
Indian Cricket Team
ಭಾರತದಲ್ಲಿ ಕ್ರಿಕೆಟ್ ಒಂದು ಅತ್ಯಂತ ಜನಪ್ರಿಯ ಕ್ರೀಡೆ. ಹೀಗಾಗಿಯೇ ಭಾರತವನ್ನು ಕ್ರಿಕೆಟ್ ಧರ್ಮ ರಾಷ್ಟ್ರ ಎಂದು ಕರೆಯಲಾಗುತ್ತದೆ. ಭಾರತ ಕ್ರಿಕೆಟ್ ಅನ್ನು ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ ವಿವಿಎಸ್ ಲಕ್ಷ್ಮಣ್ರಂತಹ ದಿಗ್ಗಜರಿಂದ ಹಿಡಿದು, ಪ್ರಸ್ತುತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಸ್ಟಾರ್ ಕ್ರಿಕೆಟಿಗರು ಅಕ್ಷರಶಃ ಆಳಿದ್ದಾರೆ. ಇದುವರೆಗೆ ಟೀಂ ಇಂಡಿಯಾ ಮೂರು ವಿಶ್ವಕಪ್ಗಳನ್ನು ಗೆದ್ದಿದ್ದು, ಕಪಿಲ್ ದೇವ್ ನಾಯಕತ್ವದಲ್ಲಿ 1983 ರಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಆ ಬಳಿಕ 2007 ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ, ಅವರ ನಾಯಕತ್ವದಲ್ಲೇ 2011 ರಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ಗೆ ಮುತ್ತಿಟ್ಟಿತ್ತು. ಪ್ರಸ್ತುತ ಟೀಂ ಇಂಡಿಯಾ ವಿಶ್ವದ ಬಲಿಷ್ಠ ತಂಡಗಳ ಪೈಕಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
IND vs ENG: ಲೀಡ್ಸ್ನಲ್ಲಿ ಮೊದಲ ದಿನವೇ ಇತಿಹಾಸ ಸೃಷ್ಟಿಸಿದ ರಾಹುಲ್-ಜೈಸ್ವಾಲ್ ಜೋಡಿ
India's Opening Pair Shatters Record in Leeds Test: ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇವರು 91 ರನ್ಗಳ ಅಮೂಲ್ಯ ಜೊತೆಯಾಟವನ್ನು ನಿರ್ಮಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಇದು ಲೀಡ್ಸ್ನಲ್ಲಿ ಭಾರತದ ಆರಂಭಿಕ ಜೋಡಿಯ ಅತಿ ಹೆಚ್ಚು ರನ್ಗಳ ಜೊತೆಯಾಟದ ದಾಖಲೆಯಾಗಿದೆ. ರಾಹುಲ್ 42 ರನ್ಗಳಿಗೆ ಔಟ್ ಆದರೂ, ಈ ಜೊತೆಯಾಟ ಭಾರತಕ್ಕೆ ಮಹತ್ವದ ಆರಂಭವನ್ನು ಒದಗಿಸಿತು.
- pruthvi Shankar
- Updated on: Jun 20, 2025
- 7:37 pm
IND vs ENG: 8 ವರ್ಷಗಳ ನಂತರ ಕರುಣ್ಗೆ ತಂಡದಲ್ಲಿ ಸ್ಥಾನ; ಭಾವುಕ ಪೋಸ್ಟ್ ಹಂಚಿಕೊಂಡ ಮಡದಿ
Karun Nair's Wife's Emotional Post: ಕಳೆದ ಎರಡು ವರ್ಷಗಳಿಂದ ದೇಶೀ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕರುಣ್ ನಾಯರ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ದೊರೆತಿರುವುದು ಅವರ ಪತ್ನಿ ಸನಯಾ ಟಂಕರಿವಾಲಾ ಅವರನ್ನು ಭಾವುಕರನ್ನಾಗಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಸನಯಾ, ಭಾರತದ ರಾಷ್ಟ್ರಗೀತೆ ಕೇಳುವುದು ಈ ಬಾರಿ ವಿಶೇಷ ಎಂದಿದ್ದಾರೆ.
- pruthvi Shankar
- Updated on: Jun 20, 2025
- 6:40 pm
IND vs ENG: 1 ರನ್ಗೆ 2 ವಿಕೆಟ್; ಪಾದಾರ್ಪಣೆ ಪಂದ್ಯದಲ್ಲಿ ಸೊನ್ನೆ ಸುತ್ತಿದ ಸುದರ್ಶನ್
India vs England Test: ಲೀಡ್ಸ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ 1 ರನ್ ಅಂತರದಲ್ಲಿ ಎರಡೆರಡು ಆಘಾತ ಎದುರಾಗಿದೆ. ರಾಹುಲ್ (42 ರನ್) ಮತ್ತು ಸುದರ್ಶನ್ (0 ರನ್) ವಿಕೆಟ್ ಒಪ್ಪಿಸಿದ್ದಾರೆ. ಸುದರ್ಶನ್ ಅವರ ಚೊಚ್ಚಲ ಟೆಸ್ಟ್ ನಿರಾಶಾದಾಯಕವಾಗಿದೆ.
- pruthvi Shankar
- Updated on: Jun 20, 2025
- 6:09 pm
IND vs ENG: ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಇಂಗ್ಲೆಂಡ್ ಮಾಜಿ ನಾಯಕ
Virat Kohli Retirement: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಮುನ್ನ, ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್ ವಿರಾಟ್ ಕೊಹ್ಲಿಯ ಇಂಗ್ಲೆಂಡ್ನಲ್ಲಿನ ಬ್ಯಾಟಿಂಗ್ ಸರಾಸರಿಯನ್ನು ಟೀಕಿಸಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದರೂ, ಅವರ ಅನುಪಸ್ಥಿತಿಯ ಪ್ರಭಾವವನ್ನು ವಾನ್ ಚರ್ಚಿಸಿದ್ದಾರೆ. ವಾನ್ ಕೊಹ್ಲಿಯ ಒಟ್ಟಾರೆ ಟೆಸ್ಟ್ ದಾಖಲೆಯನ್ನು ಮೆಚ್ಚಿಕೊಂಡರೂ, ಇಂಗ್ಲೆಂಡ್ನಲ್ಲಿ ಅವರ ಸಾಧನೆಯನ್ನು ಕಡಿಮೆ ಅಂದಾಜು ಮಾಡಿದ್ದಾರೆ.
- pruthvi Shankar
- Updated on: Jun 20, 2025
- 4:34 pm
ಲೀಡ್ಸ್ ಟೆಸ್ಟ್ನಲ್ಲಿ ಭಾರತ- ಇಂಗ್ಲೆಂಡ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು?
India vs England Leeds Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಲೀಡ್ಸ್ನಲ್ಲಿ ಆರಂಭವಾಗಿದೆ. ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಎರಡೂ ತಂಡಗಳು ಕಪ್ಪು ಪಟ್ಟಿ ಧರಿಸಿ ಆಡುತ್ತಿವೆ. ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ ಮತ್ತು ಕರುಣ್ ನಾಯರ್ 8 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದೆ.
- pruthvi Shankar
- Updated on: Jun 20, 2025
- 4:02 pm
IND vs ENG 1st Test: 3ನೇ ಕ್ರಮಾಂಕದ ಮೇಲೆ ಎಲ್ಲರ ಕಣ್ಣು: ಕರುಣ್-ಸುದರ್ಶನ್ ಮಧ್ಯೆ ಯಾರಿಗೆ ಸ್ಥಾನ?
Karun Nair or Sai Sudarshan: ಈ ಹಿಂದೆ ಶುಭ್ಮನ್ ಗಿಲ್ ಟೆಸ್ಟ್ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೀಗ ಗಿಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ 3ನೇ ಸ್ಥಾನದಲ್ಲಿ ಯಾರು ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸದ್ಯ ಮೂರನೇ ಸ್ಥಾನದಲ್ಲಿ ಆಡಲು ಟೀಮ್ ಇಂಡಿಯಾ ಇಬ್ಬರು ಪ್ರಬಲ ಆಟಗಾರರನ್ನು ಹೊಂದಿದೆ. ಅವರಲ್ಲಿ ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಸೇರಿದ್ದಾರೆ.
- Vinay Bhat
- Updated on: Jun 20, 2025
- 10:09 am
IND vs ENG 1st Test Weather: ಇಂದಿನಿಂದ ಲೀಡ್ಸ್ನಲ್ಲಿ ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್: ಪಿಚ್ಗಿಂತ ವೇಗವಾಗಿ ಬದಲಾಗುತ್ತೆ ಇಲ್ಲಿನ ಹವಾಮಾನ
Leeds Weather Report, IND vs ENG: ಲೀಡ್ಸ್ ಪಿಚ್ನಲ್ಲಿ ವೇಗದ ಬೌಲರ್ಗಳಿಗೆ ಸಾಕಷ್ಟು ಸಹಾಯ ಸಿಗುವ ನಿರೀಕ್ಷೆಯಿದೆ. ಆದಾಗ್ಯೂ, ಟೆಸ್ಟ್ ಪಂದ್ಯದಲ್ಲಿ, ಪಿಚ್ ಪ್ರತಿ ಸೆಷನ್ಗೆ ಬದಲಾಗುವ ನಿರೀಕ್ಷೆಯಿದೆ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ ಪಂದ್ಯದ ದಿನದಂದು ಇಲ್ಲಿ ಹವಾಮಾನ ಹೇಗಿರುತ್ತೆ ಎಂದು ಊಹಿಸಲು ಕಷ್ಟ. ಇಂಗ್ಲೆಂಡ್ನ ಹವಾಮಾನ ಯಾವಾಗ ಬದಲಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ.
- Vinay Bhat
- Updated on: Jun 20, 2025
- 9:34 am
ವಿದರ್ಭ ತೊರೆದು ಮತ್ತೆ ತವರು ತಂಡ ಸೇರಲು ನಿರ್ಧರಿಸಿದ ಕನ್ನಡಿಗ ಕರುಣ್ ನಾಯರ್
Karun Nair Returns to Karnataka: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕರುಣ್ ನಾಯರ್ ಅವರು ವಿದರ್ಭ ಕ್ರಿಕೆಟ್ ತಂಡವನ್ನು ತೊರೆದು ತಮ್ಮ ತವರು ರಾಜ್ಯವಾದ ಕರ್ನಾಟಕಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ವಿದರ್ಭ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರುಣ್, ಇದೀಗ ಮತ್ತೊಮ್ಮೆ ತಮ್ಮ ತವರು ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರುಣ್ ಜೊತೆಗೆ, ಜಿತೇಶ್ ಶರ್ಮಾ ಕೂಡ ವಿದರ್ಭ ತಂಡವನ್ನು ತೊರೆಯುತ್ತಿದ್ದಾರೆ.
- pruthvi Shankar
- Updated on: Jun 19, 2025
- 11:02 pm
ಸೆನಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ; ಶುಭ್ಮನ್ ಗಿಲ್
Shubman Gill's Press Conference: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮುನ್ನಾದಿನ, ನೂತನ ಟೆಸ್ಟ್ ನಾಯಕ ಶುಭ್ಮನ್ ಗಿಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೌಲಿಂಗ್ಗೆ ಹೆಚ್ಚು ಒತ್ತು ನೀಡುವುದು, ಟೆಸ್ಟ್ ಸರಣಿ ಗೆಲ್ಲುವ ಮಹತ್ವ, ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ, ವೈಯಕ್ತಿಕ ಗುರಿಗಳು ಮತ್ತು ತಂಡದ ಅನುಭವದ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
- pruthvi Shankar
- Updated on: Jun 19, 2025
- 10:11 pm
IND vs ENG: ಮೊದಲ ಟೆಸ್ಟ್ಗೂ ಮುನ್ನ ಕನ್ನಡಿಗ ಕರುಣ್ ಇಂಜುರಿ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Karun Nair's Injury Update: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಕನ್ನಡಿಗ ಕರುಣ್ ನಾಯರ್ ಗಾಯಗೊಂಡಿದ್ದು ಆತಂಕ ಸೃಷ್ಟಿಸಿತ್ತು. ಆದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೆಡಿಂಗ್ಲಿ ಪಂದ್ಯಕ್ಕೆ ಅವರು ಲಭ್ಯರಿದ್ದಾರೆ. 8 ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಮರಳಿರುವ ನಾಯರ್, ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಅನುಭವ ಮತ್ತು ಫಾರ್ಮ್ ಟೀಂ ಇಂಡಿಯಾಗೆ ಬಲವನ್ನು ನೀಡುತ್ತದೆ.
- pruthvi Shankar
- Updated on: Jun 19, 2025
- 8:12 pm