ವಿಧುರಾಶ್ವತ್ಥ ನಾರಾಯಣಸ್ವಾಮಿ ಅದ್ದೂರಿ ಬ್ರಹ್ಮರಥೋತ್ಸವ! ಇಲ್ಲಿದೆ ಝಲಕ್​

Edited By: ಕಿರಣ್ ಹನುಮಂತ್​ ಮಾದಾರ್

Updated on: Apr 23, 2024 | 5:21 PM

ಅಲ್ಲಿರುವ ಸುಬ್ರಮಣ್ಯಸ್ವಾಮಿ ದರ್ಶನ ಮಾಡಿದರೆ ಮಕ್ಕಳಾಗುತ್ತವೆ ಎನ್ನುವ ಪ್ರತೀತಿಯೂ ಇದೆ. ಆದ್ದರಿಂದ ಪ್ರತಿದಿನ ಸಾವಿರಾರು ಜನ ಭಕ್ತರು ಅಲ್ಲಿಗೆ ಆಗಮಿಸುತ್ತಾರೆ. ಇಂದು ಅಲ್ಲಿ ಜಾತ್ರೆ- ಬ್ರಹ್ಮರಥೋತ್ಸವ ಎಂದು ಗೊತ್ತಾಗಿದ್ದೇ ತಡ, ಬಿಸಿಲನ್ನು ಲೆಕ್ಕಿಸದೆ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಸಾವಿರಾರು ಜನ ಭಕ್ತರ ಮಧ್ಯೆ ದೇವರ ರಥ ಚಲಿಸುತ್ತಿರುವುದನ್ನು ನೋಡುತ್ತಿದ್ದರೆ, ಸಾಕ್ಷತ್ ದೇವರೇ ಭೂಲೋಕಕ್ಕೆ ಆಗಮಿಸಿದಂತೆ ಭಾಸವಾಗಿತ್ತು. ಇಲ್ಲಿದೆ ಅದರ ಝಲಕ್​.‘

1 / 6
ಪ್ರಸಿದ್ದ ವಿಧುರಾಶ್ವತ್ಥ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆೆಯ ಗೌರಿಬಿದನೂರು ತಾಲೂಕಿನಲ್ಲಿದೆ. ಉತ್ತರಪಿನಾಕಿನಿ ನದಿಯ ದಂಡೆಯ ಮೇಲೆ ಅಶ್ವತ್ಥನಾರಾಯಣ ಸ್ವಾಮಿಯ ದೇವಾಲಯವಿದೆ. ಮಹಾಭಾರತ ವಿಧುರ ಇಲ್ಲಿರುವ ದೇವಸ್ಥಾನದ ಬಳಿ ಅಶ್ವತ್ಥ ಮರ ನೆಟ್ಟ ಕಾರಣ ವಿಧುರಾಶ್ವತ್ಥ ಎನ್ನುವ ಹೆಸರು ಬಂದಿದೆ.

ಪ್ರಸಿದ್ದ ವಿಧುರಾಶ್ವತ್ಥ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆೆಯ ಗೌರಿಬಿದನೂರು ತಾಲೂಕಿನಲ್ಲಿದೆ. ಉತ್ತರಪಿನಾಕಿನಿ ನದಿಯ ದಂಡೆಯ ಮೇಲೆ ಅಶ್ವತ್ಥನಾರಾಯಣ ಸ್ವಾಮಿಯ ದೇವಾಲಯವಿದೆ. ಮಹಾಭಾರತ ವಿಧುರ ಇಲ್ಲಿರುವ ದೇವಸ್ಥಾನದ ಬಳಿ ಅಶ್ವತ್ಥ ಮರ ನೆಟ್ಟ ಕಾರಣ ವಿಧುರಾಶ್ವತ್ಥ ಎನ್ನುವ ಹೆಸರು ಬಂದಿದೆ.

2 / 6
ಪ್ರತಿದಿನ ಸಾವಿರಾರು ಜನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಂದು ಅಲ್ಲಿ ಜಾತ್ರೆ- ಬ್ರಹ್ಮರಥೋತ್ಸವ ಎಂದು ಗೊತ್ತಾಗಿದ್ದೇ ತಡ, ಬಿಸಿಲನ್ನು ಲೆಕ್ಕಿಸದೆ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು.

ಪ್ರತಿದಿನ ಸಾವಿರಾರು ಜನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಂದು ಅಲ್ಲಿ ಜಾತ್ರೆ- ಬ್ರಹ್ಮರಥೋತ್ಸವ ಎಂದು ಗೊತ್ತಾಗಿದ್ದೇ ತಡ, ಬಿಸಿಲನ್ನು ಲೆಕ್ಕಿಸದೆ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು.

3 / 6
 ಇನ್ನು ಇಲ್ಲಿ ಪ್ರತಿವರ್ಷ ಬ್ರಹ್ಮರಥೋತ್ಸವ ನಡೆಯುವ ಹಾಗೆ ಇಂದು ಸಹ ರಥೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಗೌರಿಬಿದನೂರು ತಾಲೂಕಿನ ತಹಶಿಲ್ದಾರ್ ಮಹೇಶ ಪತ್ರಿ ಸೇರಿದಂತೆ ತಾಲೂಕು ಆಡಳಿತ ದೇವಸ್ಥಾನದಲ್ಲಿ ಇದ್ದು ಮೂಲಭೂತ ಸೌಕರ್ಯಗಳು ಹಾಗೂ ಮುಂಜಾಗೃತೆ ವಹಿಸಿತ್ತು.

ಇನ್ನು ಇಲ್ಲಿ ಪ್ರತಿವರ್ಷ ಬ್ರಹ್ಮರಥೋತ್ಸವ ನಡೆಯುವ ಹಾಗೆ ಇಂದು ಸಹ ರಥೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಗೌರಿಬಿದನೂರು ತಾಲೂಕಿನ ತಹಶಿಲ್ದಾರ್ ಮಹೇಶ ಪತ್ರಿ ಸೇರಿದಂತೆ ತಾಲೂಕು ಆಡಳಿತ ದೇವಸ್ಥಾನದಲ್ಲಿ ಇದ್ದು ಮೂಲಭೂತ ಸೌಕರ್ಯಗಳು ಹಾಗೂ ಮುಂಜಾಗೃತೆ ವಹಿಸಿತ್ತು.

4 / 6
ಇಲ್ಲಿರುವ ನಾಗರ ಕಲ್ಲುಗಳಿಗೆ ಹಾಲು, ತುಪ್ಪು, ಮೊಸರು ಎರೆದು ಅಭಿಷೇಕ ಮಾಡಿ, ತುಪ್ಪದ ದೀಪ ಹಚ್ಚಿದರೆ ಇಷ್ಟಾರ್ಥ ಕೊರಿಕೆ ಈಡೇರುತ್ತದೆ ಎನ್ನುವ ಪ್ರತಿತಿ ಕೂಡ ಇದೆ. ಇಂದು ವಿಶೇಷ ದಿನವಾದ ಕಾರಣ ಅಶ್ವತ್ಥನಾರಾಯಣಸ್ವಾಮಿ ಭಕ್ತರು, ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಇಲ್ಲಿರುವ ನಾಗರ ಕಲ್ಲುಗಳಿಗೆ ಹಾಲು, ತುಪ್ಪು, ಮೊಸರು ಎರೆದು ಅಭಿಷೇಕ ಮಾಡಿ, ತುಪ್ಪದ ದೀಪ ಹಚ್ಚಿದರೆ ಇಷ್ಟಾರ್ಥ ಕೊರಿಕೆ ಈಡೇರುತ್ತದೆ ಎನ್ನುವ ಪ್ರತಿತಿ ಕೂಡ ಇದೆ. ಇಂದು ವಿಶೇಷ ದಿನವಾದ ಕಾರಣ ಅಶ್ವತ್ಥನಾರಾಯಣಸ್ವಾಮಿ ಭಕ್ತರು, ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

5 / 6
ನಂತರ ನಡೆದ ವಿಧುರಾಶ್ವತ್ಥ ನಾರಾಯಣಸ್ವಾಾಮಿ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಇನ್ನೂ ಈ ವೇಳೆ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಫೆಗೆ ಪಾತ್ರರಾದರು.

ನಂತರ ನಡೆದ ವಿಧುರಾಶ್ವತ್ಥ ನಾರಾಯಣಸ್ವಾಾಮಿ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಇನ್ನೂ ಈ ವೇಳೆ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಫೆಗೆ ಪಾತ್ರರಾದರು.

6 / 6
ಈಗ ಬಿರು ಬೇಸಿಗೆ, ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಲು ಇದ್ದರೂ ಬಿಸಿಲನ್ನು ಲೆಕ್ಕಿಸದ ಜನ, ಅಶ್ವತ್ಥನಾರಾಯಣ ಸ್ವಾಮಿಯ ಜಾತ್ರೆಗೆ ಜನಸಾಗರವಾಗಿ ಹರಿದು ಬಂದಿದ್ದು ವಿಶೇಷವಾಗಿತ್ತು.

ಈಗ ಬಿರು ಬೇಸಿಗೆ, ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಲು ಇದ್ದರೂ ಬಿಸಿಲನ್ನು ಲೆಕ್ಕಿಸದ ಜನ, ಅಶ್ವತ್ಥನಾರಾಯಣ ಸ್ವಾಮಿಯ ಜಾತ್ರೆಗೆ ಜನಸಾಗರವಾಗಿ ಹರಿದು ಬಂದಿದ್ದು ವಿಶೇಷವಾಗಿತ್ತು.

Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us