IND vs AUS: ಗೆಲುವಿನ ಟ್ರ್ಯಾಕ್​ನಲ್ಲಿದ್ದ ಭಾರತ ಎಡವಿದ್ದೆಲ್ಲಿ? ತಂಡದ ಸೋಲಿಗೆ ಪ್ರಮುಖ 4 ಕಾರಣಗಳಿವು

IND vs AUS: ಭಾರತದ ಬ್ಯಾಟ್ಸ್‌ಮನ್‌ಗಳು ಮಾಡಿದ ಮತ್ತೊಂದು ತಪ್ಪಂದರೆ ಅದು ಕಳಪೆ ಶಾಟ್ ಆಯ್ಕೆ. ಆರಂಭಿಕರಿಂದ ಹಿಡಿದು 8ನೇ ಕ್ರಮಾಂಕದ ಬ್ಯಾಟರ್​ಗಳು ಔಟಾಗಿದ್ದು ಕಳಪೆ ಶಾಟ್ ಆಯ್ಕೆಯಿಂದಾಗಿ.

IND vs AUS: ಗೆಲುವಿನ ಟ್ರ್ಯಾಕ್​ನಲ್ಲಿದ್ದ ಭಾರತ ಎಡವಿದ್ದೆಲ್ಲಿ? ತಂಡದ ಸೋಲಿಗೆ ಪ್ರಮುಖ 4 ಕಾರಣಗಳಿವು
ಏಕದಿನ ಸರಣಿ

Updated on: Mar 23, 2023 | 10:45 AM

ಆಸೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯ ಸೋತ ಟೀಂ ಇಂಡಿಯಾ (India Vs Australia), ಕೇವಲ ಪಂದ್ಯ ಮಾತ್ರವಲ್ಲದೆ ತವರಿನಲ್ಲಿ ಸರಣಿಯನ್ನೂ ಕಳೆದುಕೊಂಡಿದೆ. ಬುಧವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ, ರೋಹಿತ್ (Rohit Sharma) ಬಳಗವನ್ನು 2-1 ಅಂತರದಿಂದ ಸೋಲಿಸಿತು. ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತವನ್ನು 21 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಸರಣಿ ಗೆದ್ದುಕೊಂಡಿದ್ದಲ್ಲದೆ, ಏಕದಿನ ಶ್ರೇಯಾಂಕದಲ್ಲಿ (ODI Rankings) ಟೀಂ ಇಂಡಿಯಾವನ್ನು ನಂ.1 ಸ್ಥಾನದಿಂದ ಹೊರದಬ್ಬಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋತಿದ್ದ ಆಸ್ಟ್ರೇಲಿಯಾ ತಂಡ ಆ ಬಳಿಕ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಇದೀಗ ಚೆನ್ನೈನಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು.

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49 ಓವರ್‌ಗಳಲ್ಲಿ 269 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಒಂದು ಹಂತದವರೆಗು ಗೆಲುವಿನ ಪ್ರಬಲ ಸ್ಪರ್ಧಿ ಎನಿಸಿಕೊಂಡಿತ್ತು. ಆದರೆ ತಂಡದ ಬ್ಯಾಟರ್​ಗಳು ತೋರಿದ ಬೇಜವಬ್ದಾರಿ ಆಟದಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು. ಆಸೀಸ್ ಬೌಲರ್‌ಗಳ ದಾಳಿಗೆ ತಲೆಬಾಗಿದ ಟೀಂ ಇಂಡಿಯಾ 49.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪಂದ್ಯ ಸೋತಿದ್ದಲ್ಲದೆ, ಸರಣಿಯನ್ನು ಕಳೆದುಕೊಂಡಿತು. ಕೊನೆಯವರೆಗೂ ಗೆಲುವಿನ ಲಯದಲ್ಲಿ ಭಾರತ ಲಯ ತಪ್ಪಿದ್ದು ಎಲ್ಲಿ? ಪಂದ್ಯ ಸೋಲಲು ಕಾರಣಗಳೇನು? ಎಂಬುದರ ವಿವರ ಇಲ್ಲಿದೆ.

IPL 2023: 4 ವರ್ಷಗಳ ಬಳಿಕ ಐಪಿಎಲ್​ನಲ್ಲಿ ಉದ್ಘಾಟನಾ ಸಮಾರಂಭ: ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?

  1. ಟಾಸ್ ಸೋತು ಬೌಲಿಂಗ್ ಮಾಡಿದ ಟೀಂ ಇಂಡಿಯಾ 203 ರನ್‌ಗಳಿಗೆ ಆಸ್ಟ್ರೇಲಿಯಾದ ಏಳು ವಿಕೆಟ್‌ಗಳನ್ನು ಉರುಳಿಸಿತ್ತು. ಹೀಗಾಗಿ ಕಾಂಗರೂಗಳು ಬೇಗನೆ ಆಲೌಟ್ ಆಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ತಂಡದ ಕೆಳ ಕ್ರಮಾಂಕ ಉತ್ತಮ ಬ್ಯಾಟಿಂಗ್ ಮಾಡಿತು. ಕೊನೆಯ ಮೂರು ವಿಕೆಟ್‌ಗಳು ಒಟ್ಟಾಗಿ 66 ರನ್‌ಗಳನ್ನು ಸೇರಿಸಿದವು. ಇದರಿಂದ ತಂಡವು ಗೌರವಾನ್ವಿತ ಸ್ಕೋರ್ ತಲುಪಲು ಸಾಧ್ಯವಾಯಿತು.
  2. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಶುಭ್​ಮನ್ ಗಿಲ್ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಇಬ್ಬರ ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸಹ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆದರೆ ಭಾರತದಿಂದ ಯಾವುದೇ ಪ್ರಮುಖ ಪಾಲುದಾರಿಕೆ ಬರಲಿಲ್ಲ. ಹೀಗಾಗಿ ಕೊನೆಯಲ್ಲಿ ಒತ್ತಡಕೊಳ್ಳಗಾದ ಟೀಂ ಇಂಡಿಯಾ ಆಟಗಾರರು ಗುರಿ ಬೆನ್ನಟ್ಟಲಾಗದೆ ಆಲೌಟ್ ಆಗಬೇಕಾಯಿತು.
  3. ಭಾರತದ ಬ್ಯಾಟ್ಸ್‌ಮನ್‌ಗಳು ಮಾಡಿದ ಮತ್ತೊಂದು ತಪ್ಪಂದರೆ ಅದು ಕಳಪೆ ಶಾಟ್ ಆಯ್ಕೆ. ಆರಂಭಿಕರಿಂದ ಹಿಡಿದು 8ನೇ ಕ್ರಮಾಂಕದ ಬ್ಯಾಟರ್​ಗಳು ಔಟಾಗಿದ್ದು ಕಳಪೆ ಶಾಟ್ ಆಯ್ಕೆಯಿಂದಾಗಿ. ಹೀಗಾಗಿ ಕಳಪೆ ಶಾಟ್ ಆಯ್ಕೆಯ ಭಾರವನ್ನು ಭಾರತ ಅನುಭವಿಸಬೇಕಾಯಿತು.
  4. ಸ್ಪಿನ್ನರ್‌ಗಳಿಂದ ಭಾರತದ ಆಟಗಾರರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದರು. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಭಾರತದ ನಾಲ್ವರು ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್ಗೆ ಕಳುಹಿಸಿದರೆ, ಅಷ್ಟನ್ ಅಗರ್ ಇಬ್ಬರು ಪ್ರಮುಖ ಆಟಗಾರರನ್ನು ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:43 am, Thu, 23 March 23