ಬಾಂಗ್ಲಾ ಭಾರತವನ್ನು ಶತ್ರುವಿನಂತೆ ಕಾಣುತ್ತಿದೆ, 1970ರಲ್ಲಿ ಮಾಡಿರುವ ಸಹಾಯ ಮರೆತು ಹೋಯ್ತಾ? ಇದೇನಾ ಕೃತಜ್ಞತೆ

ಭಾರತ ನೀಡಿದ ಅಪಾರ ಸಹಾಯವನ್ನು ಮರೆತು ಬಾಂಗ್ಲಾದೇಶ ಈಗ ಭಾರತವನ್ನು ಶತ್ರುವಿನಂತೆ ಕಾಣುತ್ತಿದೆ. 1971ರ ವಿಮೋಚನಾ ಯುದ್ಧದ ಸಮಯದಲ್ಲಿ ಭಾರತೀಯರು ಲಕ್ಷಾಂತರ ರೂ.ಗಳನ್ನು ಸಂಗ್ರಹಿಸಿ ಬಾಂಗ್ಲಾ ಪರಿಹಾರ ನಿಧಿಗೆ ನೀಡಿದ್ದರು. ಆದರೆ, ಇತ್ತೀಚೆಗೆ ಹಿಂದೂ ಯುವಕ ದೀಪು ಚಂದ್ರ ದಾಸ್‌ನ ಕ್ರೂರ ಹತ್ಯೆಯಂತಹ ಘಟನೆಗಳು ಬಾಂಗ್ಲಾದೇಶದ ಕೃತಘ್ನತೆಯನ್ನು ಎತ್ತಿ ತೋರಿಸುತ್ತವೆ.

ಬಾಂಗ್ಲಾ ಭಾರತವನ್ನು ಶತ್ರುವಿನಂತೆ ಕಾಣುತ್ತಿದೆ, 1970ರಲ್ಲಿ ಮಾಡಿರುವ ಸಹಾಯ ಮರೆತು ಹೋಯ್ತಾ? ಇದೇನಾ ಕೃತಜ್ಞತೆ
ಸ್ಟ್ಯಾಂಪ್

Updated on: Dec 22, 2025 | 8:02 AM

ನವದೆಹಲಿ, ಡಿಸೆಂಬರ್ 22: ಬಾಂಗ್ಲಾದೇಶ(Bangladesh)ವು ಭಾರತವನ್ನು ಶತ್ರುವಿನಂತೆ ಕಾಣುತ್ತಿದೆ, 1970ರಲ್ಲಿ ಭಾರತ ಮಾಡಿರುವ ಸಹಾಯ ಮರೆತುಹೋಯಿತೇ ಎನ್ನುವ ಅನುಮಾನ ಮೂಡಿದೆ. 1970 ರ ದಶಕದಲ್ಲಿ, ಭಾರತದಲ್ಲಿ ಲಕ್ಷಾಂತರ ಜನರು ಪ್ರತಿ ಬಸ್ ಟಿಕೆಟ್‌ನಲ್ಲಿ 5 ಪೈಸೆ ಹೆಚ್ಚುವರಿಯಾಗಿ, 5 ವರ್ಷಗಳಿಗೂ ಹೆಚ್ಚು ಕಾಲ ಬಾಂಗ್ಲಾ ದೇಶ ಪರಿಹಾರ ನಿಧಿಯಾಗಿ ಪಾವತಿಸಿದರು.

ಬಾಂಗ್ಲಾ ದೇಶಕ್ಕೆ ಪರಿಹಾರವಾಗಿ ಸಿನಿಮಾ ಮಂದಿರದಲ್ಲಿ ಟಿಕೆಟ್‌ಗೆ ಹೆಚ್ಚುವರಿಯಾಗಿ 0.25 ರೂ. ಪಾವತಿಸಲಾಯಿತು, ಇವು ಸಂಕಷ್ಟದಲ್ಲಿರುವ ದೇಶವನ್ನು ನಿರ್ಮಿಸಲು ಸಹಾಯ ಮಾಡಲು ನಮ್ಮ ಪೀಳಿಗೆಯ ಕೊಡುಗೆಯಾಗಿತ್ತು, ಆದರೆ ಇಂದು, ಬಾಂಗ್ಲಾದೇಶ ಭಾರತದ ಕೆಟ್ಟ ಶತ್ರುವಿನಂತೆ ವರ್ತಿಸುತ್ತಿದೆ. ಇದೇನಾ ಕೃತಜ್ಞತೆ.

1970 ರ ದಶಕದಲ್ಲಿ, ಬಾಂಬೆ ನಗರದ ಲಕ್ಷಾಂತರ ಜನರು ಬಾಂಗ್ಲಾದೇಶ ಪರಿಹಾರ ನಿಧಿಯಾಗಿ 5 ವರ್ಷಗಳಿಗೂ ಹೆಚ್ಚು ಕಾಲ ಪ್ರತಿ ಬೆಸ್ಟ್ ಬಸ್ ಟಿಕೆಟ್‌ಗೆ 5 ಪೈಸೆ ಹೆಚ್ಚುವರಿಯಾಗಿ ಪಾವತಿಸಿದರು. ಸಿನಿಮಾ ಮಂದಿರದಲ್ಲಿ ಬಾಂಗ್ಲಾದೇಶಕ್ಕೆ ಪರಿಹಾರವಾಗಿ ಪ್ರತಿ ಟಿಕೆಟ್‌ಗೆ 0.25 ಹೆಚ್ಚುವರಿಯಾಗಿ ಪಾವತಿಸಲಾಯಿತು. 1970 ರ ದಶಕದಲ್ಲಿ ಭಾರತದಲ್ಲಿ ಜನರು ಪಾವತಿಸಿದ ಹೆಚ್ಚುವರಿ ಮೊತ್ತವು ಬಾಂಗ್ಲಾದೇಶ ಪರಿಹಾರ ನಿಧಿಗೆ ಸಂಗ್ರಹಿಸಲಾದ ಒಂದು ಸಣ್ಣ ಮೊತ್ತವಾಗಿತ್ತು.

ಬಾಂಬೆಯಂತಹ ನಗರಗಳಲ್ಲಿನ ಜನರು ಐದು ವರ್ಷಗಳಿಗೂ ಹೆಚ್ಚು ಕಾಲ ಪ್ರತಿ ಪ್ರಯಾಣಕ್ಕೆ ಪ್ರತಿ ಬೆಸ್ಟ್ ಬಸ್ ಟಿಕೆಟ್‌ಗೆ 5 ಪೈಸೆ ಹೆಚ್ಚುವರಿ ಪಾವತಿಸಿದರು. ಪರಿಹಾರ ಪ್ರಯತ್ನದ ಭಾಗವಾಗಿ ಪ್ರತಿ ಸಿನಿಮಾ ಹಾಲ್ ಟಿಕೆಟ್‌ಗೆ ಹೆಚ್ಚುವರಿಯಾಗಿ 0.25 ರೂ. ವಿಧಿಸಲಾಯಿತು. ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ 1971 ರ ಸ್ವಾತಂತ್ರ್ಯ ಸಂಗ್ರಾಮದ ನಂತರ ನೆರೆಯ ದೇಶಕ್ಕೆ ಸಹಾಯ ಮಾಡಲು ಇದು ಸಾರ್ವಜನಿಕರಿಂದ ಬಂದ ಕೊಡುಗೆಯಾಗಿತ್ತು. ಈ ಕುರಿತು ಹರ್ಷ್ ಕಾಕರ್ ಎಂಬುವವರು ಪೋಸ್ಟ್​ ಮಾಡಿದ್ದರು.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಥಳಿಸಿ, ಮರಕ್ಕೆ ಕಟ್ಟಿಹಾಕಿ, ಸುಟ್ಟು ಹಾಕಿದ ಪಾಪಿಗಳು

ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯ ಭಾಲುಕಾ ಪ್ರದೇಶದಲ್ಲಿ ನಡೆದ ಹಿಂದೂ ಯುವಕನ ಕ್ರೂರ ಹತ್ಯೆ ಪ್ರಕರಣ ಸಂಬಂಧ 7 ಮಂದಿಯನ್ನ ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ದೃಢಪಡಿಸಿದ್ದಾರೆ. ದೀಪು ಚಂದ್ರ ದಾಸ್ ಎನ್ನುವ ಗಾರ್ಮೆಂಟ್‌ ಕಾರ್ಖಾನೆ ಕಾರ್ಮಿಕನನ್ನ ಗುರುವಾರ ರಾತ್ರಿ ಸ್ಥಳೀಯರ ಗುಂಪೊಂದು ಥಳಿಸಿ ಕೊಂದಿತ್ತು.

ಪ್ರವಾದಿ ಮೊಹಮ್ಮದ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನೆಂದು ಆರೋಪಿಸಿ ಸ್ಥಳೀಯ ನಿವಾಸಿಗಳ ಗುಂಪು ಹತ್ಯೆ ಮಾಡಿತ್ತು. ಬಳಿಕ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:59 am, Mon, 22 December 25