ವೈವಿಧ್ಯಗೊಳಿಸಿದ ಆಹಾರಕ್ರಮಗಳು ಮಕ್ಕಳ ಪ್ರೋಟೀನ್‌ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು  

| Updated By: ವಿವೇಕ ಬಿರಾದಾರ

Updated on: May 27, 2022 | 11:25 AM

ಸಾಕಷ್ಟು ಪ್ರಮಾಣದ ಆಹಾರ ಲಭ್ಯತೆಯ ಹೊರತಾಗಿಯೂ, ಭಾರತದ ಮಕ್ಕಳು ಕಳಪೆ ಪೋಷಣೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯ ಭೀಕರ ಕಾಯಿಲೆಯಿಂದಾಗಿ 2014-15ರಲ್ಲಿ ಶೇ37ರಷ್ಟು ಭಾರತೀಯ ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದರೆ

ಸಾಕಷ್ಟು ಪ್ರಮಾಣದ ಆಹಾರ ಲಭ್ಯತೆಯ ಹೊರತಾಗಿಯೂ, ಭಾರತದ ಮಕ್ಕಳು ಕಳಪೆ ಪೋಷಣೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯ ಭೀಕರ ಕಾಯಿಲೆಯಿಂದಾಗಿ 2014-15ರಲ್ಲಿ ಶೇ37ರಷ್ಟು ಭಾರತೀಯ ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದರೆ, ಶೇ21ರಷ್ಟು ಮಕ್ಕಳು ಕೃ‍ಶವಾದ ದೇಹ ಹೊಂದಿದ್ದರು, ಮತ್ತು ಶೇ34ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದರು.  ಸಾಂಕ್ರಾಮಿಕದ ಸಮಯದಲ್ಲಿ ಇದು ಉಲ್ಬಣಗೊಂಡಿರು ವಸಾಧ್ಯತೆಯಿದೆ ಎನ್ನುವುದು ದುಃಖದ ಸಂಗತಿಯಾಗಿದೆ. ಭಾರತೀಯ ಮನೆಗಳಲ್ಲಿ ಅಕ್ಕಿ ಮತ್ತು ಗೋಧಿಯಂತಹ ಪ್ರಧಾನ ಧಾನ್ಯಗಳ ಸೇವನೆಯ ಮೇಲಿನ ಪಟ್ಟುಬಿಡದ ಗಮನವು ಆಹಾರ ಕ್ರಮಗಳಲ್ಲಿನ ವೈವಿಧ್ಯತೆಯನ್ನು ಮತ್ತು ದೇಹದ ಕಾರ್ಯಗಳನ್ನು ಸಮತೋಲನಗೊಳಿಸಲು ಸಮಾನವಾಗಿ ನಿರ್ಣಾಯಕವಾಗಿರುವ ಇತರ ಪೋಷಕಾಂಶಗಳ ಸೇವನೆಯನ್ನು ತಡೆಯುತ್ತಿದೆ. ರಾಷ್ಟ್ರೀಯ ನ್ಯೂಟ್ರಿಷನ್ ಮಾನಿಟರಿಂಗ್ ಬೋರ್ಡ್‌ನ (ಎನ್‌ಎನ್‌ಎಮ್‌ಬಿ) ಸಮೀಕ್ಷೆಗಳು ಭಾರತೀಯ ಆಹಾರ ಕ್ರಮಗಳು ತಮ್ಮ ಪ್ರೋಟೀನ್‌ನ ಸುಮಾರು ಶೇ60ರಷ್ಟನ್ನು ಕಡಿಮೆ ಜೀರ್ಣ ಸಾಧ್ಯತೆ ಮತ್ತು ಗುಣಮಟ್ಟವನ್ನು ಹೊಂದಿರುವ ಧಾನ್ಯಗಳಿಂದ ಪಡೆಯುತ್ತವೆ ಎಂದು ತೋರಿಸುತ್ತವೆ.

“ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಸಾಕಷ್ಟು ಹೆಚ್ಚಾಗಿ ಮತ್ತು ವ್ಯಾಪಕವಾಗಿ ಇರುವುದರಿಂದ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ವಿಶೇಷ ಗುರಿಯನ್ನು ಹೊಂದಿದ ಶೈಕ್ಷಣಿಕ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು. ನಾವು ತಿನ್ನುವ ಆಹಾರದ ಗುಣಮಟ್ಟಕ್ಕೆ ಮೌಲ್ಯವನ್ನು ಸೇರಿಸುವುದು ಹಾಗೂ ಸಿರಿಧಾನ್ಯಗಳು ಮತ್ತು ಬೇಳೆ-ಕಾಳುಗಳಂತಹ ವೈವಿಧ್ಯಮಯ ಮೂಲಗಳನ್ನು ಬಳಸುವುದು ಬಹಳ ಮುಖ್ಯ” ಎಂದು ಐಸಿಎಆರ್‌- ನ್ಯಾಷನ ಲ್ಬ್ಯೂರೋ ಆಫ್​ ಜೆನೆಟಿಕ್ ರಿಸೋರ್ಸಸ್‌ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ಕೆ.ಸಿ. ಬನ್ಸಲ್ ಹೇಳುತ್ತಾರೆ.

ಶಾಲಾಮಕ್ಕಳಲ್ಲಿ ಇಂತಹ ಪೌಷ್ಟಿಕಾಂಶದ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು 2001ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಚಯಿಸಿತು.  ಈ ಅತ್ಯಂತ ಪರಿಣಾಮಕಾರಿ ಯೋಜನೆಯು ಸರಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳ ಮಕ್ಕಳಿಗೆ ಪ್ರತಿದಿನ ಮಧ್ಯಾಹ್ನದ ಊಟಕ್ಕೆ ಆಗತಾನೇ ಬೇಯಿಸಿದ ಮತ್ತು ಪೌಷ್ಟಿಕಾಂಶಭರಿತ ಆಹಾರವನ್ನು ನೀಡುವುದನ್ನು ಖಚಿತಪಡಿಸುತ್ತದೆ. ಶಾಲಾಮಕ್ಕಳಿಗೆ ಬಡಿಸುವ ಊಟದಲ್ಲಿ ಪ್ರೋಟೀನ್‌ನ ಗುಣಮಟ್ಟವನ್ನು ಹೆಚ್ಚಿಸಲು ಮಧ್ಯಾಹ್ನದ ಊಟದಲ್ಲಿ “ಪಿಎಮ್‌ಪೋಶಣ್‌” ಯೋಜನೆಯಡಿಯಲ್ಲಿ ಸಿರಿಧಾನ್ಯಗಳನ್ನು ಸೇರಿಸಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತಸರಕಾರವು ವಿನಂತಿಮಾಡಿದೆ. ಸಸ್ಯಾಧಾರಿತ ಪ್ರೋಟೀನ್​ ಪರ್ಯಾಯಗಳು ಮತ್ತು ಸೋಯಾ ಪ್ರೋಟೀನ್​ ಮಕ್ಕಳಿಗೆ ಅತಿಹೆಚ್ಚು ಪ್ರಯೋಜನಕಾರಿಯಾಗಿವೆ,  ಮತ್ತು ಈ ಉತ್ಪನ್ನಗಳನ್ನು ಸರಕಾರವು ಶಾಲಾಮಕ್ಕಳ ಮಧ್ಯಾಹ್ನದ ಊಟದ ಯೋಜನೆಯಂತಹ ಸರಕಾರಿ ಕಾರ್ಯಕ್ರಮಗಳಲ್ಲಿ ಅಳವಡಿಸಬೇಕೆಂದು ದೇಶದ ಆಹಾರ ವಿಜ್ಞಾನಿಗಳು ಹಲವು ವರ್ಷಗಳಿಂದ ಶಿಫಾರಸ್ಸು ಮಾಡುತ್ತಿದ್ದಾರೆ.

“ಸಸ್ಯಾಧಾರಿತ ಮಾಂಸದಂತಹ ಉತ್ಪನ್ನಗಳು ಸೋಯಾನಗೆಟ್ಸ್‌ಗಳಂತಹ ಹಿಂದಿನ ಪೀಳಿಗೆಯ ಉತ್ಪನ್ನಗಳನ್ನು ಹಿಂದಿಕ್ಕಿವೆ. ಅವು ಮಾಂಸ ಮತ್ತು ಕೋಳಿಯಿಂದ ತಯಾರಿಸಲಾದ ಆಹಾರಗಳ ರುಚಿಯನ್ನು ನೀಡುತ್ತಿವೆ. ಸರಿಯಾದ ರುಚಿಯೊಂದಿಗೆ ಸರಿಯಾದ ಬೆಲೆಯಲ್ಲಿ ಪ್ರೋಟೀನ್‌ಗಳನ್ನು ಪಡೆಯಲು ಇದೊಂದು ಅವಕಾಶವಾಗಬೇಕು, ಮತ್ತು ಸರ್ಕಾರವು ಇಲ್ಲಿ ಪ್ರಮುಖವಾದ ಪಾತ್ರವನ್ನುವಹಿಸಬಹುದಾಗಿದೆ. ಉದಾಹರಣೆಗೆ, ಈ ಹೊಸ ಆಹಾರಗಳನ್ನು ಮಧ್ಯಾಹ್ನದ ಊಟದಂತಹ ಪೌಷ್ಟಿಕಾಂಶ ಭದ್ರತಾ ಯೋಜನೆಗಳಲ್ಲಿಅಳವಡಿಸಬಹುದು” ಎಂದು  ಗುಡ್​ಪುಟ್ ಇನ್ಸ್​ಟಿಟ್ಯೂಟ್ ಆಫ್​ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವರುಣ ದೇಶಪಾಂಡೆ ಹೇಳುತ್ತಾರೆ.

ಕೇವಲ ಶಾಲೆಗಳಲ್ಲಿ ಮಾತ್ರವಲ್ಲ, ಮನೆಗಳಲ್ಲಿಯೂಸಹ, ಮಕ್ಕಳ ವಿಶಿಷ್ಟ ಆಹಾರ ಕ್ರಮಗಳಲ್ಲಿ ಅವರ ಸಮಗ್ರ ಬೆಳವಣಿಗೆಗೆ ಅಗತ್ಯವಿರುವ ಸರಿಯಾದ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳ ಕೊರತೆಯಿದೆ. ದೇಶಪಾಂಡೆಯವರ ಪ್ರಕಾರ, ಇಂದು ಆಹಾರ ವಿಜ್ಞಾನವು ಅನ್ನ, ಚಪಾತಿ, ಮುಂತಾದ ಪ್ರಧಾನ ಆಹಾರಗಳಲ್ಲಿ ಪ್ರೋಟೀನ್‌ಗಳ ಮಟ್ಟವನ್ನು ಹೆಚ್ಚಿಸುವ ಮೂಲಕ ಅವುಗಳಿಗೆ ಬಲ ತುಂಬುವ ವಿಧಾನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮಾಂಸ, ಮೊಟ್ಟೆಗಳು, ಮತ್ತು ಹಾಲಿನ ಪದಾರ್ಥಗಳಂತಹ ಸಾಮಾನ್ಯ ಮೂಲಗಳ ಹೊರತಾಗಿ ಅಣಕು ಮಾಂಸಗಳೂಸಹ ಸಸ್ಯಾಹಾರಿ ಮನೆಗಳಲ್ಲೂ ಸುಲಭವಾಗಿ ಸೇವಿಸಬಹುದಾದ ಉತ್ತಮ ಪರ್ಯಾಯಗಳಾಗಿವೆ. ಜನಪ್ರಿಯ ನಟಿ ಮತ್ತು ದೈಹಿಕ ಕ್ಷಮತೆಯ ಉತ್ಸಾಹಿ ಮಂದಿರಾ ಬೇಡಿ ಕೂಡ ಪ್ರೋಟೀನ್​  ಅವಶ್ಯಕತೆಗಳನ್ನು ಪೂರೈಸಲು ಅಣಕು ಮಾಂಸ ಮತ್ತು ಸೋಯಾಬೀನ್‌ನ ಪ್ರಾಮುಖ್ಯತೆಯನ್ನು ಅನುಮೋದಿಸಿದ್ದಾರೆ. “ನನಗೆ ಪ್ರತಿದಿನ ಕನಿಷ್ಠ 20-30 ಗ್ರಾಂಪ್ರೋಟೀನ್ ಬೇಕಾಗುತ್ತದೆ. ಹಿಂದೆ, ಕೇವಲ ಮೊಟ್ಟೆ ಮತ್ತು ಚೀಸ್​ ಮಾತ್ರ ನನ್ನ ಆಯ್ಕೆಗಳಾಗಿದ್ದವು.  ಇಂದು ನನ್ನ ಆದ್ಯತೆಯು ಅಣಕು ಮಾಂಸ ಮತ್ತು ಸೋಯಾಗೆ ಬದಲಾಗಿದ್ದು, ಅವುಗಳು ಒದಗಿಸುವ ಉತ್ತಮ ಗುಣಮಟ್ಟದ ಪ್ರೋಟೀನ್‌ಗಳೇ ಇದಕ್ಕೆ ಕಾರಣವಾಗಿದೆ” ಎನ್ನುತ್ತಾರೆ ಅವರು.

ಪ್ರಾಣಿ ಉತ್ಪನ್ನಗಳಿಗೆ ಉತ್ತಮ ಪರ್ಯಾಯವಾಗಿರುವ ಪ್ರೋಟೀನ್- 

ಬಲವರ್ಧಿತ ಆಹಾರಗಳ ಬಗ್ಗೆ ಸಸ್ಯಾಹಾರಿ ಕುಟುಂಬಗಳಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ.  ಇದು ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದಲ್ಲದೇ ವಯಸ್ಸಾದಂತ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು  ದೇಶಪಾಂಡೆಯವರು ಹೇಳುತ್ತಾರೆ. “ಆಹಾರ ವಿಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ, ಉತ್ತಮ ರುಚಿಯನ್ನು ಹೊಂದಿರುವ, ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ಆಹಾರದ ಉತ್ಪಾದನೆಯನ್ನು ಸಾಧ್ಯವಾಗಿಸಲು ಸಮುದಾಯ, ಉದ್ಯಮ, ಮತ್ತು ಸರ್ಕಾರಗಳು ಒಗ್ಗೂಡುವುದು ಅವುಗಳ ಜವಾಬ್ದಾರಿಯಾಗಿದೆ” ಎಂದು. ಕುಟುಂಬಗಳೂಸಹ ಹೊಸ ಪ್ರೋಟೀನ್‌ ಮೂಲಗಳ ಬಗ್ಗೆ ಸ್ವತ: ಶಿಕ್ಷಣವನ್ನು ಹೊಂದಿ ಮನೆಯಲ್ಲಿನ ಆಹಾರ ಪದ್ಧತಿಗಳು ಸಮತೋಲನದಿಂದ ಕೂಡಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಸುಪ್ರಸಿದ್ಧ ಪೋಷಕಾಂಶ ಪ್ರಚಾರಕರು ಮತ್ತು ಒನ್‌ಹೆಲ್ತ್‌ ಪ್ಲಾಟ್‌ ಫಾರ್ಮ್ಸ್‌ ಸಂಸ್ಥೆಯ ಸಂಸ್ಥಾಪಕರಾದ ಡಾ. ಶಿಖಾ ಶರ್ಮರವರು ಧಾನ್ಯಗಳು ಮತ್ತುವಿವಿಧ ಬಗೆಯ ತರಕಾರಿಗಳನ್ನು ಹೊಂದಿರುವ ವೈವಿಧ್ಯಗೊಳಿಸಿದ ಆಹಾರ ಕ್ರಮಗಳನ್ನು ಅನುಸರಿಸುವಂತೆ  ಸಲಹೆ ನೀಡುತ್ತಾರೆ. ಕುಟುಂಬಗಳು ವಿವಿಧ ಬಗೆಯ ತರಕಾರಿಗಳನ್ನು ತಮ್ಮ ಪ್ರತಿದಿನದ ಆಹಾರದಲ್ಲಿ ಸೇವಿಸುವ ಪ್ರಯತ್ನ ಮಾಡಬೇನ್ನುವ ಹಾಗೂ ವಿವಿಧ ಬಗೆಯ ಖಾದ್ಯ ತೈಲಗಳಾದ ಸೂರ್ಯಕಾಂತಿ ಎಣ್ಣೆ, ತುಪ್ಪ, ಮತ್ತು ಸಾಸಿವೆ ಎಣ್ಣೆಗಳನ್ನು ತಮ್ಮ ಅಡುಗೆಯಲ್ಲಿ ಬಳಸಬೇಕೆನ್ನುವ ಸಲಹೆಗಳನ್ನು ಅವರು ನೀಡುತ್ತಾರೆ. ಸೌತೇಕಾಯಿ ಮತ್ತು ಕ್ಯಾರೆಟ್‌ಗಳನ್ನು ಉಪಯೋಗಿಸಿ ತಯಾರಿಸಲಾದ ಸಾಲಡ್‌ಗಳನ್ನು ಸೇವಿಸುವುದು ಬಹಳ ಮುಖ್ಯವೆಂದು ಅವರು ಹೇಳುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವ ಆಹಾರ ಶಿಕ್ಷಣವನ್ನು ಶಾಲಾ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ಡಾ. ಶರ್ಮ ಹೇಳುತ್ತಾರೆ.

Published On - 11:24 am, Fri, 27 May 22

Follow us on