ಸುಪ್ರೀಂಕೋರ್ಟ್ ಆವರಣದಲ್ಲಿ ವಕೀಲರ ಕೊಠಡಿ ನನಗೆ ಬೇಡ ಎಂದ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನ್​ಖರ್

ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಸುಪ್ರೀಂಕೋರ್ಟ್‌ನ ಸಂಬಂಧಿತ ರಿಜಿಸ್ಟ್ರಾರ್‌ಗೆ ಬರೆದ ಪತ್ರದಲ್ಲಿ ಧನ್​ಖರ್ ಅವರ ಹೆಸರನ್ನು ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆವರಣದಲ್ಲಿ ವಕೀಲರ ಕೊಠಡಿ ನನಗೆ ಬೇಡ ಎಂದ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನ್​ಖರ್
ಜಗದೀಪ್ ಧನ್​ಖರ್
Edited By:

Updated on: Jul 26, 2022 | 7:04 PM

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಜಗದೀಪ್ ಧನ್​ಖರ್ (Jagdeep Dhankhar) ಅವರು ದೆಹಲಿಯ ಸುಪ್ರೀಂಕೋರ್ಟ್ (Supreme Court) ಆವರಣದಲ್ಲಿ ವಕೀಲರಿಗಿರುವ ಕೊಠಡಿ  ಪಡೆಯುವ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ ಎಂದು ಎಸ್‌ಸಿಬಿಎ ಮಂಗಳವಾರ ತಿಳಿಸಿದೆ. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ವಿಕಾಸ್ ಸಿಂಗ್ ಅವರು ಸುಪ್ರೀಂಕೋರ್ಟ್‌ನ ಸಂಬಂಧಿತ ರಿಜಿಸ್ಟ್ರಾರ್‌ಗೆ ಬರೆದ ಪತ್ರದಲ್ಲಿ ಧನ್​ಖರ್ ಅವರ ಹೆಸರನ್ನು ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ. “ಬಾರ್‌ನ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಜಗದೀಪ್ ಧನ್​ಖರ್ ಜೀ ಅವರು ಚೇಂಬರ್ ಹಂಚಿಕೆ ಪ್ರಕ್ರಿಯೆಯಿಂದ ಸ್ವಯಂಪ್ರೇರಣೆಯಿಂದ ಹಿಂದೆ ಸರಿಯುವ ತಮ್ಮ ಇಚ್ಛೆಯನ್ನು ತಿಳಿಸಿದ್ದು, ಇದರಿಂದಾಗಿ ಚೇಂಬರ್ ಅಗತ್ಯವಿರುವ ಇತರ ವಕೀಲರಿಗೆ ಅದನ್ನು ಹಂಚಿಕೆ ಮಾಡಬಹುದು ಎಂದು ಎಸ್‌ಸಿಬಿಎ ಅಧ್ಯಕ್ಷರು ಪತ್ರದಲ್ಲಿ ತಿಳಿಸಿದ್ದಾರೆ. ಚೇಂಬರ್‌ಗಳ ಹಂಚಿಕೆಗೆ ಪರಿಗಣಿಸಬೇಕಾದ ವಕೀಲರ ಪಟ್ಟಿಯನ್ನು ಪುನರ್ ರಚಿಸಬೇಕು ಎಂದು ವಿಕಾಸ್ ಸಿಂಗ್ ಹೇಳಿದರು.

ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧನ್​ಖರ್ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಉಪಾಧ್ಯಕ್ಷರ ಅಭ್ಯರ್ಥಿಯಾಗಿದ್ದು, ಚುನಾವಣಾ ಕಾಲೇಜಿನಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಇರುವ ಭಾರೀ ಬೆಂಬಲದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಖಚಿತವಾಗಿದೆ.

ಒಂದು ಕೊಠಡಿಯನ್ನು ಇಬ್ಬರಿಗೆ ಹಂಚಿಕೆ ಮಾಡುವ ಉದ್ದೇಶಿತ ವ್ಯವಸ್ಥೆಗೆ ಹಲವಾರು ವಕೀಲರು ಅಸಮಾಧಾನ ವ್ಯಕ್ತಪಡಿಸುವುದರೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಚೇಂಬರ್‌ಗಳ ಹಂಚಿಕೆ ಗೊಂದಲಕ್ಕೆ ಕಾರಣವಾಗಿದೆ. ಸೋಮವಾರ ಸುಪ್ರೀಂಕೋರ್ಟ್‌ಗೆ ಈ ವಿಷಯ ಬಂದಾಗ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದಾಗ ಮುಂಬೈನಲ್ಲಿ 120 ಚದರ ಅಡಿಯ ಸಣ್ಣ ಚೇಂಬರ್ ಅನ್ನು ಹೇಗೆ ಬಳಸಿಕೊಂಡಿದ್ದೆ ಎಂಬುದನ್ನು ನೆನಪಿಸಿಕೊಂಡರು.

Published On - 6:16 pm, Tue, 26 July 22