ರಾಮನಗರದ ದೊಡ್ಡನಹಳ್ಳಿಗೆ ನುಗ್ಗಿದ ಸಲಗ, ಜನರಲ್ಲಿ ಭೀತಿಯ ಜೊತೆ ನೋಡುವ ತವಕ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jul 22, 2022 | 12:18 PM

ಊರಿನ ಜನರಲ್ಲಿ ಸಲಗವನ್ನು ನೋಡಿ ಆತಂಕ ಭೀತಿ ಮೂಡಿದ್ದು ನಿಜವಾದರೂ ಅದನ್ನು ನೋಡುವ ಕುತೂಹಲ ಮತ್ತು ತವಕ ಅವರನ್ನು ಮನೆಗಳಿಂದ ಹೊರಗೆ ಬರುವಂತೆ ಮಾಡಿದೆ.

ರಾಮನಗರ (Ramanagara) ಜಿಲ್ಲೆಯ ಹಳ್ಳಿಗಳಿಗೂ ಈಗ ವನ್ಯಜೀವಿಗಳು ನುಗ್ಗಲಾರಂಭಿಸಿವೆ. ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿಗೆ ಸಲಗವೊಂದು (tusker) ನುಗ್ಗಿರುವುದನ್ನು ಈ ವಿಡಿಯೋನಲ್ಲಿ ಕಾಣಬಹುದು. ಊರಿನ ಜನರಲ್ಲಿ ಸಲಗವನ್ನು ನೋಡಿ ಆತಂಕ ಭೀತಿ ಮೂಡಿದ್ದು ನಿಜವಾದರೂ ಅದನ್ನು ನೋಡುವ ಕುತೂಹಲ ಮತ್ತು ತವಕ ಅವರನ್ನು ಮನೆಗಳಿಂದ ಹೊರಗೆ ಬರುವಂತೆ ಮಾಡಿದೆ. ಅರಣ್ಯ ಇಲಾಖೆ (forest department) ಸಿಬ್ಬಂದಿ ಆನೆಯನ್ನು ವಾಪಸ್ಸು ಕಾಡಿಗಟ್ಟುವಲ್ಲಿ ಬಹಳ ಪ್ರಯಾಸಪಟ್ಟಿದ್ದಾರೆ.

Follow Us
Web contact

TV9 Kannada

Read More