IND vs AUS 2nd ODI: ಎರಡನೇ ಏಕದಿನ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ

Updated on: Sep 25, 2023 | 7:23 AM

KL Rahul in Post Match Presentation, IND vs AUS 2nd ODI: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 99 ರನ್​ಗಳ ಜಯ ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಈ ಬೊಂಬಾಟ್ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ದಾರೆ ನೋಡಿ.

1 / 8
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. ಭಾನುವಾರ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಭಾರತ 99 ರನ್​ಗಳ ಅಮೋಘ ಗೆಲುವು ಕಂಡಿತು. ಈ ಜಯದ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. ಭಾನುವಾರ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಭಾರತ 99 ರನ್​ಗಳ ಅಮೋಘ ಗೆಲುವು ಕಂಡಿತು. ಈ ಜಯದ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

2 / 8

ಈ ಪಂದ್ಯದಲ್ಲಿ ಭಾರತ ಪರ ಶುಭ್​ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಸಿಡಿಸಿದರೆ, ರಾಹುಲ್ ಹಾಗೂ ಸೂರ್ಯಕುಮಾರ್ ಅರ್ಧಶತಕ ಚಚ್ಚಿದರು. ಈ ಬೊಂಬಾಟ್ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಭಾರತದ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ದಾರೆ ನೋಡಿ.

3 / 8

ಬೆಳಿಗ್ಗೆ ವಿಕೆಟ್ ನೋಡಿದಾಗ ಈ ಪಿಚ್ ಇಷ್ಟೊಂದು ಸ್ಪಿನ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. 400 ರನ್​ಗಳನ್ನು ಕಲೆಹಾಕಿದರೆ ನಿಮಗೆ ಆತ್ಮವಿಶ್ವಾಸ ಬರುತ್ತದೆ. 400 ರನ್​ಗಳ ಗಡಿ ತಲುಪುವುದು ನಮ್ಮ ನಿರ್ಧಾರವಾಗಿರಲಿಲ್ಲ. ನಮಗೆ ನಮ್ಮ ಕೆಲಸಗಳ ಬಗ್ಗೆ ಸ್ಪಷ್ಟತೆ ಇದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

4 / 8

ಪ್ಲೇಯಿಂಗ್ XI ನಲ್ಲಿ ಆಯ್ಕೆಯಾದ ಪ್ರತಿಯೊಬ್ಬರೂ ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕು. ಪ್ರತಿಯೊಬ್ಬರೂ ಅದೇರೀತಿ ನಡೆದುಕೊಂಡಿದ್ದಾರೆ. ನೀವು ಹೆಚ್ಚು ಕಲಿಯುತ್ತಲೇ ಇರಬೇಕು. ಮತ್ತು ಅವಕಾಶಗಳಿಗಾಗಿ ಕಾಯಬೇಕು ಎಂಬುದು ಕೆಎಲ್ ರಾಹುಲ್ ಮಾತಾಗಿತ್ತು.

5 / 8

ಕಳಪೆ ಫೀಲ್ಡಿಂಗ್ ಬಗ್ಗೆ ಮಾತನಾಡಿದ ರಾಹುಲ್, ನಾವು ಕೆಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇವೆ, ಆದರೆ ಬೆಳಕಿನ ಅಡಿಯಲ್ಲಿ ಫೀಲ್ಡಿಂಗ್ ಮಾಡುವುದು ದೈಹಿಕವಾಗಿ ಸವಾಲಿನ ಕೆಲಸವಾಗಿದೆ. ನಮ್ಮ ಆಟಗಾರರನ್ನು ಫಿಟ್ ಆಗಿಡಲು ತರಬೇತುದಾರರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ದೋಷಗಳು ಸಂಭವಿಸುತ್ತವೆ - ಕೆಎಲ್ ರಾಹುಲ್.

6 / 8

ಲೋಪ ಯಾವಾಗಲೂ ಇರುತ್ತದೆ, ನಾವು ಅದರಿಂದ ಕಲಿಯುತ್ತೇವೆ, ಆ ತಪ್ಪುಗಳನ್ನು ಸರಿ ಪಡಿಸಿ ಮತ್ತು ಮುಂದಿನ ಪಂದ್ಯದಲ್ಲಿ ಉತ್ತಮಗೊಳ್ಳುತ್ತೇವೆ. ವಿಶ್ವಕಪ್‌ಗೆ ಕೇವಲ ಒಂದೆರಡು ವಾರಗಳು ಬಾಕಿಯಿರುವುದರಿಂದ, ನಮ್ಮ ಆಟಗಾರರು ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಆ ಸವಾಲುಗಳಿಗೆ ಒಗ್ಗಿಕೊಳ್ಳಬೇಕು ಎಂದು ರಾಹುಲ್ ಹೇಳಿದ್ದಾರೆ.

7 / 8

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 399 ರನ್ ಗಳಿಸಿತು. ಶುಭ್​ಮನ್ ಗಿಲ್ 97 ಎಸೆತಗಲ್ಲಿ 104 ರನ್, ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 105, ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ ಅಜೇಯ 72, ರಾಹುಲ್ 52 ರನ್ ಸಿಡಿಸಿದರು.

8 / 8

ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ನಡುವಿನಲ್ಲಿ ಮಳೆ ಅಡ್ಡಿ ಪಡಿಸಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಲಾಯಿತು. ಆದರೆ, ಭಾರತೀಯ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್ 217 ರನ್​ಗಳಿಗೆ ಆಲೌಟ್ ಆಯಿತು. ವಾರ್ನರ್ 53 ಹಾಗೂ ಅಬಾಟ್ 54 ರನ್ ಗಳಿಸಿದರು. ಭಾರತ ಪರ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಲಾ 3 ವಿಕೆಟ್ ಕಿತ್ತರು.

Loading...
Unable to load recommendations.
Follow Us