Amphan ಚಂಡಮಾರುತ Super Cyclone ಆಗಿ ಪರಿವರ್ತನೆ! ಹೆಚ್ಚಿದೆ ಆತಂಕ..

ಹೈದರಾಬಾದ್: ಅದಾಗಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ತೀವ್ರತರ ಪರಿಣಾಮ ಬೀರುತ್ತಿರುವ ಅಂಫಾನ್ ಚಂಡಮಾರುತ ಇದೀಗ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ. ಸದ್ಯ ಲಘು ಚಂಡಮಾರುತವಾಗಿ ಉತ್ತರ ವಾಯವ್ಯ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದು, ಇದರ ಪ್ರಭಾವದಿಂದಾಗಿ ಉಭಯ ತೆಲುಗು ರಾಜ್ಯಗಳಲ್ಲಿ ಮೇಘಾವೃತ ವಾತಾವರಣ, ಸದ್ಯ ಒಡಿಶಾದ ಪಾರಾದೀಪಕ್ಕೆ 780 ಕಿ.ಮಿ ದೂರದಲ್ಲಿ ಲಘು ತೂಫಾನ್ ರೂಪದಲ್ಲಿ ಸಾಗುತ್ತಿದೆ. ಮಂದಿನ 12 ಗಂಟೆಗಳಲ್ಲಿ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ ಎಂದು ಹವಾಮಾನ ಇಲಾಖೆ […]

Amphan ಚಂಡಮಾರುತ Super Cyclone ಆಗಿ ಪರಿವರ್ತನೆ! ಹೆಚ್ಚಿದೆ ಆತಂಕ..
ಸಾಧು ಶ್ರೀನಾಥ್​

Updated on: May 18, 2020 | 8:39 PM

ಹೈದರಾಬಾದ್: ಅದಾಗಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ತೀವ್ರತರ ಪರಿಣಾಮ ಬೀರುತ್ತಿರುವ ಅಂಫಾನ್ ಚಂಡಮಾರುತ ಇದೀಗ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ. ಸದ್ಯ ಲಘು ಚಂಡಮಾರುತವಾಗಿ ಉತ್ತರ ವಾಯವ್ಯ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದು, ಇದರ ಪ್ರಭಾವದಿಂದಾಗಿ ಉಭಯ ತೆಲುಗು ರಾಜ್ಯಗಳಲ್ಲಿ ಮೇಘಾವೃತ ವಾತಾವರಣ, ಸದ್ಯ ಒಡಿಶಾದ ಪಾರಾದೀಪಕ್ಕೆ 780 ಕಿ.ಮಿ ದೂರದಲ್ಲಿ ಲಘು ತೂಫಾನ್ ರೂಪದಲ್ಲಿ ಸಾಗುತ್ತಿದೆ.

ಮಂದಿನ 12 ಗಂಟೆಗಳಲ್ಲಿ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ ಎಂದು ಹವಾಮಾನ ಇಲಾಖೆ ಎಲ್ಲೋ ಮೆಸ್ಸೆಜ್ ಬಿಡುಗಡೆ ಮಾಡಿದೆ. ಇದೇ 20 ರಂದು ಹತಿಯಾ ಐಲ್ಯಾಂಡ್ ಬಳಿ ತೀವ್ರ ತೂಫಾನ್ ಆಗಿ ಪರಿವರ್ತನೆಗೊಂಡು ತೀರವನ್ನು ದಾಟಲಿದೆ ಅಂಫಾನ್ ಸೈಕ್ಲೋನ್. ಇದರ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಸಮುದ್ರ ತೀರಗಳಲ್ಲಿ ಭಾರಿ ಬದಲಾವಣೆಯಾಗಲಿದ್ದು, ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿನ ಬಂದರುಗಳಲ್ಲಿ ಅಧಿಕಾರಿಗಳು ಎರಡನೇ ನಂಬರಿನ ಎಚ್ಚರಿಕೆ ನೀಡಿದ್ದಾರೆ.

ಅಂಫಾನ್ ಚಂಡಮಾರುತದ ಪರಿಣಾಮ, ತಮಿಳುನಾಡಿನಲ್ಲಿಯೂ ಭಾರಿ ಬಿರುಗಾಳಿ ಮಳೆಗೆ ಮೀನುಗಾರರ ದೋಣಿಗಳು ಧ್ವಂಸಗೊಂಡಿವೆ. ರಾಮೇಶ್ವರಂ ಸಮುದ್ರ ಸೇರಿದಂತೆ ವಿವಿಧೆಡೆ ಅಂಫಾನ್ ಚಂಡಮಾರುತದಿಂದಾಗಿ ತೀವ್ರ ಬಿರುಗಾಳಿ, ಮಾರಕ ಅಲೆಗಳು ಎದ್ದಿವೆ. ಇದರಿಂದಾಗಿ ನೂರಕ್ಕೂ ಅಧಿಕ ಬೋಟ್​ಗಳು ಛಿದ್ರಗೊಂಡಿವೆ. ತೀವ್ರ ಗಾಳಿಗೆ ಬೋಟುಗಳು ವಿವಿಧ ತೀರಗಳಿಗೆ ಕೊಚ್ಚಿಕೊಂಡು ಹೋಗಿವೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ‌ ಹೈಲೆವಲ್ ಮೀಟಿಂಗ್: ಅಂಫಾನ್ ಚಂಡಮಾರುತ ಪರಿಸ್ಥಿತಿ ಅಧ್ಯಯನಕ್ಕಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ‌ ಹೈಲೆವಲ್ ಮೀಟಿಂಗ್ ನಡೆದಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗೃಹ ಖಾತೆ, ‌ವಿಪತ್ತು ತುರ್ತು ನಿರ್ವಹಣೆ ಅಧಿಕಾರಿಗಳನ್ನೊಳಗೊಂಡ ಉನ್ನತ ಸಭೆ ನಡೆದಿದೆ.

‘ಅಂಫಾನ್’ ಚಂಡಮಾರುತಕ್ಕೆ ಮೀನುಗಾರ ಬಲಿ:  ಆಂಧ್ರದ ವಿಜಯನಗರ ಜಿಲ್ಲೆಯ ಪತಿವಾಢ ಬರಿವಾಡ ಗ್ರಾಮದ ಮೀನುಗಾರ ಸಾವಿಗೀಡಾಗಿದ್ದಾನೆ. ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಪಲ್ಟಿಯಾದಾಗ ಆತ ಸಾವನ್ನಪ್ಪಿದ್ದಾನೆ.

Published On - 5:56 pm, Mon, 18 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us