ಪಾರ್ಕ್​ಗೆ ಬಂದ ವ್ಯಕ್ತಿ ಅಲ್ಲೇ ಬಿದ್ದು ಸಾವು.. ಜನರಲ್ಲಿ ಆತಂಕ

ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಜನ ಹೇಗೆ ಸಾಯ್ತಾರೆ ಅಂತ ಊಹೆ ಮಾಡೋಕು ಕಷ್ಟವಾಗ್ತಿದೆ. ಪಾರ್ಕ್​ಗೆ ವಾಕಿಂಗ್ ಬಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್ .ಟಿ.ನಗರದಲ್ಲಿ ನಡೆದಿದೆ. ಪಾರ್ಕ್​ಗೆ ಬಂದಾಗ ಅಲ್ಲೇ ಬಿದ್ದು ವ್ಯಕ್ತಿ ಮೃತಪಟಟ್ಟಿದ್ದು, ಶವವನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಪಾರ್ಕ್​ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ರು ಅನ್ನೋದೆ ಗೊತ್ತಾಗ್ತಿಲ್ಲ. ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ವ್ಯಕ್ತಿಯ ಸಾವಿನ ಸುತ್ತ ಅನುಮಾನ ಬೆಳೆದುಕೊಂಡಿದೆ. ಸಾಕಷ್ಟು ಕೇಸ್​ಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ […]

ಪಾರ್ಕ್​ಗೆ ಬಂದ ವ್ಯಕ್ತಿ ಅಲ್ಲೇ ಬಿದ್ದು ಸಾವು.. ಜನರಲ್ಲಿ ಆತಂಕ
Edited By:

Updated on: Jul 27, 2020 | 9:26 PM

ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಜನ ಹೇಗೆ ಸಾಯ್ತಾರೆ ಅಂತ ಊಹೆ ಮಾಡೋಕು ಕಷ್ಟವಾಗ್ತಿದೆ. ಪಾರ್ಕ್​ಗೆ ವಾಕಿಂಗ್ ಬಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್ .ಟಿ.ನಗರದಲ್ಲಿ ನಡೆದಿದೆ. ಪಾರ್ಕ್​ಗೆ ಬಂದಾಗ ಅಲ್ಲೇ ಬಿದ್ದು ವ್ಯಕ್ತಿ ಮೃತಪಟಟ್ಟಿದ್ದು, ಶವವನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದಿದ್ದಾರೆ.

ಪಾರ್ಕ್​ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ರು ಅನ್ನೋದೆ ಗೊತ್ತಾಗ್ತಿಲ್ಲ. ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ವ್ಯಕ್ತಿಯ ಸಾವಿನ ಸುತ್ತ ಅನುಮಾನ ಬೆಳೆದುಕೊಂಡಿದೆ. ಸಾಕಷ್ಟು ಕೇಸ್​ಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ವರದಿ ಬಂದಿರೋದು ಪತ್ತೆಯಾಗಿದೆ.

ಮನೆಯಲ್ಲಿ ಮೃತಪಟ್ಟವರಿಗೂ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಪತ್ತೆ ಆಗ್ತಿದೆ. ಬೆಂಗಳೂರಲ್ಲಿ ಸಾಕಷ್ಟು ಕೇಸ್​ಗಳಲ್ಲಿ ಇದೇ ರೀತಿ ಆಗ್ತಿದೆ. ಪಾರ್ಕ್​​ನಲ್ಲಾದ ಘಟನೆಯಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಬಿಬಿಎಂಪಿಗೂ ಶಾಕಿಂಗ್ ಸಾವುಗಳನ್ನ ಕಡಿಮೆ ಮಾಡುವುದು ಚಾಲೆಂಜ್ ಆಗಿದೆ.

Published On - 9:13 am, Mon, 27 July 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
Follow Us