ಏರ್ ಇಂಡಿಯಾ ಪೈಲಟ್​ಗಳಿಗೂ ಮಹಾಮಾರಿ ಕೊರೊನಾ ಅಟ್ಯಾಕ್!

ಮುಂಬೈ: ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ ಕೊರೊನಾ ಮಹಾಮಾರಿ ಇದೀಗ ವಿಮಾನ ಸಂಸ್ಥೆ ಸಿಬ್ಬಂದಿಯ ದೇಹವನ್ನೂ ಹೊಕ್ಕಿದೆ. ಮುಂಬೈನಲ್ಲಿ ಏರ್ ಇಂಡಿಯಾದ 7 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಏರಿ ಇಂಡಿಯಾದ ಓರ್ವ ಇಂಜಿನಿಯರ್, ಓರ್ವ ಟೆಕ್ನಿಷಿಯನ್ ಹಾಗೂ ಐವರು ಪೈಲಟ್ ಸೇರಿ 7 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಎಲ್ಲಾ ಪೈಲಟ್‌ಗಳು ಮುಂಬೈ ಮೂಲದವರಾಗಿದ್ದಾರೆ. ಮೊದಲು ಇವರಲ್ಲಿ ಕೊರೊನಾ ವೈರಸ್​ನ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವ 72 ಗಂಟೆಗಳ […]

ಏರ್ ಇಂಡಿಯಾ ಪೈಲಟ್​ಗಳಿಗೂ ಮಹಾಮಾರಿ ಕೊರೊನಾ ಅಟ್ಯಾಕ್!
ಸಾಧು ಶ್ರೀನಾಥ್​

Updated on: May 10, 2020 | 6:24 PM

ಮುಂಬೈ: ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ ಕೊರೊನಾ ಮಹಾಮಾರಿ ಇದೀಗ ವಿಮಾನ ಸಂಸ್ಥೆ ಸಿಬ್ಬಂದಿಯ ದೇಹವನ್ನೂ ಹೊಕ್ಕಿದೆ. ಮುಂಬೈನಲ್ಲಿ ಏರ್ ಇಂಡಿಯಾದ 7 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಏರಿ ಇಂಡಿಯಾದ ಓರ್ವ ಇಂಜಿನಿಯರ್, ಓರ್ವ ಟೆಕ್ನಿಷಿಯನ್ ಹಾಗೂ ಐವರು ಪೈಲಟ್ ಸೇರಿ 7 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

ಈ ಎಲ್ಲಾ ಪೈಲಟ್‌ಗಳು ಮುಂಬೈ ಮೂಲದವರಾಗಿದ್ದಾರೆ. ಮೊದಲು ಇವರಲ್ಲಿ ಕೊರೊನಾ ವೈರಸ್​ನ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವ 72 ಗಂಟೆಗಳ ಮೊದಲು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅದರ ಪ್ರಕಾರ ಅವರು ಕೊವಿಡ್-19 ಸೋಂಕಿಗೆ ಒಳಗಾಗಿದ್ದಾರೆಂದು ವರದಿ ಬಂದಿದೆ.

ವಿಮಾನಯಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಈಗಾಗಲೇ ಸರ್ಕಾರ ಹೊರಡಿಸಿದೆ. ಅದರಂತೆ ಸಿಬ್ಬಂದಿ ವಿಮಾನ ಹಾರಾಟ ಪ್ರಾರಂಭವಾಗುವ ಮೊದಲು ಮತ್ತು ನಂತರ ಕೊರೊನಾ ವೈರಸ್ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.

Published On - 6:21 pm, Sun, 10 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us