ತುಮಕೂರು: ಇಲ್ಲೂ ಒಂದು ಅವೈಜ್ಞಾನಿಕ ಅಂಡರ್ ಪಾಸ್, ಖಾಸಗಿ ಬಸ್ ನೀರಲ್ಲಿ ಸಿಲುಕಿ ಪ್ರಯಾಣಿಕರ ಪರದಾಟ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2023 | 8:18 PM

ಇತ್ತೀಚಿಗೆ ಅವೈಜ್ಞಾನಿಕ ಅಂಡರ್ ಪಾಸ್ ಗಳಲ್ಲಿ ಬಸ್, ಟ್ರಕ್ ಮತ್ತು ಇತರ ವಾಹನಗಳು ಸಿಲುಕಿಕೊಳ್ಳೋದು, ಅನಾಹುತಗಳು ಸಂಭವಿಸೋದು ಸಾಮಾನ್ಯವಾಗಿ ಬಿಟ್ಟಿದೆ. ಇಂಥ ಅವೈಜ್ಞಾನಿಕ ಅಂಡರ್ ಪಾಸ್ ಗಳಿಗೆ ಕೂಡಲೇ ಕಾಯಕಲ್ಪ ಕಲ್ಪಿಸುವ ವ್ಯವಸ್ಥೆ ಮಾಡಬೇಕು.

ತುಮಕೂರು: ನಮ್ಮ ಭಾಗದ ಇಂಜಿನಿಯರ್ ಗಳಿಗೆ (engineers) ಸಮರ್ಪಕವಾಗಿ ಅಂಡರ್ ಪಾಸ್ (underpass) ವಿನ್ಯಾಸಗೊಳಿಸುವುದು ಗೊತ್ತಿಲ್ಲವೇ ಅಥವಾ ಗುತ್ತಿಗೆದಾರರ ಮಸಲತ್ತಿನಿಂದ ಇಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆಯೇ? ಇತ್ತೀಚಿಗೆ ಅವೈಜ್ಞಾನಿಕ (unscientific) ಅಂಡರ್ ಪಾಸ್ ಗಳಲ್ಲಿ ಬಸ್, ಟ್ರಕ್ ಮತ್ತು ಇತರ ವಾಹನಗಳು ಸಿಲುಕಿಕೊಳ್ಳೋದು, ಅನಾಹುತಗಳು ಸಂಭವಿಸೋದು ಸಾಮಾನ್ಯವಾಗಿ ಬಿಟ್ಟಿದೆ. ತುಮಕೂರು ನಗರಕ್ಕೆ ಹತ್ತಿರದ ಅಂತರಸನಹಳ್ಳಿಯ ಜಲಾವೃತಗೊಂಡಿರುವ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ಸೊಂದು ಸಿಲುಕಿ ಅದರೊಳಗಿದ್ದ ಪ್ರಯಾಣಿಕರು ಪರದಾಡುವಂಥ ಸ್ಥಿತಿ ಉಂಟಾಗಿದೆ. ಜನ ಎರಡೂ ಕಡೆ ನಿಂತು ನೋಡುತ್ತಿದ್ದಾರೆ. ಪಾಪ, ಅವರಾದರೂ ಏನು ಮಾಡಿಯಾರು? ಸಂಬಂಧಪಟ್ಟ ಇಲಾಖೆ, ಸ್ಥಳೀಯ ಆಡಳಿತ ಮತ್ತು ಜನ ಪ್ರತಿನಿಧಿಗಳು ಇಂಥ ಅವೈಜ್ಞಾನಿಕ ಅಂಡರ್ ಪಾಸ್ ಗಳಿಗೆ ಕೂಡಲೇ ಕಾಯಕಲ್ಪ ಕಲ್ಪಿಸುವ ವ್ಯವಸ್ಥೆ ಮಾಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.