ಚರಂಡಿ ಸ್ವಚ್ಛತೆ ಮಾಡಿಲ್ಲ ಅಂತ ಕಿಲ್ಲನಕೇರ ಗ್ರಾಮದ ಜನ ಏನ್ ಮಾಡುದ್ರು ಗೊತ್ತಾ?

ಚರಂಡಿ ಸ್ವಚ್ಛತೆ ಮಾಡಿ ತ್ಯಾಜ್ಯವನ್ನ ಗ್ರಾಮ ಪಂಚಾಯತಿ ಕಚೇರಿ ಬಾಗಿಲ ಮುಂದೆ ಸುರಿದಿರುವ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದಲ್ಲಿ ನಡೆದಿದೆ.

ಚರಂಡಿ ಸ್ವಚ್ಛತೆ ಮಾಡಿಲ್ಲ ಅಂತ ಕಿಲ್ಲನಕೇರ ಗ್ರಾಮದ ಜನ ಏನ್ ಮಾಡುದ್ರು ಗೊತ್ತಾ?
ಆಯೇಷಾ ಬಾನು

Updated on: Dec 06, 2020 | 9:03 AM

ಯಾದಗಿರಿ: ಚರಂಡಿ ಸ್ವಚ್ಛತೆ ಮಾಡಿ ತ್ಯಾಜ್ಯವನ್ನ ಗ್ರಾಮ ಪಂಚಾಯತಿ ಕಚೇರಿ ಬಾಗಿಲ ಮುಂದೆ ಸುರಿದಿರುವ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚರಂಡಿಗಳಲ್ಲಿ ಹುಳು ತುಂಬಿಕೊಂಡು ದುರ್ವಾಸನೆ ಬರ್ತಾಯಿದ್ದು ಗ್ರಾಮಸ್ಥರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದಾರೆ. ಆದ್ರೆ ಪಿಡಿಒ ಮಾತ್ರ ದೂರನ್ನ ಕಿವಿ ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನ ಪಂಚಾಯಿತಿ ಕಚೇರಿ ಬಾಗಿಲ ಮುಂದೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಚುನಾವಣೆಗೆ ಬಹಿಷ್ಕಾರ ಹಾಕಿದ ನಾಲ್ಕು ಗ್ರಾಮ ಪಂಚಾಯಿತಿಗಳು


Published On - 8:48 am, Sun, 6 December 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us