‘ನಾನು, ಸುದೀಪ್, ಯಶ್ ಶಿವಣ್ಣ ಮಾತ್ರ ಕಾಣೋದಾ?’; ದರ್ಶನ್ ನೇರ ಪ್ರಶ್ನೆ

Updated on: Sep 26, 2023 | 8:48 AM

ಇತ್ತೀಚೆಗೆ ತಮಿಳು ಸಿನಿಮಾ ಒಂದು ರಿಲೀಸ್ ಆಯ್ತು. ಈ ಸಿನಿಮಾದ ಹಂಚಿಕೆ ಹಕ್ಕನ್ನು ಆರು ಕೋಟಿ ರೂಪಾಯಿಗೆ ತೆಗೆದುಕೊಂಡು, 36 ಕೋಟಿ ರೂಪಾಯಿ ಲಾಭ ಮಾಡಿದರು. ಅವರನ್ನು ಹೋಗಿ ನೀವೇಕೆ ಕೇಳುತ್ತಿಲ್ಲ? ನಿಮಗೆ ದರ್ಶನ್, ಸುದೀಪ್, ಯಶ್, ಶಿವಣ್ಣ ಮಾತ್ರ ಕಾಣೋದಾ? ಅವರನ್ನೂ ಹೋಗಿ ಕೇಳಿ’ ಎಂದಿದ್ದಾರೆ ದರ್ಶನ್.

ಕಾವೇರಿ ಕಿಚ್ಚು ಜೋರಾಗಿದೆ. ಈ ಹೋರಾಟಕ್ಕೆ ಸೆಲೆಬ್ರಿಟಿಗಳು ಸರಿಯಾಗಿ ಬೆಂಬಲ ನೀಡಲ್ಲ ಎಂದು ಅನೇಕರು ತಕರಾರು ತೆಗೆದಿದ್ದಿದೆ. ಈ ವಿಚಾರವಾಗಿ ನಟ ದರ್ಶನ್ (Darshan) ಅವರು ಮಾತನಾಡಿದ್ದಾರೆ. ‘ಇತ್ತೀಚೆಗೆ ತಮಿಳು ಸಿನಿಮಾ ಒಂದು ರಿಲೀಸ್ ಆಯ್ತು. ಈ ಸಿನಿಮಾದ ಹಂಚಿಕೆ ಹಕ್ಕನ್ನು ಆರು ಕೋಟಿ ರೂಪಾಯಿಗೆ ತೆಗೆದುಕೊಂಡು, 36 ಕೋಟಿ ರೂಪಾಯಿ ಲಾಭ ಮಾಡಿದರು. ಅವರನ್ನು ಹೋಗಿ ನೀವೇಕೆ ಕೇಳುತ್ತಿಲ್ಲ? ನಿಮಗೆ ದರ್ಶನ್, ಸುದೀಪ್, ಯಶ್, ಶಿವಣ್ಣ ಮಾತ್ರ ಕಾಣೋದಾ? ಅವರನ್ನೂ ಹೋಗಿ ಕೇಳಿ’ ಎಂದಿದ್ದಾರೆ ದರ್ಶನ್. ಅವರು ಸುದೀಪ್ ಹೆಸರು ಹೇಳುತ್ತಿದ್ದಂತೆ ಅಭಿಮಾನಿಗಳು ಕೂಗಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Sep 26, 2023 08:40 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More