ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿಯ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದರು

|

Updated on: Sep 09, 2023 | 11:11 AM

ಅದರೆ, ಅವರು ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಡುತ್ತಿರುವ ವದಂತಿಗಳ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದರು. ಆ ವಿಷಯದಲ್ಲಿ ಆಮೇಲೆ ಮಾತಾಡುತ್ತೇನೆ ಅಂತಷ್ಟೇ ಹೇಳಿ ಅವರು ಕಾರು ಹತ್ತಿದರು.

ಬೆಂಗಳೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಅವರು ಜೆಪಿ ನಗರದಲ್ಲಿರುವ ತಿರುಮಲಗಿರಿ ದೇವಸ್ಥಾನದಲ್ಲಿ ತಮ್ಮ, ತಂದೆ ಹೆಚ್ ಡಿ ದೇವೇಗೌಡ (HD Devegowda) ಹಾಗೂ ಕುಟುಂಬದ ಉಳಿದೆಲ್ಲ ಸದಸ್ಯರ ಅರೋಗ್ಯ ಮತ್ತು ಕ್ಷೇಮಕ್ಕಾಗಿ ಹೋಮ ಹವನ ನಡೆಸಿದರು. ಪೂಜೆ ಸಲ್ಲಿಸಿದ ಬಳಿಕ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಎಲ್ಲರ ಆರೋಗ್ಯಕ್ಕಾಗಿ ಅದರಲ್ಲೂ ವಿಶೇಷವಾಗಿ ದೇವೇಗೌಡರ ಅರೋಗ್ಯಕ್ಕಾಗಿ ದೇವರಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹಿಂದೂಗಳು ತಾವು ನಂಬಿದ ದೇವರಿಗೆ ಹರಕೆ ಹೊರುತ್ತಾರೆ, ಹೋಮ ಹವನ ಮಾಡಿಸುತ್ತಾರೆ, ಗುರುಗಳ ಅಣತಿಯಂತೆ ದೇವರ ಅನುಗ್ರಹಕ್ಕಾಗಿ ಪೂಜೆ ಸಲ್ಲಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರರು. ಅದರೆ, ಅವರು ಲೋಕಸಭಾ ಚುನಾವಣೆಗಾಗಿ (Lok Sabha polls) ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಡುತ್ತಿರುವ ವದಂತಿಗಳ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದರು. ಆ ವಿಷಯದಲ್ಲಿ ಆಮೇಲೆ ಮಾತಾಡುತ್ತೇನೆ ಅಂತಷ್ಟೇ ಹೇಳಿ ಅವರು ಕಾರು ಹತ್ತಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Sat, 9 September 23

Follow us on