Navratri 2025 Day 3: ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ ಮತ್ತು ಪೂಜಾ ವಿಧಾನ ತಿಳಿಯಿರಿ
ಶರನ್ನವರಾತ್ರಿಯ ಮೂರನೇ ದಿನ ಆರಾಧಿಸುವ ಚಂದ್ರಘಂಟಾ ದೇವಿಯ ಮಹತ್ವ, ಪೂಜಾ ವಿಧಾನ ಮತ್ತು ಪುರಾಣವನ್ನು ಇಲ್ಲಿ ವಿವರಿಸಲಾಗಿದೆ. ದೇವಿಯ ಈ ರೂಪವು ಶಾಂತಿ ಹಾಗೂ ಶ್ರೇಯಸ್ಸಿನ ಸಂಕೇತವಾಗಿದೆ. ಅವಳ ಆರಾಧನೆಯಿಂದ ಪಾಪಕ್ಷಯ, ಇಚ್ಛಾ ಪೂರ್ತಿ, ಧೈರ್ಯ ಮತ್ತು ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ಕೆಂಪು ಬಣ್ಣದ ವಸ್ತ್ರ ಮತ್ತು ಮಲ್ಲಿಗೆ ಹೂವುಗಳಿಂದ ಪೂಜಿಸುವುದು ಶ್ರೇಷ್ಠ.
ಶರನ್ನವರಾತ್ರಿಯ ಮೂರನೇ ದಿನ ಆರಾಧಿಸಲ್ಪಡುವ ದುರ್ಗೆಯ ಸ್ವರೂಪವೇ ಚಂದ್ರಘಂಟಾ. ಅವಳನ್ನು ಚಂದ್ರಿಕಾ ಅಥವಾ ರಣಚಂಡಿ ಎಂದೂ ಕರೆಯಲಾಗುತ್ತದೆ. ದೇವಿಯ ವಿಗ್ರಹವನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸಿದರೆ ಶುಭಫಲ ದೊರೆಯುತ್ತದೆ. ತಲೆ ಮೇಲೆ ಗಂಟೆಯಾಕಾರದ ಅರ್ಧಚಂದ್ರ ಹೊಳೆಯುವುದರಿಂದ ಆಕೆಗೆ “ಚಂದ್ರಘಂಟಾ” ಎಂಬ ನಾಮ ಬಂದಿದೆ. ಈ ರೂಪವು ಶಾಂತಿ ಹಾಗೂ ಶ್ರೇಯಸ್ಸಿನ ಸಂಕೇತವಾಗಿದೆ.
ಪಾರ್ವತಿಯ ವಿವಾಹದ ಸಮಯದಲ್ಲಿ ಶಿವನು ತನ್ನ ಭೀಕರ ರೂಪದೊಂದಿಗೆ ಗಣಗಳೊಂದಿಗೆ ಬಂದು ನಿಂತಾಗ, ಮಾತೆ ಚಿಂತೆಗೊಂಡು ಮೂರ್ಛಿತಳಾದಳು. ಆಗ ಚಂದ್ರಘಂಟಾ ಸ್ವರೂಪದಲ್ಲಿ ಅವಳು ಪ್ರತ್ಯಕ್ಷಳಾಗಿ, ಶಿವನು ಸುಂದರ ವಧೂವರನಂತೆ ಕಾಣಬೇಕೆಂದು ಪ್ರಾರ್ಥಿಸಿದಳು. ಆಕೆಯ ಪ್ರಾರ್ಥನೆಯ ಫಲವಾಗಿ ಶಿವನು ಸೌಮ್ಯರೂಪ ತಾಳಿದನು. ಹೀಗೆ ಶಿವ–ಪಾರ್ವತಿಯ ದಿವ್ಯವಿವಾಹ ನೆರವೇರಿತು.
ಕೆಂಪು ಬಣ್ಣದ ಮಹತ್ವ:
ನವರಾತ್ರಿಯ ಮೂರನೇ ದಿನ ಕೆಂಪು ಬಣ್ಣಕ್ಕೆ ಆದ್ಯತೆ.
ಧೈರ್ಯ, ಶೌರ್ಯ ಮತ್ತು ಕೃಪೆಯ ಸಂಕೇತ.
ಕೆಂಪು ವಸ್ತ್ರ ಹಾಗೂ ಕೆಂಪು ಹೂವುಗಳಿಂದ ಆರಾಧನೆ ಮಾಡಿದರೆ ಭಕ್ತರ ಕುಟುಂಬಕ್ಕೆ ಶ್ರೇಯಸ್ಸು, ಆರ್ಥಿಕ ಸುಸ್ಥಿತಿ ಹಾಗೂ ಆಧ್ಯಾತ್ಮಿಕ ಶಕ್ತಿ ದೊರೆಯುತ್ತದೆ.
ಚಂದ್ರಘಂಟಾ ಸ್ವರೂಪಿಣಿ ಆರಾಧನೆಯಿಂದ ಭಯ, ದುರ್ಬಲತೆ, ದುಷ್ಟಬಾಧೆ ನಿವಾರಣೆಗೊಂಡು, ಜೀವನದಲ್ಲಿ ಶಕ್ತಿ, ಶಾಂತಿ ಮತ್ತು ಪರಾಕ್ರಮ ಬೆಳೆಯುತ್ತದೆ.
ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ