ಬ್ಯಾಟ್​ ತಯಾರಕ ‘ಅಶ್ರಫ್ ಚಾಚಾ’ಗೆ ನೆರವಾದ ಕ್ರಿಕೆಟ್ ದೇವರು..

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ವ್ಯವಹಾರದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕ್ರಿಕೆಟ್​ ಬ್ಯಾಟ್​ ತಯಾರಕ ಅಶ್ರಫ್ ಚೌಧರಿಗೆ ಸಚಿನ್​ ತೆಂಡೂಲ್ಕರ್ ಆರ್ಥಿಕ ಸಹಾಯ ಮಾಡಿದ್ದಾರೆ. ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ, ಮುಂಬೈ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ‘ಅಶ್ರಫ್ ಚಾಚಾ’ ಎಂದೂ ಕರೆಯಲ್ಪಡುವ ಬ್ಯಾಟ್ ತಯಾರಕನಿಗೆ ಸಹಾಯ ಮಾಡುವಂತೆ ಅಭಿಮಾನಿಗಳು ಪರಸ್ಪರ ವಿನಂತಿಸಿಕೊಂಡಿದ್ದರು. ಇತ್ತೀಚೆಗೆ ಚೌಧರಿ ಅವರ ಮನವಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಾಲಿವುಡ್ ನಟ ಸೋನು ಸೂದ್ ಕೂಡ ಸಹಾಯ ಮಾಡಲು […]

ಬ್ಯಾಟ್​ ತಯಾರಕ ಅಶ್ರಫ್ ಚಾಚಾಗೆ ನೆರವಾದ ಕ್ರಿಕೆಟ್ ದೇವರು..
ಸಾಧು ಶ್ರೀನಾಥ್​

Updated on: Aug 26, 2020 | 12:44 PM

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ವ್ಯವಹಾರದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕ್ರಿಕೆಟ್​ ಬ್ಯಾಟ್​ ತಯಾರಕ ಅಶ್ರಫ್ ಚೌಧರಿಗೆ ಸಚಿನ್​ ತೆಂಡೂಲ್ಕರ್ ಆರ್ಥಿಕ ಸಹಾಯ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ, ಮುಂಬೈ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ‘ಅಶ್ರಫ್ ಚಾಚಾ’ ಎಂದೂ ಕರೆಯಲ್ಪಡುವ ಬ್ಯಾಟ್ ತಯಾರಕನಿಗೆ ಸಹಾಯ ಮಾಡುವಂತೆ ಅಭಿಮಾನಿಗಳು ಪರಸ್ಪರ ವಿನಂತಿಸಿಕೊಂಡಿದ್ದರು. ಇತ್ತೀಚೆಗೆ ಚೌಧರಿ ಅವರ ಮನವಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಬಾಲಿವುಡ್ ನಟ ಸೋನು ಸೂದ್ ಕೂಡ ಸಹಾಯ ಮಾಡಲು ಮುಂದೆ ಬಂದಿದ್ದು ಸೋಮವಾರ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಂದ ಅಶ್ರಫ್ ಚೌಧರಿಯವರ ವಿಳಾಸವನ್ನು ಕೇಳಿದ್ದರು. ಈಗ ಸಚಿನ್ ಸಹ ಅನಾರೋಗ್ಯ ಪೀಡಿತ ಬ್ಯಾಟ್ ತಯಾರಕನಿಗೆ ಸಹಾಯ ಮಾಡಿದ್ದಾರೆ.

ಚೌಧರಿ ಕಳೆದ 12 ದಿನಗಳಿಂದ ಸಾವ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಮಧುಮೇಹ ಮತ್ತು ನ್ಯುಮೋನಿಯಾ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಕುಟುಂಬದವರು ಆಸ್ಪತ್ರೆಯ ಬಿಲ್‌ಗಳನ್ನು ಪಾವತಿಸಲಾಗದೆ ಇತರರಿಂದ ಸಹಾಯವನ್ನು ಕೇಳಿದ್ದರು.

ಚೌಧರಿ ಅವರ ಆಪ್ತ ಸ್ನೇಹಿತ ಪ್ರಶಾಂತ್ ಜೇಠ್ಮಲಾನಿ ಕೂಡ ಕ್ರಿಕೆಟಿಗರು ಮತ್ತು ಇತರರಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಚಿನ್, ಅಶ್ರಫ್ ಚೌಧರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಜೇಠ್ಮಲಾನಿ ತಿಳಿಸಿದ್ದಾರೆ.

Loading...
Unable to load recommendations.
Follow Us