Dharwad News: ಎತ್ತುಗಳು ಮಾಯ, ನೊಗಕ್ಕೆ ಹೆಗಲು ಕೊಟ್ಟ ರೈತ, ವಿಡಿಯೋ ನೋಡಿ

Edited By:

Updated on: Aug 01, 2023 | 11:38 AM

ಬಾಡಿಗೆ ಎತ್ತುಗಳು ಸಿಗದ ಹಿನ್ನಲೆಯಲ್ಲಿ ಸೋಯಾಬಿನ್ ಬೆಳೆ ನಡುವೆ ಬೆಳೆದ ಕಸ ತಗೆಯಲು ಸ್ವತಃ ರೈತನೇ ನೊಗಕ್ಕೆ ಹೆಗಲು ಕೊಟ್ಟಿದ್ದಾನೆ

ಹುಬ್ಬಳ್ಳಿ, (ಆಗಸ್ಟ್ 01): ಎತ್ತು ಹೋದ ಮೇಲೆ ಬೇಸಾಯ ಸಿಗದೇ ಬಿತ್ತನೆಗೂ ರೈತ ಪಡಿಪಾಟಲು ಪಡುವ ಸ್ಥಿತಿಯುಂಟಾಗಿದೆ. ಹೌದು….ಬಾಡಿಗೆ ಎತ್ತುಗಳು ಸಿಗದ ಹಿನ್ನಲೆಯಲ್ಲಿ ಸೋಯಾಬಿನ್ ಬೆಳೆ ನಡುವೆ ಬೆಳೆದ ಕಸ ತಗೆಯಲು ಸ್ವತಃ ರೈತನೇ ನೊಗಕ್ಕೆ ಹೆಗಲು ಕೊಟ್ಟಿದ್ದಾನೆ. ಸತತ ಮಳೆ ಸುರಿದ ಹಿನ್ನಲೆ ಬೆಳೆ ಮಧ್ಯೆ ವೀಪರಿತ ಕಸ ಬೆಳೆದಿದೆ. ಆದ್ರೆ, ಇದರಲ್ಲಿ ಟ್ರ್ಯಾಕ್ಟರ್​ ನಡೆಯುವುದಿಲ್ಲ. ಎಡೆ ಹೊಡೆಯಲು ಎತ್ತುಗಳು ಬೇಕು. ಆದ್ರೆ, ಈಗಿನ ಕಾಲದಲ್ಲಿ ಎತ್ತುಗಳು ಮಾಯವಾಗಿದ್ದರಿಂದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ರೈತ ಸುರೇಶ್ ಗೌಡ, ನೊಗಕ್ಕೆ ಹೆಗಲು ಕೊಟ್ಟು ಎಡೆ ಹೊಡೆಯುತ್ತಿದ್ದಾರೆ. ಬಾಡಿಗೆ ಎತ್ತುಗಳು ಸಿಗದ ಹಿನ್ನಲೆ ತಾವೇ ನೊಗಕ್ಕೆ ಹೆಗಲು ಕೊಟ್ಟು ಸೋಯಾಬಿನ್,ಶೇಂಗಾ ಬೆಳೆಗಳ ಮಧ್ಯೆ ಬೆಳೆದ ಕಸ ತಗೆಯುತ್ತಿದ್ದಾರೆ. ದಿನಕ್ಕೆ ಒಂದು ಎಕರೆ ಎಡೆ ಹೊಡೆಯುವ ಮೂಲಕ ಕಸ ಕೀಳಬಹುದು ಎನ್ನುತ್ತಾರೆ ರೈತ ಸುರೇಶ್​ .

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Aug 01, 2023 11:38 AM
Follow Us
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More