ಶಿವಕುಮಾರ್ ಎಸ್ ಪತ್ತಾರ..
ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ
ಕೊಪ್ಪಳದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ನಡೆದ ಹಣ್ಣು, ಜೇನು ಹಾಗೂ ಅಣಬೆ ಮೇಳದಲ್ಲಿ ಹಿಮಾಲಯದ ಯಾರ್ಸಗುಂಬಾ ಅಣಬೆ ಪ್ರಮುಖ ಆಕರ್ಷಣೆಯಾಗಿತ್ತು. ಪ್ರತಿ ಕೆ.ಜಿ.ಗೆ 15 ಲಕ್ಷ ಬೆಲೆ ಬಾಳುವ ಈ ದುಬಾರಿ ಅಣಬೆ ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧೀಯ ಗುಣಗಳನ್ನು ಹೊಂದಿದೆ ಎನ್ನಲಾಗಿದೆ. ಇದನ್ನು ನೇಪಾಳದಿಂದ ತಂದು ಪ್ರದರ್ಶಿಸಲಾಗಿದೆ.
- Shivakumar Pattar
- Updated on: Feb 12, 2026
- 6:46 pm
ಡ್ರಿಂಕ್ಸ್ ಅಂದ್ಕೊಂಡು ಸ್ಪಿರಿಟ್ ಕುಡಿದ್ರಾ? ಐವರು ಸ್ನೇಹಿತರ ಪೈಕಿ ಇಬ್ಬರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
ಸ್ನೇಹಿತರ ಪಾರ್ಟಿ ದುರಂತಕ್ಕೆ ತಿರುಗಿದ ಘಟನೆಯೊಂದು ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ಮೃತಪಟ್ಟರೆ, ಮತ್ತೊಬ್ಬ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಘಟನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Shivakumar Pattar
- Updated on: Feb 8, 2026
- 9:12 pm
ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ‘ಕೂಸಿನ ಮನೆ’ ಸಂಕಷ್ಟದಲ್ಲಿ: ಸಿಬ್ಬಂದಿಗೆ ಸಿಗುತ್ತಿಲ್ಲ ಸಂಬಳ
ಕೊಪ್ಪಳ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಜಾರಿಯಲ್ಲಿದ್ದ 'ಕೂಸಿನ ಮನೆ' ಯೋಜನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಒಂದು ತಿಂಗಳಿನಿಂದ ಸಿಬ್ಬಂದಿಗೆ ವೇತನ ಪಾವತಿಯಾಗದೆ ಹಲವು ಕೇಂದ್ರಗಳಿಗೆ ಬೀಗ ಬಿದ್ದಿದೆ. ಇದರಿಂದ ನರೇಗಾ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತಮ್ಮ ಮಕ್ಕಳನ್ನು ಬಿಡುವ ಜಾಗದ ಚಿಂತೆ ಶುರುವಾಗಿದೆ. ಸರ್ಕಾರ ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಯೋಜನೆ ಪುನರಾರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- Shivakumar Pattar
- Updated on: Feb 3, 2026
- 4:27 pm
ಕೊಪ್ಪಳದಲ್ಲಿ ಕಾರ್ಖಾನೆಗಳ ವಿರುದ್ಧ ಧರಣಿ: ದಾಖಲೆ ಬರೆದ ಗವಿ ಸಿದ್ದೇಶ್ವರ ಶ್ರೀ ಭಾಗಿಯಾಗಿದ್ದ ಹೋರಾಟ
ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆಯ 54 ಸಾವಿರ ಕೋಟಿ ರೂ. ವೆಚ್ಚದ ವಿಸ್ತರಣೆ ವಿರೋಧಿಸಿ ಕಳೆದ 94 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಇದು ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ದಾಖಲೆಯ ಹೋರಾಟವಾಗಿದೆ. ಕಾರ್ಖಾನೆಯ ಹೊಗೆಯಿಂದ ಹಲವು ಗ್ರಾಮಗಳಿಗೆ ಪರಿಸರ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ಸ್ಪಂದಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಫೆಬ್ರುವರಿ 24ರಂದು ಕೊಪ್ಪಳ ಬಂದ್ಗೆ ಹೋರಾಟಗಾರರು ಸಜ್ಜಾಗಿದ್ದಾರೆ.
- Shivakumar Pattar
- Updated on: Feb 1, 2026
- 10:42 pm
ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ್ ಮನೆ ಸೇರಿ 6 ಕಡೆ ರೇಡ್
ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ್ಗೆ ಸಂಬಂಧಿಸಿದ ಕಚೇರಿ, ಮನೆಗಳ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಆರು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಹಿಂದೆ ವಾಲ್ಮೀಕಿ ನಿಗಮ ಹಗರಣದ ಸಂದರ್ಭದಲ್ಲಿ ಕಲ್ಲೇಶ್ರನ್ನು ಅಮಾನತು ಮಾಡಲಾಗಿತ್ತು.
- Shivakumar Pattar
- Updated on: Jan 30, 2026
- 8:57 am
ಕೊಪ್ಪಳ: ಮಗನ ವಿರುದ್ಧ ದೂರು ನೀಡಿದ ಮರುದಿನವೇ ತಂದೆ ಅನುಮಾನಾಸ್ಪದ ಸಾವು, ಆಗಿದ್ದೇನು?
ಕೊಪ್ಪಳದ ಕನಕಗಿರಿ ತಾಲ್ಲೂಕಿನ ವರಣಖೇಡ ಗ್ರಾಮದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನ ವಿರುದ್ಧ ದೂರು ನೀಡಿದ ಮರುದಿನವೇ ತಂದೆ ಸಾವಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಗ ಹಾಗೂ ಸೊಸೆ ವಿರುದ್ಧ ಆಸ್ತಿಗಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
- Shivakumar Pattar
- Updated on: Jan 27, 2026
- 3:00 pm
ತುಂಗಭದ್ರಾ ಡ್ಯಾಂ ಕ್ರೆಸ್ಟ್ ಗೇಟ್ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ
ತುಂಗಭದ್ರಾ ಜಲಾಶಯ 4 ಜಿಲ್ಲೆಗಳ ಜನರ ಜೀವನಾಡಿ. ಡ್ಯಾಂಗೆ 32 ಕ್ರೆಸ್ಟ್ ಗೇಟ್ ಅಳವಡಿಕೆ ಕಾಮಗಾರಿ ಆರಂಭವಾಗಿದೆ. ಆದರೆ ಗೇಟ್ ಅಳವಡಿಕೆಗೆ ನೀಡಲಾಗಿದ್ದ 10 ಕೋಟಿ ರೂಪಾಯಿಯನ್ನು ವಾಪಸ್ ಪಡೆದಿರುವ ಆರೋಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿದೆ. ಇದೇ ವಿಚಾರ ಇದೀಗ ಬಿಜೆಪಿ ಹಾಗೂ ಸರ್ಕಾರದ ನಡುವೆ ವಾಗ್ಯುದ್ಧ ಸೃಷ್ಟಿಸಿದೆ.
- Shivakumar Pattar
- Updated on: Jan 27, 2026
- 7:53 am
ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿಗೆ ಕಲ್ಲೆಸೆತ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ್ ರಾಯರೆಡ್ಡಿ ಭಾಷಣ ಮಾಡುವಾಗ ಅವರತ್ತ ಕಲ್ಲೆಸೆಯಲಾಗಿದೆ. ಅದೃಷ್ಟವಶಾತ್ ಕಲ್ಲು ಅವರಿಗೆ ತಗುಲಿಲ್ಲ, ಬದಲಿಗೆ ಅವರ ಮುಂದೆಯೇ ಬಿತ್ತು. ಪರಿಶೀಲನೆಯ ನಂತರ, ಕೃತ್ಯವೆಸಗಿದ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಗೊಂದಲ ಸೃಷ್ಟಿಯಾಯಿತು.
- Shivakumar Pattar
- Updated on: Jan 26, 2026
- 6:31 am
ಕಾರ್ಖಾನೆಗಳ ಹೊಗೆಗೆ ರೋಸಿ ಹೋದ ಅನ್ನದಾತ: ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನ ಕರೀತಿವಿ ಎಂದ ರೈತರು
ಕೊಪ್ಪಳದ ಹಿರೇಬಗನಾಳ ಗ್ರಾಮದ ರೈತರು ಕಾರ್ಖಾನೆಗಳ ಹೊಗೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು ಕಪ್ಪಾಗಿ, ಜಾನುವಾರುಗಳಿಗೆ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಅಧಿಕಾರಿಗಳ ಭರವಸೆಗಳ ಹೊರತಾಗಿಯೂ ಮಾಲಿನ್ಯ ಮುಂದುವರಿದಿದ್ದು, 80 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ನ್ಯಾಯಕ್ಕಾಗಿ ಗವಿಸಿದ್ದಪ್ಪನ ಮೊರೆ ಹೋಗಲು ಸಿದ್ಧರಾಗಿದ್ದಾರೆ.
- Shivakumar Pattar
- Updated on: Jan 20, 2026
- 8:51 pm
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ ಪ್ರಸಾದ
ಕೊಪ್ಪಳದ ಗವಿಮಠ ಜಾತ್ರೆಯ ಮಹಾದಾಸೋಹದ ಅಂತಿಮ ದಿನದಂದು ಭಕ್ತರಿಗಾಗಿ 85 ಕ್ವಿಂಟಾಲ್ ಗೋಧಿ ಹುಗ್ಗಿ ಪ್ರಸಾದ ಸಿದ್ಧಪಡಿಸಲಾಗಿತ್ತು. 18 ದಿನಗಳ ಕಾಲ ನಡೆದ ಈ ದಾಸೋಹದಲ್ಲಿ 20 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಸೇವಿಸಿದ್ದು, ಕೊನೆಯ ದಿನ 50 ಕ್ವಿಂಟಾಲ್ ಬೆಲ್ಲ ಮತ್ತು 25 ಕ್ವಿಂಟಾಲ್ ಗೋಧಿ ಬಳಸಿ ಗೋಧಿ ಹುಗ್ಗಿ ತಯಾರಿಸಲಾಗಿದೆ.
- Shivakumar Pattar
- Updated on: Jan 18, 2026
- 5:10 pm
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಏನು ಸಿಕ್ತು? ಮುಂದೇನು? ಅಧಿಕಾರಿ ಹೇಳಿದ್ದಿಷ್ಟು
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದನಿಧಿ ಪತ್ತೆ ಆಗಿದ್ದು, ಇದರ ಬೆನ್ನಲ್ಲೇ ಇದೀಗ ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಖನನ ಕಾರ್ಯ ಶುರುವಾಗಿದೆ. ಇಂದು (ಜನವರಿ 16) ಕೋಟೆ ವೀರಭದ್ರೇಶ್ವರ ದೇಗುಲದ ಮುಂದೆ ನಡೆದ ಮೊದಲ ದಿನದ ಉತ್ಖನನ ಅಂತ್ಯವಾಗಿದೆ. ಸುಮಾರು 20 ಕಾರ್ಮಿಕರಿಂದ ದೇಗುಲ ಬಳಿ ಉತ್ಖನನ ನಡೆದಿದ್ದು, 10 ರಿಂದ 12 ಇಂಚಿನಷ್ಟು ಮಣ್ಣು ಅಗೆದು ಜಾಗವನ್ನು ಸ್ವಚಗೊಳಿಸಲಾಗಿದೆ. ಇನ್ನು ಮೊದಲ ದಿನ ಉತ್ಖನನ ಹೇಗಿತ್ತು? ಮುಂದೇನು ಎನ್ನುವುದನ್ನು ತಹಶೀಲ್ದಾರ್ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
- Shivakumar Pattar
- Updated on: Jan 16, 2026
- 7:34 pm
ಕುಟುಂಬಕ್ಕೆ ಸಂಕಷ್ಟ ತಂದಿಟ್ಟ ವೈರಲ್ ವಿಡಿಯೋ: ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಅವಳಲ್ಲ ಅವನಾದ ಕಥೆ
ಅಲೆಮಾರಿ ಕುಟುಂಬವೊಂದು ಜಾತ್ರೆ ಜಾತ್ರೆ ಅಲೆದಾಡಿ ಸಾಹಸ ಪ್ರದರ್ಶನಗಳನ್ನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು.ಸಾಹಸ ಪ್ರದರ್ಶನಕ್ಕೆ ಆ ಕುಟುಂಬ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಳ್ಳುತ್ತಿತ್ತು.10 ವರ್ಷದ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು.ಆ ಪುಟ್ಟ ಬಾಲಕಿಯ ಸಾಹಸ ದೃಶ್ಯಗಳನ್ನ ನೋಡಿ ಅದೆಷ್ಟೋ ಜನ ಬೆರಗಾಗಿದ್ರು.ಸಾಮಾಜಿಕ ಜಾಲತಾಣದಲ್ಲಿ ಆ ಪುಟ್ಟ ಬಾಲಕಿ ವಿಡಿಯೋಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದೀಗ ಆ ವಿಡಿಯೋ ಆ ಬಾಲಕಿ ಹಾಗೂ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ.ಆ ವಿಡಿಯೋ ವೈರಲ್ ಬಳಿಕ ವಿಡಿಯೋದಲ್ಲಿರೋದು ಅವಳಲ್ಲ,ಅವನು ಎನ್ನುವ ಸತ್ಯ ಬಯಲಾಗಿದೆ.ಅರೇ ಇದೇನಿದು ಅವಳಲ್ಲ ಅವನಾದ ಕಥೆ ಅಂತೀರಾ ಈ ಸ್ಟೋರಿ ಓದಿ.
- Shivakumar Pattar
- Updated on: Jan 13, 2026
- 9:05 pm