
ಛತ್ತೀಸ್ಗಢ: ಐಟಿಬಿಪಿ ಯೋಧರ ಮಧ್ಯೆ ಗಲಾಟೆ ನಡೆದಿದ್ದು, 6 ಯೋಧರ ಹತ್ಯೆಯಾಗಿದೆ. ಛತ್ತೀಸ್ಗಢದ ನಾರಾಯಣಪುರ ಕ್ಯಾಂಪ್ನಲ್ಲಿ ಘಟನೆ ನಡೆದಿದೆ.
ಯೋಧನೊಬ್ಬ ಎಕೆ 47ನಿಂದ ಪರಸ್ಪರ ಮನಬಂದಂತೆ ಸಹೋದ್ಯೋಗಿಗಳ ಮೇಲೆ ಗುಂಡುಹಾರಿಸಿದ್ದಾನೆ. ಇದರಿಂದ ಐದು ಮಂದಿ ಯೋಧರು ಸಾವಿಗೀಡಾಗಿದ್ದಾರೆ. ಉಳಿದ ಐಟಿಬಿಪಿ ಯೋಧರು ಗುಂಡು ಹಾರಿಸಿದ ಯೋಧನನ್ನು ಹತ್ಯೆಗೈದಿದ್ದಾರೆ. ಪರಸ್ಪರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಫೈರಿಂಗ್ನಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Published On - 12:10 pm, Wed, 4 December 19