Cauvery Water Dispute: ಡಾ ರಾಜ್ ಅಭಿನಯದ ಬಬ್ರುವಾಹನ ಹಾಡನ್ನು ರೀಮಿಕ್ಸ್ ಮಾಡಿ, ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ

Edited By: ಸಾಧು ಶ್ರೀನಾಥ್​

Updated on: Sep 28, 2023 | 1:04 PM

ರಾಜ್ಯದಲ್ಲಿ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಈಗ ಕಾವೇರಿ ಕಿಚ್ಚು ಜೋರಾಗಿದೆ. ಈ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ನಡೆದಿರುವ ಅವಿರತ, ಅಖಂಡ ಹೋರಾಟಕ್ಕೆ (Cauvery Water Dispute) ವಿಭಿನ್ನವಾಗಿ ಮೈಸೂರು ಮೂಲದ ವೈದ್ಯರೊಬ್ಬರು (Doctor) ಸಾಥ್ ನೀಡಿದ್ದಾರೆ. ರಾಜ್ ಹಾಡಿನ ಸಾಲುಗಳ ರೀ ಮಿಕ್ಸ್ ಮಾಡಿ (Remix Song) ಗಮನ ಸೆಳೆದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೈಸೂರು, ಸೆಪ್ಟೆಂಬರ್​ 28 : ರಾಜ್ಯದಲ್ಲಿ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಈಗ ಕಾವೇರಿ ಕಿಚ್ಚು ಜೋರಾಗಿದೆ. ಈ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ನಡೆದಿರುವ ಅವಿರತ, ಅಖಂಡ ಹೋರಾಟಕ್ಕೆ (Cauvery Water Dispute) ವಿಭಿನ್ನವಾಗಿ ಮೈಸೂರು ಮೂಲದ ವೈದ್ಯರೊಬ್ಬರು (Doctor) ಸಾಥ್ ನೀಡಿದ್ದಾರೆ.

ಬೆಂಗಳೂರಿನ ಕೆಂಗೇರಿಯಲ್ಲಿ ಮೂಳೆ ಮತ್ತು ಕೀಲು ವೈದ್ಯರಾಗಿರುವ ಡಾ ವೆಂಕಟೇಶ್ ಕೆ ಪಿ ಅವರು ಕೆಚ್ಚೆದೆಯ ಕಾವೇರಿ ಹೋರಾಟಕ್ಕೆ ಬೆಂಬಲಿಸಲು ಈ ವಿನೂತನ ಪ್ರಯತ್ನ ಮಾಡಿದ್ದಾರೆ. ಕನ್ನಡಿಗರ ಆರಾಧ್ಯದೈವ ಡಾ ರಾಜ್ ಕುಮಾರ್​ ಅಭಿನಯದ (Dr Rajkumar) ಬಬ್ರುವಾಹನದ ಹಾಡನ್ನು ರೀಮಿಕ್ಸ್ ಮಾಡಿರುವ ವೈದ್ಯ ವೆಂಕಟೇಶ್ ಕೆ ಪಿ ಅವರು ಕರ್ನಾಟಕ ಬಂದ್ ವಿಚಾರ, ಕಾವೇರಿ ವಿವಾದ, ನ್ಯಾಯಮಂಡಳಿಯ ತೀರ್ಪು ಸೇರಿ ಹಲವು ವಿಚಾರಗಳ ರೀ ಮಿಕ್ಸ್ ಮಾಡಿ, ಪ್ರಸ್ತಾಪ ಮಾಡಿದ್ದಾರೆ. ರಾಜ್ ಹಾಡಿನ ಸಾಲುಗಳ ರೀ ಮಿಕ್ಸ್ ಮಾಡಿ (Remix Song) ಗಮನ ಸೆಳೆದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More