
ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಗೆಲುವಿನ ನಂತರ ಇಂಗ್ಲೆಂಡ್ (India vs England) ತಂಡ ಯುಎಇಗೆ ತೆರಳಿದೆ. ಮುಂದಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಅಬುಧಾಬಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಸರಣಿ ಆರಂಭಕ್ಕೂ ಮುನ್ನ ಕೂಡ ಆಂಗ್ಲ ಆಟಗಾರರು ಯುಎಇಯಲ್ಲಿಯೇ ಅಭ್ಯಾಸ ನಡೆಸಿದ್ದರು. ಫೆಬ್ರವರಿ 15 ರಿಂದ ರಾಜ್ಕೋಟ್ನಲ್ಲಿ ತೃತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅತ್ತ ಮುಂದಿನ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ಲೇಯರ್ಸ್ ಭರ್ಜರಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದರೆ ಇಲ್ಲಿ ಕೋಚ್ ರಾಹುಲ್ ದ್ರಾವಿಡ್ ಭಾರತ ತಂಡದ ಆಟಗಾರರಿಗೆ ರಜೆ ನೀಡಿದ್ದಾರೆ. ಎಲ್ಲಾ ಆಟಗಾರರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಫೆಬ್ರುವರಿ 12ರಂದು ಮತ್ತೊಮ್ಮೆ ತಂಡದ ಆಟಗಾರರು ಸೇರಲಿದ್ದಾರೆ ಎಂಬ ಸುದ್ದಿ ಇದೆ.
ಸದ್ಯ ಪ್ರಶ್ನೆ ಏನೆಂದರೆ ಇದುವರೆಗೆ ಈ ಸರಣಿಯಲ್ಲಿ ಅನೇಕ ಭಾರತೀಯ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದ್ದಾರೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಸೇರಿದ್ದಾರೆ. ಸರಣಿಯ ನಾಲ್ಕು ಇನ್ನಿಂಗ್ಸ್ಗಳಲ್ಲಿ ಇವರ ಬ್ಯಾಟ್ನಿಂದ ಇದುವರೆಗೆ ಕೇವಲ 90 ರನ್ ಬಂದಿವೆಯಷ್ಟೆ. ಶ್ರೇಯಸ್ ಅಯ್ಯರ್ 104 ರನ್ ಗಳಿಸಿದರು. ಇದಲ್ಲದೇ ವಿಕೆಟ್ ಕೀಪರ್ ಕೆಎಸ್ ಭರತ್ ಕೂಡ ಪ್ಲಾಪ್ ಆಗಿದ್ದಾರೆ. ಅವರು ನಾಲ್ಕು ಇನ್ನಿಂಗ್ಸ್ಗಳಲ್ಲಿ 92 ರನ್ ಗಳಿಸಿದ್ದಾರೆ. ಹೀಗಿರುವಾಗ ಆಟಗಾರರನ್ನು ಸಜ್ಜುಗೊಳಿಸದೆ ರಜೆ ನೀಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿಬರುತ್ತಿವೆ.
ಯಶಸ್ವಿ ಜೈಸ್ವಾಲ್ ಅವರ ದ್ವಿಶತಕ ಮತ್ತು ಶುಭ್ಮನ್ ಗಿಲ್ ಅವರ ಶತಕ ಎರಡನೇ ಟೆಸ್ಟ್ ಪಂದ್ಯಕ್ಕೆ ಜೀವ ತುಂಬಿತು. ಒಟ್ಟಾರೆ ಭಾರತದ ಬ್ಯಾಟಿಂಗ್ ಸಂಕಷ್ಟದಲ್ಲಿದೆ. ಭಾರತೀಯ ಕ್ರಿಕೆಟ್ನ ಸಾಂಪ್ರದಾಯಿಕ ಗುರುತು ಎಂದರೆ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳ ವಿರುದ್ಧ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಆದರೆ ಸದ್ಯದ ಪರಿಸ್ಥಿರಿಯಲ್ಲಿ ಇದು ಕಾಣುತ್ತಿಲ್ಲ. ಎರಡೂ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ನ ಸ್ಪಿನ್ನರ್ಗಳ ವಿರುದ್ಧ ಭಾರತದ ಬ್ಯಾಟಿಂಗ್ನ್ನು ಪರದಾಡಿದೆ. ಇಂಗ್ಲೆಂಡ್ನ ಸ್ಪಿನ್ನರ್ಗಳು 2 ಟೆಸ್ಟ್ ಪಂದ್ಯಗಳಲ್ಲಿ 33 ವಿಕೆಟ್ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.
ರಾಹುಲ್- ಶ್ರೇಯಸ್ಗೆ ಲಾಭ; ಅಗ್ರ 10ರಲ್ಲಿ ಮೂವರು ಭಾರತೀಯರು
ಈ ಅಂಕಿಅಂಶಗಳು ಭಾರತೀಯ ಸ್ಪಿನ್ನರ್ಗಳಿಗಿಂತ ಕೂಡ ಉತ್ತಮವಾಗಿವೆ. 4.18 ರ ಆರ್ಥಿಕತೆಯೊಂದಿಗೆ ಭಾರತೀಯ ಸ್ಪಿನ್ನರ್ಗಳು ತಮ್ಮ ಖಾತೆಯಲ್ಲಿ 23 ವಿಕೆಟ್ಗಳನ್ನು ಹೊಂದಿದ್ದಾರೆ. ಅಂದರೆ ಭಾರತೀಯ ಸ್ಪಿನ್ನರ್ಗಳು ಇಂಗ್ಲಿಷ್ ಸ್ಪಿನ್ನರ್ಗಳಿಗಿಂತ ಹೆಚ್ಚು ದುಬಾರಿ ಎಂದು ಸಾಬೀತುಪಡಿಸಿದ್ದಾರೆ. ಕಡಿಮೆ ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಸರಣಿಯಲ್ಲಿ ಸ್ವೀಪ್ ಶಾಟ್ ಚರ್ಚೆಯ ವಿಷಯವಾಗಿ ಉಳಿದಿದೆ. ಭಾರತದ ಸ್ಪಿನ್ನರ್ಗಳ ವಿರುದ್ಧ ಆಂಗ್ಲ ಬ್ಯಾಟ್ಸ್ಮನ್ಗಳು ಈ ಹೊಡೆತವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಒಲಿ ಪೋಪ್ ಸೇರಿದಂತೆ ಇಂಗ್ಲೆಂಡ್ನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಈ ಹೊಡೆತದ ಸಹಾಯದಿಂದ ಉತ್ತಮ ರನ್ ಗಳಿಸಿದರು. ಭಾರತ ತಂಡದ ಇತಿಹಾಸವನ್ನು ಪರಿಶೀಲಿಸಿದರೆ ಮೈಕ್ ಗ್ಯಾಟಿಂಗ್, ಆಂಡಿ ಫ್ಲವರ್, ಗ್ರಹಾಂ ಗೂಚ್, ಆಡಮ್ ಗಿಲ್ಕ್ರಿಸ್ಟ್, ಮ್ಯಾಥ್ಯೂ ಹೇಡನ್ ಅವರಂತಹ ಹತ್ತಾರು ಬ್ಯಾಟ್ಸ್ಮನ್ಗಳು ಈ ಸ್ವೀಪ್ ಶಾಟ್ನ ಮೂಲಕ ಭಾರತದಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಭಾರತ ತಂಡದ ಬ್ಯಾಟ್ಸ್ಮನ್ಗಳು ಈ ಹೊಡೆತವನ್ನು ಬಹಳ ವಿರಳವಾಗಿ ಆಡುತ್ತಾರೆ.
ವಿಶಾಖಪಟ್ಟಣಂ ಟೆಸ್ಟ್ಗೂ ಮುನ್ನ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸ್ವೀಪ್ ಶಾಟ್ ಅನ್ನು ರಾತ್ರೋರಾತ್ರಿ ಕಲಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈಗ ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನೆ ಎದ್ದಿದ್ದು, ಸ್ವೀಪ್ ಶಾಟ್ ಅಭ್ಯಾಸ ಅಗತ್ಯವಿದ್ದಲ್ಲಿ ಆಟಗಾರರಿಗೆ ರಜೆ ನೀಡಿದ್ದು ಏಕೆ?. ಆಟಗಾರರು ಈ ಹೊಡೆತವನ್ನು ಅಭ್ಯಾಸ ಮಾಡಿದರೆ ಉತ್ತಮವಲ್ಲವೆ ಎಂದು ಹೇಳುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ