Indian Cricket Team
ಭಾರತದಲ್ಲಿ ಕ್ರಿಕೆಟ್ ಒಂದು ಅತ್ಯಂತ ಜನಪ್ರಿಯ ಕ್ರೀಡೆ. ಹೀಗಾಗಿಯೇ ಭಾರತವನ್ನು ಕ್ರಿಕೆಟ್ ಧರ್ಮ ರಾಷ್ಟ್ರ ಎಂದು ಕರೆಯಲಾಗುತ್ತದೆ. ಭಾರತ ಕ್ರಿಕೆಟ್ ಅನ್ನು ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ ವಿವಿಎಸ್ ಲಕ್ಷ್ಮಣ್ರಂತಹ ದಿಗ್ಗಜರಿಂದ ಹಿಡಿದು, ಪ್ರಸ್ತುತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಸ್ಟಾರ್ ಕ್ರಿಕೆಟಿಗರು ಅಕ್ಷರಶಃ ಆಳಿದ್ದಾರೆ. ಇದುವರೆಗೆ ಟೀಂ ಇಂಡಿಯಾ ಮೂರು ವಿಶ್ವಕಪ್ಗಳನ್ನು ಗೆದ್ದಿದ್ದು, ಕಪಿಲ್ ದೇವ್ ನಾಯಕತ್ವದಲ್ಲಿ 1983 ರಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಆ ಬಳಿಕ 2007 ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ, ಅವರ ನಾಯಕತ್ವದಲ್ಲೇ 2011 ರಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ಗೆ ಮುತ್ತಿಟ್ಟಿತ್ತು. ಪ್ರಸ್ತುತ ಟೀಂ ಇಂಡಿಯಾ ವಿಶ್ವದ ಬಲಿಷ್ಠ ತಂಡಗಳ ಪೈಕಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
IND vs SA: ನಾಲಾಯಕ್ ನಾಯಕ, ಉಪನಾಯಕ; ಭಾರತ ಟಿ20 ತಂಡದಲ್ಲಿರುವುದು 9 ಆಟಗಾರರಷ್ಟೆ
Team India T20: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸೋಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಶುಭ್ಮನ್ ಗಿಲ್ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ನಾಯಕ ಸೂರ್ಯಕುಮಾರ್ ಕಳೆದ 20 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿಲ್ಲ, ಗಿಲ್ ಸಹ T20ಯಲ್ಲಿ ನಿರಂತರವಾಗಿ ವಿಫಲರಾಗಿದ್ದಾರೆ. ಇವರ ಕಳಪೆ ಫಾರ್ಮ್ ಮುಂಬರುವ ಟಿ20 ವಿಶ್ವಕಪ್ಗೆ ತಂಡದ ಸಿದ್ಧತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪ್ರತಿಭಾವಂತರಿಗೆ ಅವಕಾಶ ಸಿಗದಿರುವುದು ಆತಂಕಕಾರಿ ಸಂಗತಿಯಾಗಿದೆ.
- pruthvi Shankar
- Updated on: Dec 12, 2025
- 5:55 pm
IND vs SA: 7 ಕ್ಕೆ ಏಳರಲ್ಲೂ ಸೋಲು; ಗುರಿ ದೊಡ್ಡದಿದ್ದರೆ ಟೀಂ ಇಂಡಿಯಾಗೆ ನಡುಕ
India vs South Africa T20: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ T20ಯಲ್ಲಿ ಟೀಂ ಇಂಡಿಯಾ 51 ರನ್ಗಳ ಭಾರಿ ಸೋಲು ಕಂಡಿದೆ. 213 ರನ್ಗಳ ದೊಡ್ಡ ಗುರಿ ಬೆನ್ನಟ್ಟುವಲ್ಲಿ ಭಾರತ ವಿಫಲವಾಯಿತು. 200+ ಗುರಿಗಳ ಮುಂದೆ ತಂಡ ನಡುಗುತ್ತದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಬುಮ್ರಾ ಮತ್ತು ಅರ್ಷದೀಪ್ ದುಬಾರಿಯಾಗಿದ್ದು ಸೋಲಿಗೆ ಕಾರಣವಾಯಿತು. ಈ ಗೆಲುವಿನೊಂದಿಗೆ ಆಫ್ರಿಕಾ ಭಾರತದ ವಿರುದ್ಧ ಅತಿ ಹೆಚ್ಚು T20 ಗೆದ್ದ ದಾಖಲೆ ನಿರ್ಮಿಸಿದೆ.
- pruthvi Shankar
- Updated on: Dec 12, 2025
- 5:12 pm
ಭಾರತದ ಕ್ರಿಕೆಟಿಗರಿಗೆ ದುಶ್ಚಟಗಳು ಹೆಚ್ಚು; ಜಡೇಜಾ ಪತ್ನಿ ಶಾಕಿಂಗ್ ಹೇಳಿಕೆ
ಭಾರತದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಗುಜರಾತ್ ಸಚಿವೆಯೂ ಆಗಿರುವ ರಿವಾಬಾ ಜಡೇಜಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತ ಕ್ರಿಕೆಟಿಗರು ವಿದೇಶದ ಪ್ರವಾಸದಲ್ಲಿದ್ದಾಗ ದುಶ್ಚಟಗಳಲ್ಲಿ ತೊಡಗುತ್ತಾರೆ ಎಂದು ಹೇಳಿದ್ದಾರೆ. ಆದರೆ, ತನ್ನ ಪತಿಗೆ ಈ ವಿಷಯದಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ. ಜನವರಿ 11ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ರವೀಂದ್ರ ಜಡೇಜಾ ಮತ್ತೆ ಆಟಕ್ಕೆ ಮರಳಲಿದ್ದಾರೆ.
- Sushma Chakre
- Updated on: Dec 12, 2025
- 4:18 pm
Gautam Gambhir: ಅರ್ಶ್ದೀಪ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ್: ಇದು ಕೋಚ್ ಲಕ್ಷಣವೇ?
India vs South Africa 2nd T20I: ಅರ್ಶ್ದೀಪ್ ಸಿಂಗ್ ಎಸೆದ ಆ ಓವರ್ನಲ್ಲಿ ಒಟ್ಟು 13 ಎಸೆತಗಳಿದ್ದವು, ಅದರಲ್ಲಿ 7 ವೈಡ್ಗಳು ಸೇರಿವೆ. ಇದರಿಂದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗಂಭೀರ್ ಅವರ ಪ್ರತಿಕ್ರಿಯೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
- Preethi Bhat Gunavante
- Updated on: Dec 12, 2025
- 9:01 am
ರೋಹಿತ್, ಕೊಹ್ಲಿ ಖಜಾನೆಗೆ ಕತ್ತರಿ ಹಾಕಿ, ಗಿಲ್ ಜೇಬು ತುಂಬಿಸಲು ಮುಂದಾದ ಬಿಸಿಸಿಐ
BCCI Contract: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬಿಸಿಸಿಐ ವಾರ್ಷಿಕ ವೇತನಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ. ಟಿ20 ಹಾಗೂ ಟೆಸ್ಟ್ಗೆ ವಿದಾಯ ಹೇಳಿ ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿರುವ ಕಾರಣ ಅವರ ಗ್ರೇಡ್ ಎ+ ನಿಂದ ಎ ಗೆ ಇಳಿಯಬಹುದು. ಇತ್ತ, ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುವ ಶುಭ್ಮನ್ ಗಿಲ್ ಎ ಗ್ರೇಡ್ನಿಂದ ಎ+ ಗೆ ಬಡ್ತಿ ಪಡೆಯುವ ನಿರೀಕ್ಷೆಯಿದೆ. ಡಿಸೆಂಬರ್ 22 ರ ಬಿಸಿಸಿಐ ಸಭೆಯಲ್ಲಿ ಈ ಕುರಿತು ನಿರ್ಧಾರವಾಗಲಿದೆ.
- pruthvi Shankar
- Updated on: Dec 11, 2025
- 3:59 pm
ಕೊನೆಯ 4 ಇನಿಂಗ್ಸ್… ವಿರಾಟ್ ಕೊಹ್ಲಿಯ ದಾಖಲೆ ಮೇಲೆ ಅಭಿಷೇಕ್ ಶರ್ಮಾ ಕಣ್ಣು
India vs South Africa T20I: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಈ ಸರಣಿಯಲ್ಲಿ ಇನ್ನೂ ನಾಲ್ಕು ಮ್ಯಾಚ್ಗಳಿವೆ. ಈ ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಯ 9 ವರ್ಷಗಳ ಹಳೆಯ ದಾಖಲೆ ಮುರಿಯುವ ಅವಕಾಶ ಅಭಿಷೇಕ್ ಶರ್ಮಾ ಮುಂದಿದೆ.
- Zahir Yusuf
- Updated on: Dec 11, 2025
- 1:54 pm
ನನ್ನ ಪತಿ ಒಳ್ಳೆಯವರು, ಟೀಮ್ ಇಂಡಿಯಾದ ಉಳಿದವರು ಕೆಟ್ಟವರು..!
Ravindra Jadeja: ಭಾರತ ತಂಡದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಾಗ್ಯೂ ಅವರು ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿ ಮುಂದುವರೆದಿದ್ದಾರೆ.
- Zahir Yusuf
- Updated on: Dec 11, 2025
- 9:53 am
5 ವರ್ಷಗಳ ಬಳಿಕ ಒನ್, ಟು ನಲ್ಲಿ ಟೀಮ್ ಇಂಡಿಯಾ ದಿಗ್ಗಜರು
ICC ODI Batting Rankings: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿರುವ ಏಕದಿನ ಬ್ಯಾಟರ್ಗಳ ನೂತನ ಪಟ್ಟಿಯಲ್ಲಿ ಟಾಪ್-5 ನಲ್ಲಿ ಟೀಮ್ ಇಂಡಿಯಾದ ಮೂವರು ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ. ಇನ್ನು ಅಗ್ರ ಹತ್ತರಲ್ಲಿ ಭಾರತದ ನಾಲ್ವರು ಬ್ಯಾಟ್ಸ್ಮನ್ಗಳು ಸ್ಥಾನ ಪಡೆದಿದ್ದಾರೆ. ಅದರಂತೆ ನೂತನ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್-5 ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ...
- Zahir Yusuf
- Updated on: Dec 11, 2025
- 7:42 am
IND vs SA: ಯಾರಿಗೆ ಸಿಗಲಿದೆ ಚಾನ್ಸ್? ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI
India vs South africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಹಾಗೂ ಏಕದಿನ ಸರಣಿಗಳು ಮುಗಿದಿವೆ. ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ ತಂಡ 2-0 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಇದೀಗ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯುತ್ತಿದೆ.
- Zahir Yusuf
- Updated on: Dec 10, 2025
- 3:23 pm
ಭಾರತ vs ಸೌತ್ ಆಫ್ರಿಕಾ 2ನೇ ಟಿ20 ಪಂದ್ಯ ಯಾವಾಗ, ಎಲ್ಲಿ?
India vs South africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಹಾಗೂ ಏಕದಿನ ಸರಣಿಗಳು ಮುಗಿದಿವೆ. ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ ತಂಡ 2-0 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಇದೀಗ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯುತ್ತಿದೆ.
- Zahir Yusuf
- Updated on: Dec 10, 2025
- 10:55 am
ಎಂದಿಗೂ ಗಡಿಬಿಡಿ ಮಾಡಿಕೊಂಡಿಲ್ಲ: ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
India vs South Africa: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 175 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 12.3 ಓವರ್ಗಳಲ್ಲಿ 74 ರನ್ ಗಳಿಸಿ ಆಲೌಟ್ ಆಗಿದೆ.
- Zahir Yusuf
- Updated on: Dec 10, 2025
- 8:55 am
ಮೂರು ಬಾರಿ ಮಕಾಡೆ ಮಲಗಿಸಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
India vs South Africa: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ ಟಿ೨೦ ಸರಣಿಯಲ್ಲೂ ಶುಭಾರಂಭ ಮಾಡಿದೆ. ಅದು ಕೂಡ ಅಮೋಘ ಗೆಲುವಿನೊಂದಿಗೆ. ಈ ಜಯದೊಂದಿಗೆ ಭಾರತ ತಂಡ ವಿಶೇಷ ದಾಖಲೆಯನ್ನ ಸಹ ನಿರ್ಮಿಸಿರುವುದು ವಿಶೇಷ.
- Zahir Yusuf
- Updated on: Dec 10, 2025
- 8:24 am