ಚರಂಡಿ ಸ್ವಚ್ಛತೆ ಮಾಡಿಲ್ಲ ಅಂತ ಕಿಲ್ಲನಕೇರ ಗ್ರಾಮದ ಜನ ಏನ್ ಮಾಡುದ್ರು ಗೊತ್ತಾ?

ಚರಂಡಿ ಸ್ವಚ್ಛತೆ ಮಾಡಿ ತ್ಯಾಜ್ಯವನ್ನ ಗ್ರಾಮ ಪಂಚಾಯತಿ ಕಚೇರಿ ಬಾಗಿಲ ಮುಂದೆ ಸುರಿದಿರುವ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದಲ್ಲಿ ನಡೆದಿದೆ.

ಚರಂಡಿ ಸ್ವಚ್ಛತೆ ಮಾಡಿಲ್ಲ ಅಂತ ಕಿಲ್ಲನಕೇರ ಗ್ರಾಮದ ಜನ ಏನ್ ಮಾಡುದ್ರು ಗೊತ್ತಾ?

Updated on: Dec 06, 2020 | 9:03 AM

ಯಾದಗಿರಿ: ಚರಂಡಿ ಸ್ವಚ್ಛತೆ ಮಾಡಿ ತ್ಯಾಜ್ಯವನ್ನ ಗ್ರಾಮ ಪಂಚಾಯತಿ ಕಚೇರಿ ಬಾಗಿಲ ಮುಂದೆ ಸುರಿದಿರುವ ಘಟನೆ ಯಾದಗಿರಿ ತಾಲೂಕಿನ ಕಿಲ್ಲನಕೇರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚರಂಡಿಗಳಲ್ಲಿ ಹುಳು ತುಂಬಿಕೊಂಡು ದುರ್ವಾಸನೆ ಬರ್ತಾಯಿದ್ದು ಗ್ರಾಮಸ್ಥರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದಾರೆ. ಆದ್ರೆ ಪಿಡಿಒ ಮಾತ್ರ ದೂರನ್ನ ಕಿವಿ ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನ ಪಂಚಾಯಿತಿ ಕಚೇರಿ ಬಾಗಿಲ ಮುಂದೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಚುನಾವಣೆಗೆ ಬಹಿಷ್ಕಾರ ಹಾಕಿದ ನಾಲ್ಕು ಗ್ರಾಮ ಪಂಚಾಯಿತಿಗಳು


Published On - 8:48 am, Sun, 6 December 20