ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ! ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ […]

ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!
ಸಾಧು ಶ್ರೀನಾಥ್​

Updated on: May 26, 2020 | 3:18 PM

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ!

ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ ಅಂದ್ರೆ ಮದುಮಗಳ ರೇಷ್ಮೆ ಮೇಲಿನ ಮೋಹದಿಂದ ಮಾಸ್ಕ್ ಸಹ ರೇಷ್ಮೆಯಷ್ಟೇ ನವಿರಾಗಿರಲಿ ಎಂದು ಬಯಸಿ, ರೇಷ್ಮೆ ಮಾಸ್ಕ್ ಧರಿಸಿದ್ದಾರೆ. ಜೊತೆಗೆ ಪತಿರಾಯನಿಗೂ ಅದನ್ನೇ ತೊಡಿಸಿದ್ದಾಳೆ. ಇದು ಎಂದಿನಂತೆ ಸೋಷಿಯಲ್ ಮೀಡಿಯಾಗೆ ಪುಷ್ಕಳ ಆಹಾರವಾಗಿದೆ!

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us