ಬೇಹುಗಾರಿಕೆ ಸಾಮರ್ಥ್ಯ ಹೆಚ್ಚಳಕ್ಕೆ ನಾಳೆ ಹಾರಲಿದೆ ಇಸ್ರೋ PSLV C48

ಹೈದರಾಬಾದ್: ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಪಿಎಸ್​ಎಲ್​ವಿ ಸಿ48 ಉಡಾವಣೆಯಾಗಲಿದೆ. ಇಂದು ಸಂಜೆ 4.35ರ ಸಮಯಕ್ಕೆ ಕೌಂಟ್ ಡೌನ್ ಪ್ರಾರಂಭವಾಗಲಿದ್ದು, 23ಗಂಟೆಗಳ ಕೌಂಟ್ ಡೌನ್ ನಂತರ ಅಂದರೆ ಡಿಸೆಂಬರ್ 11ರ ಸಂಜೆ 3.25 ನಿಮಿಷಕ್ಕೆ PSLV C48 ಉಡಾವಣೆಯಾಗಲಿದೆ. ಭಾರತ ದೇಶದ ಇಂಟಲಿಜೆನ್ಸ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯೋಗ ನೆರವಾಗಲಿದೆ. RISAT 2BR1 ಉಪಗ್ರಹವನ್ನ ಕಕ್ಷೆಗೆ ಕಳುಹಿಸಲಾಗುತ್ತೆ. ಇದರ ಜೊತೆಯೇ 9 ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. […]

ಬೇಹುಗಾರಿಕೆ ಸಾಮರ್ಥ್ಯ ಹೆಚ್ಚಳಕ್ಕೆ ನಾಳೆ ಹಾರಲಿದೆ ಇಸ್ರೋ PSLV C48
ಸಾಧು ಶ್ರೀನಾಥ್​

Updated on: Dec 10, 2019 | 7:53 PM

ಹೈದರಾಬಾದ್: ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಪಿಎಸ್​ಎಲ್​ವಿ ಸಿ48 ಉಡಾವಣೆಯಾಗಲಿದೆ. ಇಂದು ಸಂಜೆ 4.35ರ ಸಮಯಕ್ಕೆ ಕೌಂಟ್ ಡೌನ್ ಪ್ರಾರಂಭವಾಗಲಿದ್ದು, 23ಗಂಟೆಗಳ ಕೌಂಟ್ ಡೌನ್ ನಂತರ ಅಂದರೆ ಡಿಸೆಂಬರ್ 11ರ ಸಂಜೆ 3.25 ನಿಮಿಷಕ್ಕೆ PSLV C48 ಉಡಾವಣೆಯಾಗಲಿದೆ.

ಭಾರತ ದೇಶದ ಇಂಟಲಿಜೆನ್ಸ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯೋಗ ನೆರವಾಗಲಿದೆ. RISAT 2BR1 ಉಪಗ್ರಹವನ್ನ ಕಕ್ಷೆಗೆ ಕಳುಹಿಸಲಾಗುತ್ತೆ. ಇದರ ಜೊತೆಯೇ 9 ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಭೂಮಿಯಿಂದ 576ಕಿ.ಮೀ ಎತ್ತರದಲ್ಲಿನ ಕಕ್ಷೆಗೆ ಒಟ್ಟು 10 ಉಪಗ್ರಹಗಳನ್ನು ಸೇರಿಸಲು ಇಸ್ರೋ ತಯಾರಿ ನಡೆಸಿದೆ.

Published On - 3:18 pm, Tue, 10 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us