Chamarajanagar: ಬಂಡೀಪುರದ ಆನೆ ಶಿಬಿರದಲ್ಲಿ ಅನಾಥವಾಗಿದ್ದ ಹೆಣ್ಣು ಅನೆಮರಿಯೊಂದಕ್ಕೆ ಯುವ ಕಾವಾಡಿ ದಂಪತಿಯೇ ಅಪ್ಪ-ಅಮ್ಮ

Updated on: Jul 19, 2023 | 11:30 AM

ದಂಪತಿ ವೇದಾಳಿಗೆ ಹಾಲು ಕುಡಿಸುತ್ತಾರೆ ಅರಣ್ಯ ಪ್ರದೇಶದಲ್ಲಿ ತಮ್ಮೊಂದಿಗೆ ವಾಕ್ ಕರೆದುಕೊಂಡು ಹೋಗುತ್ತಾರೆ. ಅದರೊಂದಿಗೆ ಹೈಡ್ ಅಂಡ್ ಸೀಕ್ ಆಟ ಕೂಡ ಆಡುತ್ತಾರೆ!

ಚಾಮರಾಜನಗರ: ಮಾನವ ಮತ್ತು ಪ್ರಾಣಿಗಳ ನಡುವಿನ ಅನನ್ಯ ಬಾಂಧವ್ಯದ ಮತ್ತೊಂದು ಕಥೆಯಿದು. ಜಿಲ್ಲೆ ಬಂಡೀಪುರ ಅಭಯಾರಣ್ಯದಲ್ಲಿರುವ (Bandipur Reserve Forest) ರಾಂಪುರ ಆನೆ ಶಿಬಿರದಲ್ಲಿ ತನ್ನ ಹೆತ್ತಮ್ಮಳಿಂದ ಬೇರೆಯಾದ 7-ದಿನದ ಹೆಣ್ಣು ಆನೆಮರಿಯೊಂದಕ್ಕೆ (baby elephant) ಅದೇ ಶಿಬಿರದಲ್ಲಿ ಕೆಲಸ ಮಾಡುವ ಕಾವಾಡಿ ದಂಪತಿ ಸ್ವಂತ ಮಗುವಿನಂತೆ ಸಲಹುತ್ತಿದ್ದಾರೆ, ಪೋಷಿಸುತ್ತಿದ್ದಾರೆ. ದಯಾಳು ದಂಪತಿ ತಮ್ಮ ಆನೆಮರಿಗೆ ವೇದಾ (Veda) ಅಂತ ನಾಮಕರಣ ಕೂಡ ಮಾಡಿದ್ದಾರೆ. 7-ದಿನದ ಮರಿಯಾಗಿದ್ದಾಗ ರಾಜು (Raju) ಮತ್ತು ರಮ್ಯಾರ (Ramya) ಮಡಿಲು ಸೇರಿದ ವೇದಾಗೆ ಈಗ 7-ತಿಂಗಳ ಪ್ರಾಯ. ದಂಪತಿ ವೇದಾಳಿಗೆ ಹಾಲು ಕುಡಿಸುತ್ತಾರೆ ಅರಣ್ಯ ಪ್ರದೇಶದಲ್ಲಿ ತಮ್ಮೊಂದಿಗೆ ವಾಕ್ ಕರೆದುಕೊಂಡು ಹೋಗುತ್ತಾರೆ. ಅದರೊಂದಿಗೆ ಹೈಡ್ ಅಂಡ್ ಸೀಕ್ ಆಟ ಕೂಡ ಆಡುತ್ತಾರೆ! ವೇದ ಮತ್ತು ರಾಜು ದಂಪತಿಯ ಅನುಬಂಧಕ್ಕೆ ಯಾರ ದೃಷ್ಟಿಯೂ ತಾಕದಿರಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More