ಮಂಗಳೂರಿಗೆ ಕಿಚ್ಚು ಹಚ್ಚಲು ಪೆಟ್ರೋಲ್ ಬಾಂಬ್ ಬಳಕೆ?

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕರಾವಳಿ ಕೆಂಡವಾಗಲು ಗಲಭೆಕೋರರಿಂದ ನಡೆದಿತ್ತಾ ಮೊದಲೇ ಪ್ಲ್ಯಾನ್..? ಎಂಬ ಅನುಮಾನ ಕಾಡುತ್ತಿದೆ. ಅಲ್ಲದೆ ಪ್ರತಿಭಟನೆಯಲ್ಲಿ ಇನ್ನಷ್ಟು ಕಿಚ್ಚು ಹಚ್ಚಲು ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರತಿಭಟನೆ ವೇಳೆ ಪೊಲೀಸರ ಶಸ್ತ್ರಾಗಾರವನ್ನೇ ದೋಚಿ ದಾಳಿ ನಡೆಸಲು ಕಿಡಿಗೇಡಿಗಳು ಭಯಾನಕ ಸ್ಕೆಚ್ ಹಾಕಿದ್ರು ಎನ್ನಲಾಗಿದೆ. ಒಂದು ವೇಳೆ ಗಲಭೆಕೋರರ ಕೈಗೆ ಬಂದೂಕು, ಮದ್ದು-ಗುಂಡು ಸಿಕ್ಕಿದ್ರೆ ಅಂದು ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಅಲ್ಲದೆ ಖಾಲಿ ರಸ್ತೆಗೆ […]

ಮಂಗಳೂರಿಗೆ ಕಿಚ್ಚು ಹಚ್ಚಲು ಪೆಟ್ರೋಲ್ ಬಾಂಬ್ ಬಳಕೆ?
ಸಾಧು ಶ್ರೀನಾಥ್​

Updated on: Dec 24, 2019 | 12:38 PM

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕರಾವಳಿ ಕೆಂಡವಾಗಲು ಗಲಭೆಕೋರರಿಂದ ನಡೆದಿತ್ತಾ ಮೊದಲೇ ಪ್ಲ್ಯಾನ್..? ಎಂಬ ಅನುಮಾನ ಕಾಡುತ್ತಿದೆ. ಅಲ್ಲದೆ ಪ್ರತಿಭಟನೆಯಲ್ಲಿ ಇನ್ನಷ್ಟು ಕಿಚ್ಚು ಹಚ್ಚಲು ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರತಿಭಟನೆ ವೇಳೆ ಪೊಲೀಸರ ಶಸ್ತ್ರಾಗಾರವನ್ನೇ ದೋಚಿ ದಾಳಿ ನಡೆಸಲು ಕಿಡಿಗೇಡಿಗಳು ಭಯಾನಕ ಸ್ಕೆಚ್ ಹಾಕಿದ್ರು ಎನ್ನಲಾಗಿದೆ. ಒಂದು ವೇಳೆ ಗಲಭೆಕೋರರ ಕೈಗೆ ಬಂದೂಕು, ಮದ್ದು-ಗುಂಡು ಸಿಕ್ಕಿದ್ರೆ ಅಂದು ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಅಲ್ಲದೆ ಖಾಲಿ ರಸ್ತೆಗೆ ಗೂಡ್ಸ್ ಆಟೋದಲ್ಲಿ ಕಲ್ಲಿನ ಮೂಟೆಗಳನ್ನು ತಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ದಾಳಿ ನಡೆಸಿದ್ದಾರೆ. ದಾಳಿ ನಡೆಸಿರುವ ದುಷ್ಕರ್ಮಿಗಳು ಯಾರೆಂದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

Published On - 12:26 pm, Tue, 24 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us