ಸಹೋದ್ಯೋಗಿ ಯೋಧರ ಮಧ್ಯೆ ಗುಂಡಿನ ಗಲಾಟೆ, 6 ಯೋಧರ ಹತ್ಯೆ

ಛತ್ತೀಸ್‌ಗಢ: ಐಟಿಬಿಪಿ ಯೋಧರ ಮಧ್ಯೆ ಗಲಾಟೆ ನಡೆದಿದ್ದು, 6 ಯೋಧರ ಹತ್ಯೆಯಾಗಿದೆ. ಛತ್ತೀಸ್‌ಗಢದ ನಾರಾಯಣಪುರ ಕ್ಯಾಂಪ್‌ನಲ್ಲಿ ಘಟನೆ ನಡೆದಿದೆ. ಯೋಧನೊಬ್ಬ ಎಕೆ 47ನಿಂದ ಪರಸ್ಪರ ಮನಬಂದಂತೆ ಸಹೋದ್ಯೋಗಿಗಳ ಮೇಲೆ ಗುಂಡುಹಾರಿಸಿದ್ದಾನೆ. ಇದರಿಂದ ಐದು ಮಂದಿ ಯೋಧರು ಸಾವಿಗೀಡಾಗಿದ್ದಾರೆ. ಉಳಿದ ಐಟಿಬಿಪಿ ಯೋಧರು‌ ಗುಂಡು ಹಾರಿಸಿದ ಯೋಧನನ್ನು ಹತ್ಯೆಗೈದಿದ್ದಾರೆ. ಪರಸ್ಪರರ ಮೇಲೆ ನಡೆದ ಗುಂಡಿನ‌ ದಾಳಿಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಫೈರಿಂಗ್‌ನಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸಹೋದ್ಯೋಗಿ ಯೋಧರ ಮಧ್ಯೆ ಗುಂಡಿನ  ಗಲಾಟೆ, 6 ಯೋಧರ ಹತ್ಯೆ
ಸಾಧು ಶ್ರೀನಾಥ್​

Updated on: Dec 04, 2019 | 12:28 PM

ಛತ್ತೀಸ್‌ಗಢ: ಐಟಿಬಿಪಿ ಯೋಧರ ಮಧ್ಯೆ ಗಲಾಟೆ ನಡೆದಿದ್ದು, 6 ಯೋಧರ ಹತ್ಯೆಯಾಗಿದೆ. ಛತ್ತೀಸ್‌ಗಢದ ನಾರಾಯಣಪುರ ಕ್ಯಾಂಪ್‌ನಲ್ಲಿ ಘಟನೆ ನಡೆದಿದೆ.

ಯೋಧನೊಬ್ಬ ಎಕೆ 47ನಿಂದ ಪರಸ್ಪರ ಮನಬಂದಂತೆ ಸಹೋದ್ಯೋಗಿಗಳ ಮೇಲೆ ಗುಂಡುಹಾರಿಸಿದ್ದಾನೆ. ಇದರಿಂದ ಐದು ಮಂದಿ ಯೋಧರು ಸಾವಿಗೀಡಾಗಿದ್ದಾರೆ. ಉಳಿದ ಐಟಿಬಿಪಿ ಯೋಧರು‌ ಗುಂಡು ಹಾರಿಸಿದ ಯೋಧನನ್ನು ಹತ್ಯೆಗೈದಿದ್ದಾರೆ. ಪರಸ್ಪರರ ಮೇಲೆ ನಡೆದ ಗುಂಡಿನ‌ ದಾಳಿಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಫೈರಿಂಗ್‌ನಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Published On - 12:10 pm, Wed, 4 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us