Benefits of Onions: ಸಂಧಿವಾತ ಸಮಸ್ಯೆಗೆ ಈರುಳ್ಳಿಯ ಪ್ರಯೋಜನಗಳು

ಅಸ್ಥಿಸಂಧಿವಾತ ಮತ್ತು ಸಂಧಿವಾತ ಎಂಬ ಸಾಮಾನ್ಯ ವಿಧಗಳನ್ನು ಕಾಣಬಹುದು. ಈರುಳ್ಳಿಯಲ್ಲಿ ಕ್ವೆರ್ಸೆಟಿನ್, ಫ್ಲೇವನಾಯ್ಡ್​​​​ಗಳು ಹೇರಳವಾಗಿರುವುದರಿಂದ ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಚೆನ್ನೈ ಆರೋಗ್ಯ ತಜ್ಞರಾದ ಡಾ. ಹರಿಪ್ರಿಯಾ ಹೇಳುತ್ತಾರೆ.

Benefits of Onions: ಸಂಧಿವಾತ ಸಮಸ್ಯೆಗೆ ಈರುಳ್ಳಿಯ ಪ್ರಯೋಜನಗಳು
ಸಂಧಿವಾತದಲ್ಲಿ ಈರುಳ್ಳಿಯ ಪ್ರಯೋಜನಗಳು

Updated on: Jun 27, 2023 | 3:24 PM

ಸಂಧಿವಾತವನ್ನು ಕೀಲುಗಳ ಮೇಲೆ ಪರಿಣಾಮ ಬೀರುವ ಉರಿಯೂತ ಎಂದು ಕರೆಯಲಾಗುತ್ತದೆ. ಇದರಲ್ಲಿ ಅಸ್ಥಿಸಂಧಿವಾತ ಮತ್ತು ಸಂಧಿವಾತ ಎಂಬ ಸಾಮಾನ್ಯ ವಿಧಗಳನ್ನು ಕಾಣಬಹುದು. ಈರುಳ್ಳಿಯಲ್ಲಿ ಕ್ವೆರ್ಸೆಟಿನ್, ಫ್ಲೇವನಾಯ್ಡ್​​​​ಗಳು ಹೇರಳವಾಗಿರುವುದರಿಂದ ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಈರುಳ್ಳಿಯನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಸಲಾಗುತ್ತದೆ ಮತ್ತು ಅಡುಗೆ ಹಾಗೂ ಔಷಧೀಯ ಸಸ್ಯವಾಗಿ ಪರಿಗಣಿಸಲಾಗಿದೆ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದ್ದು, ಯುರೋಪ್, ಉತ್ತರ ಅಮೇರಿಕಾ, ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಬೆಳೆಯಲಾಗುತ್ತದೆ. ಈರುಳ್ಳಿಯಲ್ಲಿರುವ ಆಂಥೋಸಯಾನಿನ್‌ಗಳು ಅವು ಕೆಂಪು ಅಥವಾ ನೇರಳೆ ಬಣ್ಣದಲ್ಲಿ ಕಾಣಲು ಕಾರಣವಾಗಿವೆ. ಈರುಳ್ಳಿಯನ್ನು ಬ್ಯಾಕ್ಟೀರಿಯಾ ವಿರೋಧಿ, ಆಂಟಿಥ್ರೊಂಬೋಟಿಕ್ ಎಂದು ಚೆನ್ನೈನ ಆರೋಗ್ಯ ತಜ್ಞರಾದ ಡಾ. ಹರಿಪ್ರಿಯಾ ಹೇಳುತ್ತಾರೆ.

ಸಂಧಿವಾತದಲ್ಲಿ ಈರುಳ್ಳಿಯ ಪ್ರಯೋಜನಗಳು:

ರುಮಟಾಯ್ಡ್ ಸಂಧಿವಾತ ಹೊಂದಿರುವ ಮಹಿಳೆಯರ ಮೇಲೆ ನಡೆಸಿದ ಅಧ್ಯಯನವು 8 ವಾರಗಳವರೆಗೆ ಕ್ವೆರ್ಸೆಟಿನ್ (500mg/day) ನ ನಿರಂತರ ನೀಡಲಾಯಿತು. ಕ್ವೆರ್ಸೆಟಿನ್ ಒಂದು ನೈಸರ್ಗಿಕ ಫ್ಲೇವೊನೈಡ್ ಆಗಿದ್ದು, ಇದು ಇರುಳ್ಳಿಯಲ್ಲಿ ಕಂಡುಬರುತ್ತದೆ. ಕ್ವೆರ್ಸೆಟಿನ್ ಪೂರೈಕೆಯು ರುಮಟಾಯ್ಡ್ ಸಂಧಿವಾತಕ್ಕೆ ಸಂಬಂಧಿಸಿದ ಮುಂಜಾನೆ ಬಿಗಿತವನ್ನು ಕಡಿಮೆ ಮಾಡಿತು ಎಂದು ಡಾ. ಹರಿಪ್ರಿಯಾ ಹೇಳುತ್ತಾರೆ.

ಇದನ್ನೂ ಓದಿ: ಮಧುಮೇಹ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಈರುಳ್ಳಿಯ ಪ್ರಯೋಜನಗಳು

ಉರಿಯೂತಕ್ಕೆ ಕಾರಣವಾದ ದೊಡ್ಡ ಪ್ರಮಾಣದ ROS (ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳು) ಉತ್ಪತ್ತಿಯಾದಾಗ, ಅಂಗಾಂಶಗಳು ಮತ್ತು ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಇನ್ನೂ ಹೆಚ್ಚಿನ ಪ್ರಮಾಣದ ROS ಶೇಖರಣೆಗೆ ಕಾರಣವಾಗಬಹುದು. ಪ್ರಾಥಮಿಕವಾಗಿ ಈ ಸಮಸ್ಯೆಗೆ ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್, ಫ್ಲೇವೊನಾಲ್ ಮತ್ತು ವಿಟಮಿನ್ ಸಿ ಸುಧಾರಿಸುತ್ತದೆ. ಉರಿಯೂತದ ಹಲವಾರು ಆಕ್ಸಿಡೇಟಿವ್ ಒತ್ತಡವನ್ನು ತಗ್ಗಿಸುತ್ತವೆ,” ಎಂದು ತಜ್ಞರು ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us