ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ. ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ […]

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!
ಸಾಧು ಶ್ರೀನಾಥ್​

Updated on: Nov 07, 2020 | 3:55 PM

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ.

ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ ಸರ್ಕಾರಕ್ಕೆ ಮನವಿ ಸಲ್ಲಿಸಿ.. ಗುರ್ಮಿತ್​ನ ತಾಯಿ 85 ವರ್ಷ ನಸೀಬ್ ಕೌರ್ ಅನಾರೋಗ್ಯದಿಂದ ಬಳಲುತ್ತಿದ್ದು, ಮಗನನ್ನು ನೋಡಲು ಹಂಬಲಿಸುತ್ತಿದ್ದಾರೆ. ಗುರುಗ್ರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ತನ್ನ ಪತಿ ಗುರ್ಮಿತ್​ಗೆ ಪರೋಲ್ ನೀಡಿ, ಕಳುಹಿಸಬೇಕು ಎಂದು ಕೋರಿದ್ದಳು. ಇದಕ್ಕೆ ಸ್ಪಂದಿಸಿದ ಹರಿಯಾಣದ  ಮನೋಹರ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಅಕ್ಟೋಬರ್ 24ರಂದು ಒಂದು ದಿನದ ಮಟ್ಟಿಗೆ ಪರೋಲ್​ ಮೇಲೆ ಬಿಗಿ ಭದ್ರತೆಯಲ್ಲಿ ಗುರ್ಮಿತ್​ನನ್ನು ಹೊರಬಿಟ್ಟಿತ್ತು.

54 ವರ್ಷದ ಗುರ್ಮಿತ್ ರಾಮ್​ ರಹೀಂ ಪ್ರಸ್ತುತ ರೋಹ್ಟಕ್​ನ ಸುನೇರಿಯಾ ಜೈಲಿನಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. 2017ರ ಆಗಸ್ಟ್ ತಿಂಗಳಿಂದ ಗುರ್ಮಿತ್ ರಾಮ್​ ರಹೀಂ ಜೈಲುವಾಸ ಅನುಭವಿಸುತ್ತಿದ್ದಾನೆ. ಆಗಸ್ಟ್ 25ರಂದು ಗುರ್ಮಿತ್ ರಾಮ್​ ರಹೀಂನನ್ನು ಜೈಲುಶಿಕ್ಷೆಗೆ ಗುರಿಪಡಿಸಿದಾಗ ಹಿಂಸಾಚಾರ ಭುಗಿಲೆದ್ದು 41 ಮಂದಿ ಅಸುನೀಗಿದ್ದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us