ಹಬ್ಬಕ್ಕೆ ಬಲಿ ಕೊಡಲು ತಂದಿದ್ದ 8 ಒಂಟೆ ರಕ್ಷಣೆ, ಎಲ್ಲಿ?

ಕಲಬುರಗಿ: ಬಕ್ರೀದ್‌ ವೇಳೆ ಬಲಿ ಕೊಡಲು ರಾಜಾಸ್ಥಾನದಿಂದ ತರಲಾಗಿದ್ದ 8 ಒಂಟೆಗಳನ್ನು ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ರಕ್ಷಿಸಿರುವ ಘಟನೆ ಇಂದು ನಗರದಲ್ಲಿ ನೆಡೆದಿದೆ. ಆಗಸ್ಟ್ 1ರಂದು ನಡೆಯುವ ಬಕ್ರೀದ್ ಹಬ್ಬ ಸಂದರ್ಭದಲ್ಲಿ ಪ್ರಾಣಿ ವಧೆ ಮಾಡಲೆಂದು ರಾಜಾಸ್ಥಾನದಿಂದ ಒಂಟೆಗಳನ್ನು ತಂದಿದ್ದ ಆರೋಪಿಗಳನ್ನು ಆಳಂದ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರೆಲ್ಲ ಮಧ್ಯ ಪ್ರದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ಒಟ್ಟು 8 ಒಂಟೆಗಳನ್ನು ರಕ್ಷಿಸಿರುವ ಪೊಲೀಸರು ರಾಜಸ್ಥಾನದಿಂದ […]

ಹಬ್ಬಕ್ಕೆ ಬಲಿ ಕೊಡಲು ತಂದಿದ್ದ 8 ಒಂಟೆ ರಕ್ಷಣೆ, ಎಲ್ಲಿ?
ಸಾಧು ಶ್ರೀನಾಥ್​

Updated on: Jul 21, 2020 | 11:11 AM

ಕಲಬುರಗಿ: ಬಕ್ರೀದ್‌ ವೇಳೆ ಬಲಿ ಕೊಡಲು ರಾಜಾಸ್ಥಾನದಿಂದ ತರಲಾಗಿದ್ದ 8 ಒಂಟೆಗಳನ್ನು ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ರಕ್ಷಿಸಿರುವ ಘಟನೆ ಇಂದು ನಗರದಲ್ಲಿ ನೆಡೆದಿದೆ.

ಆಗಸ್ಟ್ 1ರಂದು ನಡೆಯುವ ಬಕ್ರೀದ್ ಹಬ್ಬ ಸಂದರ್ಭದಲ್ಲಿ ಪ್ರಾಣಿ ವಧೆ ಮಾಡಲೆಂದು ರಾಜಾಸ್ಥಾನದಿಂದ ಒಂಟೆಗಳನ್ನು ತಂದಿದ್ದ ಆರೋಪಿಗಳನ್ನು ಆಳಂದ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರೆಲ್ಲ ಮಧ್ಯ ಪ್ರದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ಒಟ್ಟು 8 ಒಂಟೆಗಳನ್ನು ರಕ್ಷಿಸಿರುವ ಪೊಲೀಸರು ರಾಜಸ್ಥಾನದಿಂದ ಒಂಟೆ ತರುತ್ತಿದ್ದ 6 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಧ್ಯಕ್ಕೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Published On - 11:02 am, Tue, 21 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us