ಚಾಮರಾಜನಗರ: ಹೆಂಡತಿ ಕೊಂದ ಪತಿ ಅಮಾಯಕನಂತೆ ನಟಿಸಿದರೂ ಸತ್ಯ ಬಯಲಿಗೆಳೆದ ಚಾಣಾಕ್ಷ ಪೊಲೀಸ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 05, 2025 | 1:08 PM

ಮಹೇಶ್ ತನ್ನ ಹೆಂಡತಿಯ ಮೇಲೆ ವಿಪರೀತ ಅನುಮಾನ ಪಡುತ್ತಿದ್ದ ಅದರೆ ತಾನು ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಎಸ್ ಪಿ ಕವಿತಾ ಹೇಳುತ್ತಾರೆ. ಶುಭಾ ಗರ್ಭಧರಿಸಿರುವ ಸಂಗತಿ ಅವನನ್ನು ವಿಚಲಿತಗೊಳಿಸಿತ್ತಂತೆ, ಅದಕ್ಕೆ ಬೇರೆಯವರು ಕಾರಣವಾಗಿರಬಹುದೆಂಬ ಸಂಶಯ ಕಾಡಲಾರಂಭಿಸಿದ ಬಳಿಕ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ ಎಂದು ಪೊಲೀಸ್ ಆಧಿಕಾರಿ ಹೇಳುತ್ತಾರೆ.

ಚಾಮರಾಜನಗರ, ಜುಲೈ 5: ಚಾಮರಾಜನಗರ ತಾಲೂಕಿನ ಡೊಳ್ಳಿಪುರದಲ್ಲಿ ತನ್ನ ಹೆಂಡತಿಯನ್ನು ಕೊಂದ ಮಹೇಶ್ ಅನುಮಾನ ತನ್ನ ಮೇಲೆ ಬರದಿರಲು ಬುದ್ಧಿವಂತಿಕೆ ಉಪಯೋಗಿಸಿದರೂ ತಾನು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬ ಸಂಗತಿಯನ್ನು ಮರೆತಿದ್ದ. ಜಿಲ್ಲೆಯ ಎಸ್​ಪಿ ಬಿಟಿ ಕವಿತಾ (SP BT Kavita)  ಹೇಳುವಂತೆ ಜುನ್ 30 ರಂದು ತನ್ನ ಪತ್ನಿ ಶುಭಾಳನ್ನು ಕೊಂದು ಅಮಾಯಕನಂತೆ ನಟಿಸಿದ್ದ ಮಹೇಶ್ ವಿಚಾರಣೆ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಕೆಯನ್ನು ಕೊಲ್ಲುವ ಮೊದಲು ಮಹೇಶ್ ಸಾಲಗಾರರಿಂದ ತಮಗೆ ಜೀವಭಯವಿದೆ ಅಂತ ಒಂದು ಪತ್ರ ಬರೆಸಿದ್ದಾನೆ ಮತ್ತು ಅದನ್ನೇ ಆಕೆಯ ಡೆತ್​ನೋಟ್ ಥರ ಬಳಸಿದ್ದಾನೆ.

ಇದನ್ನೂ ಓದಿ:  Crime News: ಮಗುವಿನ ಎದುರೇ ಹೆಂಡತಿಯನ್ನು ಕೊಂದು, ಸೂಟ್​ಕೇಸ್​ನಲ್ಲಿ ಪ್ಯಾಕ್ ಮಾಡಿದ ಗಂಡ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.