ನಾಗರಹೊಳೆ ಅಭಯಾರಣ್ಯದಲ್ಲಿ ವಿಹರಿಸಲು ಸಫಾರಿಗೆ ತೆರಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಎದುರಾಯ್ತೊಂದು ಹುಲಿ!

ಅರುಣ್​ ಕುಮಾರ್​ ಬೆಳ್ಳಿ

Updated on: May 14, 2024 | 10:42 AM

ಪ್ರಾಯಶಃ ವಾಹನದ ಸದ್ದಿಗೆ ಎದ್ದಿರಬಹುದು. ನಿದ್ರೆಗೆ ಭಂಗವಾಗಿದ್ದಕ್ಕೆ ಹುಲಿಗೆ ಕೋಪ ಬಂದಿಲ್ಲ. ಥೂ ನಿಮ್ಮ, ಹಾಯಾಗಿ ಮಲಗೋಕೂ ಬಿಡಲ್ಲ ಅಂತ ಹಿಡಿಶಾಪವಂತೂ ಹುಲಿ ಹಾಕಿರುತ್ತದೆ. ಈಗಷ್ಟೇ ಲೋಕಸಭಾ ಚುನಾವಣೆಯ ಕೆಲಸದಿಂದ ಮುಕ್ತರಾಗಿರುವ ಖಂಡ್ರೆ ರಿಲ್ಯಾಕ್ಸ್ ಮಾಡೋಣ ಅಂತ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಬಂದಿದ್ದರಂತೆ.

ಮೈಸೂರು: ನೀವು ಅರಣ್ಯಕ್ಕೆ ಸಚಿವರಾದರೇನು, ಕಾಡಿಗಂತೂ ನಾನೇ ರಾಜ ಎನ್ನುವಂತಿದೆ ಹುಲಿರಾಯನ (tiger) ವರಸೆ! ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೆಚ್ ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ (Nagarahole Forest Reserve) ಕಬಿನಿ ವ್ಯಾಪ್ತಿಯಲ್ಲಿ ಇಂದು ಸಫಾರಿಗೆಂದು ತೆರಳಿದಾಗ ಹುಲಿ ಕಂಡಿದೆ. ವನ್ಯಜೀವಿ ತನ್ನದೇ ಆದ ಗತ್ತಿನಲ್ಲಿ ಜೀಪಿನ ಎಡಭಾಗದದಿಂದ ಸಚಿವರ ಜೀಪು ಸಾಗುತ್ತಿರುವ ರಸ್ತೆಯ ಕಡೆ ನಡೆದು ಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಾಹನದಲ್ಲಿದ್ದ ಸಿಬ್ಬಂದಿಯೊಬ್ಬರು ಹುಲಿಯ ಚಲನೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಹುಲಿ ವಾಹನದ ಮುಂದಿನಿಂದ ಬಲಭಾಗದ ಅರಣ್ಯಪ್ರದೇಶಲ್ಲಿ ನಡೆದುಹೋಗುತ್ತದೆ. ಮೂಲಗಳ ಪ್ರಕಾರ ಹುಲಿ ಕಣ್ಣಿಗೆ ಬಿದ್ದಾಗ ಅದು ಮಲಗಿತ್ತಂತೆ. ಪ್ರಾಯಶಃ ವಾಹನದ ಸದ್ದಿಗೆ ಎದ್ದಿರಬಹುದು. ನಿದ್ರೆಗೆ ಭಂಗವಾಗಿದ್ದಕ್ಕೆ ಹುಲಿಗೆ ಕೋಪ ಬಂದಿಲ್ಲ. ಥೂ ನಿಮ್ಮ, ಹಾಯಾಗಿ ಮಲಗೋಕೂ ಬಿಡಲ್ಲ ಅಂತ ಹಿಡಿಶಾಪವಂತೂ ಹುಲಿ ಹಾಕಿರುತ್ತದೆ. ಈಗಷ್ಟೇ ಲೋಕಸಭಾ ಚುನಾವಣೆಯ ಕೆಲಸದಿಂದ ಮುಕ್ತರಾಗಿರುವ ಖಂಡ್ರೆ ರಿಲ್ಯಾಕ್ಸ್ ಮಾಡೋಣ ಅಂತ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಬಂದಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Viral Video: ಮುದ್ದು ಮರಿಗಳೊಂದಿಗೆ ತಾಯಿ ಹುಲಿಯ ಆಟ; ಕ್ಯಾಮೆರಾದಲ್ಲಿ ಸೆರೆಯಾಯಿತು ಮಮತೆಯ ದೃಶ್ಯ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.