‘ನಾಳೆ ಮಾರ್ಕೆಟ್ ಬಂದ್ ಮಾಡುವಂತಿಲ್ಲ, ಬಂದ್ ಮಾಡಿಸುವವರ ಮೇಲೆ ಕ್ರಿಮಿನಲ್ ಕೇಸ್’

ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಸಮಿತಿಯಿಂದ ನಾಳೆ ಕರ್ನಾಟಕ ಬಂದ್​ಗೆ ಮುಂದಾಗಿದೆ. ರೈತರ ಹೋರಾಟಕ್ಕೆ ಬೀದಿಬದಿ ವ್ಯಾಪಾರಿಗಳ ಸಂಘ ಕೂಡ ಸಾಥ್ ನೀಡಿದೆ. ಆದರೆ ಯಾವ ಮಾರ್ಕೆಟ್​ಗಳನ್ನೂ ಬಂದ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ಸೂಚನೆ ನೀಡಿದ್ದಾರೆ. ಸೋಮವಾರದ ಕರ್ನಾಟಕ ಬಂದ್​ಗೆ ವ್ಯಾಪಾರಿಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ರೈತರ ಬೆಳೆ ಇಲ್ಲಾ ಅಂದ್ರೆ ವ್ಯಾಪಾರಿಗಳೂ ಇಲ್ಲ ಎಂದು ಸ್ವಇಚ್ಛೆಯಿಂದ ಮಾರ್ಕೆಟ್​ ಬಂದ್​ಗೆ ವ್ಯಾಪಾರಿಗಳು ನಿರ್ಧರಿಸಿದ್ರು. ಆದರೆ ಬಿಬಿಎಂಪಿ ಆಯುಕ್ತ […]

ನಾಳೆ ಮಾರ್ಕೆಟ್ ಬಂದ್ ಮಾಡುವಂತಿಲ್ಲ, ಬಂದ್ ಮಾಡಿಸುವವರ ಮೇಲೆ ಕ್ರಿಮಿನಲ್ ಕೇಸ್

Updated on: Sep 27, 2020 | 1:57 PM

ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಸಮಿತಿಯಿಂದ ನಾಳೆ ಕರ್ನಾಟಕ ಬಂದ್​ಗೆ ಮುಂದಾಗಿದೆ. ರೈತರ ಹೋರಾಟಕ್ಕೆ ಬೀದಿಬದಿ ವ್ಯಾಪಾರಿಗಳ ಸಂಘ ಕೂಡ ಸಾಥ್ ನೀಡಿದೆ. ಆದರೆ ಯಾವ ಮಾರ್ಕೆಟ್​ಗಳನ್ನೂ ಬಂದ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ಸೂಚನೆ ನೀಡಿದ್ದಾರೆ.

ಸೋಮವಾರದ ಕರ್ನಾಟಕ ಬಂದ್​ಗೆ ವ್ಯಾಪಾರಿಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ರೈತರ ಬೆಳೆ ಇಲ್ಲಾ ಅಂದ್ರೆ ವ್ಯಾಪಾರಿಗಳೂ ಇಲ್ಲ ಎಂದು ಸ್ವಇಚ್ಛೆಯಿಂದ ಮಾರ್ಕೆಟ್​ ಬಂದ್​ಗೆ ವ್ಯಾಪಾರಿಗಳು ನಿರ್ಧರಿಸಿದ್ರು. ಆದರೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಯಾವ ಮಾರ್ಕೆಟ್​ಗಳನ್ನು ಬಂದ್ ಮಾಡುವಂತಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ. ಬಲವಂತವಾಗಿ ಬಂದ್ ಮಾಡಲು ಬಂದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಸೂಚಿಸಿದ್ದಾರೆ.

ಕೆಲ ಕನ್ನಡ ಪರ ಸಂಘಟನೆಗಳು ನಗರದಲ್ಲಿರುವ ಮಾರ್ಕೆಟ್​ಗಳನ್ನ ಬಂದ್ ಮಾಡುವ ಪ್ಲಾನ್ ಮಾಡಿಕೊಂಡಿವೆ. ಹೀಗಾಗಿ ಅವರ ಪ್ರಯತ್ನ ಸಫಲವಾಗಬಾರದೆಂದು ಇಂತಹ ನಿರ್ಧಾರಕ್ಕೆ ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ. ನಾಳೆ ಯಾವುದೇ ಮಾರುಕಟ್ಟೆಗಳನ್ನ ಕ್ಲೋಸ್ ಮಾಡಬೇಡಿ. ಎಲ್ಲಾ ಮಾರ್ಕೆಟ್​ಗಳನ್ನ ಓಪನ್ ಮಾಡಿ ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.