ರಮ ಬಯಲಾಗಿದೆ.

Published On - 9:12 am, Mon, 17 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us