
ಹೆತ್ತ ತಂದೆ ತಾಯಿ ವೃದ್ದರಾಗುತ್ತಿದ್ದಂತೆ ಅವರನ್ನು ಅನಾಥ ಆಶ್ರಮಕ್ಕೆ ಸೇರಿಸೊ ಈಗಿನ ಕಾಲದಲ್ಲಿ, ತಂದೆ ತಾಯಿಗೊಂದು ದೇವಸ್ಥಾನ (Temple) ನಿರ್ಮಾಣ ಮಾಡಿ ಪ್ರತಿನಿತ್ಯ ತಂದೆ ತಾಯಿಯ ಪ್ರತಿಮೆಗೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ ಅವರ ಪುತ್ರರು (Sons). ಅದೆಲ್ಲಿ ಅಂತೀರಾ? ಈ ವರದಿ ನೋಡಿ!

ತಂದೆ ತಾಯಿ ಅಂತಲೂ ನೋಡದೆ ವೃದ್ದಾಶ್ರಮಗಳಲ್ಲಿ ಸೇರಿಸೋ ಮಕ್ಕಳು (Children) ಇರೋ ಈ ಕಲಿಯುಗದಲ್ಲಿ ಹೆತ್ತವರಿಗಾಗಿಯೇ ದೇವಾಲಯ ನಿರ್ಮಾಣ ಮಾಡಿ ಹೆತ್ತವರ ಪ್ರತಿಮೆಗಳಿಗೆ ಪ್ರತಿ ನಿತ್ಯ ಪೂಜೆ ಪುನಸ್ಕಾರ ನಡೆಸುತ್ತಿರೋದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ( Gauribidanur) ತಾಲೂಕಿನ ಕಲ್ಲೂಡಿ ಗ್ರಾಮದ ಬಳಿ (Kalludi village).

ಗ್ರಾಮದ ನಿವೃತ್ತ ಅಧಿಕಾರಿ ಬಾಬಣ್ಣ ಎಂಬುವವರು ತಮ್ಮ ತಂದೆ ನರಸಯ್ಯ ಹಾಗೂ ತಾಯಿ ಗೌರಮ್ಮನವರ ಪ್ರತಿಮೆಗಳನ್ನ ಮಾಡಿಸಿ ಅವರಿಗೆ ದೇವಾಲಯವನ್ನ ಕಟ್ಟಿ ಪ್ರತಿನಿತ್ಯ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ)

ಇನ್ನು ನರಸಪ್ಪ-ಗೌರಮ್ಮ ದಂಪತಿಗೆ 10 ಮಂದಿ ಮಕ್ಕಳಿದ್ದು, ತಾಯಿ ಗೌರಮ್ಮನವರು 2014 ರಲ್ಲಿ ತೀರಿಕೊಂಡಿದ್ದರು. ನರಸಪ್ಪನವರು 2022 ರಲ್ಲಿ ತೀರಿಕೊಂಡಿದ್ದಾರೆ.

ಇದ್ರಿಂದ ತಮ್ಮ ತಂದೆ ತಾಯಿಯ ನೆನಪುಗಳು ಅಚ್ಚಳಿಯದಂತೆ ಉಳಿಯಬೇಕು, ತಂದೆ ತಾಯಿಯ ಪ್ರತಿರೂಪ ತಮ್ಮ ಕಣ್ಣು ಮುಂದೆಯೇ ಇರಬೇಕು ಅಂತ ಬಾಬಣ್ಣನವರು ರಾಜಸ್ಥಾನದ ನುರಿತ ಶಿಲ್ಪಿಗಳ ಕೈಯಲ್ಲಿ ಪ್ರತಿಮೆಗಳನ್ನ ಮಾಡಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ.

ತಂದೆ ತಾಯಿಯ ಪ್ರತಿಮೆಗಳಿಗೆ ಅವರ ಮಕ್ಕಳು ಪೂಜೆ ಪುನಸ್ಕಾರ ಮಾಡಿ ತಂದೆ ತಾಯಿಯ ಶ್ರಮವನ್ನು ನೆನಪಿಸಿಕೊಳ್ತಿದ್ದಾರೆ ಬಾಬಣ್ಣ ಸಹೋದರ ಸುರೇಶ್.


ಬದುಕಿರುವಾಗಲೇ ಹೆತ್ತ ತಂದೆ ತಾಯಿ ಬಗ್ಗೆ ತಾತ್ಸಾರ ತೋರುವ ಅದೆಷ್ಟೋ ಮಕ್ಕಳು ಇರುವ ಈ ಕಾಲದಲ್ಲಿ... ಸತ್ತ ಮೇಲೂ ತಂದೆ ತಾಯಿ ನೆನಪಲ್ಲಿ ದೇವಾಲಯ ಕಟ್ಟಿ ಪೂಜೆ ಪುನಸ್ಕಾರ ಮಾಡುತ್ತೀರೋ ಇವರ ಕಾಯಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.