ಕಾರ ಹುಣ್ಣಿಮೆ: ಎತ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆಸಲ್ಲಿಸಿದ ರೈತಾಪಿ ಜನ

Updated on: Jun 04, 2023 | 10:25 PM

ರಾಜ್ಯದಲ್ಲಿ ಇಂದು ಕಾರ ಹುಣ್ಣಿಮೆ ಹಬ್ಬ. ಈ ಹಿನ್ನೆಲೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

1 / 5
ಕಾರ ಹುಣ್ಣಿಮೆ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು  ಎಂದು ಉತ್ತರ 
ಕರ್ನಾಟಕದಲ್ಲಿ ಜನಪದರಾಡುವ ಮಾತು. ಮಳೆಗಾಲದ ಆರಂಭದ ಸೂಚನೆಯೂ ಈ ವೇಳೆ ಸಿಗುತ್ತದೆ.

ಕಾರ ಹುಣ್ಣಿಮೆ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು ಎಂದು ಉತ್ತರ ಕರ್ನಾಟಕದಲ್ಲಿ ಜನಪದರಾಡುವ ಮಾತು. ಮಳೆಗಾಲದ ಆರಂಭದ ಸೂಚನೆಯೂ ಈ ವೇಳೆ ಸಿಗುತ್ತದೆ.

2 / 5

ರಾಜ್ಯದಲ್ಲಿ ಇಂದು ಕಾರಹುಣ್ಣಿಮೆ ಹಬ್ಬ. ಈ ಹಿನ್ನೆಲೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

3 / 5

ಕಲಬುರಗಿ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಗ್ರಾಮಸ್ಥರು ಎತ್ತಿನ ಬಂಡಿ ಸ್ಪರ್ಧೆ ಆಯೋಜಿಸಿದ್ದರು. ಆ ಮೂಲಕ ರೈತರು ಹಬ್ಬ ಆಚರಿಸಿ ಸಂಭ್ರಮಿಸಿದರು.

4 / 5

ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಕಾರ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡಲಾಗಿದೆ. ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಬಂಡಿ ಹೋಗಿ ವಾಪಸ್ ಬರುವವರೆಗೂ ಸುರಕ್ಷಿತವಾಗಿ ಬರಬೇಕೆಂಬ ನಿಮಯವಿದ್ದು, ಏನಾದರೂ ಅವಘಡವಾದರೆ ಅಶುಭ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ,

5 / 5

ಕಾರ ಹುಣ್ಣಿಮೆ ಹಬ್ಬದಂದು ಎತ್ತಿನ ಬಂಡಿ ಸ್ಪರ್ಧೆ ಮಾಡುವುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

Published On - 7:09 pm, Sun, 4 June 23

Loading...
Unable to load recommendations.
Follow Us