ಮೂಳೆ ಕೊರೆಯುವ ಚಳಿಯಲ್ಲಿಯೂ ಯುದ್ಧಕ್ಕೆ ಸನ್ನದ್ದರಾಗಿದ್ದೀರಾ? ಎಂಟೆದೆ ಬಂಟರನ್ನು ಕೈಬೀಸಿ ಕರೆಯುವ ಸದಾ ಉದ್ವಿಗ್ನ ಸ್ಥಳದಲ್ಲಿ ನಾಲ್ಕಾರು ಹೆಜ್ಜೆ ಹಾಕೋಣ ಬನ್ನೀ…

Siachen Glacier: ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಇನ್ನೂ ಗಣನೀಯವಾಗಿ ಸುಧಾರಿಸಿದೆ. ಭಾರೀ ತೂಕದ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳ ಸಹಾಯದಿಂದ ಭಾರತ ಸರ್ಕಾರವು ಚಳಿಗಾಲದಲ್ಲಿಯೂ ಸೈನಿಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಸೈನಿಕರಿಗೆ ಆಹಾರ ಪೂರೈಸಲು ದಿನಕ್ಕೆ 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಮೂಳೆ ಕೊರೆಯುವ ಚಳಿಯಲ್ಲಿಯೂ ಯುದ್ಧಕ್ಕೆ ಸನ್ನದ್ದರಾಗಿದ್ದೀರಾ? ಎಂಟೆದೆ ಬಂಟರನ್ನು ಕೈಬೀಸಿ ಕರೆಯುವ ಸದಾ ಉದ್ವಿಗ್ನ ಸ್ಥಳದಲ್ಲಿ ನಾಲ್ಕಾರು ಹೆಜ್ಜೆ ಹಾಕೋಣ ಬನ್ನೀ...
ಎಂಟೆದೆ ಬಂಟರನ್ನು ಕೈಬೀಸಿ ಕರೆಯುತ್ತದೆ ಸದಾ ಉದ್ವಿಗ್ನ ಆ ಸ್ಥಳ!

Updated on: Jun 22, 2024 | 11:54 AM

ಮೂಳೆ ಕೊರೆಯುವ ಚಳಿ.. ಆಮ್ಲಜನಕ ಉಪಕರಣವಿದ್ದರಷ್ಟೇ ಉಸಿರಾಟ.. ಸದಾ ಅಲ್ಲಿ ಶತ್ರುಸೇನೆ ಹಾರಿಸುವ ಬುಲ್ಲೆಟ್​​ಗಳಿಗಿಂತಲೂ ಭೀಕರ ಪರಿಸ್ಥಿತಿ.. ಐಸ್ ಬಿರುಗಾಳಿ ಮತ್ತು ಹಿಮನದಿಗಳಿರುವ ಸ್ಥಳ. ಇದು ಸಿಯಾಚಿನ್ ಗ್ಲೇಸಿಯರ್ ನಲ್ಲಿ ನಿರಂತರವಾಗಿ ಕಾವಲು ಕಾಯುತ್ತಿರುವ ಭಾರತದ ಸಾವಿರಾರು ಸೈನಿಕರ ಪರಿಸ್ಥಿತಿ. ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಮೈನಸ್ 50 ಡಿಗ್ರಿ ತಾಪಮಾನ.. ಶತ್ರು ಶಿಬಿರಗಳಿಂದ ಬರುವ ಗುಂಡುಗಳಿಗಿಂತ ಅಪಾಯಕಾರಿ ಹವಾಮಾನ.. ಐಸ್ ಬಿರುಗಾಳಿ ಮತ್ತು ಹಿಮನದಿಗಳಿರುವ ಸ್ಥಳ. ಸಿಯಾಚಿನ್ ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿತ್ತು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಅದೀಗ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನ ಅವಿಭಾಜ್ಯ ಅಂಗವಾಗಿದೆ. ಸಿಯಾಚಿನ್ ಎಂದರೆ ಟಿಬೆಟಿಯನ್ ಭಾಷೆಯಲ್ಲಿ ‘ಬಾಲ್ಟಿ’ ಎಂದರೆ ‘ಗುಲಾಬಿ ಕಾಡು’. ಭಾರತದ ನಿಯಂತ್ರಣದಲ್ಲಿರುವ ಸಿಯಾಚಿನ್ ಮೇಲೆ 40 ವರ್ಷಗಳ ಹಿಂದೆ, ಪಾಕಿಸ್ತಾನ ಕಣ್ಣು ಹಾಕಿತ್ತು. ಪರ್ವತಾರೋಹಿಗಳನ್ನು ಕಳುಹಿಸಲು ಆರಂಭಿಸಿದ ಪಾಕಿಸ್ತಾನದ ದುರಹಂಕಾರಕ್ಕೆ ಕಡಿವಾಣ ಹಾಕಲು ಭಾರತೀಯ ಸೇನೆ ನಡೆಸಿದ ಕಾರ್ಯತಂತ್ರದ ಕ್ರಮವೇ ಆಪರೇಷನ್ ಮೇಘದೂತ್. ಭಾರತೀಯ ಸೇನೆ 15,000 ಅಡಿ ಎತ್ತರದಲ್ಲಿ ದಾಳಿ ನಡೆಸಿ ಗ್ಲೇಸಿಯರ್ ಕಡೆ ನೋಡಲೂ ಸಾಧ್ಯವಾಗದಂತೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ ಭಾರತೀಯ ಸೇನೆ. ವಿವಾದ ಯಾಕೆ? ಸಿಯಾಚಿನ್ ಗ್ಲೇಸಿಯರ್ ಆರಂಭದಿಂದಲೂ ವಿವಾದಾತ್ಮಕವಾಗಿದೆ. ದೇಶ ವಿಭಜನೆಯ ಸಮಯದಲ್ಲಿ, ವಾಸ್ತವಿಕ ರೇಖೆಯ ಅಂಚಿನಲ್ಲಿ ಮಾನವ ಉಳಿವಿಗಾಗಿ ಯಾವುದೇ ಅವಕಾಶವಿಲ್ಲದ ಸಿಯಾಚಿನ್...

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ