ಭ್ರಷ್ಟಾಚಾರ ಆರೋಪ; ಸಿಎಸ್​ಕೆ ತಂಡದ ಮಾಲೀಕರ ಕಂಪನಿ ಮೇಲೆ ಇಡಿ ದಾಳಿ..!

Updated on: Feb 01, 2024 | 4:18 PM

Former BCCI President: : ಎನ್ ಶ್ರೀನಿವಾಸನ್ ಅವರ ಚೆನ್ನೈ ಮೂಲದ ಇಂಡಿಯಾ ಸಿಮೆಂಟ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇಡಿ, ಇಂಡಿಯಾ ಸಿಮೆಂಟ್ ಕಂಪನಿ ಮೇಲೆ ದಾಳಿ ನಡೆಸಿದ್ದು, ಕಂಪನಿಯ ಎಂಡಿ ಎನ್ ಶ್ರೀನಿವಾಸನ್​ಗೆ ಸಂಕಷ್ಟ ತಂದೊಡ್ಡಿದೆ.

1 / 6
ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಐಪಿಎಲ್​ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್ ಶ್ರೀನಿವಾಸನ್ ಅವರ ಅವರ ಹಲವು ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದೆ.

ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಐಪಿಎಲ್​ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್ ಶ್ರೀನಿವಾಸನ್ ಅವರ ಅವರ ಹಲವು ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದೆ.

2 / 6
ಎನ್ ಶ್ರೀನಿವಾಸನ್ ಅವರ ಚೆನ್ನೈ ಮೂಲದ ಇಂಡಿಯಾ ಸಿಮೆಂಟ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇಡಿ, ಇಂಡಿಯಾ ಸಿಮೆಂಟ್ ಕಂಪನಿ ಮೇಲೆ ದಾಳಿ ನಡೆಸಿದ್ದು, ಕಂಪನಿಯ ಎಂಡಿ ಎನ್ ಶ್ರೀನಿವಾಸನ್​ಗೆ ಸಂಕಷ್ಟ ತಂದೊಡ್ಡಿದೆ.

ಎನ್ ಶ್ರೀನಿವಾಸನ್ ಅವರ ಚೆನ್ನೈ ಮೂಲದ ಇಂಡಿಯಾ ಸಿಮೆಂಟ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇಡಿ, ಇಂಡಿಯಾ ಸಿಮೆಂಟ್ ಕಂಪನಿ ಮೇಲೆ ದಾಳಿ ನಡೆಸಿದ್ದು, ಕಂಪನಿಯ ಎಂಡಿ ಎನ್ ಶ್ರೀನಿವಾಸನ್​ಗೆ ಸಂಕಷ್ಟ ತಂದೊಡ್ಡಿದೆ.

3 / 6
ಎನ್ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ ಕಂಪನಿಯು ದೇಶದ ಅತಿದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಇಂಡಿಯಾ ಸಿಮೆಂಟ್ ಕಂಪನಿಯು ದೇಶದ ವಿವಿಧ ಸ್ಥಳಗಳಲ್ಲಿ ಬ್ರ್ಯಾಂಚ್​ಗಳನ್ನು ಹೊಂದಿದೆ. ವರದಿಗಳ ಪ್ರಕಾರ ಇದೀಗ ಇಡಿ, ಇಂಡಿಯಾ ಸಿಮೆಂಟ್‌ ಸಂಸ್ಥೆಗೆ ಬೀಗ ಹಾಕಿಸಿ, ತನಿಖೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಎನ್ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ ಕಂಪನಿಯು ದೇಶದ ಅತಿದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಇಂಡಿಯಾ ಸಿಮೆಂಟ್ ಕಂಪನಿಯು ದೇಶದ ವಿವಿಧ ಸ್ಥಳಗಳಲ್ಲಿ ಬ್ರ್ಯಾಂಚ್​ಗಳನ್ನು ಹೊಂದಿದೆ. ವರದಿಗಳ ಪ್ರಕಾರ ಇದೀಗ ಇಡಿ, ಇಂಡಿಯಾ ಸಿಮೆಂಟ್‌ ಸಂಸ್ಥೆಗೆ ಬೀಗ ಹಾಕಿಸಿ, ತನಿಖೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

4 / 6
ಇಂಡಿಯಾ ಸಿಮೆಂಟ್​ನ ಎಂಡಿಯಾಗಿರುವ ಎನ್ ಶ್ರೀನಿವಾಸನ್ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರೂ ಆಗಿದ್ದಾರೆ. 2013 ರಲ್ಲಿ, ಎನ್ ಶ್ರೀನಿವಾಸನ್ ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬಾಗಿಯಾಗಿತ್ತು.

ಇಂಡಿಯಾ ಸಿಮೆಂಟ್​ನ ಎಂಡಿಯಾಗಿರುವ ಎನ್ ಶ್ರೀನಿವಾಸನ್ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರೂ ಆಗಿದ್ದಾರೆ. 2013 ರಲ್ಲಿ, ಎನ್ ಶ್ರೀನಿವಾಸನ್ ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬಾಗಿಯಾಗಿತ್ತು.

5 / 6
ನಂತರ ಈ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್​ನಿಂದ ನಿಷೇಧಿಸಲಾಗಿತ್ತು. ಇದೇ ವೇಳೆ ಎನ್ ಶ್ರೀನಿವಾಸನ್ ಕೂಡ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕಾಯಿತು.

ನಂತರ ಈ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್​ನಿಂದ ನಿಷೇಧಿಸಲಾಗಿತ್ತು. ಇದೇ ವೇಳೆ ಎನ್ ಶ್ರೀನಿವಾಸನ್ ಕೂಡ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕಾಯಿತು.

6 / 6
2008 ರಲ್ಲಿ, ಮೊದಲ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಎನ್ ಶ್ರೀನಿವಾಸನ್, ಇದರ ನಂತರ 2011 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿಯೂ ಅಯ್ಕೆಯಾದರು. ಆದರೆ ಮ್ಯಾಚ್ ಫಿಕ್ಸಿಂಗ್‌ ಆರೋಪ ಸಾಭೀತಾದ ಬಳಿಕ  ಶ್ರೀನಿವಾಸನ್ ಈ ಹುದ್ದೆಯಿಂದ ಕೆಳಗಿಳಿದರು.

2008 ರಲ್ಲಿ, ಮೊದಲ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಎನ್ ಶ್ರೀನಿವಾಸನ್, ಇದರ ನಂತರ 2011 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿಯೂ ಅಯ್ಕೆಯಾದರು. ಆದರೆ ಮ್ಯಾಚ್ ಫಿಕ್ಸಿಂಗ್‌ ಆರೋಪ ಸಾಭೀತಾದ ಬಳಿಕ ಶ್ರೀನಿವಾಸನ್ ಈ ಹುದ್ದೆಯಿಂದ ಕೆಳಗಿಳಿದರು.

Published On - 4:17 pm, Thu, 1 February 24

Follow Us