Karnataka Budget 2023: ಬಿಎಸ್ ಯಡಿಯೂರಪ್ಪ ನಗುತ್ತಾ ಡಿಕೆ ಶಿವಕುಮಾರ ಕಿವಿಯಿಂದ ತೆಗೆದರೂ ಅವರದನ್ನು ಪುನಃ ಕಿವಿಗೇರಿಸಿಕೊಂಡರು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 17, 2023 | 2:53 PM

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಶಿವಕುಮಾರ್ ರನ್ನು ನೋಡಿ ಮೊದಲು ಮನಸಾರೆ ನಕ್ಕು ನಂತರ ಅವರ ಕಿವಿಯಿಂದ ಹೂ ತೆಗೆದರು. ಆದರೆ ಶಿವಕುಮಾರ ಪುನಃ ಹೂವನ್ನು ಕಿವಿಗೇರಿಕೊಂಡರು.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಬಜೆಟ್ ಮಂಡಿಸುವ ಮೊದಲು ಸಿದ್ದರಾಮಯ್ಯರನ್ನು ಅವರು ಮಾಡಿದ ಕಿವಿಯಲ್ಲಿ ಹೂ ಕಾಮೆಂಟ್ ಸದನದಲ್ಲಿ ಸೃಷ್ಟಿಸಿದ ಉದ್ವಿಗ್ನ ವಾತಾವರಣ ಬಜೆಟ್ ಮಂಡನೆ ಮುಗಿಯುವಷ್ಟರಲ್ಲಿ ತಿಳಿಯಾಗಿತ್ತು. ಆದರೆ ಸದನದಿಂದ ಹೊರ ಬರುವಾಗ ಡಿಕೆ ಶಿವಕುಮಾರ್ (DK Shivakumar) ಕೇವಲ ಒಂದು ಕಿವಿಯಲ್ಲ ಎರಡೂ ಕಿವಿಗಳಲ್ಲಿ ಹೂಗಳನ್ನು ಇಟ್ಟುಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಶಿವಕುಮಾರ್ ರನ್ನು ನೋಡಿ ಮೊದಲು ಮನಸಾರೆ ನಕ್ಕು ನಂತರ ಅವರ ಕಿವಿಯಿಂದ ಹೂ ತೆಗೆದರು. ಆದರೆ ಶಿವಕುಮಾರ ಪುನಃ ಹೂವನ್ನು ಕಿವಿಗೇರಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 17, 2023 02:53 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.