ಫಿರಂಗಿಪುರ ಬಳಿ ಭೀಕರ ಘಟನೆ: ಬಸ್ ಪಲ್ಟಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಹೈದರಾಬಾದ್: ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ದುರಂತ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರ ಬಳಿ ನಡೆದಿದೆ. ಚಿರಾಲದಿಂದ ಹೈದರಾಬಾದ್​ಗೆ ಹೊರಟಿತ್ತು ಎನ್ನಲಾದ ಬಸ್ ಚಲಿಸುತ್ತಿರುವಾಗ ಏಕಾಏಕಿ ಪಲ್ಟಿಯಾಗಿದೆ. ಈ ಪರಿಣಾಮ ಇಷ್ಟೆಲ್ಲಾ ಅನಾಹುತಗಳು ಸಂಭವಿಸಿವೆ. ಬಸ್ ಸೀಟುಗಳಲ್ಲಿ ಇಬ್ಬರು ಮಕ್ಕಳು ಸಿಕ್ಕಿ‌ ಹಾಕಿ ಕೊಂಡಿದ್ದರು. ಸದ್ಯ ಅವರನ್ನ ಅಡ್ಡವಾಗಿದ್ದ ರಾಡ್, ಗ್ಲಾಸ್ ಮುರಿದು ರಕ್ಷಣೆ ಮಾಡಲಾಗಿದೆ. ಬಸ್​ನಲ್ಲಿ 30ಕ್ಮೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ಈ ಪೈಕಿ 20ಕ್ಕೂ ಹೆಚ್ಚು ಮಂದಿಗೆ […]

ಫಿರಂಗಿಪುರ ಬಳಿ ಭೀಕರ ಘಟನೆ: ಬಸ್ ಪಲ್ಟಿ, 20ಕ್ಕೂ ಹೆಚ್ಚು ಜನರಿಗೆ ಗಾಯ
ಆಯೇಷಾ ಬಾನು

Updated on: Oct 15, 2020 | 7:25 AM

ಹೈದರಾಬಾದ್: ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ದುರಂತ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರ ಬಳಿ ನಡೆದಿದೆ. ಚಿರಾಲದಿಂದ ಹೈದರಾಬಾದ್​ಗೆ ಹೊರಟಿತ್ತು ಎನ್ನಲಾದ ಬಸ್ ಚಲಿಸುತ್ತಿರುವಾಗ ಏಕಾಏಕಿ ಪಲ್ಟಿಯಾಗಿದೆ. ಈ ಪರಿಣಾಮ ಇಷ್ಟೆಲ್ಲಾ ಅನಾಹುತಗಳು ಸಂಭವಿಸಿವೆ.

ಬಸ್ ಸೀಟುಗಳಲ್ಲಿ ಇಬ್ಬರು ಮಕ್ಕಳು ಸಿಕ್ಕಿ‌ ಹಾಕಿ ಕೊಂಡಿದ್ದರು. ಸದ್ಯ ಅವರನ್ನ ಅಡ್ಡವಾಗಿದ್ದ ರಾಡ್, ಗ್ಲಾಸ್ ಮುರಿದು ರಕ್ಷಣೆ ಮಾಡಲಾಗಿದೆ. ಬಸ್​ನಲ್ಲಿ 30ಕ್ಮೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ಈ ಪೈಕಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

Published On - 7:23 am, Thu, 15 October 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us